ಬೆಂಗಳೂರು : ರಾಷ್ಟ್ರಪತಿ ಮುರ್ಮು ಸಿಎಂ ಏಕವಚನದಲ್ಲಿ ಸಂಬೋಧಿಸಿದ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು,ಸಿಎಂ ಸಿದ್ದರಾಮಯ್ಯ ಮಂಡಿಸಿರುವ 14 ಬಜೆಟ್ ಎಷ್ಟು ಶೋಷಿತ ವರ್ಗಕ್ಕೆ ನೆರವಾಗಿದೆ ಎಂದು ಹೇಳಲಿ ಅಂತ ಸವಾಲು ಹಾಕಿದರು.
ಮುಖ್ಯಮಂತ್ರಿಗಳು ರಾಷ್ಟ್ರಪತಿ ಬಗ್ಗೆ ಮಾಡಿದ್ದಾರೆ ಶೋಷಿತ ವರ್ಗದ ಸಮಾವೇಶದಲ್ಲಿ ಈ ರೀತಿ ಹೇಳಿಕೆ ನೀಡಿದ್ದು ಖಂಡನೀಯವಾಗಿದೆ. ಸಂವಿಧಾನದ ಅಹಿಂದ ಅಂತ ಹೇಳಿಕೊಳ್ಳುವ ವ್ಯಕ್ತಿ ಹೀಗೆ ಹೇಳಿದ್ದಾರೆ. ಕುರಿ ಕಾಯುವ ಸಮುದಾಯದವನು 14 ನೀಡಿದ್ದೇನೆ ಎನ್ನುತ್ತಾರೆ ಇವರಿಗೆ ಎಷ್ಟು ಶೋಷಿತ ವರ್ಗಕ್ಕೆ ಬಜೆಟ್ ನೆರವಾಗಿದೆ ಎಂದು ಹೇಳಲಿ ಎಂದು ಸವಾಲು ಹಾಕಿದ್ದಾರೆ.
ರಾಷ್ಟ್ರಪತಿ ಬಗ್ಗೆ ಹಲವುರವ ತೋರಿ ಸಂವಿಧಾನಕ್ಕೆ ಅಪಚಾರ ಎಸಿಗಿದ್ದಾರೆ ಗ್ರಾಮೀಣ ಸೊಗಡಿನಲ್ಲಿ ಹಾಗೆ ಮಾತಾಡಿದ್ದೇನೆ ಎಂದು ಹೇಳಿದ್ದಾರೆ. ಈಗ ಅಚಾತುರ್ಯದಿಂದ ಆದ ಪ್ರಮಾದಕ್ಷೆ ವಿಷಾದ ಎಂದಿದ್ದೀರಿ ವಿಷಾದ ವ್ಯಕ್ತಪಡಿಸುವ ಸೌಜನ್ಯ ತೋರಿಸಿದ್ದೀರಿ, ಸಂತೋಷ ಆದರೆ ನಿಮ್ಮ ನಂಜಿನ ವಿಷ ರಾಜ್ಯ ಅಷ್ಟೆ ಅಲ್ಲ ದೇಶವನ್ನೆಲ್ಲ ವ್ಯಾಪಿಸಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.