ಕೆಎನ್ಎನ್ಡಿಜಿಟಲ್ ಡೆಸ್ಕ್ : ಸೊಳ್ಳೆ ಕಡಿತದಿಂದ ಅನಾರೋಗ್ಯಕ್ಕೆ ಒಳಗಾಗುತ್ತಿರುವ ಜನರ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಹಾಗಾಗಿ ಇದ್ರಿಂದ ಮುಕ್ತಿ ನೀಡಲು, ಸೊಳ್ಳೆಗಳಿಂದ ಮನುಷ್ಯರನ್ನ ರಕ್ಷಿಸಲು, ಪುದುಚೇರಿಯ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಸಂಶೋಧನಾ ಕೇಂದ್ರವು, ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಇಸ್ರೇಲೆನ್ಸಿಸ್ (Bti strain VCRC B-17) ಸ್ಟ್ರೈನ್ ಬ್ಯಾಕ್ಟೀರಿಯಾ ಉತ್ಪಾದಿಸುವ ಹೊಸ ತಂತ್ರಜ್ಞಾನವನ್ನ ಅಭಿವೃದ್ಧಿಪಡಿಸಿದೆ. ವಿಶೇಷ ಅಂದ್ರೆ ಇದು ಪ್ರಾಣಿಗಳು ಮತ್ತು ಕೀಟಗಳಿಗೆ ಹಾನಿಯಾಗದಂತೆ ಸೊಳ್ಳೆಗಳ ಮೇಲೆ ಮಾತ್ರ ಕಾರ್ಯನಿರ್ವಹಿಸುತ್ತದೆ.
ಈ ಬ್ಯಾಕ್ಟೀರಿಯಾ ಇತರ ಪ್ರಾಣಿಗಳಿಗೆ ಹಾನಿಯಾಗದಂತೆ ಸೊಳ್ಳೆಗಳು ಮತ್ತು ಕಪ್ಪು ನೊಣದ ಲಾರ್ವಾಗಳನ್ನು ಕೊಲ್ಲುತ್ತದೆ. ಪ್ರಸ್ತುತ, Bti ಬ್ಯಾಕ್ಟೀರಿಯಾ ದಶಕಗಳಿಂದ ಸೊಳ್ಳೆ ನಿಯಂತ್ರಣಕ್ಕೆ ಲಭ್ಯವಿದೆ. ಇದು ಇತರ ಪ್ರಾಣಿಗಳು ಮತ್ತು ಪರಿಸರಕ್ಕೆ ಸುರಕ್ಷಿತವೆಂದು ಪರಿಗಣಿಸಲಾಗಿದೆ. ಈ ಕುರಿತು ಐಸಿಎಂಆರ್ ವೆಕ್ಟರ್ ನಿಯಂತ್ರಣ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಅಶ್ವನಿ ಕುಮಾರ್ ತಿಳಿಸಿದ್ದಾರೆ. ಇತರ ಕೀಟಗಳು, ಜಲಚರಗಳು ಮತ್ತು ಸಸ್ತನಿಗಳಿಗೆ ಯಾವುದೇ ಹಾನಿ ಉಂಟುಮಾಡುವುದಿಲ್ಲ. VCRC Bti ತಂತ್ರಜ್ಞಾನವು ಅದರ ಪರಿಣಾಮಕಾರಿತ್ವದ ದೃಷ್ಟಿಯಿಂದ ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಮಾಣಿತ ಸ್ಟ್ರೈನ್ ಬ್ಯಾಕ್ಟೀರಿಯಾಕ್ಕೆ ಸಮನಾಗಿರುತ್ತದೆ. ನಮ್ಮ Bti B-17 ಸ್ಟ್ರೈನ್ ಅನ್ನು ವ್ಯಾಪಕವಾಗಿ ಪರೀಕ್ಷಿಸಲಾಗಿದೆ. ಇದನ್ನ ಈಗ ಭಾರತೀಯ ಕೇಂದ್ರ ಕೀಟನಾಶಕ ಮಂಡಳಿಯು ಭಾರತೀಯ ಗುಣಮಟ್ಟದ ತಳಿ ಎಂದು ಗುರುತಿಸಿದೆ. ಆದ್ರೆ, ಇಲ್ಲಿಯವರೆಗೆ 21 ಕಂಪನಿಗಳು ಈ ತಂತ್ರಜ್ಞಾನಕ್ಕೆ ಪರವಾನಗಿ ಪಡೆದಿವೆ” ಎಂದು ಹೇಳಿದರು.
