Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಹುಪತ್ನಿತ್ವ ಸಂಪ್ರದಾಯ ಉಳಿಸಲು ಒಂದೇ ಹುಡುಗಿಯನ್ನು ಮದುವೆಯಾದ ಸಹೋದರರು !

20/07/2025 10:34 AM

BREAKING : ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಹರಿದು ಯುವತಿ ಸಾವು ಪ್ರಕರಣ : ಚಾಲಕನ ವಿರುದ್ಧ ‘FIR’ ದಾಖಲು

20/07/2025 10:27 AM

20 ವರ್ಷಗಳ ಕೋಮಾದಲ್ಲಿದ್ದ ಸೌದಿ ಅರೇಬಿಯಾದ ‘ಸ್ಲೀಪಿಂಗ್ ಪ್ರಿನ್ಸ್’ ನಿಧನ | Sleeping prince dies

20/07/2025 10:23 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Power Demand In India : ‘ಹೆಚ್ಚುವರಿ ವಿದ್ಯುತ್, ವಿಳಂಬ ಪಾವತಿ’ ನಿಯಮ ಬದಲಿಸಿದ ಕೇಂದ್ರ ಸರ್ಕಾರ, ಸರಬರಾಜು ಹೆಚ್ಚಳ
INDIA

Power Demand In India : ‘ಹೆಚ್ಚುವರಿ ವಿದ್ಯುತ್, ವಿಳಂಬ ಪಾವತಿ’ ನಿಯಮ ಬದಲಿಸಿದ ಕೇಂದ್ರ ಸರ್ಕಾರ, ಸರಬರಾಜು ಹೆಚ್ಚಳ

By KannadaNewsNow02/03/2024 2:55 PM

ನವದೆಹಲಿ : ಹೆಚ್ಚುವರಿ ವಿದ್ಯುತ್ ಮತ್ತು ವಿಳಂಬ ಪಾವತಿಗೆ ಸಂಬಂಧಿಸಿದ ನಿಯಮಗಳನ್ನ ಸರ್ಕಾರ ತಿದ್ದುಪಡಿ ಮಾಡಿದೆ. ಹೊಸ ನಿಯಮದ ಪ್ರಕಾರ, ತಮ್ಮ ಹೆಚ್ಚುವರಿ ವಿದ್ಯುತ್’ನ್ನ ನೀಡದ ವಿದ್ಯುತ್ ಉತ್ಪಾದಕರು ಇನ್ನು ಮುಂದೆ ಬಳಕೆಯಾಗದ ವಿದ್ಯುತ್ ಪ್ರಮಾಣಕ್ಕೆ ಅನುಗುಣವಾಗಿ ಸಾಮರ್ಥ್ಯ ಅಥವಾ ಸ್ಥಿರ ಶುಲ್ಕವನ್ನ ಪಡೆಯಲು ಸಾಧ್ಯವಾಗುವುದಿಲ್ಲ. ಇದು ಹೆಚ್ಚುವರಿ ವಿದ್ಯುತ್ ಮಾರಾಟ ಮತ್ತು ಬಳಕೆಯ ಸಾಧ್ಯತೆಯನ್ನ ಹೆಚ್ಚಿಸುತ್ತದೆ. ಈ ಮೂಲಕ 24 ಗಂಟೆಗಳ ವಿದ್ಯುತ್ ಪೂರೈಕೆಯ ಗುರಿಯನ್ನ ತಲುಪಲು ಸರ್ಕಾರ ಬಯಸಿದೆ. ಗ್ರಾಹಕರಿಗೆ ಸಾಕಷ್ಟು ವಿದ್ಯುತ್ ಪೂರೈಕೆಯನ್ನ ಖಚಿತಪಡಿಸಿಕೊಳ್ಳಲು ಮತ್ತು ಹೆಚ್ಚುತ್ತಿರುವ ಬೇಡಿಕೆಯನ್ನ ಪೂರೈಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಭಾರತದ ವಿದ್ಯುತ್ ಬಳಕೆ ಫೆಬ್ರವರಿಯಲ್ಲಿ ಶೇಕಡಾ 8 ರಷ್ಟು ಏರಿಕೆಯಾಗಿ 127.79 ಬಿಲಿಯನ್ ಯೂನಿಟ್ಗಳಿಗೆ (ಬಿಯು) ತಲುಪಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.

