ಚಂಡೀಗಢ:ಪಂಜಾಬ್ ವಿಧಾನಸಭೆಯಲ್ಲಿ ಇಂದು (ಮೇ 1, 2026) ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮದ್ಯ ಸೇವಿಸಿ ಸದನಕ್ಕೆ ಆಗಮಿಸಿದ್ದಾರೆ ಎಂದು ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳ (SAD) ಗಂಭೀರವಾಗಿ ಆರೋಪಿಸಿವೆ.
’ಕಾರ್ಮಿಕ ದಿನಾಚರಣೆ’ಯ ಅಂಗವಾಗಿ ನಡೆದ ಸದನದ ಕಲಾಪದ ವೇಳೆ ಮುಖ್ಯಮಂತ್ರಿಗಳ ವರ್ತನೆ ಅಸಹಜವಾಗಿತ್ತು ಎಂದು ವಿರೋಧ ಪಕ್ಷದ ನಾಯಕರು ದೂರಿದ್ದಾರೆ. ಕಾಂಗ್ರೆಸ್ ಶಾಸಕ ಸುಖ್ಪಾಲ್ ಸಿಂಗ್ ಖೈರಾ ಅವರು ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದಂತೆ ಸದನದಲ್ಲಿ ಗದ್ದಲ ಉಂಟಾಯಿತು.
“ಮುಖ್ಯಮಂತ್ರಿಗಳು ಪವಿತ್ರವಾದ ವಿಧಾನಸಭೆಗೆ ಕುಡಿದು ಬಂದಿರುವುದು ಇಡೀ ಪಂಜಾಬ್ಗೆ ನಾಚಿಕೆಗೇಡಿನ ಸಂಗತಿ. ಸತ್ಯಾಸತ್ಯತೆ ತಿಳಿಯಲು ಕೂಡಲೇ ಅವರಿಗೆ ಆಲ್ಕೋಹಾಲ್ ಮತ್ತು ಡೋಪ್ ಟೆಸ್ಟ್ ಮಾಡಿಸಬೇಕು” ಎಂದು ಅಕಾಲಿದಳ ಆಗ್ರಹಿಸಿದೆ.
ಸ್ಪೀಕರ್ ಅವರು ಈ ಆರೋಪದ ಮೇಲೆ ತನಿಖೆಗೆ ಆದೇಶಿಸದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರು ಸದನದಿಂದ ಹೊರನಡೆದು (Walkout) ಪ್ರತಿಭಟನೆ ನಡೆಸಿದರು.
ಪಿಜಿಐಎಂಇಆರ್ (PGIMER) ಸಂಸ್ಥೆಯ ಮೂಲಕ ಸ್ವತಂತ್ರ ವೈದ್ಯಕೀಯ ತಪಾಸಣೆ ನಡೆಸಬೇಕೆಂದು ವಿಪಕ್ಷ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಒತ್ತಾಯಿಸಿದ್ದಾರೆ.








