ಧಾರವಾಡ : ಇಂದು ಧಾರವಾಡದಲ್ಲಿ ವರುಣ ಅಬ್ಬರಿಸಿದ್ದು, ಭಾರಿ ಮಳೆಯಿಂದಾಗಿ ಸಂಪೂರ್ಣವಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಅಲ್ಲದೆ ದೇವಸ್ಥಾನಕ್ಕೆ ನೀರು ನುಗ್ಗಿರುವ ಘಟನೆ ಕೂಡ ನಡೆದಿದೆ.
ಹೌದು ಧಾರವಾಡದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ದೇಗುಲಕ್ಕೆ ನೀರು ನುಗ್ಗಿದೆ. ಶಿವಾಜಿ ವೃತ್ತದ ಬಳಿಯ ತುಳಜಾಭವಾನಿ ದೇಗುಲ ಸಂಪೂರ್ಣವಾಗಿ ಜಲಾವೃತವಾಗಿದೆ. ದೇವಸ್ಥಾನವನ್ನು ಸಂಪೂರ್ಣವಾಗಿ ಮಳೆಯ ನೀರು ಆವರಿಸಿಕೊಂಡಿದೆ. ಧಾರಾಕಾರ ಮಳೆಗೆ ಧಾರವಾಡದಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ.