Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Watch Video: ಬೆಂಗಳೂರಲ್ಲಿ ಗೃಹ ಸಚಿವರ ನಿವಾಸದ ಬಳಿಯಲ್ಲೇ ಗನ್ ಹಿಡಿದು ನಿವೃತ್ತ ಪೊಲೀಸ್ ಅಧಿಕಾರಿ ರಂಪಾಟ: ವೀಡಿಯೋ ವೈರಲ್

01/07/2025 5:10 PM

“ನಾನೂ ಕೋಣೆಯಲ್ಲಿದ್ದೆ” : ಟ್ರಂಪ್ ಭಾರತ-ಪಾಕ್ ಕದನ ವಿರಾಮ ಹೇಳಿಕೆಗೆ ಜೈ ಶಂಕರ್ ನಿರಾಕರಣೆ

01/07/2025 5:05 PM

BREAKING: ರಾಜ್ಯದಲ್ಲಿ ಹಠಾತ್ ಸರಣಿ ಸಾವಿನ ಬಗ್ಗೆ ತಜ್ಞರ ಸಮಿತಿ ವರದಿ ಆಧರಿಸಿ ಕ್ರಮ: ಸಿಎಂ ಸಿದ್ಧರಾಮಯ್ಯ

01/07/2025 4:54 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರದಿಂದ ‘ಮುಜರಾಯಿ ಇಲಾಖೆ ದೇವಾಲಯ’ಗಳ ‘ಅರ್ಚಕ’ರಿಗೆ ಗುಡ್ ನ್ಯೂಸ್
KARNATAKA

ರಾಜ್ಯ ಸರ್ಕಾರದಿಂದ ‘ಮುಜರಾಯಿ ಇಲಾಖೆ ದೇವಾಲಯ’ಗಳ ‘ಅರ್ಚಕ’ರಿಗೆ ಗುಡ್ ನ್ಯೂಸ್

By kannadanewsnow0913/10/2024 4:36 PM

ಬೆಂಗಳೂರು: ರಾಜ್ಯ ಸರ್ಕಾರದಿಂದ ಅರ್ಚಕರಿಗೆ ಗುಡ್ ನ್ಯೂಸ್ ಎನ್ನುವಂತೆ,  ಅರ್ಚಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುವಂತ ಪ್ರೋತ್ಸಾಹಧನ, ತಸ್ತೀಕ್, ವರ್ಷಾಸನ ಹಣ ನೇರವಾಗಿ ಅರ್ಚಕರ ಬ್ಯಾಂಕ್ ಖಾತೆಗೆ ಜಮಾ ಆಗುವಂತೆ ಮಾಡಿದೆ. ಇದಕ್ಕೆ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ರಾಜ್ಯದ ಸಿʼ ವರ್ಗದ ಅಧಿಸೂಚಿತ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಹಾಗೂ ದೇವಾಲಯದ ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನ ಮತ್ತು ಮರಣ ಉಪದಾನ ವಿತರಣೆ ಹಾಗೂ ಅರ್ಚಕರುಗಳಿಗೆ ತಸ್ತೀಕ್ /ವರ್ಷಾಸನ ಹಣವನ್ನು ನೇರವಾಗಿ ಅರ್ಚಕರುಗಳ ಖಾತೆಗೆ ಜಮಾ ಮಾಡುವ ಕಾರ್ಯಕ್ರಮಕ್ಕೆ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದ್ದಾರೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗೆ ಸೇರಿದ 33 ವಿದ್ಯಾರ್ಥಿಗಳಿಗೆ ರೂ.4,88,000/-ಗಳ ವಿದ್ಯಾರ್ಥಿ ವೇತನವನ್ನು ಹಾಗೂ ಇಬ್ಬರು ಅರ್ಚಕರ ಕುಟುಂಬದವರಿಗೆ ತಲಾ ರೂ.2 ಲಕ್ಷಗಳಂತೆ ಒಟ್ಟು ರೂ.4 ಲಕ್ಷ ರೂಗಳ ನೌಕರರ ಮರಣ ಉಪಧನ ವಿತರಣೆವನ್ನು ಮಾನ್ಯ ಸಚಿವರು ವಿತರಿಸಿದರು.

ಇದಲ್ಲದೆ ರಾಜ್ಯದ ಒಟ್ಟು 7 ಜಿಲ್ಲೆಗಳ 158 ವಿದ್ಯಾರ್ಥಿಗಳಿಗೆ ರೂ.20,09,000/-ಗಳ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಿ, ಸಂಬಂಧಪಟ್ಟವರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ವಿತರಿಸಲು ಆದೇಶಿಸಲಾಯಿತು.

ಸಿ ವರ್ಗದ ದೇವಾಲಯಗಳ ಅಭಿವೃದ್ದಿ ಹಾಗೂ ಅರ್ಚಕರುಗಳ ಕ್ಷೇಮಾಭಿವೃದ್ದಿಗಾಗಿ ಇನ್ನು ಹೆಚ್ಚಿನ ಅನುದಾನವನ್ನು ವೆಚ್ಚ ಮಾಡುವ ಉದ್ದೇಶದಿಂದ ಸಾಮಾನ್ಯ ಸಂಗ್ರಹಣಾ ನಿಧಿ ಮೊತ್ತವನ್ನು ಹೆಚ್ಚಿಸಲು ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿದ್ದು, ರಾಜ್ಯಪಾಲರ ಅನುಮೋದನೆಗಾಗಿ ಮಸೂದೆಯನ್ನು ಕಳುಹಿಸಲಾಗಿದೆ. ಮಾನ್ಯ ರಾಜ್ಯಪಾಲರ ಕಛೇರಿ ಕೆಲವೊಂದು ಸ್ಪಷ್ಟೀಕರಣ ಒದಗಿಸಲು ತಿಳಿಸಿದ್ದು, ಅದರಂತೆ ಸವಿವರವಾದ ವಿವರಣೆಯನ್ನು ನೀಡಲಾಗಿದ್ದು, ಮಸೂದೆ ಅನುಮೋದನೆಗಾಗಿ ಕಾಯಲಾಗುತ್ತಿದೆ.

ಈಗಾಗಲೇ ವಿಧಾನಮಂಡಲಗಳಲ್ಲಿ ಸದರಿ ಮಸೂದೆಯನ್ನು ಮಂಡಿಸಿ, ಚರ್ಚಿಸಲಾಗಿದ್ದು, ತಿದ್ದುಪಡಿಯೊಂದಿಗೆ ಅಂಗೀಕಾರವಾಗಿದೆ. ರಾಜ್ಯಪಾಲರ ಅನುಮೋದನೆ ದೊರಕಿದ ಕೂಡಲೇ ಹೆಚ್ಚಾಗಿ ಸಂಗ್ರಹವಾಗುವ ಸಾಮಾನ್ಯ ಸಂಗ್ರಹಣಾ ನಿಧಿಯಲ್ಲಿ ದೇವಸ್ಥಾನಗಳ ಅರ್ಚಕರ/ ನೌಕರರ ಕ್ಷೇಮಾಭಿವೃದ್ಧಿಗಾಗಿ ಈ ಕೆಳಕಂಡ ಯೋಜನೆಯನ್ನು ರೂಪಿಸಲು ಈಗಾಗಲೇ ರೂಪುರೇಷೆ ತಯಾರು ಮಾಡಲಾಗಿದೆ.

1.ಪ್ರತಿ ವರ್ಷ ‘ಸಿ’ ವರ್ಗದ1500 ದೇವಾಲಯಗಳಿಗೆ ರೂ.5 ಲಕ್ಷ ಅನುದಾನ ಬಿಡುಗಡೆ

2.ಪ್ರತಿ ವರ್ಷ ಅರ್ಚಕರ / ನೌಕರರ ಕನಿಷ್ಠ 3000 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವುದು

3.ಪ್ರತಿ ವರ್ಷ 1000 ಅರ್ಚಕರು/ನೌಕರರುಗಳಿಗೆ ವಸತಿ ಕಲ್ಪಿಸಲು ಅನುವಾಗುವ ನಿಟ್ಟಿನಲ್ಲಿ ರೂ.5 ಲಕ್ಷ ಧನ ಸಹಾಯ

4 ಸಮಸ್ತ ಅರ್ಚಕರು/ ನೌಕರರಿಗೆ ರೂ‌. 5 ಲಕ್ಷ ವಿಮಾ ಯೋಜನೆಯ ಪ್ರೀಮಿಯಂ ಪಾವತಿಸಲು ಈ ಹಣ ವಿನಿಯೋಗ ಇತರೆ ಪ್ರಮುಖ ಕಾರ್ಯಯೋಜನೆಗಳನ್ನು‌ ಸಿದ್ಧಪಡಿಸಲಾಗಿದೆ.

