ಬೆಂಗಳೂರು: ತುರಹಳ್ಳಿಯಲ್ಲಿ ಪತ್ನಿಯ ಅನಾರೋಗ್ಯಕ್ಕೆ ಬೇಸತ್ತು ಪತಿಯಿಂದಲೇ ಆಕೆಯ ಕೊಲೆಗೈದ ಘನ ಘೋರ ದುರಂತ ಘಟನೆ ನಡೆದಿದೆ.
ನಿನ್ನೆ ಮಧ್ಯಾಹ್ನ ಪತ್ನಿ ಶಿವಮ್ಮ (50) ಅನಾರೋಗ್ಯಕ್ಕೆ ಬೇಸತ್ತು ಆರೋಪಿ ಪತಿ ಶಂಕರಪ್ಪ ಕೊಲೆ ಗೈದಿದ್ದಾನೆಂಬ ಆರೋಪ ಕೇಳಿಬಂದಿದೆ. ಪತ್ನಿ ಶಿವಮ್ಮ ಕಳೆದ ಎರಡು ವರ್ಷದಿಂದ ಅನಾರೋಗ್ಯ ಸಮಸ್ಯೆಗೆ ಒಳಗಾಗಿದ್ದರು. ಪತ್ನಿ ಶಿವಮ್ಮರಿಗೆ ಓಡಾಡಲು ಆಗದೆ ಕುಳಿತಲ್ಲೇ ಕುಳಿತುಕೊಳ್ಳುತ್ತಿದ್ದರು.
ಹೀಗಾಗಿ ನಿರ್ಮಾಣ ಹಂತದ ಕಟ್ಟಡದಲ್ಲಿ ಶೇಖರಣೆಯಾಗಿದ್ದ ನೀರಿಗೆ ತಳ್ಳಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ತಲಘಟ್ಟಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನೂ ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