Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉತ್ತರ ವಜೀರಿಸ್ತಾನದಲ್ಲಿ ಪಾಕ್ ಸೇನಾ ಬೆಂಗಾವಲು ವಾಹನದ ಮೇಲೆ ದಾಳಿ: ಹಲವರ ಸಾವು

19/05/2025 11:12 AM

BREAKING : ಭಾರತದಲ್ಲಿ 2024-25 ರಲ್ಲಿ16,63.91 ಲಕ್ಷ ಟನ್ `ಆಹಾರ ಧಾನ್ಯ’ ಉತ್ಪಾದನೆ : ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್

19/05/2025 11:07 AM

BIG NEWS : ಭಾರತೀಯ ರೈಲ್ವೆಯಿಂದ `Swarail app’ ಬಿಡುಗಡೆ : ಒಂದೇ ಆಪ್ ನಲ್ಲಿ ಸಿಗಲಿವೆ ಈ ಎಲ್ಲಾ ಸೇವೆಗಳು | Swarail app

19/05/2025 11:00 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Good News: ರಾಜ್ಯ ಸರ್ಕಾರದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಪಕರು, ಗ್ರಂಥಪಾಲಕರಿಗೆ ಸಿಹಿಸುದ್ದಿ
KARNATAKA

Good News: ರಾಜ್ಯ ಸರ್ಕಾರದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಪಕರು, ಗ್ರಂಥಪಾಲಕರಿಗೆ ಸಿಹಿಸುದ್ದಿ

By kannadanewsnow0921/12/2024 5:07 AM

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಪ್ರಧ್ಯಾಪಕರು, ಗ್ರಂಥಪಾಲಕರು, ದೈಹಿಕ ಶಿಕ್ಷಣ ನಿರ್ದೇಶಕರಿಗೆ ಸಿಎಎಸ್ ಯೋಜನೆಯಡಿಯಲ್ಲಿ 2018ರ ಯುಡಿಸಿ ಮಾರ್ಗಸೂಚಿಯನ್ವಯ ಶೈಕ್ಷಣಿಕ ಹಂತ 12ರ ವೇತನ ಶ್ರೇಣಿ ರೂ.79,800 ರಿಂದ 2,11,500ರಲ್ಲಿ ಸ್ಥಾನೀಕರಣ ಮಂಜೂರು ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಸಿಹಿಸುದ್ದಿಯನ್ನು ನೀಡಿದೆ.

ಈ ಕುರಿತಂತೆ ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿಗಳು ನಡವಳಿಯನ್ನು ಹೊರಡಿಸಿದ್ದು, ಅದರಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅರ್ಹ ಸಹಾಯಕ ಪ್ರಾಧ್ಯಾಪಕರು/ಗ್ರಂಥಪಾಲಕರು/ದೈಹಿಕ ಶಿಕ್ಷಣ ನಿರ್ದೇಶಕರಿಗೆ 2016 ರ ಪರಿಷ್ಕೃತ ಯುಜಿಸಿ ವೇತನ ಶ್ರೇಣಿಗಳನ್ನು ಉಲ್ಲೇಖ (1) ಹಾಗೂ (2) ರ ಆದೇಶಗಳಲ್ಲಿ ಜಾರಿಗೊಳಿಸಲಾಗಿರುತ್ತದೆ. ಈ ಆದೇಶದಲ್ಲಿ ಸಹಾಯಕ ಪ್ರಾಧ್ಯಾಪಕರಿಗೆ ಶೈಕ್ಷಣಿಕ ಹಂತ 11 ರ [ಯುಜಿಸಿ ವೇತನ ಶ್ರೇಣಿ ರೂ.68900-205500] ರಲ್ಲಿ ಪೂರೈಸಿರುವ ನಿಗದಿತ ಅರ್ಹತಾ ಅವಧಿಯನ್ನು ಪರಿಗಣಿಸಿ ಸಿಎಎಸ್ ರಡಿಯಲ್ಲಿ ಉನ್ನತ ಶೈಕ್ಷಣಿಕ ಹಂತ 12 ರ ವೇತನ ಶ್ರೇಣಿ ರೂ.79800-211500 ರಲ್ಲಿ ಸ್ಥಾನೀಕರಣ ಹೊಂದಲು ಅವಕಾಶ ಕಲ್ಪಿಸಲಾಗಿರುತ್ತದೆ ಎಂದಿದ್ದಾರೆ.