ಈ ಸಂದರ್ಭದಲ್ಲಿ ವಿವಿಧ ಅರ್ಚಕರ ಸಂಘಗಳ ಅಧ್ಯಕ್ಷರುಗಳಾದ ಶ್ರೀವತ್ಸ, ವೆಂಕಟಚಲಯ್ಯ ಮತ್ತು ಕೆ.ಎಸ್.‌ ಎನ್‌ ದೀಕ್ಷಿತ್‌ ರವರು ಮಾತನಾಡಿ, ರಾಜ್ಯದಲ್ಲಿ 34,564 ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಾಲಯಗಳಿದ್ದು, ಇದರಲ್ಲಿ 34,166 ಸಿ ವರ್ಗದ ದೇವಾಲಯಗಳಿದ್ದು, ಮಾನ್ಯ ರಾಜ್ಯಪಾಲರು ಸದರಿ ಕಾಯ್ದೆಗೆ ಅನುಮೋದನೆ ನೀಡಿದರೆ, ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಈ ದೇವಾಲಯಗಳ ಅಭಿವೃದ್ದಿ ಹಾಗೂ ಅರ್ಚಕರುಗಳ ಕ್ಷೇಮಾಭಿವೃದ್ದಿಗೆ ಹಣ ವಿನಿಯೋಗಿಸಲು ತುಂಬಾ ಅನುಕೂಲವಾಗುತ್ತದೆ. ಇಲ್ಲಿಯವರೆಗೆ ನಮ್ಮಗಳ ಬಗ್ಗೆ ಯಾರೂ ಕಾಳಜಿವಹಿಸದೇ ಇದ್ದುದರಿಂದ, ದೇವಸ್ಥಾನಗಳ ಅರ್ಚಕರ /ನೌಕರರ ಶ್ರೇಯೋಭಿವೃದ್ಧಿಯಾಗಿರುವುದಿಲ್ಲ. ಈ ಮಸೂದೆಯು ನಮಗೆ ಆಶಾಕಿರಣವಾಗಿದೆ. ಆದರೆ ಇದುವರೆಗೂ ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕದಿರುವುದು ದೈವ ಕಾರ್ಯವನ್ನು ನಿರ್ವಹಿಸುವ ಸಹಸ್ರಾರು ಅರ್ಚಕರು/ನೌಕರರ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ತಿಳಿಸುತ್ತಾ, ರಾಜ್ಯಪಾಲರು ಶೀಘ್ರದಲ್ಲಿಯೇ ಸದರಿ‌ ಮಸೂದೆಗೆ ಅಂಕಿತ ಹಾಕುವ ಭರವಸೆ ಇದೆ ಎಂದು ತಿಳಿಸಿದರು.

ಪ್ರಾಯೋಗಿಕವಾಗಿ ವಿದ್ಯಾರ್ಥಿ ವೇತನ ಹಾಗೂ ಮರಣ ಉಪದಾನವನ್ನು ಪಾವತಿಸಲಾಗಿರುವ ಬಗ್ಗೆ ಹೆಚ್ಚು ಅರಿವು ಮೂಡಿಸಿ ಅರ್ಹ ಇರುವ ರಾಜ್ಯದ ಎಲ್ಲಾ ಅರ್ಚಕರು ಈ ಸೌಲಭ್ಯವನ್ನು ಪ್ರತಿ ವರ್ಷ ಉಪಯೋಗಿಸಿಕೊಳ್ಳುವಂತೆ ಸಚಿವರು ಮನವಿ ಮಾಡಿ, ಅರ್ಚಕರುಗಳ ವಿವಿಧ ಬೇಡಿಕೆಗಳ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚಿಸಿ ಹಂತ ಹಂತವಾಗಿ ಕಾರ್ಯರೂಪಕ್ಕೆ ತರಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾದ ಡಾ|| ಎಂ.ವಿ.ವೆಂಕಟೇಶ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಡಾ|| ಬಿ.ಎಸ್.ಧ್ವಾರಕನಾಥ್, ಕೆ.ಎಂ.ನಾಗರಾಜು, ಮಲ್ಲಿಕಾ ಪ್ರಶಾಂತ ಪಕ್ಕಳ ಹಾಗೂ ವಿನಾಯಕ್‌ ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯರು ವಿವಿಧ ಅರ್ಚಕರ ಸಂಘಗಳ ಪ್ರತಿನಿಧಿಗಳು ಹಾಜರಿದ್ದರು.

BREAKING: ಜಂಬೂಸವಾರಿ ವೇಳೆ ‘ಅಂಬಾರಿ’ ನೀಡಲು ‘ಅರಮನೆ’ ವಿಳಂಬ ಮಾಡಿಲ್ಲ: ರಾಜವಂಶಸ್ಥೆ ಪ್ರಮೋದಾದೇವಿ ಸ್ಪಷ್ಟನೆ

ರೇಣುಕಾ ಯಲ್ಲಮ್ಮ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ : ಪತ್ನಿ ಪಾರ್ವತಿ ಹೆಸರಿನಲ್ಲಿ ವಿಶೇಷ ಪೂಜೆ, ಅರ್ಚನೆ