ಈ ಬ್ಯಾಕ್ಟೀರಿಯಾಗಳ ವಾಣಿಜ್ಯ ಉತ್ಪಾದನೆಯು ಮಲೇರಿಯಾ, ಫೈಲೇರಿಯಾ, ಜಪಾನೀಸ್ ಎನ್ಸೆಫಾಲಿಟಿಸ್, ಡೆಂಗ್ಯೂ, ಚಿಕೂನ್ಗುನ್ಯಾ ಮತ್ತು ಝಿಕಾಗಳಂತಹ ವೆಕ್ಟರ್-ಹರಡುವ ರೋಗಗಳನ್ನ ಕೊನೆಗೊಳಿಸುವ ಭಾರತದ ಹೋರಾಟದಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಕಳೆದ ತಿಂಗಳು, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ BTI ತಂತ್ರಜ್ಞಾನವನ್ನು ಭಾರತದಲ್ಲಿ ಬ್ಯಾಕ್ಟೀರಿಯಾದ ವಾಣಿಜ್ಯ ಉತ್ಪಾದನೆಗಾಗಿ ಹಿಂದೂಸ್ತಾನ್ ಇನ್ಸೆಕ್ಟಿಸೈಡ್ಸ್ ಲಿಮಿಟೆಡ್ಗೆ ಹಸ್ತಾಂತರಿಸಿದರು. ಆದರೆ ರಾಜ್ಯ-ಚಾಲಿತ ಕಂಪನಿಯು Bti ಜೈವಿಕ ಲಾರ್ವಿಸೈಡ್ಗಳನ್ನು ಉಷ್ಣವಲಯದ ಮತ್ತು ಉಪ-ಉಷ್ಣವಲಯದ ಪ್ರದೇಶಗಳಿಗೆ ರಫ್ತು ಮಾಡಲು ಯೋಜಿಸಿದೆ.
ಸುಮಾರು ಒಂದು ಶತಮಾನದಿಂದ ನಾವು ಸೊಳ್ಳೆಗಳನ್ನ ನಿಯಂತ್ರಿಸಲು ರಾಸಾಯನಿಕ ಕೀಟನಾಶಕಗಳನ್ನ ಬಳಸುತ್ತಿದ್ದೇವೆ ಎಂದು ತಜ್ಞರು ಹೇಳಿದ್ದಾರೆ. ಈ ಕಾರಣದಿಂದಾಗಿ ಪರಿಸರಕ್ಕೆ ತೊಂದರೆಗಳು ಉಂಟಾಗುತ್ತವೆ. ಇದರೊಂದಿಗೆ ಸೊಳ್ಳೆಗಳು ಆ ರಾಸಾಯನಿಕಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನ ಬೆಳೆಸಿಕೊಳ್ಳುತ್ತವೆ. ಅದಕ್ಕಾಗಿಯೇ ನಾವು ಈಗ ಬಿಟಿಐನಂತಹ ಜೈವಿಕ ನಿಯಂತ್ರಣ ಏಜೆಂಟ್ಗಳ ಬಳಕೆಯತ್ತ ಗಮನಹರಿಸುತ್ತಿದ್ದೇವೆ ಎಂದು ಕೇಂದ್ರದ ನಿರ್ದೇಶಕ ಡಾ. ಅಶ್ವನಿ ಕುಮಾರ್ ಹೇಳಿದರು. ಈ ಬ್ಯಾಕ್ಟೀರಿಯಾಗಳನ್ನ ಸೊಳ್ಳೆಗಳು ಸೇವಿಸಿದಾಗ, ಅವುಗಳಲ್ಲಿರುವ ವಿಷವು 10-15 ನಿಮಿಷಗಳಲ್ಲಿ ಲಾರ್ವಾಗಳ ಕರುಳಿನ ಪ್ರದೇಶವನ್ನ ನಾಶಪಡಿಸುತ್ತದೆ.
ಆರೋಗ್ಯ ಸಚಿವಾಲಯ ನೀಡಿರುವ ವಿವರಗಳ ಪ್ರಕಾರ, ಭಾರತದಲ್ಲಿ ಮೇ ತಿಂಗಳವರೆಗೆ 10,172 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಮೂರು ಸಾವು ಕೂಡ ಸಂಭವಿಸಿದೆ. ಈ ವರ್ಷದ ಜೂನ್ವರೆಗೆ ಸುಮಾರು 1,554 ಚಿಕೂನ್ಗುನ್ಯಾ ಪ್ರಕರಣಗಳು ದಾಖಲಾಗಿದ್ದರೆ, ಏಪ್ರಿಲ್ವರೆಗೆ 21,558 ಮಲೇರಿಯಾ ಪ್ರಕರಣಗಳು ದಾಖಲಾಗಿವೆ. ನಾಲ್ಕು ಸಾವು ಸಂಭವಿಸಿದೆ.