ಭೋಪಾಲ್: ನದಿಯಲ್ಲಿ ಸ್ನಾನ ಮಾಡುತ್ತಿದ್ದ 10 ವರ್ಷದ ಬಾಲಕನನ್ನು ದೈತ್ಯ ಮೊಸಳೆಯೊಂದು ನುಂಗಿದ ಘಟನೆ ಭಯಾನಕ ಘಟನೆ ಮಧ್ಯಪ್ರದೇಶದ ಶೆಯೋಪುರದಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ.
ಮಳೆಗಾಲದಲ್ಲಿ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು? ಇಲ್ಲಿದೆ ತಜ್ಞರು ಸಲಹೆ
ಸೋಮವಾರ ಬೆಳಿಗ್ಗೆ ಚಂಬಲ್ ನದಿಯಲ್ಲಿ ಬಾಲಕ ಸ್ನಾನ ಮಾಡುತ್ತಿದ್ದ ವೇಳೆ ಮೊಸಳೆ ಆತನ ಮೇಲೆ ದಾಳಿ ನಡೆಸಿದೆ. ಬಾಲಕನನ್ನು ಮೊಸಳೆ ನೀರಿಗೆ ಎಳೆದುಕೊಂಡು ಹೋಗಿದೆ. ಈ ಘಟನೆ ಆ ಭಾಗದ ಜನರಲ್ಲಿ ಭೀತಿ ಮೂಡಿಸಿದೆ.
ಮಳೆಗಾಲದಲ್ಲಿ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು? ಇಲ್ಲಿದೆ ತಜ್ಞರು ಸಲಹೆ
ಸ್ಥಳದಲ್ಲಿದ್ದ ಜನರು ಕೂಡಲೇ ಬಾಲಕ ಅಂತರ್ ಸಿಂಗ್ನ ಕುಟುಂಬದವರು ಮತ್ತು ಸಂಬಂಧಿಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ಎಲ್ಲರೂ ಸೇರಿ ಬಡಿಗೆ, ಹಗ್ಗ ಮತ್ತು ಬಲೆಗಳ ಸಹಾಯದಿಂದ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ. ಎಲ್ಲರೂ ಸಾಹಸಪಟ್ಟಿದ್ದಾರೆ.