ಹುಬ್ಬಳ್ಳಿ : ಇತ್ತೀಚಿಗೆ ಸಮಾಜದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ವಂಚನೆ, ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇದೀಗ ಹುಬ್ಬಳ್ಳಿಯಲ್ಲಿ ನಿವೃತ್ತ ರೈಲ್ವೆ ನೌಕರ ನೊಬ್ಬ ಮಹಿಳೆಗೆ ನನಗೆ ವಿಚ್ಛೇದನವಾಗಿದೆ ನಿನಗೆ ಬಾಳು ಎಂದು ಹೇಳಿ ಮಹಿಳೆಯ ಹತ್ತಿರ ಹಣ ಪೀಕಿ ವಂಚನೆ ಎಸಗಿದ್ದಾನೆ. ಇದೀಗ ಮಹಿಳೆ ಆತನಿಗೆ ಧರ್ಮದೇಟು ನೀಡಿರುವ ಘಟನೆ ನಡೆದಿದೆ.
ವಿಚ್ಛೇದನವಾಗಿದೆ ಎಂದು ನಂಬಿಸಿ ಮೋಸ ಮಾಡಿದ್ದವನಿಗೆ ಮಹಿಳೆ ಧರ್ಮದೇಟು ನೀಡಿದ್ದಾಳೆ. ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಲ್ಲಿ ನಿವೃತ್ತ ರೈಲ್ವೆ ನೌಕರ ರಾಮಯ್ಯ (71) ಗೆ ರಾಧಿಕಾ ಎನ್ನುವ ಮಹಿಳೆ ಗೂಸಾ ಕೊಟ್ಟಿರುವ ಘಟನೆ ನಡೆದಿದೆ. ನನಗೆ ವಿಚ್ಛೇದನವಾಗಿದೆ ನಿನಗೆ ಬಾಳು ಕೊಡುತ್ತೇನೆ ಎಂದು ನಂಬಿಸಿ ವಂಚನೆ ಎಸಗಿದ್ದಾನೆ.
ನಾಗಪುರ ಮೂಲದ ರಾಧಿಕಾಳನ್ನು ರಾಮಯ್ಯ ನಂಬಿಸಿ ಹಣ ಪಡೆದಿದ್ದ. ಇಂದು ಹುಬ್ಬಳ್ಳಿಗೆ ಬಂದಿದ್ದ ರಾಧಿಕಾ ಹಾಗೆ ಮತ್ತೆ ಹಣ ನೀಡುವಂತೆ ಕಿರುಕುಳ ನೀಡಿದ್ದಾನೆ. ಹಾಗಾಗಿ ವಂಚಕ ರಾಮಯ್ಯನಿಗೆ ನಡು ರಸ್ತೆಯಲ್ಲೇ ರಾಧಿಕ ರಾಮಯ್ಯಗೆ ಧರ್ಮದೇಟು ನೀಡಿದ್ದಾಳೆ. ಬಳಿಕ ರಾಮಯ್ಯನನ್ನು ರಾಧಿಕಾ ಉಪನಗರ ಠಾಣೆ ಪೋಲೀಸರಿಗೆ ಒಪ್ಪಿಸಿದ್ದಾಳೆ.