Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಬೆಸ್ಕಾಂ ಜಾಗೃತ ದಳದ ಎಸ್ ಪಿ ಲಾವಣ್ಯ ನಿಧನ: ಪೊಲೀಸ್ ಇಲಾಖೆಯಲ್ಲಿ ಶೋಕ

02/05/2026 5:57 PM

BREAKING: ಒಳ ಮೀಸಲಾತಿ ಎಫೆಕ್ಟ್: ರಾಜ್ಯದ ಕೃಷಿ ಇಲಾಖೆಯ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ದಿಢೀರ್ ತಡೆ

02/05/2026 5:43 PM

BREAKING: ಮಹಿಳಾ ಟಿ20 ವಿಶ್ವಕಪ್‌ಗೆ ಭಾರತ ತಂಡ ಬಲಿಷ್ಠ ತಂಡ ಪ್ರಕಟಿಸಿದ ಬಿಸಿಸಿಐ | Women’s T20 World Cup

02/05/2026 5:38 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ‘ಬುಲೆಟ್ ಪ್ರಿಯ’ರಿಗೆ ಗುಡ್ ನ್ಯೂಸ್: ಅ.10ರಂದು ‘RBD ಮೋಟಾರ್ಸ್’ನಿಂದ ‘ರಾಯಲ್ ಎನ್‌ಫೀಲ್ಡ್ ಶೋ ರೂಂ’ ಗ್ರಾಂಡ್ ಓಪನ್
KARNATAKA

ಸಾಗರದ ‘ಬುಲೆಟ್ ಪ್ರಿಯ’ರಿಗೆ ಗುಡ್ ನ್ಯೂಸ್: ಅ.10ರಂದು ‘RBD ಮೋಟಾರ್ಸ್’ನಿಂದ ‘ರಾಯಲ್ ಎನ್‌ಫೀಲ್ಡ್ ಶೋ ರೂಂ’ ಗ್ರಾಂಡ್ ಓಪನ್

By kannadanewsnow0906/10/2025 2:37 PM

ಶಿವಮೊಗ್ಗ: ಸಾಗರದ ಬುಲೆಟ್ ಬೈಕ್ ಪ್ರಿಯರ ಆಸೆ ಈಡೇರಿಸಲು ಆರ್ ಬಿ ಡಿ ಮೋಟಾರ್ಸ್ ಅಣಿಯಾಗಿದೆ. ಹೊಸ ಹೊಸ ವಿನೂತನ ಮಾದರಿಯ ರಾಯಲ್ ಎನ್‌ಫೀಲ್ಡ್ ಮೋಟಾರ್ ಬೈಕ್ ಗಳೊಂದಿಗೆ ಸಾಗರದಲ್ಲಿ ಹೊಸ ಶೋ ರೂಂ ಗ್ರಾಂಡ್ ಓಪನ್ ಆಗಲಿದೆ. 

ಅಕ್ಟೋಬರ್.10, 2025ರಂದು ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ ಮಳಿಗೆ ಗ್ರಾಂಡ್ ಓಪನ್

ಈ ಕುರಿತಂತೆ ಮಾಹಿತಿಯನ್ನು ಹಂಚಿಕೊಂಡಿರುವಂತ ಆರ್ ಬಿ ಡಿ ಮೋಟಾರ್ಸ್ ನ RBD ಮಹೇಶ್ ಅವರು, ಸಾಗರದಲ್ಲಿ ರಾಯಲ್ ಎನ್‌ಫೀಲ್ಡ್ ಮೋಟಾರ್ ಶೋ ರೂಂ ತೆರೆಯಬೇಕು ಎಂಬುದು ಬಹು ದಿನದ ಕನಸಾಗಿತ್ತು. ಅದು ನನಸಾಗಿದೆ. ಬುಲೆಟ್ ಬೈಕ್ ಪ್ರಿಯರ ಆಸೆ ಈಡೇರಿಸಲು ಆರ್ ಬಿ ಡಿ ಮೋಟಾರ್ಸ್ ನಿಂದ ಅಕ್ಟೋಬರ್.10ರಂದು ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ ಮಳಿಗೆ ಆರಂಭಗೊಳ್ಳುತ್ತಿದೆ ಎಂದರು.

ಸಾಗರದ ಲೋಹಿಯಾ ನಗರ, ವಾರ್ಡ್ ನಂ.9, ಬಿಹೆಚ್ ರಸ್ತೆ, ರಾಷ್ಟ್ರೀಯ ಹೆದ್ದಾರಿ 69ರಲ್ಲಿ ರಾಯಲ್ ಎನ್ ಫೀಲ್ಡ್ ಶೋ ರೂಂ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಸಾಗರದ ಸಾರ್ವಜನಿಕರು, ಬುಲೆಟ್ ಪ್ರಿಯರು ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದಾರೆ.

ರಾಯಲ್ ಎನ್‌ಫೀಲ್ಡ್ ಎಲ್ಲಾ ಮಾದರಿಯ ಬೈಕ್ ಗಳು ಮಾರಾಟಕ್ಕೆ ಲಭ್ಯ

ಬುಲೆಟ್ ಬೈಕ್ ಅಂದ್ರೆ ಅದರಲ್ಲಿ ರೈಡಿಂಗ್ ಮಾಡೋದು ಬಹಳಷ್ಟು ಜನರಿಗೆ ಅಚ್ಚು ಮೆಚ್ಚು. ಬೆಟ್ಟ ಗುಡ್ಡಗಳಲ್ಲಿ ಬೈಕ್ ರೈಡಿಂಗ್ ಗೆ ರಾಯಲ್ ಎನ್‌ಫೀಲ್ಡ್ ಮೋಟಾರ್ ಸೈಕಲ್ ಮಾತ್ರ ಹೇಳಿ ಮಾಡಿಸಿದಂತದ್ದು. ಈಗ ಬುಲೆಟ್ ಬೈಕ್ ಪ್ರಿಯರ ಆ ಆಸೆಯನ್ನು ಆರ್ ಬಿ ಡಿ ಮೋಟಾರ್ಸ್ ಈಡೇರಿಸುತ್ತಿದೆ.

ಅಕ್ಟೋಬರ್.10, 2025ರಂದು ಶೋ ರೂಂ ಗ್ರಾಂಡ್ ಓಪನ್ ಸಂದರ್ಭದಲ್ಲೇ ನಿಮಗೆ ರಾಯಲ್ ಎನ್‌ಫೀಲ್ಡ್ ನ ಎಲ್ಲಾ ಮಾದರಿಯ ಬೈಕ್ ಗಳು ಮಾರಾಟಕ್ಕೆ ಲಭ್ಯವಾಗಲಿದ್ದಾವೆ. ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರು ಇಂದೇ ತಮ್ಮ ನೆಚ್ಚಿನ ಬೈಕ್ ಬುಕ್ ಮಾಡುವಂತೆ ಆರ್ ಬಿ ಡಿ ಮೋಟಾರ್ಸ್ ಮನವಿ ಮಾಡಿದೆ.

ಪ್ರಸ್ತುತ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್, ಬುಲೆಟ್, ಮೀಟಿಯರ್, ಹಂಟರ್, ಹಿಮಾಲಯನ್, ಇಂಟರ್‌ಸೆಪ್ಟರ್ ಮತ್ತು ಕಾಂಟಿನೆಂಟಲ್ ಜಿಟಿ ನಂತಹ ಜನಪ್ರಿಯ ಶ್ರೇಣಿಗಳನ್ನು ಒಳಗೊಂಡಂತೆ ವೈವಿಧ್ಯಮಯ ಶ್ರೇಣಿಯ ಮೋಟಾರ್‌ಸೈಕಲ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಬ್ರ್ಯಾಂಡ್ ಸ್ಕ್ರ್ಯಾಮ್, ಶಾಟ್‌ಗನ್, ಸೂಪರ್ ಮೀಟಿಯರ್, ಕ್ಲಾಸಿಕ್ 650, ಬೇರ್ 650 ಮತ್ತು ಗೆರಿಲ್ಲಾ 450 ನಂತಹ ಹೊಸ ಸೇರ್ಪಡೆಗಳು ಮತ್ತು ರೂಪಾಂತರಗಳನ್ನು ಸಹ ಹೊಂದಿದೆ. ಈ ಎಲ್ಲಾ ಮಾದರಿಯ ಬುಲೆಟ್ ಬೈಕ್ ಗಳು ಸಾಗರದ ಆರ್ ಬಿ ಡಿ ಮೋಟಾರ್ಸ್ ನಲ್ಲಿಯೇ ನಿಮಗೆ ಲಭ್ಯವಾಗಲಿದೆ.

