ತುಮಕೂರು: ಕಾನೂನು ಸಚಿವರ ತವರು ಜಿಲ್ಲೆಯಲ್ಲಿಯೇ ಗಾಮ ಪಂಚಾಯ್ತಿ ಸದಸ್ಯ ಪಿಡಿಓ ಜೊತೆಗೆ ಅಸಭ್ಯವಾಗಿ ವರ್ತಿಸಿದಂತ ಘಟನೆ ನಡೆದಿತ್ತು. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು. ಈ ಹಿನ್ನಲೆಯಲ್ಲಿ ಘಟನೆ ಸಂಬಂಧ ವರದಿ ನೀಡುವಂತೆ ಜಿಲ್ಲಾಪಂಚಾಯ್ತಿ ಸಿಇಓ, ಇಓ ಗೆ ಸೂಚಿಸಿದ್ದಾರೆ.

BREAKING NEWS: ಜೆಡಿಎಸ್ ನ ಮತ್ತೊಂದು ವಿಕೆಟ್ ಪಥನ: ತೆನೆ ಇಳಿಸಿ ಕೈಹಿಡಿದ ಮಾಜಿ ಪರಿಷತ್ ಸದಸ್ಯ ಹೆಚ್.ಆರ್ ಶ್ರೀನಾಥ್

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಸಿಪುರ ಗ್ರಾಮ ಪಂಚಾಯ್ತಿಯಲ್ಲಿನ ಪಿಡಿಓ ಕೋಕಿಲಾ ಜೊತೆಗೆ, ಗ್ರಾಮ ಪಂಚಾಯ್ತಿ ಸದಸ್ಯ ಪ್ರಸನ್ನ ಕುಮಾರ್ ಬಲವಂತವಾಗಿ ಕಿಸ್ ಕೊಟ್ಟು, ತಬ್ಬಿ ಮುದ್ದಾಡಿದ್ದರು. ಈ ದೃಶ್ಯಾವಳಿ ಗ್ರಾಮ ಪಂಚಾಯ್ತಿಯಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

BIG NEWS: ಒಂದೇ ರೂಂನಲ್ಲಿ ನಟ ನರೇಶ್-ನಟಿ ಪವಿತ್ರಾ ಲೋಕೇಶ್: ಸಿಡಿದೆದ್ದು ಹೋಟೆಲ್ ಬಳಿ ರಮ್ಯಾ ರಘುಪತಿ ಗಲಾಟೆ

ಈ ವೀಡಿಯೋ ದೃಶ್ಯಾವಳಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಗ್ರಾಮ ಪಂಚಾಯ್ತಿ ಸದಸ್ಯ ಪ್ರಸನ್ನ ಕುಮಾರ್, ಪಿಡಿಓ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದು ಜಗಜ್ಜಾಹಿರವಾಗಿತ್ತು. ಈ ಹಿನ್ನಲೆಯಲ್ಲಿ ಘಟನೆ ಸಂಬಂಧ ತುಮಕೂರು ಜಿಲ್ಲಾ ಪಂಚಾಯ್ತಿ ಸಿಇಓ ಡಾ.ವಿದ್ಯಾಕುಮಾರಿ, ಚಿಕ್ಕನಾಯಕನಹಳ್ಳಿ ತಾಲೂಕು ಪಂಚಾಯ್ತಿ ಇಓಗೆ ವರದಿ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದೀಗ ಘಟನೆ ಸಂಬಂಧ ಇಓ ವರದಿಯನ್ನು ತಯಾರಿಸಿ, ಸಿಇಓಗೆ ಸಲ್ಲಿಸಲಿದ್ದಾರೆ.

BIG NEWS: ದೇಶಕ್ಕೆ ಮೌನಿಯಾಗಿರುವ ರಾಷ್ಟ್ರಪತಿ ಅಥವಾ ರಬ್ಬರ್ ಸ್ಟಾಂನ್ ರಾಷ್ಟ್ರಪತಿಯಾಗಲ್ಲ – ಯಶವಂತ್ ಸಿನ್ಹಾ

Share.
Exit mobile version