Share. Facebook Twitter LinkedIn WhatsApp Email

Related Posts

Watch Video: ಬೆಂಗಳೂರಲ್ಲಿ ಗೃಹ ಸಚಿವರ ನಿವಾಸದ ಬಳಿಯಲ್ಲೇ ಗನ್ ಹಿಡಿದು ನಿವೃತ್ತ ಪೊಲೀಸ್ ಅಧಿಕಾರಿ ರಂಪಾಟ: ವೀಡಿಯೋ ವೈರಲ್

01/07/2025 5:10 PM1 Min Read

BREAKING: ರಾಜ್ಯದಲ್ಲಿ ಹಠಾತ್ ಸರಣಿ ಸಾವಿನ ಬಗ್ಗೆ ತಜ್ಞರ ಸಮಿತಿ ವರದಿ ಆಧರಿಸಿ ಕ್ರಮ: ಸಿಎಂ ಸಿದ್ಧರಾಮಯ್ಯ

01/07/2025 4:54 PM2 Mins Read

BREAKING : ಇಂದು ಒಂದೇ ದಿನ ‘ಹೃದಯಾಘಾತಕ್ಕೆ’ 6 ಜನ ಬಲಿ : ರಾಜ್ಯದ ಜನರಲ್ಲಿ ಹೆಚ್ಚಿದ ಆತಂಕ!

01/07/2025 4:42 PM2 Mins Read
Recent News

Watch Video: ಬೆಂಗಳೂರಲ್ಲಿ ಗೃಹ ಸಚಿವರ ನಿವಾಸದ ಬಳಿಯಲ್ಲೇ ಗನ್ ಹಿಡಿದು ನಿವೃತ್ತ ಪೊಲೀಸ್ ಅಧಿಕಾರಿ ರಂಪಾಟ: ವೀಡಿಯೋ ವೈರಲ್

01/07/2025 5:10 PM

“ನಾನೂ ಕೋಣೆಯಲ್ಲಿದ್ದೆ” : ಟ್ರಂಪ್ ಭಾರತ-ಪಾಕ್ ಕದನ ವಿರಾಮ ಹೇಳಿಕೆಗೆ ಜೈ ಶಂಕರ್ ನಿರಾಕರಣೆ

01/07/2025 5:05 PM

BREAKING: ರಾಜ್ಯದಲ್ಲಿ ಹಠಾತ್ ಸರಣಿ ಸಾವಿನ ಬಗ್ಗೆ ತಜ್ಞರ ಸಮಿತಿ ವರದಿ ಆಧರಿಸಿ ಕ್ರಮ: ಸಿಎಂ ಸಿದ್ಧರಾಮಯ್ಯ

01/07/2025 4:54 PM

BREAKING : ಇಂದು ಒಂದೇ ದಿನ ‘ಹೃದಯಾಘಾತಕ್ಕೆ’ 6 ಜನ ಬಲಿ : ರಾಜ್ಯದ ಜನರಲ್ಲಿ ಹೆಚ್ಚಿದ ಆತಂಕ!

01/07/2025 4:42 PM
State News
KARNATAKA

Watch Video: ಬೆಂಗಳೂರಲ್ಲಿ ಗೃಹ ಸಚಿವರ ನಿವಾಸದ ಬಳಿಯಲ್ಲೇ ಗನ್ ಹಿಡಿದು ನಿವೃತ್ತ ಪೊಲೀಸ್ ಅಧಿಕಾರಿ ರಂಪಾಟ: ವೀಡಿಯೋ ವೈರಲ್

By kannadanewsnow0901/07/2025 5:10 PM KARNATAKA 1 Min Read

ಬೆಂಗಳೂರು: ನಗರದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ನಿವಾಸದ ಬಳಿಯಲ್ಲಿಯೇ ಗನ್ ಹಿಡಿದುಕೊಂಡು ರಸ್ತೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು…

BREAKING: ರಾಜ್ಯದಲ್ಲಿ ಹಠಾತ್ ಸರಣಿ ಸಾವಿನ ಬಗ್ಗೆ ತಜ್ಞರ ಸಮಿತಿ ವರದಿ ಆಧರಿಸಿ ಕ್ರಮ: ಸಿಎಂ ಸಿದ್ಧರಾಮಯ್ಯ

01/07/2025 4:54 PM

BREAKING : ಇಂದು ಒಂದೇ ದಿನ ‘ಹೃದಯಾಘಾತಕ್ಕೆ’ 6 ಜನ ಬಲಿ : ರಾಜ್ಯದ ಜನರಲ್ಲಿ ಹೆಚ್ಚಿದ ಆತಂಕ!

01/07/2025 4:42 PM

BIG NEWS : ರಾಜ್ಯದಲ್ಲಿ ‘ಹೃದಯಾಘಾತದಿಂದ’ ಸರಣಿ ಸಾವು ಪ್ರಕರಣ : ಸಿಎಂ ಸಿದ್ದರಾಮಯ್ಯ ಕಳವಳ

01/07/2025 4:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.