ಮುಂಬೈ: ತನ್ನ ಪ್ರಿಯಕರ ಅಫ್ತಾಬ್ ಪೂನಾವಾಲಾನಿಂದ ಕತ್ತು ಹಿಸುಕಿ, ದೇಹವನ್ನು ತುಂಡು ಮಾಡಿ, ದೆಹಲಿಯ ಕಾಡಿನಲ್ಲಿ ಎಸೆದಿದ್ದ ಶ್ರದ್ಧಾ ವಾಕರ್, ನಿಖರವಾಗಿ ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದ ತಮ್ಮ ತವರು ವಸಾಯಿಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಶ್ರದ್ಧಾಳನ್ನು ತುಂಡರಿಸಿ ದೆಹಲಿಯಾದ್ಯಂತ ಎಸೆದ ಆರೋಪಿ ಅಫ್ತಾಬ್ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಶ್ರದ್ಧಾ ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರ ಪೊಲೀಸರಿಗೆ ಅಫ್ತಾಬ್ ವಿರುದ್ಧ ನೀಡಿದ್ದ ದೂರಿನ ಪತ್ರ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ನವೆಂಬರ್ 23, 2020 ರಲ್ಲಿ ಶ್ರದ್ಧಾ ನೀಡಿದ್ದ ದೂರಿನಲ್ಲಿ, ʻಅವನು ನನ್ನನ್ನು ತುಂಡು ತುಂಡಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕುತ್ತಾನೆ. ಇಂದು ನನ್ನನ್ನು ಉಸಿರುಗಟ್ಟಿಸಿ ಕೊಲ್ಲಲು ಪ್ರಯತ್ನಿಸಿದನು ಮತ್ತು ಅವನು ನನ್ನನ್ನು ಕೊಂದು, ತುಂಡು ತುಂಡು ಮಾಡಿ ಎಸೆದು ಹೋಗುತ್ತೇನೆ ಎಂದು ನನಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ. ಅವನು ನನ್ನನ್ನು ಹೊಡೆದು ಆರು ತಿಂಗಳಾಯಿತು. ಆದರೆ, ನನಗೆ ಧೈರ್ಯವಿಲ್ಲ. ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾನೆʼ ಎಂದು ದೂರಿನಲ್ಲಿ ಆರೋಪಿಸಿದ್ದಾಳೆ. ಇದಾದ ಒಂದು ವಾರದ ನಂತ್ರ, ಶ್ರದ್ಧಾ ಆಂತರಿಕ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಳು.
‘ಮಕ್ಕಳ ಕಣ್ಣೀರು ನನ್ನ ಸಿಟ್ಟಿಗೆ ಕಾರಣವಾಯಿತು’ : ರಮೇಶ್ ಕುಮಾರ್ ವಿರುದ್ಧದ ಹೇಳಿಕೆಗೆ ‘HDK’ ವಿಷಾದ
BIGG NEWS: ರೌಡಿಶೀಟರ್ ಮನೆಗಳ ಮೇಲೆ ದಾಳಿ ಬಗ್ಗೆ ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಹೇಳಿದ್ದೇನು ಗೊತ್ತಾ?
ನೀವು ಒಂದೇ ಮಗುವಿಗೆ ಪೋಷಕರಾಗಿದ್ದೀರಾ? ಮಗುವಿನ ಉತ್ತಮ ಪಾಲನೆಗಾಗಿ ನಿಮಗಿಲ್ಲಿದೆ ಪ್ರಮುಖ ಮಾಹಿತಿ
‘ಮಕ್ಕಳ ಕಣ್ಣೀರು ನನ್ನ ಸಿಟ್ಟಿಗೆ ಕಾರಣವಾಯಿತು’ : ರಮೇಶ್ ಕುಮಾರ್ ವಿರುದ್ಧದ ಹೇಳಿಕೆಗೆ ‘HDK’ ವಿಷಾದ