ಶಿವಮೊಗ್ಗ: ನಾಳೆಯಿಂದ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹೆಲಿ ಟೂರಿಸಂ ಹೆಲಿಕಾಪ್ಟರ್ ಹಾರಾಟ ಆರಂಭಗೊಳ್ಳಲಿದೆ. ಎಲ್ಲೆಲ್ಲಿಗೆ? ಎಷ್ಟು ದರ ಎನ್ನುವ ಮಾಹಿತಿಯನ್ನು ಆಯೋಜಕರಾದಂತ ಕಿರಣ್ ದೊಡ್ಮನಿ ನೀಡಿದ್ದಾರೆ ಮುಂದೆ ಓದಿ..
ಇಂದು ಈ ಬಗ್ಗೆ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಕಿರಣ್ ದೊಡ್ಮನೆ ಅವರು, ಇದೇ ಮೊದಲ ಬಾರಿಗೆ ಸಾಗರದಲ್ಲಿ ಮಾರಿ ಜಾತ್ರೆ ಪ್ರಯುಕ್ತ ಹೆಲಿ ಟೂರಿಸಂ ಆಯೋಜಿಸಲಾಗುತ್ತಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಹೆಲಿ ಟೂರಿಸಂಗೆ ಗೋಪಾಲಗೌಡ ಕ್ರೀಢಾಂಗಣದಲ್ಲಿ ಚಾಲನೆ ನೀಡಲಿದ್ದಾರೆ. ಆ ಬಳಿಕೆ ಮೊದಲು ಬುಕ್ ಮಾಡಿದವರಿಗೆ ಹೆಲಿಕಾಪ್ಟರ್ ಮೂಲಕ ಪ್ರವಾಸ ಆರಂಭಗೊಳ್ಳಲಿದೆ ಎಂದರು.
ಈಗಾಗಲೇ ಹೆಲಿಕಾಪ್ಟರ್ ಮೂಲಕ ಹಾರಾಟಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಂಬಂಧಿಕರು, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕಡೆಯವರು, ಕಾರವಾರದ ರಾಜಕಾರಣಿಯೊಬ್ಬರು, ಸ್ವಾಮೀಜಿಗಳು ಸೇರಿದಂತೆ ಹಲವರು ಬುಕ್ಕಿಂಗ್ ಮಾಡಿದ್ದಾರೆ. ಅವರೆಲ್ಲರಿಗೂ ಹೆಲಿ ಟೂರಿಸಂ ಸಂಚಾರದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಾಗರದ ಮಾರಿಕಾಂಬ ಜಾತ್ರಾ ಮಹೋತ್ಸದ ಪ್ರಯುಕ್ತ ಆಯೋಜಿಸಿರುವಂತ ಹೆಲಿ ಟೂರಿಸಂಗೆ ಪಕ್ಷಾತೀತವಾಗಿ ಬೆಂಬಲ ನೀಡಿದ್ದಾರೆ. ಅವರೆಲ್ಲರಿಗೂ ಹೃದಯ ಪೂರ್ವಕವಾದಂತ ಧನ್ಯವಾದಗಳನ್ನು ತಿಳಿಸುವೆ. ಶಾಸಕ ಗೋಪಾಲಕೃಷ್ಣ ಅವರು ವಿಶೇಷ ಕಾಳಜಿ ವಹಿಸಿ ಹೆಲಿ ಟೂರಿಸಂಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಅವರಿಗೂ ಕೃತಜ್ಞತೆಗಳನ್ನು ಅರ್ಪಿಸಿದರು.
ಹೆಲಿ ಟೂರುಸಂ ಎಲ್ಲೆಲ್ಲಿಗೆ? ದರ ಎಷ್ಟು ನಿಗದಿ?
ಈ ಕುರಿತಂತೆ ಮಾಹಿತಿ ಹಂಚಿಕೊಂಡ ಕಿರಣ್ ದೊಡ್ಮನೆ ಅವರು, ಸಾಗರ ಒಂದು ರೌಂಡ್ ಗೆ ಒಬ್ಬರಿಗೆ ರೂ.4,000 ದರ ನಿಗದಿ ಮಾಡಲಾಗಿದೆ. ಜೋಗದ ಜಲಪಾತವನ್ನು ಹೆಲಿಕಾಪ್ಟರ್ ಮೂಲಕ ವೀಕ್ಷಿಸಲು 6 ಜನರಿಗೆ ರೂ.45,000 ದರ ನಿಗದಿ ಪಡಿಸಲಾಗಿದೆ. ಸಿಗಂದೂರು ಸೇತುವೆ ವೀಕ್ಷಣೆಗೆ 6 ಮಂದಿಗೆ ರೂ.45,000 ರೇಟ್ ಫಿಕ್ಸ್ ಮಾಡಲಾಗಿದೆ. ಸಿಗಂದೂರು ಸೇತುವೆ ಹಾಗೂ ಜೋಗದ ಜಲಪಾತ ಎರಡು ವೀಕ್ಷಣೆಗೆ 6 ಜನರಿಗೆ ರೂ.75,000 ನಿಗದಿ ಮಾಡಲಾಗಿದೆ ಎಂದರು.
ನಾಳೆಯಿಂದ ಸಾಗರದ ಮಾರಿಕಾಂಬ ಜಾತ್ರೆಯ ಪ್ರಯುಕ್ತ ಆಯೋಜಿಸಿರುವ ಹೆಲಿ ಟೂರಿಸಂಗೆ ಟಿಕೆಟ್ ಬುಕ್ ಮಾಡಲು +919945563294 ಮೊಬೈಲ್ ಸಂಖ್ಯೆಗೆ ಕರೆ ಮಾಡಿ. ಸಾಗರದ ಸಮಸ್ತ ನಾಗಗರೀಕರು ಇದರ ಸದುಪಯೋಗ ಪಡಿಸಿಕೊಂಡು, ಮೊದಲ ಬಾರಿಗೆ ಆಯೋಜಿಸಿರುವ ಹೆಲಿ ಟೂರಿಸಂ ಯಶ್ವಿಗೊಳಿಸುವಂತೆ ಆಯೋಜಕರಾದಂತ ಕಿರಣ್ ದೊಡ್ಮನಿ ಮನವಿ ಮಾಡಿದರು.
ಈ ಸುದ್ದಿಗೋಷ್ಠಿಯಲ್ಲಿ ದಿನೇಶ್, ಧನಂಜಯ್, ಸುಜಿತ್, ಲೀಲು, ಕೃಷ್ಣ ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು








