Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : `LPG’ ಸಿಲಿಂಡರ್ ಬುಕಿಂಗ್ ಹೆಸರಲ್ಲಿ ಬರುವ ಈ `ಮೆಸೇಜ್ ಕ್ಲಿಕ್’ ಮಾಡಿದ್ರೆ ಖಾತೆಯೇ ಖಾಲಿ : ಸರ್ಕಾರದಿಂದ ಮಹತ್ವದ ಎಚ್ಚರಿಕೆ.!

01/04/2026 10:00 AM

ಇನ್ಮುಂದೆ ಪೊಲೀಸರು ವಾಟ್ಸಪ್, ಸೋಷಿಯಲ್ ಮೀಡಿಯಾ ಮೂಲಕ ನೋಟಿಸ್, FIR ನೀಡುವಂತಿಲ್ಲ : ಹೈಕೋರ್ಟ್ ಸ್ಪಷ್ಟನೆ

01/04/2026 9:54 AM

Share Market: ಹೂಡಿಕೆದಾರರ ಮೊಗದಲ್ಲಿ ಮಂದಹಾಸ: ಸೆನ್ಸೆಕ್ಸ್ 1,900 ಪಾಯಿಂಟ್ಸ್ ಭರ್ಜರಿ ಜಿಗಿತ; 22,900ರ ಗಡಿ ದಾಟಿದ ನಿಫ್ಟಿ!

01/04/2026 9:49 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇನ್ಮುಂದೆ ಪೊಲೀಸರು ವಾಟ್ಸಪ್, ಸೋಷಿಯಲ್ ಮೀಡಿಯಾ ಮೂಲಕ ನೋಟಿಸ್, FIR ನೀಡುವಂತಿಲ್ಲ : ಹೈಕೋರ್ಟ್ ಸ್ಪಷ್ಟನೆ
KARNATAKA

ಇನ್ಮುಂದೆ ಪೊಲೀಸರು ವಾಟ್ಸಪ್, ಸೋಷಿಯಲ್ ಮೀಡಿಯಾ ಮೂಲಕ ನೋಟಿಸ್, FIR ನೀಡುವಂತಿಲ್ಲ : ಹೈಕೋರ್ಟ್ ಸ್ಪಷ್ಟನೆ

By kannadanewsnow0501/04/2026 9:54 AM

ಬೆಂಗಳೂರು : ಇನ್ಮುಂದೆ ಪೊಲೀಸರು ನೋಟಿಸ್ ಅಥವಾ ಎಫ್‌ಐಆರ್ ಪ್ರತಿಯನ್ನು ವಾಟ್ಸ್ಆ್ಯಪ್‌ ಅಥವಾ ಇತರೆ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ನೀಡುವಂತಿಲ್ಲ, ಬದಲಾಗಿ ಭೌತಿಕವಾಗಿಯೇ ನೀಡಬೇಕು ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಹೌದು ಏಳು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ವಿಧಿಸಬಹುದಾದ ಪ್ರಕರಣಗಳಲ್ಲಿ ಆರೋಪಿಯನ್ನು ಬಂಧಿಸುವ ಮುನ್ನ ನೋಟಿಸ್ ನೀಡುವುದು ಕಡ್ಡಾಯವಿದ್ದರೂ ಆರೋಪಿ ಉದ್ದೇಶಪೂರ್ವಕವಾಗಿ ಪೊಲೀಸ್ ನೋಟಿಸ್ ಸ್ವೀಕರಿಸದೆ ತಲೆಮರೆಸಿಕೊಂಡು ತನಿಖೆಗೆ ಅಸಹಕಾರ ತೋರಿದ ಸಂದರ್ಭದಲ್ಲಿ ನೇರವಾಗಿ ಬಂಧಿಸಬಹುದಾಗಿದೆ ಎಂದು ಹೇಳಿದೆ.

ಹೂಡಿಕೆದಾರರಿಗೆ ಲಕ್ಷಾಂತರ ಹಣ ವಂಚಿಸಿದ ಪ್ರಕರಣದಲ್ಲಿ ತನಿಖೆಗೆ ಸಹಕರಿಸದೆ 40 ದಿನಗಳ ಕಾಲ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಕಡಲೂರು ನಿವಾಸಿ ಯೋಗ ಶಿಕ್ಷಕ ಆರ್‌.ಯುಗದೇವ್‌ (34) ಎಂಬುವರು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ತನ್ನ ವಿರುದ್ಧ ಹೊರಡಿಸಿದ ಬಂಧನ ಆದೇಶವನ್ನು ರದ್ದುಪಡಿಸಬೇಕು. ತನ್ನ ಬಂಧನವನ್ನು ಕಾನೂನು ಬಾಹಿರವೆಂದು ಘೋಷಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 35(3)ರ ಪ್ರಕಾರ ಪೊಲೀಸರು ತನಗೆ ವಿದ್ಯುನ್ಮಾನ ಅಥವಾ ಭೌತಿಕವಾಗಿ ನೋಟಿಸ್‌ ನೀಡಿಲ್ಲ. ಬಂಧನಕ್ಕೆ ಸೂಕ್ತ ಕಾರಣ ನೀಡಿಲ್ಲ. ಆರೋಪಿ ಸಹಕರಿಸದ ಸಂದರ್ಭದಲ್ಲಿ ನೋಟಿಸ್ ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಪೊಲೀಸರು ಮಹಜರ್ ಬರೆಯಬೇಕು. ಆ ವಿಚಾರವನ್ನು ಉನ್ನತ ಅಧಿಕಾರಿಗಳಿಗೆ ತಿಳಿಸಿ ನಂತರ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಬೇಕು. ಪೊಲೀಸರು ಈ ನಿಯಮಗಳನ್ನು ಪಾಲಿಸದ ಕಾರಣಕ್ಕೆ ತನ್ನ ಬಂಧನವನ್ನು ಕಾನೂನು ಬಾಹಿರವೆಂದು ಘೋಷಿಸಬೇಕು ಎಂದು ಆರೋಪಿ ವಾದಿಸಿದ್ದ.

