Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಇಂದು ಮಧ್ಯಾಹ್ನ 12:30 ಕ್ಕೆ BSF ಮತ್ತು CISF ಡಿಜಿಗಳೊಂದಿಗೆ ಅಮಿತ್ ಶಾ ಸಭೆ | India -Pak war

09/05/2025 12:19 PM

‘ಆಪರೇಷನ್ ಸಿಂಧೂರ್’: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ | Operation Sindoor

09/05/2025 12:10 PM

BREAKING : ಭಾರತ-ಪಾಕ್ ಮಧ್ಯ ಉದ್ವಿಗ್ನ ಪರಿಸ್ಥಿತಿ : ‘IPL’ ಟೂರ್ನಿಯ ಮುಂದಿನ ಎಲ್ಲಾ ಪಂದ್ಯಗಳು ರದ್ದಾಗುವ ಸಾಧ್ಯತೆ!

09/05/2025 12:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಬಿಜೆಪಿ ವಿರೋಧದ ನಡುವೆ ‘ಆರಮನೆ ಭೂಬಳಕೆ’ಗೆ ಅಸ್ತು: ಇಂದು ‘ಅಧಿಸೂಚನೆ’ ಹೊರಡಿಸಿ ರಾಜ್ಯ ಸರ್ಕಾರ
KARNATAKA

BREAKING: ಬಿಜೆಪಿ ವಿರೋಧದ ನಡುವೆ ‘ಆರಮನೆ ಭೂಬಳಕೆ’ಗೆ ಅಸ್ತು: ಇಂದು ‘ಅಧಿಸೂಚನೆ’ ಹೊರಡಿಸಿ ರಾಜ್ಯ ಸರ್ಕಾರ

By kannadanewsnow0913/03/2025 3:24 PM

ಬೆಂಗಳೂರು: ಬೆಂಗಳೂರು ಅರಮನೆ ಭೂ ಬಳಕೆ, ನಿಯಂತ್ರಣ ವಿಧೇಯಕಕ್ಕೆ ರಾಜ್ಯ ವಿಧಾನ ಮಂಡಲದ ಅಧಿವೇಶನದಲ್ಲಿ ಎರಡು ಸದನದಲ್ಲಿ ಅಂಕಿತ ಸೂಚಿಸಲಾಗಿತ್ತು. ಈ ಮಸೂದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಇದೀಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬೆಂಗಳೂರು ಅರಮನೆ( ಭೂ ಬಳಕೆ ಮತ್ತು ನಿಯಂತ್ರಣ) ಅಧಿನಿಯಮ 2025ಕ್ಕೆ ಅಂಕಿತ ಸೂಚಿಸಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದಿಂದ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.

ಈ ಕುರಿತಂತೆ ರಾಜ್ಯ ಸರ್ಕಾರದಿಂದ ವಿಶೇಷ ಗೆಜೆಟ್ ಅಧಿಸೂಚನೆಯನ್ನು ಪ್ರಕಟಿಸಲಾಗಿದ್ದು, ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ವಿಧೇಯಕ, 2025 ಇದಕ್ಕೆ 2025 ರ ಮಾರ್ಚ್ ತಿಂಗಳ 12ನೇ ದಿನಾಂಕದಂದು ರಾಜ್ಯಪಾಲರ ಅನುಮತಿ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2025 ರ ಕರ್ನಾಟಕ ಅಧಿನಿಯಮ ಸಂಖ್ಯೆ: 14 ಎಂಬುದಾಗಿ ಕರ್ನಾಟಕ ರಾಜ್ಯ ಪತ್ರದ ವಿಶೇಷ ಸಂಚಿಕೆಯಲ್ಲಿ (ಭಾಗ-IVA) ಪ್ರಕಟಿಸಬೇಕೆಂದು ಆದೇಶಿಸಲಾಗಿದೆ ಎಂದಿದೆ.

ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ಅಧಿನಿಯಮ, 2025

ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರಡಿ ಆರ್ಜಿಸಿರುವ ಬೆಂಗಳೂರು ಅರಮನೆಯ ಭೂ ಬಳಕೆ ಮತ್ತು ನಿಯಂತ್ರಣ ಹಾಗೂ ಬೆಂಗಳೂರು ಅರಮನೆಗೆ ಸಂಬಂಧಿಸಿರುವ, ಈಗ ಕರ್ನಾಟಕ ರಾಜ್ಯದೊಂದಿಗೆ ನಿಹಿತವಾಗಿರುವ ಭೂಮಿಯ ನಷ್ಟಪರಿಹಾರವನ್ನು ನಿರ್ಧರಿಸಲು ಒಂದು ಅಧಿನಿಯಮ.

ಬೆಂಗಳೂರು ಅರಮನೆಯ ಒಟ್ಟಾರೆ ವ್ಯಾಪ್ತಿಯ 472 ಎಕರೆಗಳು ಮತ್ತು 16 ಗುಂಟೆಗಳ ಒಟ್ಟು ಮೌಲ್ಯವನ್ನು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ 8 ಮತ್ತು 9ನೇ ಪಕರಣಗಳ ಅನುಸಾರವಾಗಿ ಹನ್ನೊಂದು ಕೋಟಿ ರೂಪಾಯಿಗಳೆಂದು ನಿರ್ಧರಿಸಲಾಗಿರುವುದರಿಂದ;

ಮತ್ತು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ ಸಾಂವಿಧಾನಿಕ ಸಿಂಧುತ್ವವನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ಎತ್ತಿಹಿಡಿದಿರುವುದರಿಂದ ಹಾಗೂ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮೂಲಕ ಅಪೀಲಿನಲ್ಲಿ ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ ಕಾರ್ಯಾಚರಣೆಯ ಮೇಲೆ ಯಾವುದೇ ತಡೆಯಾಜ್ಞೆ ಇಲ್ಲದಿರುವುದರಿಂದ;

ಮತ್ತು ಮಾನ್ಯ ಸರ್ವೋಚ್ಛ ನ್ಯಾಯಾಲಯವು 2021ರ ನ್ಯಾಯಾಂಗ ನಿಂದನಾ ಪ್ರಕರಣ ಸಂ 688 ಇತ್ಯಾದಿಯಲ್ಲಿನ ದಿನಾಂಕ:10.12.2024ರ ತೀರ್ಪಿನ ಮೂಲಕ ರಸ್ತೆ ಅಗಲೀಕರಣದ ಉದ್ದೇಶಕ್ಕಾಗಿ ಗುರುತಿಸಲಾದ ಬೆಂಗಳೂರು ಅರಮನೆಯ ಭಾಗದ ಮೌಲ್ಯವನ್ನು ನಿರ್ಣಯಿಸಿ, ಕರ್ನಾಟಕ ಸ್ಟ್ಯಾಂಪು ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ 34)ರ 45ಬಿ ಪ್ರಕರಣದ ಪುಕಾರ ಅಕ್ಕಪಕ್ಕದ ಪ್ರದೇಶಗಳ ಚಾಲ್ತಿಯಲ್ಲಿರುವ ಮಾರ್ಗಸೂಚಿ ಮೌಲ್ಯಕ್ಕೆ ಅನುಸಾರವಾಗಿ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳನ್ನು ಮಂಜೂರು ಮಾಡುವಂತೆ ನಿರ್ದೇಶಿಸಿರುವುದರಿಂದ;

ಮತ್ತು ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪು ರಾಜ್ಯ ಸರ್ಕಾರದ ಬೊಕ್ಕಸದ ಮೇಲೆ ಹಾಗೂ ಬೆಂಗಳೂರು ನಗರದ ನಗರ ಯೋಜನೆಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುವುದರಿಂದ, ಮುಂದುವರೆದು ಇದು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ ಅನುಸಾರ ನಿರ್ಧರಿಸಲಾದ ಒಟ್ಟು ನಷ್ಟ ಪರಿಹಾರಕ್ಕೆ ಸುಸಂಗತವಾಗದಿರುವುದರಿಂದ;