ನಿಯಮವನ್ನು ಏಕೆ ಬದಲಾಯಿಸಲಾಯಿತು.?
ಕೆಲವು ವಿದ್ಯುತ್ ಉತ್ಪಾದಕರು ಈ ಹೆಚ್ಚುವರಿ ವಿದ್ಯುತ್’ನ್ನ ಮಾರುಕಟ್ಟೆಗೆ ತರುತ್ತಿಲ್ಲ, ಇದರಿಂದಾಗಿ ಬಳಕೆಯಾಗದ ವಿದ್ಯುತ್ ಸಾಮರ್ಥ್ಯವು ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿದೆ ಎಂದು ಕೇಂದ್ರ ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ ಸಿಂಗ್ ಹೇಳಿದ್ದಾರೆ. ಈ ಸಮಸ್ಯೆಯನ್ನ ಪರಿಹರಿಸಲು ಮತ್ತು ಲಭ್ಯವಿರುವ ವಿದ್ಯುತ್ ಬಳಕೆಯನ್ನ ಉತ್ತಮಗೊಳಿಸಲು, ತಮ್ಮ ಹೆಚ್ಚುವರಿ ವಿದ್ಯುತ್’ನ್ನ ನೀಡದ ವಿದ್ಯುತ್ ಉತ್ಪಾದಕರು ಇನ್ಮುಂದೆ ಬಳಕೆಯಾಗದ ವಿದ್ಯುತ್ ಪ್ರಮಾಣಕ್ಕೆ ಅನುಗುಣವಾಗಿ ಸಾಮರ್ಥ್ಯ ಅಥವಾ ಸ್ಥಿರ ಶುಲ್ಕಗಳನ್ನ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ವ್ಯವಸ್ಥೆ ಮಾಡಲಾಗಿದೆ. ಇದು ಹೆಚ್ಚುವರಿ ವಿದ್ಯುತ್ ಮಾರಾಟ ಮತ್ತು ಬಳಕೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಇದರಿಂದ ಆಗುವ ಪ್ರಯೋಜನವೇನು.?
ಭಾರತ ಸರ್ಕಾರವು 2022 ರ ವಿದ್ಯುತ್ (ವಿಳಂಬ ಪಾವತಿ ಸರ್ಚಾರ್ಜ್ ಮತ್ತು ಸಂಬಂಧಿತ ವಿಷಯಗಳು) ನಿಯಮಗಳನ್ನ ತಿದ್ದುಪಡಿ ಮಾಡಿದೆ. ಇದು ಎಲ್ಲಾ ಗ್ರಾಹಕರಿಗೆ ವಿದ್ಯುತ್ ಸರಬರಾಜನ್ನ ಹೆಚ್ಚು ವಿಶ್ವಾಸಾರ್ಹವಾಗಿಸುತ್ತದೆ. ಕೇಂದ್ರ ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ.ಸಿಂಗ್ ಅವರು ಈ ತಿದ್ದುಪಡಿಯು ಘೋಷಿತ ಉತ್ಪಾದನಾ ಸಾಮರ್ಥ್ಯದೊಳಗಿನ ಆದರೆ ವಿತರಣಾ ಕಂಪನಿಗಳು ಒತ್ತಾಯಿಸದ ಹೆಚ್ಚುವರಿ ವಿದ್ಯುತ್ಗೆ ಸಂಬಂಧಿಸಿದೆ ಎಂದು ಹೇಳಿದರು.