ಉಲ್ಲೇಖ (1) ಮತ್ತು (2) ರ ಸರ್ಕಾರದ ಆದೇಶ ಹಾಗೂ ಯುಜಿಸಿ ಮಾರ್ಗಸೂಚಿಯಲ್ಲಿ ಅನ್ವಯಿಸುವ ಷರತ್ತುಗಳಿಗೊಳಪಟ್ಟು ಸಿ.ಎ.ಎಸ್. (Career Advancement Scheme) ಯೋಜನೆ ಅಡಿಯಲ್ಲಿ ಉನ್ನತ ಶೈಕ್ಷಣಿಕ ಹಂತಗಳಲ್ಲಿ ಸ್ಥಾನೀಕರಣ ಮಂಜೂರು ಮಾಡಲು ಉಲ್ಲೇಖ (3) ರ ಸರ್ಕಾರದ ಆದೇಶದಲ್ಲಿ ಅನುಮೋದನೆ ನೀಡಲಾಗಿರುತ್ತದೆ.

ಉಲ್ಲೇಖ (1) ರಿಂದ (4) ರವರೆಗಿನ ಸರ್ಕಾರದ ಆದೇಶ ಮತ್ತು ಯುಜಿಸಿ ಮಾರ್ಗಸೂಚಿಗಳ ಅನುಸಾರ ಶೈಕ್ಷಣಿಕ ಹಂತ 11 ರಿಂದ ಶೈಕ್ಷಣಿಕ ಹಂತ 12 ರಲ್ಲಿ ಸ್ಥಾನೀಕರಣ ಮಂಜೂರು ಮಾಡುವ ಸಂಬಂಧ ಪ್ರಾಂಶುಪಾಲರು ತಮ್ಮ ಹಂತದಲ್ಲಿ ಯು.ಜಿ.ಸಿಯ ದಿನಾಂಕ: 18.07.2018ರ ಕಂಡಿಕೆ 5.0 ರಿಂದ 6.4 ರನ್ವಯ ವಿಭಾಗದ ಮುಖ್ಯಸ್ಥರು ಹಾಗೂ ವಿಶ್ವವಿದ್ಯಾಲಯದಿಂದ ನೇಮಕವಾದ ವಿಷಯ ತಜ್ಞರ ಪ್ರತಿನಿಧಿಯನ್ನೊಳಗೊಂಡಂತೆ (Screening-cum-Evaluation Committee) ಸಮಿತಿಯನ್ನು ರಚಿಸಿ ಸಹಾಯಕ ಪ್ರಾಧ್ಯಾಪಕರಿಗೆ ಸಂಬಂಧಿಸಿದಂತೆ ಕ್ಲಾಸ್-6.4 (B), ನಮೂನೆ (A), ಗ್ರಂಥಪಾಲಕರಿಗೆ ಸಂಬಂಧಿಸಿದಂತೆ ಕ್ಲಾಸ್-6.4 (D) ರ ಪ್ರಕಾರ ಕೂಲಂಕಷವಾಗಿ ಪರಿಶೀಲಿಸಿ, ಸಿಎಎಸ್ ರಡಿಯಲ್ಲಿ ಶೈಕ್ಷಣಿಕ ಹಂತ 12ಕ್ಕೆ ಅರ್ಹತೆ ಹೊಂದಿರುವ ಬೋಧಕರ ಮಾಹಿತಿಗಳನ್ನು ನಿಗದಿತ ನಮೂನೆಗಳಲ್ಲಿ ಹಾಗೂ ಪ್ರಾಂಶುಪಾಲರ ಹಂತದ (Screening-cum-Evaluation Committee) ಸಮಿತಿಯ ಶಿಫಾರಸ್ಸಿನೊಂದಿಗೆ ಅನುಮೋದನೆಗೆ ಸಲ್ಲಿಸುವಂತೆ ಉಲ್ಲೇಖ (4)ರ ಸುತ್ತೋಲೆಗಳಲ್ಲಿ ತಿಳಿಸಲಾಗಿದೆ. ಅದರಂತೆ (Screening-cum-Evaluation Committee) ಸಮಿತಿಯು ಅರ್ಹ ಸಹಾಯಕ ಪ್ರಾಧ್ಯಾಪಕರಿಗೆ ಶೈಕ್ಷಣಿಕ ಹಂತ 11 ರ ಸ್ಥಾನೀಕರಣಕ್ಕಾಗಿ ಶಿಫಾರಸ್ಸು ಮಾಡಿರುತ್ತಾರೆ.

ಉಲ್ಲೇಖ (5) ರ ಸರ್ಕಾರದ ಆದೇಶ ಮತ್ತು (8) ರ ತಿದ್ದುಪಡಿ ಆದೇಶಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರು/ಗ್ರಂಥಪಾಲಕರು/ದೈಹಿಕ ಶಿಕ್ಷಣ ನಿರ್ದೇಶಕರಿಗೆ ಸ್ಥಾನೀಕರಣ ಸೌಲಭ್ಯವನ್ನು ಸದರಿಯವರು ಸಿಎಎಸ್‌ ರಡಿ ಸ್ಥಾನೀಕರಣಕ್ಕೆ ಅರ್ಹತೆ ಹೊಂದಿದ ದಿನಾಂಕದಿಂದ ಅರ್ಹತಾ ಅವಧಿಯನ್ನು ಪರಿಗಣಿಸುವಂತೆ ಹಾಗೂ ವೇತನ ನಿಗದೀಕರಣ ಒಳಗೊಂಡಂತೆ ಸ್ಥಾನೀಕರಣದ ಆರ್ಥಿಕ ಸೌಲಭ್ಯಗಳನ್ನು ಸ್ಥಾನೀಕರಣ ಆದೇಶ ಹೊರಡಿಸಿದ ದಿನಾಂಕದಿಂದ ಭವಿಷ್ಯವರ್ತಿಯಾಗಿ (The Monetary benefit on grant of CAS Shall be Prospective from the date of issue of the order) ಮಂಜೂರು ಮಾಡಲು ಆದೇಶಿಸಲಾಗಿರುತ್ತದೆ.

ಪ್ರಾಂಶುಪಾಲರ ಹಂತದ ಸಮಿತಿಯ ಶಿಫಾರಸ್ಸಿನ ಮೇರೆಗೆ ಸ್ವೀಕೃತಗೊಂಡ ಪ್ರಸ್ತಾವನೆಗಳನ್ನು ಈ ಕಛೇರಿಯ ಹಂತದಲ್ಲಿ ನಿಯಮಾನುಸಾರ ಪರಿಶೀಲಿಸಿ ದಿನಾಂಕ: 09.12.2024 ರಂದು ಕೇಂದ್ರ ಕಛೇರಿಯಲ್ಲಿ ನಡೆದ ಪರಿಶೀಲನಾ ಸಮಿತಿಯ ಸಭೆಯಲ್ಲಿ ತೀರ್ಮಾನಿಸಿದಂತೆ ಸಹಾಯಕ ಪ್ರಾಧ್ಯಾಪಕರಿಗೆ ಯುಜಿಸಿ ವೇತನ ಶ್ರೇಣಿ ರೂ.79800-211500 ರಲ್ಲಿ ಶೈಕ್ಷಣಿಕ ಹಂತ 12ಕ್ಕೆ ಸ್ಥಾನೀಕರಣ ಮಂಜೂರು ಮಾಡಲು ಈ ಆದೇಶ ಎಂದಿದ್ದಾರೆ.

ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ, ಸರ್ಕಾರದ ದಿನಾಂಕ: 02.03.20210 ಸಂಖ್ಯೆ: ಇಡಿ/123/ಡಿಸಿಇ/2020 ರ ಆದೇಶದ ಅನುಮೋದನೆ ಪ್ರಕಾರ ಪಾಂಶುಪಾಲರ ಹಂತದ (Screening- cum-Evaluation Committee) ಸಮಿತಿಯ ಶಿಫಾರಸ್ಸಿನ ಮೇರೆಗೆ ಹಾಗೂ ಇಲಾಖಾ ಹಂತದ ಸ್ಥಾನೀಕರಣ ಪರಿಶೀಲನಾ ಸಮಿತಿಯ ತೀರ್ಮಾನದಂತೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರು/ಗ್ರಂಥಪಾಲಕರು/ದೈಹಿಕ ಶಿಕ್ಷಣ ನಿರ್ದೇಶಕರಿಗೆ ಸಂಬಂಧಿಸಿದಂತೆ ಈ ಆದೇಶದೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿ ಹೆಸರಿಸಿರುವ ಒಟ್ಟು: 54 ಬೋಧಕರಿಗೆ ಶೈಕ್ಷಣಿಕ ಹಂತ 12 ನ್ನು ಯು.ಜಿ.ಸಿ ವೇತನ ಶ್ರೇಣಿ ರೂ.79800-211500 ರಲ್ಲಿ ಸ್ಥಾನೀಕರಣವನ್ನು ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಉಲ್ಲೇಖ (5), (7) ಮತ್ತು (8) ರ ಸರ್ಕಾರದ ಆದೇಶದಂತೆ ಸಿ.ಎ.ಎಸ್ ರಡಿ ಸ್ಥಾನೀಕರಣಕ್ಕೆ ಅರ್ಹತೆ ಹೊಂದಿದ ದಿನಾಂಕದಿಂದ ಅರ್ಹತಾ ಅವಧಿಯನ್ನು ಪರಿಗಣಿಸಿ, ವೇತನ ನಿಗದೀಕರಣ ಒಳಗೊಂಡಂತೆ ಸ್ಥಾನೀಕರಣದ ಆರ್ಥಿಕ ಸೌಲಭ್ಯಗಳನ್ನು ಸ್ಥಾನೀಕರಣ ಮಂಜೂರಾತಿ ಆದೇಶ ಹೊರಡಿಸಿದ ದಿನಾಂಕದಿಂದ ಭವಿಷ್ಯವರ್ತಿಯಾಗಿ ಅನ್ವಯವಾಗುವಂತೆ ಮಂಜೂರು ಮಾಡಿ ಆದೇಶಿಸಲಾಗಿದೆ.

ಷರತುಗಳು:

1. 2018ರ ಯುಜಿಸಿ ಮಾರ್ಗಸೂಚಿಯನ್ವಯ ಗ್ರೇಡಿಂಗ್ ಆಧಾರಿತ ವಿವಿಧ ಶೈಕ್ಷಣಿಕ ಹಂತದ ಸ್ಥಾನೀಕರಣ (ಎಜಿಪಿ) ಮಂಜೂರಾತಿಯು ಉಲ್ಲೇಖ (1) ರಿಂದ (4) ರವರೆಗಿನ ಯುಜಿಸಿ ಮಾರ್ಗಸೂಚಿ/ಸರ್ಕಾರದ ಆದೇಶಗಳಲ್ಲಿನ ನಿಬಂಧನೆಗೊಳಪಟ್ಟಿರುತ್ತದೆ.

2. ಯು.ಜಿ.ಸಿಯ ದಿನಾಂಕ: 18.07.2018ರ ಅಧಿಸೂಚನೆಯಲ್ಲಿ ನೀಡಲಾಗಿರುವ ಕ್ಲಾಸ್ 6.4 A – The entry- level Assistant Professors (Level 10) shall be eligible for promotion under the Career Advancement Scheme (CAS) through two successive levels (Level 11 and Level 12), provided they are assessed to fulfill the eligibility and performance criteria as laid down in Clause 6.3. of UGC Regulations ರಲ್ಲಿ ನಿಗದಿಪಡಿಸಿರುವ ಎಲ್ಲಾ ಅಂಶಗಳನ್ನು ಪೂರೈಸಿರುವ ಬಗ್ಗೆ ಸಂಬಂಧಿಸಿದ ಪ್ರಾಂಶುಪಾಲರ ಹಂತದ (Screening-cum-Evaluation Committee) ಸಮಿತಿಯು ಪರಿಶೀಲಿಸಿ ಶಿಫಾರಸ್ಸು ಮಾಡಿರುವ ಮೇರೆಗೆ ಎ.ಜಿ.ಪಿ ಮಂಜೂರಾತಿಗೆ ಅನುಮೋದನೆ ನೀಡಲಾಗಿದ್ದು, ಸಂಪೂರ್ಣ ಜವಾಬ್ದಾರಿ ಪ್ರಾಂಶುಪಾಲರ ಹಂತದ (Screening-cum-Evaluation Committee) ಸಮಿತಿಯದ್ದಾಗಿರುತ್ತದೆ. ಪ್ರಸ್ತಾವನೆಗಳನ್ನು ಸಲ್ಲಸುವಾಗ ಯಾವುದೇ ತಪ್ಪು ಮಾಹಿತಿಗಳನ್ನು ಒದಗಿಸಿರುವುದು ಕಂಡು ಬಂದಲ್ಲಿ ಸಂಬಂಧಿಸಿದ ಸಹಾಯಕ ಪ್ರಾಧ್ಯಾಪಕರಿಗೆ ಸ್ಥಾನೀಕರಣ ಮಂಜೂರಾತಿಯನ್ನು ಯಾವುದೇ ಮುನ್ಸೂಚನೆಯನ್ನು ನೀಡದೇ ಹಿಂಪಡೆಯಲಾಗುವುದು ಹಾಗೂ ತಪ್ಪು ಮಾಹಿತಿ ಒದಗಿಸಿದ ಉಪನ್ಯಾಸಕರು ಹಾಗೂ ಶಿಫಾರಸ್ಸು ಮಾಡಿದ ಪ್ರಾಂಶುಪಾಲರುಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು.

3. ಈ ಕಛೇರಿಯ ಉಲ್ಲೇಖ (4)ರ ಸುತ್ತೋಲೆಯಲ್ಲಿ ಸೂಚಿಸಿರುವಂತೆ ಸಹಾಯಕ ಪ್ರಾಧ್ಯಾಪಕರ ಖಾಯಂ ನೇಮಕಾತಿ ದಿನಾಂಕ, ಯು.ಜಿ.ಸಿ ವೇತನ ನಿಗಧಿಕರಣದ ದಿನಾಂಕ, ಸೇವಾ ಪೂರ್ವ ಅವದಿ ಘೋಷಣೆ ವೇತನ ರಹಿತ ರಜೆ/ಅನಧಿಕೃತ ಗೈರು ಹಾಜರಿ, ಶಿಸ್ತು ಕ್ರಮದ ಮಾಹಿತಿ, ಸಹಾಯಕ ಪ್ರಾಧ್ಯಾಪಕರಿಗೆ ನಿಗದಿತ 02 ವಾರಗಳ ತರಬೇತಿ, ಓರಿಯೆಂಟೇಷನ್/ರೆಪ್ರೆಷರ್ ಕೋರ್ಸ್‌ಗಳನ್ನು ಪೂರೈಸಿರುವುದು. ಇನ್ನಿತರೆ ಎಲ್ಲಾ ಅಂಶಗಳಿಗೆ ಸಂಬಂಧಿಸಿದಂತೆ ಏನಾದರೂ ಅಸಂಗತ ಮಾಹಿತಿ ಕಂಡು ಬಂದಲ್ಲಿ ಸಂಬಂಧಿಸಿದ ಪ್ರಾಂಶುಪಾಲರೇ ಜವಾಬ್ದಾರರಾಗಿರುತ್ತಾರೆ.

4. ಈ ಸ್ಥಾನೀಕರಣ ಮಂಜೂರಾತಿಯು ಯು.ಜಿ.ಸಿ/ಸರ್ಕಾರ/ಇಲಾಖೆ ಕಾಲಕಾಲಕ್ಕೆ ಹೊರಡಿಸುವ ಆದೇಶ/ಸುತ್ತೋಲೆ/ಪತ್ರಗಳಲ್ಲಿ ನಿಗದಿಪಡಿಸುವ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ. 5. ಈ ಸ್ಥಾನೀಕರಣವನ್ನು ಸೇವಾ ಜೇಷ್ಟತೆಗೆ ಪರಿಗಣಿಸಲು ಅವಕಾಶವಿರುವುದಿಲ್ಲ.

6. ಈ ಆದೇಶದನ್ವಯ ಮಂಜೂರು ಮಾಡಲಾದ ಶೈಕ್ಷಣಿಕ ಹಂತಗಳ ಸ್ಥಾನೀಕರಣವು ಸ್ಥಳೀಯ/ ಮಹಾಲೇಖಪಾಲರ ಲೆಕ್ಕಪರಿಶೋಧನೆಗೆ ಒಳಪಟ್ಟಿದ್ದು. ಯಾವುದೇ ವ್ಯತಿರಕ್ತ ಮಾಹಿತಿ ಕಂಡು ಬಂದಲ್ಲಿ ಮರು ಪರಿಶೀಲಿಸುವ ಮತ್ತು ನಿಯಮಾನುಸಾರ ಸೂಕ್ತ ಕ್ರಮಕೈಗೊಳ್ಳುವ ಷರತ್ತಿಗೊಳಪಟ್ಟಿರುತ್ತದೆ.

7, ಸ್ಥಾನೀಕರಣ ಮಂಜೂರಾತಿ ಪ್ರಸ್ತಾವನೆಯಲ್ಲಿ ಸಲ್ಲಿಸಿರುವ ದೃಢೀಕರಣ ಪತ್ರಗಳಲ್ಲಿನ ಮಾಹಿತಿಯಲ್ಲಿ ಯಾವುದೇ ವ್ಯತಿರಿಕ್ತ ಮಾಹಿತಿ ಕಂಡು ಬಂದಲ್ಲಿ ಪ್ರಾಂಶುಪಾಲರೇ ನೇರ ಹೊಣೆಗಾರರಾಗಿರುತ್ತಾರೆ.

8. ಸ್ಥಾನೀಕರಣ ಮಂಜೂರಾತಿ ಪ್ರಸ್ತಾವನೆಯಲ್ಲಿ ಸಲ್ಲಿಸಿರುವ ದೃಢೀಕರಣ ಪತ್ರಗಳಲ್ಲಿನ ಮಾಹಿತಿಯಲ್ಲಿ ಯಾವುದೇ ವ್ಯತಿರಿಕ್ತ ಮಾಹಿತಿ ಕಂಡು ಬಂದಲ್ಲಿ ಪ್ರಾಂಶುಪಾಲರೇ ನೇರ ಹೊಣೆಗಾರರಾಗಿರುತ್ತಾರೆ. ಅಲ್ಲದೇ ಸುಳ್ಳು ಮಾಹಿತಿ/ಅಕ್ರಮ ದಾಖಲೆ ನೀಡಿದ ಅಧ್ಯಾಪಕರಿಗೆ ಸಂಬಂಧಿಸಿದಂತೆ ಈ ಆದೇಶವನ್ನು ರದ್ದುಗೊಳಿಸಲಾಗುವುದು.

9. ಉಲ್ಲೇಖ (5), (7) ಮತ್ತು (8) ರ ಸರ್ಕಾರದ ಆದೇಶದನ್ವಯ ಈ ಆದೇಶ ಹೊರಡಿಸಿದ ದಿನಾಂಕದಿಂದ ಭವಿಷ್ಯಾವರ್ತಿಯಾಗಿ ಸಹಾಯಕ ಪ್ರಾಧ್ಯಾಪಕರು ಶೈಕ್ಷಣಿಕ ಹಂತ 12 ರ ಸ್ಥಾನೀಕರಣದ ಆರ್ಥಿಕ ಸೌಲಭ್ಯಗಳಿಗೆ ಅರ್ಹರಾಗಿರುತ್ತಾರೆ.

Share. Facebook Twitter LinkedIn WhatsApp Email

Related Posts

SHOCKING : ರಾಜ್ಯದಲ್ಲಿ ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ : ಬೆಂಗಳೂರಿನಲ್ಲಿ ಓಲಾ ಟೆಕ್ಕಿ ಆತ್ಮಹತ್ಯೆ.!

