ಬೆಂಗಳೂರು: ನಾನು ಹಿಂದೂ, ಆದರೆ ಎಲ್ಲ ಧರ್ಮವನ್ನು ಪ್ರೀತಿಸುತ್ತೇನೆ ಅಂತ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅವರು ಅವರು ಇಂದು ಮಂಡ್ಯದಲ್ಲಿ ನಡೆದ ಧ್ವಜದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳ ಜೊತೆಗೆ ಮಾತನಾಡಿದರು. ಇದೇ ವೇಳೆ ಅವರು ಮಾತನಾಡಿ, ಅವರು ಕನ್ನಡ ಇಲ್ಲವೇ ದೇಶದ ಧ್ವಜವನ್ನು ಹಾರಿಸುವ ಬಗ್ಗೆ ಅನುಮತಿ ಪಡೆದುಕೊಂಡಿದ್ದರು ಅಂತ ಹೇಳಿದರು. ಇನ್ನೂ ಚುನಾವಣಾ ಕಾರಣಾದಿಂದ ಆರ್.ಆಶೋಕ್ ಮತ್ತು ಹೆಚ್ ಡಿ ಕುಮಾರಸ್ವಾಮಿಯವರು ಪ್ರಚೋದನೆ ನೀಡುತ್ತಿದ್ದಾರೆ ಅಂತ ಆರೋಪಿಸಿದರು.
ಇನ್ನೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮಾತನಾಡಿ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು ಅಂತ ಹೇಳಿದರು. ಇನ್ನೂ ಯಾರೂ ಕೂಡ ಕಾನೂನು ವಿರುದ್ದ ಹೋಗಬಾರದು ಅಂತ ತಿಳಿಸಿದರು. ರಾಜಕೀಯ ಮಾಡಬೇಕು, ಧರ್ಮದಲ್ಲಿ ರಾಜಕೀಯ ಮಾಡಬಾರದು ಅಂತ ಹೇಳಿದರು.