ಫೆಬ್ರವರಿಯಲ್ಲಿ ಬಳಕೆ ಶೇ.8ರಷ್ಟು ಏರಿಕೆ.!
ಭಾರತದ ವಿದ್ಯುತ್ ಬಳಕೆ ಫೆಬ್ರವರಿಯಲ್ಲಿ ಶೇಕಡಾ 8ರಷ್ಟು ಏರಿಕೆಯಾಗಿ 127.79 ಬಿಲಿಯನ್ ಯೂನಿಟ್ಗಳಿಗೆ (ಬಿಯು) ತಲುಪಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. ಅಂಕಿ-ಅಂಶಗಳ ಪ್ರಕಾರ, ವಿದ್ಯುತ್ ಬಳಕೆ ಫೆಬ್ರವರಿ 2023 ರಲ್ಲಿ 118.29 ಬಿಲಿಯನ್ ಯುನಿಟ್ ಮತ್ತು ಫೆಬ್ರವರಿ 2022 ರಲ್ಲಿ 108.03 ಬಿಲಿಯನ್ ಯುನಿಟ್ ಆಗಿತ್ತು. ಫೆಬ್ರವರಿ 2024ರಲ್ಲಿ ತಿಂಗಳಲ್ಲಿ ಯಾವುದೇ ದಿನದಲ್ಲಿ ಅತಿ ಹೆಚ್ಚು ವಿದ್ಯುತ್ ಬೇಡಿಕೆ 222 ಗಿಗಾವಾಟ್ಗಳಿಗೆ (ಒಂದು ಗಿಗಾವಾಟ್ 1,000 ಮೆಗಾವ್ಯಾಟ್ಗೆ ಸಮಾನ) ಏರಿತು. ಈ ಅಂಕಿ ಅಂಶವು ಫೆಬ್ರವರಿ 2023 ರಲ್ಲಿ 209.76 ಗಿಗಾವ್ಯಾಟ್ ಮತ್ತು ಫೆಬ್ರವರಿ 2022 ರಲ್ಲಿ 193.58 ಗಿಗಾವ್ಯಾಟ್ ಆಗಿತ್ತು. ವಿದ್ಯುತ್ ಬಳಕೆಯ ಜೊತೆಗೆ, ಬೇಡಿಕೆಯೂ ಫೆಬ್ರವರಿಯಲ್ಲಿ ಸುಧಾರಿಸಿದೆ. ದೀರ್ಘಕಾಲದ ಶೀತ ಅಲೆಯು ಹೀಟರ್’ಗಳು, ಬ್ಲೋವರ್’ಗಳು ಮತ್ತು ಗೀಸರ್’ಗಳಂತಹ ಉಪಕರಣಗಳ ಬಳಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಯಿತು. ಇದು ವಿದ್ಯುತ್ ಬಳಕೆಯನ್ನ ಹೆಚ್ಚಿಸಿದೆ.

 

BREAKING: ರಾಮೇಶ್ವೇರ ಕೆಫೆ ಬಾಂಬ್‌ ಸ್ಪೋಟ ಪ್ರಕರಣ CCBಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ!

ಕೆಫೆ ಸ್ಪೋಟಕಕ್ಕೂ ಮುನ್ನ ನಿರ್ಜನ ಪ್ರದೇಶ, ಕಾರಿನಲ್ಲಿ ಟ್ರಯಲ್‌ ಬ್ಲಾಸ್ಟ್‌!? ತನಿಖೆಯಲ್ಲಿ ಸ್ಪೋಟಕ ರಹಸ್ಯ ಬಯಲು!

ಕೆಫೆ ಸ್ಪೋಟಕಕ್ಕೂ ಮುನ್ನ ನಿರ್ಜನ ಪ್ರದೇಶ, ಕಾರಿನಲ್ಲಿ ಟ್ರಯಲ್‌ ಬ್ಲಾಸ್ಟ್‌!? ತನಿಖೆಯಲ್ಲಿ ಸ್ಪೋಟಕ ರಹಸ್ಯ ಬಯಲು!

delayed payment' rule Govt changes 'excess power increases supply Power Demand In India : 'ಹೆಚ್ಚುವರಿ ವಿದ್ಯುತ್ ವಿಳಂಬ ಪಾವತಿ' ನಿಯಮ ಬದಲಿಸಿದ ಕೇಂದ್ರ ಸರ್ಕಾರ ಸರಬರಾಜು ಹೆಚ್ಚಳ
Share. Facebook Twitter LinkedIn WhatsApp Email

Related Posts

ಬಹುಪತ್ನಿತ್ವ ಸಂಪ್ರದಾಯ ಉಳಿಸಲು ಒಂದೇ ಹುಡುಗಿಯನ್ನು ಮದುವೆಯಾದ ಸಹೋದರರು !