ಬಿಲ್ಡರ್ ಕ್ಷೇತ್ರದ ಬಳಿಕ ಬೈಕ್ ಉದ್ಯಮಕ್ಕೂ ಕಾಲಿಟ್ಟ RBD

ಸಾಗರದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ RBD ತುಂಬಾನೇ ಪ್ರಸಿದ್ದಿ. ಸಾಗರದ ರಿಯಲ್ ಎಸ್ಟೇಟ್ ಉದ್ಯಮಿಗಳ ಹೆಸರಲ್ಲಿ RBD ಮಹೇಶ್ ಹಾಗೂ ಜಲೀಲ್ ಮುಂಚೂಣಿಯಲ್ಲಿದ್ದು, ಅಷ್ಟೇ ಚಿರ ಪರಿಚಿತ ಹೆಸರುಗಳು ಕೂಡ. ರಾಯಲ್ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ನಿಂದ ಸಾಗರ, ಸೊರಬ, ಹೊಸದನಗ, ಶಿವಮೊಗ್ಗದ ವಿವಿಧೆಡೆ ರಿಯಲ್ ಎಸ್ಟೇಟ್ ಉದ್ಯಮವನ್ನು ಕೈಗೊಳ್ಳಲಾಗಿದೆ. ಕೈಗೆಟುಕುವ ಬೆಲೆಯಲ್ಲೂ ಸೈಟ್ ಮಾರಾಟವನ್ನು ಮಾಡಲಾಗುತ್ತಿದೆ. ನಿಮಗೂ ಬೇಕಂದ್ರೆ – +916362790533 ಅಥವಾ +919916887441 ನಂಬರ್ ಗೆ ಸಂಪರ್ಕಿಸಬಹುದು. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಗುರುತಿಸಿಕೊಂಡಿದ್ದಂತ RBD ಮಹೇಶ್ ಹಾಗೂ ಜಲೀಲ್, ಈಗ ಮೋಟಾರ್ಸ್ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಅದೇ ಆರ್ ಬಿ ಡಿ ಮೋಟಾರ್ಸ್ ನಿಂದ ಸಾಗರದಲ್ಲಿ ರಾಯಲ್ ಎನ್ ಫೀಲ್ಡ್ ಶೋ ರೂಂ ತೆರೆಯಲಾಗುತ್ತಿದೆ.

ಡಿಆಚ್ ಸ್ಟೂಡಿಯೋ, ಆರ್ ಬಿ ಡಿ ವೆಂಚರ್ಸ್ ನಲ್ಲೂ ಸಕ್ಸಸ್

ಸಾಗರದಂತ ತಾಲ್ಲೂಕಿನಲ್ಲಿ ರಾಯಲ್ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕಾಲಿಟ್ಟು, ಇಂದು ಆರ್ ಬಿ ಡಿ ಎಂಬ ಕಂಪನಿಯೊಂದು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಬಹುದೊಡ್ಡ ಯಶಸ್ಸು ಕಂಡಿದೆ. ಈ ಕಾರಣದಿಂದಲೇ ವಿವಿಧ ಕ್ಷೇತ್ರದಲ್ಲೂ ಆರ್ ಬಿ ಡಿ ತನ್ನ ಕದಂಬ ಬಾಹುವನ್ನು ಚಾಚಿಕೊಂಡಿದೆ. ರಿಯಲ್ ಎಸ್ಟೇಟ್ ಬಳಿಕ DeArc Studio ಎನ್ನುವಂತ ಆರ್ಕಿಟೆಕ್ಟ್ ಕಂಪನಿಯನ್ನು ಆರಂಭಿಸಿದೆ. ಅಲ್ಲದೇ ಆರ್ ಬಿ ಡಿ ವೆಂಚರ್ಸ್ ಎನ್ನುವಂತ ಕಂಪನಿಯನ್ನು ಆರಂಭಿಸಿ ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ಕೇಂದ್ರ ಸ್ಥಾನ ಮಾಡಿಕೊಂಡು ಮತ್ತಷ್ಟು ಔಧ್ಯಮಿಕ ಪ್ರಗತಿಯತ್ತ ದಾಪುಗಾಲಿಟ್ಟಿದೆ.

RBD ಕಂಪನಿಯ ಈ ಯಶಸ್ಸಿನ ಸರಮಾಲೆ ಮುಂದುವರೆಯಲಿ. ಇದೀಗ ಅಕ್ಟೋಬರ್ 10ರಂದು ಸಾಗರದಲ್ಲಿ ಗ್ರಾಂಡ್ ಓಪನ್ ಆಗುತ್ತಿರುವಂತ ರಾಯಲ್ ಎನ್ ಫೀಲ್ಡ್ ಮೋಟಾರ್ ಶೋ ರೂಂನಲ್ಲಿಯೂ ಮಾರಾಟ ಹೆಚ್ಚುಗೊಂಡು ಸಕ್ಸಸ್ ಆಗಲಿ ಎಂಬುದು  RBD ಸಮೂಹ ಸಂಸ್ಥೆಯ ಅಪಾರ ಹಿತೈಷಿಗಳು, ಅಭಿಮಾನಿಗಳ ಆಶಯವಾಗಿದೆ. ಆ ನಿಟ್ಟಿನಲ್ಲಿ ಬೆಳೆದು ಯಶಸ್ಸು ಕಾಣಲಿ ಎಂಬುದಾಗಿ ಕೆಎನ್ಎನ್ ಸಂಸ್ಥೆ ಕೂಡ ಆಶಿಸುತ್ತದೆ.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

