ಬಾಗಲಕೋಟೆ: ಇವರು ಒಬ್ಬರೇನಾ ಪಂಚಮಸಾಲಿಗೆ ಹುಟ್ಟಿದ್ದು ಅಂತ ಯತ್ನಾಳ್ ವಿರುದ್ಧ ವಿಜಯಾನಂದ ಕಾಶಪ್ಪನವರ ಕಿಡಿ ಕಾರಿದ್ದಾರೆ.
ಅವರು ಬಾಗಲಕೋಟೆಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು, ಇದೇ ವೇಳೆ ಅವರು ಮಾತನಾಡಿ, ಪಂಚಮಸಾಲಿ ಸಮುದಾಯ ಇರುವುದರಿಂದ ಬಿಜೆಪಿ ಪಕ್ಷದಲ್ಲಿ ಯತ್ನಾಳ್ ಉಳಿದಿದ್ದಾರೆ. ಈ ಸಮುದಾಯ ಕೈ ಬಿಟ್ಟರೆ ನಾಳೆಯೇ ಬಿಜೆಪಿ ಪಕ್ಷದಲ್ಲಿ ಯತ್ನಾಳ್ ಇರುವುದಿಲ್ಲ. ಸಮುದಾಯ ಇಟ್ಟುಕೊಂಡು ಆಟ ಆಡುವುದು ಬಿಡಲಿ ಅಂತ ಹೇಳಿದರು.
ಇನ್ನೂ ತಾಕತ್ತು ದಮ್ಮು ಇದ್ದರೆ, ವೈಯಕ್ತಿಕ ವರ್ಚಸ್ಸು ಬೆಳೆಸಿಕೊಂಡು ಮಾಡಲಿ, ಸಮಾಜದ ದಮ್ಮು ಇಟ್ಟುಕೊಂಡು ಏಕೆ ಮಾಡುತ್ತಾರೆ ಎಂದು ಯತ್ನಾಳ್ ವಿರುದ್ಧ ಶಾಸಕ ವಿಜಯಾನಂದ ಕಾಶಪ್ಪನವರ ವಾಗ್ದಾಳಿ ನಡೆಸಿದರು.
Subscribe to Updates
Get the latest creative news from FooBar about art, design and business.