20/07/2025 10:34 AM1 Min Read

20 ವರ್ಷಗಳ ಕೋಮಾದಲ್ಲಿದ್ದ ಸೌದಿ ಅರೇಬಿಯಾದ ‘ಸ್ಲೀಪಿಂಗ್ ಪ್ರಿನ್ಸ್’ ನಿಧನ | Sleeping prince dies

20/07/2025 10:23 AM1 Min Read

ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ ಮಹಿಳೆ, ಆಪರೇಷನ್ ವೇಳೆ ಬೆಚ್ಚಿಬಿದ್ದ ವೈದ್ಯರು!

20/07/2025 10:17 AM1 Min Read
Recent News

ಬಹುಪತ್ನಿತ್ವ ಸಂಪ್ರದಾಯ ಉಳಿಸಲು ಒಂದೇ ಹುಡುಗಿಯನ್ನು ಮದುವೆಯಾದ ಸಹೋದರರು !

20/07/2025 10:34 AM

BREAKING : ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಹರಿದು ಯುವತಿ ಸಾವು ಪ್ರಕರಣ : ಚಾಲಕನ ವಿರುದ್ಧ ‘FIR’ ದಾಖಲು

20/07/2025 10:27 AM

20 ವರ್ಷಗಳ ಕೋಮಾದಲ್ಲಿದ್ದ ಸೌದಿ ಅರೇಬಿಯಾದ ‘ಸ್ಲೀಪಿಂಗ್ ಪ್ರಿನ್ಸ್’ ನಿಧನ | Sleeping prince dies

20/07/2025 10:23 AM

ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಮಹಿಳೆ ಜೊತೆ ಒನ್ ಸೈಡ್ ಲವ್ : ಮಾತುಕತೆಗೆ ಕರೆಸಿದ ವೇಳೆಯೇ ಕತ್ತು ಕೊಯ್ದ ಆಸಾಮಿ!

20/07/2025 10:22 AM
State News
KARNATAKA

BREAKING : ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಹರಿದು ಯುವತಿ ಸಾವು ಪ್ರಕರಣ : ಚಾಲಕನ ವಿರುದ್ಧ ‘FIR’ ದಾಖಲು

By kannadanewsnow0520/07/2025 10:27 AM KARNATAKA 1 Min Read

ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಪೀಣ್ಯದ ಎರಡನೇ ಹಂತದಲ್ಲಿ ಬಿಎಂಟಿಸಿ ಬಸ್ ಒಂದು ರಸ್ತೆ ಬದಿಯ…

ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಮಹಿಳೆ ಜೊತೆ ಒನ್ ಸೈಡ್ ಲವ್ : ಮಾತುಕತೆಗೆ ಕರೆಸಿದ ವೇಳೆಯೇ ಕತ್ತು ಕೊಯ್ದ ಆಸಾಮಿ!

20/07/2025 10:22 AM

ಧನುಸ್ಸು ರಾಶಿಯವರಿಗೆ ಈ ಒಂದು ತಾಂತ್ರಿಕ ಅನುಷ್ಠಾನ ಮಾಡಿ ನೋಡಿ ಜೀವನ ಅದೃಷ್ಟದ ರೀತಿಯಲ್ಲಿ ಬದಲಾವಣೆಯಾಗುತ್ತದೆ..

20/07/2025 10:14 AM

BREAKING : ಸೇತುವೆ ಮೇಲಿಂದ ಪತಿಯನ್ನು ತಳ್ಳಿದ ಪ್ರಕರಣಕ್ಕೆ ಟ್ವಿಸ್ಟ್ : ಬಾಲ್ಯ ವಿವಾಹವೇ ಕಂಟಕವಾಯ್ತಾ ತಾತಪ್ಪನಿಗೆ?

20/07/2025 10:12 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.