ಮತ್ತು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ ಸಾಂವಿಧಾನಿಕ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಸಿವಿಲ್ ಅಪೀಲುಗಳು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಪರ್ಯಾಲೋಚನೆಗೆ ಬಾಕಿಯಿರುವುದರಿಂದ, ಮತ್ತು ಅಭಿವೃದ್ಧಿ ಹಕ್ಕುಗಳ ವರ್ಗಾವಣೆಯು ವಿಪರ್ಯಯಗೊಳ್ಳದಿರುವ ಪ್ರಕ್ರಿಯೆಯಾಗಿದ್ದು, ಅದು ರಾಜ್ಯದ ಮೇಲೆ ತೀವ್ರ ಸಂಕೀರ್ಣ ಪರಿಣಾಮವನ್ನು (ramification) ಬೀರುವುದರಿಂದ;
ಇದು ಭಾರತ ಗಣರಾಜ್ಯದ ಎಪ್ಪತ್ತಾರನೇ ವರ್ಷದಲ್ಲಿ ಕರ್ನಾಟಕ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ:-

1. ಸಂಕ್ಷಿಪ್ತ ಹೆಸರು, ಅನ್ವಯ ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ಅಧಿನಿಯಮ, 2025 ಎಂದು ಕರೆಯತಕ್ಕದ್ದು. (2) ಈ ಅಧಿನಿಯಮವು ಬೆಂಗಳೂರು ಅರಮನೆಗೆ ಅನ್ವಯವಾಗತಕ್ಕದ್ದು. (3) ಇದು 2025ರ ಜನವರಿ 27ನೇ ದಿನಾಂಕದಿಂದ ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು. 2. ಪರಿಭಾಷೆಗಳು. ಈ ಅಧಿನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-

(ಎ) “ಬೆಂಗಳೂರು ಅರಮನೆ” ಯು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ 2ನೇ ಪ್ರಕರಣದ ಖಂಡ (2)ರಲ್ಲಿ ಪರಿಭಾಷಿಸಲಾದಂತೆ ಅದೇ ಅರ್ಥವನ್ನು ಹೊಂದಿರತಕ್ಕದ್ದು.

(ಬಿ) “ಮೂಲಸೌಕರ್ಯ ಯೋಜನೆ”ಯು ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಯಲ್ಲಿನ ಯಾವುದೇ ಮೂಲ ಸೌಕರ್ಯ ಯೋಜನೆಯನ್ನು ಒಳಗೊಳ್ಳತಕ್ಕದ್ದು
(ಸಿ) “ಕೇಮುದಾರರು” ಎಂಬುದು,-

(1) ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ 2ನೇ ಪ್ರಕರಣದ (5) ನೇ ಖಂಡದಲ್ಲಿ ಪರಿಭಾಷಿಸಲಾದಂತೆ “ಕಾನೂನುಸಮ್ಮತ ಪ್ರತಿನಿಧಿಗಳು ಮತ್ತು “ವಾರಸುದಾರರು” ಎಂಬ; ಹಾಗೂ
(ii) ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ 2ನೇ ಪ್ರಕರಣದ (6) ನೇ ಖಂಡದಲ್ಲಿ ಪರಿಭಾಷಿಸಲಾದಂತೆ “ಇತರರು” “ಇತರ ವ್ಯಕ್ತಿಗಳು” ಮತ್ತು “ಇತರ ಹಿತಾಸಕ್ತ ವ್ಯಕ್ತಿಗಳು” ಎಂಬ, ಅದೇ ಅರ್ಥವನ್ನು ಹೊಂದಿರತಕ್ಕದ್ದು;

(ಡಿ) “ನಷ್ಟಪರಿಹಾರ”ವು ಸಂದಾಯ ಮಾಡಬಹುದಾದ ಯಾವುದೇ ಮೊತ್ತವನ್ನು ಒಳಗೊಳ್ಳತಕ್ಕದ್ದು ಮತ್ತು ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳನ್ನೂ ಸಹ ಒಳಗೊಳ್ಳತಕ್ಕದ್ದು.