19/05/2025 10:42 AM1 Min Read

BREAKING : ಬೆಂಗಳೂರಿನಲ್ಲಿ ಮಳೆಯ ಆರ್ಭಟಕ್ಕೆ ಜನರ ಪರದಾಟ : ಕಂಠೀರವ ಸ್ಟೇಡಿಯಂ ಸೇರಿ ಹಲವೆಡೆ ರಸ್ತೆಗಳು ಜಲಾವೃತ | WATCH VIDEO

19/05/2025 10:14 AM2 Mins Read

BREAKING : CM ಸಿದ್ದರಾಮಯ್ಯಗೆ ಏಕವಚನದಲ್ಲಿ ನಿಂದನೆ ಆರೋಪ : ಮೈಸೂರು ಕೇಂದ್ರ ಕಾರಾಗೃಹ ವಾರ್ಡನ್ ಅರೆಸ್ಟ್.!

19/05/2025 9:53 AM1 Min Read
Recent News

ಉತ್ತರ ವಜೀರಿಸ್ತಾನದಲ್ಲಿ ಪಾಕ್ ಸೇನಾ ಬೆಂಗಾವಲು ವಾಹನದ ಮೇಲೆ ದಾಳಿ: ಹಲವರ ಸಾವು

19/05/2025 11:12 AM

BREAKING : ಭಾರತದಲ್ಲಿ 2024-25 ರಲ್ಲಿ16,63.91 ಲಕ್ಷ ಟನ್ `ಆಹಾರ ಧಾನ್ಯ’ ಉತ್ಪಾದನೆ : ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್

19/05/2025 11:07 AM

BIG NEWS : ಭಾರತೀಯ ರೈಲ್ವೆಯಿಂದ `Swarail app’ ಬಿಡುಗಡೆ : ಒಂದೇ ಆಪ್ ನಲ್ಲಿ ಸಿಗಲಿವೆ ಈ ಎಲ್ಲಾ ಸೇವೆಗಳು | Swarail app

19/05/2025 11:00 AM

BREAKING : ಉಗ್ರರ ವಿರುದ್ಧ ಭಾರತ ನಡೆಸಿದ ದಾಳಿಯ ನಂತರ ಪಾಕ್ ಪಡೆಗಳು `ಗೋಲ್ಡನ್ ಟೆಂಪಲ್’ ಗುರಿಯಾಗಿಸಿಕೊಂಡಿತ್ತು : ಭಾರತೀಯ ಸೇನೆ

19/05/2025 10:52 AM
State News
KARNATAKA

SHOCKING : ರಾಜ್ಯದಲ್ಲಿ ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ : ಬೆಂಗಳೂರಿನಲ್ಲಿ ಓಲಾ ಟೆಕ್ಕಿ ಆತ್ಮಹತ್ಯೆ.!

By kannadanewsnow5719/05/2025 10:42 AM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿಯಾಗಿದ್ದು, ಅತಿಯಾದ ಕೆಲಸದ ಒತ್ತಡ ತಾಳಲಾರದೇ ಓಲಾ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡ…

BREAKING : ಬೆಂಗಳೂರಿನಲ್ಲಿ ಮಳೆಯ ಆರ್ಭಟಕ್ಕೆ ಜನರ ಪರದಾಟ : ಕಂಠೀರವ ಸ್ಟೇಡಿಯಂ ಸೇರಿ ಹಲವೆಡೆ ರಸ್ತೆಗಳು ಜಲಾವೃತ | WATCH VIDEO

19/05/2025 10:14 AM

BREAKING : CM ಸಿದ್ದರಾಮಯ್ಯಗೆ ಏಕವಚನದಲ್ಲಿ ನಿಂದನೆ ಆರೋಪ : ಮೈಸೂರು ಕೇಂದ್ರ ಕಾರಾಗೃಹ ವಾರ್ಡನ್ ಅರೆಸ್ಟ್.!

19/05/2025 9:53 AM

BREAKING : ಬೆಂಗಳೂರಿನಲ್ಲಿ ವರುಣಾರ್ಭಟಕ್ಕೆ ಜನರ ಪರದಾಟ : ಹಲವಡೆ ರಸ್ತೆಗಳು ಜಲಾವೃತವಾಗಿ ಟ್ರಾಫಿಕ್ ಜಾಮ್.!

19/05/2025 9:52 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.