Share. Facebook Twitter LinkedIn WhatsApp Email

Related Posts

BREAKING: ಬೆಸ್ಕಾಂ ಜಾಗೃತ ದಳದ ಎಸ್ ಪಿ ಲಾವಣ್ಯ ನಿಧನ: ಪೊಲೀಸ್ ಇಲಾಖೆಯಲ್ಲಿ ಶೋಕ

02/05/2026 5:57 PM1 Min Read

BREAKING: ಒಳ ಮೀಸಲಾತಿ ಎಫೆಕ್ಟ್: ರಾಜ್ಯದ ಕೃಷಿ ಇಲಾಖೆಯ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ದಿಢೀರ್ ತಡೆ

02/05/2026 5:43 PM1 Min Read

BIG BREAKING: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಶಾಸಕ ಸ್ಥಾನ ಸದಸ್ಯತ್ವ ರದ್ದು: ವಿಧಾನಸಭೆ ಕಾರ್ಯದರ್ಶಿ ಪ್ರಕಟಣೆ

02/05/2026 5:16 PM1 Min Read
Recent News

BREAKING: ಬೆಸ್ಕಾಂ ಜಾಗೃತ ದಳದ ಎಸ್ ಪಿ ಲಾವಣ್ಯ ನಿಧನ: ಪೊಲೀಸ್ ಇಲಾಖೆಯಲ್ಲಿ ಶೋಕ

02/05/2026 5:57 PM

BREAKING: ಒಳ ಮೀಸಲಾತಿ ಎಫೆಕ್ಟ್: ರಾಜ್ಯದ ಕೃಷಿ ಇಲಾಖೆಯ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ದಿಢೀರ್ ತಡೆ

02/05/2026 5:43 PM

BREAKING: ಮಹಿಳಾ ಟಿ20 ವಿಶ್ವಕಪ್‌ಗೆ ಭಾರತ ತಂಡ ಬಲಿಷ್ಠ ತಂಡ ಪ್ರಕಟಿಸಿದ ಬಿಸಿಸಿಐ | Women’s T20 World Cup

02/05/2026 5:38 PM

BIG BREAKING: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಶಾಸಕ ಸ್ಥಾನ ಸದಸ್ಯತ್ವ ರದ್ದು: ವಿಧಾನಸಭೆ ಕಾರ್ಯದರ್ಶಿ ಪ್ರಕಟಣೆ

02/05/2026 5:16 PM
State News
KARNATAKA

BREAKING: ಬೆಸ್ಕಾಂ ಜಾಗೃತ ದಳದ ಎಸ್ ಪಿ ಲಾವಣ್ಯ ನಿಧನ: ಪೊಲೀಸ್ ಇಲಾಖೆಯಲ್ಲಿ ಶೋಕ

By kannadanewsnow0902/05/2026 5:57 PM KARNATAKA 1 Min Read

ಬೆಂಗಳೂರು: ಬೆಸ್ಕಾಂ (BESCOM) ಜಾಗೃತ ದಳದ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದಕ್ಷ ಪೊಲೀಸ್ ಅಧಿಕಾರಿ ಲಾವಣ್ಯ (39) ಅವರು ಶನಿವಾರ ಬೆಂಗಳೂರಿನ…

BREAKING: ಒಳ ಮೀಸಲಾತಿ ಎಫೆಕ್ಟ್: ರಾಜ್ಯದ ಕೃಷಿ ಇಲಾಖೆಯ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ದಿಢೀರ್ ತಡೆ

02/05/2026 5:43 PM

BIG BREAKING: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಶಾಸಕ ಸ್ಥಾನ ಸದಸ್ಯತ್ವ ರದ್ದು: ವಿಧಾನಸಭೆ ಕಾರ್ಯದರ್ಶಿ ಪ್ರಕಟಣೆ

02/05/2026 5:16 PM

ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು: ವಿಧಾನಸಭೆ ಕಾರ್ಯದರ್ಶಿಯಿಂದ ಅಧಿಕೃತ ಆದೇಶ

02/05/2026 5:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.