(ಇ) ಕಮೀಷನರ್” ಎಂಬುದು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ 2ನೇ ಪ್ರಕರಣದ (4)ನೇ ಖಂಡದಲ್ಲಿ ಪರಿಭಾಷಿಸಲಾದಂತೆ ಅದೇ ಅರ್ಥವನ್ನು ಹೊಂದಿರತಕ್ಕದ್ದು.

(ಎಫ್) “ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳು” ಎಂಬುದು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಅಭಿವೃದ್ಧಿ ಹಕ್ಕುಗಳ ಪ್ರಯೋಜನ) ನಿಯಮಗಳು, 2016ರೊಂದಿಗೆ ಓದಿಕೊಂಡಂತೆ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ
ಅಧಿನಿಯಮ 11)ರ 14ಬಿ ಪ್ರಕರಣದ (28)ನೇ ಉಪ ಪ್ರಕರಣದ (ಕೆ) ಖಂಡದಲ್ಲಿ ಪರಿಭಾಷಿಸಲಾದಂತೆ ಅದೇ ಅರ್ಥವನ್ನು ಹೊಂದಿರತಕ್ಕದ್ದು.

(ಜಿ) “ರಾಜ್ಯ ಸರ್ಕಾರ” ಎಂದರೆ ಕರ್ನಾಟಕ ಸರ್ಕಾರ ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಂತಹ ಕರ್ನಾಟಕ ಸರ್ಕಾರದ ಅಂಗಮಾಧ್ಯಮಗಳನ್ನೂ (instrumentalities) ಒಳಗೊಳ್ಳತಕ್ಕದ್ದು.

3. ಮೂಲಸೌಕರ್ಯ ಯೋಜನೆಗಾಗಿ ಭೂಮಿಯ ಬಳಕೆ. (1) ಯಾವುದೇ ಮೂಲಸೌಕರ್ಯ ಯೋಜನೆಯ ಉದ್ದೇಶಕ್ಕಾಗಿ, ರಾಜ್ಯ ಸರ್ಕಾರವು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ 4ನೇ ಪ್ರಕರಣದಲ್ಲಿ ಬೆಂಗಳೂರು ಅರಮನೆಯ ಯಾವುದೇ ಭಾಗವನ್ನು ಬಳಸಲು ಅಧಿಕಾರವನ್ನು ಬರುವ ಹೊಂದಿರತಕ್ಕದ್ದು,

(2) ಯಾವುದೇ ನ್ಯಾಯಾಲಯದ ಯಾವುದೇ ತೀರ್ಪು ಅಥವಾ ಆದೇಶ ಅಥವಾ ರಾಜ್ಯ ಸರ್ಕಾರವು ಈ ಮೊದಲು ತೆಗೆದುಕೊಂಡ ಯಾವುದೇ ತೀರ್ಮಾನದಲ್ಲಿ ಏನೇ ಇದ್ದರೂ, ರಾಜ್ಯ ಸರ್ಕಾರವು (1)ನೇ ಉಪಪಕರಣದಲ್ಲಿನ ಯಾವುದೇ ಮೂಲಸೌಕರ್ಯ ಯೋಜನೆಗೆ ಸಂಪೂರ್ಣವಾಗಿ ಅಥವಾ ಭಾಗಶಃವಾಗಿ ಮುಂದುವರೆಯದಿರಲು ಅಧಿಕಾರವನ್ನು ಹೊಂದಿರತಕ್ಕದ್ದು ಎಂದು ತಿಳಿಸಿದೆ.

ತಿಮ್ಮಪ್ಪನ ಸನ್ನಿಧಿಗೆ ದಾಖಲೆಯ ‘ನಂದಿನಿ ತುಪ್ಪ’ ರವಾನೆ: ಯುಗಾದಿಗಾಗಿ ‘2000 ಟನ್‌’ಗೆ ಡಿಮ್ಯಾಂಡ್ | Nandini Ghee

ISRO ಸ್ಪೇಸ್ ಡಾಕಿಂಗ್ ಯಶಸ್ವಿ: ಅಭಿನಂದನೆ ಸಲ್ಲಿಸಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್ | Isro

Share. Facebook Twitter LinkedIn WhatsApp Email

Related Posts

‘ಆಪರೇಷನ್ ಸಿಂಧೂರ್’: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ | Operation Sindoor

09/05/2025 12:10 PM1 Min Read

BREAKING : ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ : ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್

09/05/2025 11:46 AM1 Min Read

ಮಹಾಲಕ್ಷ್ಮಿಯನ್ನು ಈ ಮಂತ್ರಗಳನ್ನು ದಿನಕ್ಕೆ 108 ಬಾರಿ ಪಠಿಸಿದರೆ ಹಣ, ಸಂಪತ್ತು, ಸಮೃದ್ಧಿಯು ಹೆಚ್ಚಾಗುತ್ತದೆ. ಧನಾಗಮನ ಖಂಡಿತ..

09/05/2025 11:00 AM4 Mins Read
Recent News

BREAKING : ಇಂದು ಮಧ್ಯಾಹ್ನ 12:30 ಕ್ಕೆ BSF ಮತ್ತು CISF ಡಿಜಿಗಳೊಂದಿಗೆ ಅಮಿತ್ ಶಾ ಸಭೆ | India -Pak war

09/05/2025 12:19 PM

‘ಆಪರೇಷನ್ ಸಿಂಧೂರ್’: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ | Operation Sindoor

09/05/2025 12:10 PM

BREAKING : ಭಾರತ-ಪಾಕ್ ಮಧ್ಯ ಉದ್ವಿಗ್ನ ಪರಿಸ್ಥಿತಿ : ‘IPL’ ಟೂರ್ನಿಯ ಮುಂದಿನ ಎಲ್ಲಾ ಪಂದ್ಯಗಳು ರದ್ದಾಗುವ ಸಾಧ್ಯತೆ!

09/05/2025 12:05 PM

ಭಾರತ-ಪಾಕಿಸ್ತಾನ ಉದ್ವಿಗ್ನತೆ : ಇಂಧನ ದಾಸ್ತಾನು ಸಾಕಷ್ಟಿದೆ: ಇಂಡಿಯನ್ ಆಯಿಲ್ | Indian oil

09/05/2025 11:57 AM
State News
KARNATAKA

‘ಆಪರೇಷನ್ ಸಿಂಧೂರ್’: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ | Operation Sindoor

By kannadanewsnow8909/05/2025 12:10 PM KARNATAKA 1 Min Read

ಉಡುಪಿ: ಭಾರತೀಯ ಸಶಸ್ತ್ರ ಪಡೆಗಳ ಆಪರೇಷನ್ ಸಿಂಧೂರ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 25ಕ್ಕೂ…

BREAKING : ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ : ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್

09/05/2025 11:46 AM

ಮಹಾಲಕ್ಷ್ಮಿಯನ್ನು ಈ ಮಂತ್ರಗಳನ್ನು ದಿನಕ್ಕೆ 108 ಬಾರಿ ಪಠಿಸಿದರೆ ಹಣ, ಸಂಪತ್ತು, ಸಮೃದ್ಧಿಯು ಹೆಚ್ಚಾಗುತ್ತದೆ. ಧನಾಗಮನ ಖಂಡಿತ..

09/05/2025 11:00 AM

BIG NEWS : ಇಂದು ನಡೆಯುವ ಸಂಪುಟ ಸಭೆಯಲ್ಲಿ ‘ಜಾತಿ ಗಣತಿ’ ವರದಿ ಭವಿಷ್ಯ ನಿರ್ಧಾರ

09/05/2025 10:50 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.