ಈ ವಾದವನ್ನು ಸಾರಸಗಟಾಗಿ ತಿರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಬಿಎನ್ಎಸ್ಎಸ್ ಸೆಕ್ಷನ್ 35(3) ರ ಅಡಿಯಲ್ಲಿ ನೋಟಿಸ್ ಅಥವಾ ಎಫ್ಐಆರ್ ಪ್ರತಿಯನ್ನು ವಾಟ್ಸ್ಆ್ಯಪ್‌ ಅಥವಾ ವಿದ್ಯುನ್ಮಾನ ವಿಧಾನದಲ್ಲಿ ತಲುಪಿಸಲು ಪೊಲೀಸರಿಗೆ ಅಧಿಕಾರವಿಲ್ಲ. ನೋಟಿಸ್ ಅನ್ನು ಭೌತಿಕವಾಗಿ ಆರೋಪಿಗೆ ತಲುಪಿಸುವುದು ಅನಿವಾರ್ಯ. ಈ ಕುರಿತು ಸುಪ್ರೀಂ ಕೋರ್ಟ್‌ ಆದೇಶಿಸಿದೆ ಎಂದು ಅಭಿಪ್ರಾಯಪಟ್ಟಿದೆ.

Share. Facebook Twitter LinkedIn WhatsApp Email

Related Posts

ALERT : `LPG’ ಸಿಲಿಂಡರ್ ಬುಕಿಂಗ್ ಹೆಸರಲ್ಲಿ ಬರುವ ಈ `ಮೆಸೇಜ್ ಕ್ಲಿಕ್’ ಮಾಡಿದ್ರೆ ಖಾತೆಯೇ ಖಾಲಿ : ಸರ್ಕಾರದಿಂದ ಮಹತ್ವದ ಎಚ್ಚರಿಕೆ.!

01/04/2026 10:00 AM2 Mins Read

ಮಧುಮೇಹಿಗಳೇ ಗಮನಿಸಿ: ನಿಮ್ಮ ಮನೆಯ ಮುಂದಿನ ಮಾವಿನ ಎಲೆಯೇ ನಿಮ್ಮ ಶುಗರ್ ಕಂಟ್ರೋಲ್ ಮಾಡಬಲ್ಲದು!

01/04/2026 9:45 AM1 Min Read

ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭ : ರಾಜ್ಯದಲ್ಲಿ ಕರೆಂಟ್, ಟೋಲ್, ನೀರಿನ ದರ ಏರಿಕೆ.!

01/04/2026 9:27 AM2 Mins Read
Recent News

ALERT : `LPG’ ಸಿಲಿಂಡರ್ ಬುಕಿಂಗ್ ಹೆಸರಲ್ಲಿ ಬರುವ ಈ `ಮೆಸೇಜ್ ಕ್ಲಿಕ್’ ಮಾಡಿದ್ರೆ ಖಾತೆಯೇ ಖಾಲಿ : ಸರ್ಕಾರದಿಂದ ಮಹತ್ವದ ಎಚ್ಚರಿಕೆ.!

01/04/2026 10:00 AM

ಇನ್ಮುಂದೆ ಪೊಲೀಸರು ವಾಟ್ಸಪ್, ಸೋಷಿಯಲ್ ಮೀಡಿಯಾ ಮೂಲಕ ನೋಟಿಸ್, FIR ನೀಡುವಂತಿಲ್ಲ : ಹೈಕೋರ್ಟ್ ಸ್ಪಷ್ಟನೆ

01/04/2026 9:54 AM

Share Market: ಹೂಡಿಕೆದಾರರ ಮೊಗದಲ್ಲಿ ಮಂದಹಾಸ: ಸೆನ್ಸೆಕ್ಸ್ 1,900 ಪಾಯಿಂಟ್ಸ್ ಭರ್ಜರಿ ಜಿಗಿತ; 22,900ರ ಗಡಿ ದಾಟಿದ ನಿಫ್ಟಿ!

01/04/2026 9:49 AM

BIG NEWS : ಪತ್ನಿಯ ಪೋಷಕರ ಆಸ್ತಿಯಲ್ಲಿ ಪತಿಗೆ ಯಾವುದೇ ಹಕ್ಕಿಲ್ಲ ; ಹೈಕೋರ್ಟ್ ಮಹತ್ವದ ತೀರ್ಪು.!

01/04/2026 9:48 AM
State News
KARNATAKA

ALERT : `LPG’ ಸಿಲಿಂಡರ್ ಬುಕಿಂಗ್ ಹೆಸರಲ್ಲಿ ಬರುವ ಈ `ಮೆಸೇಜ್ ಕ್ಲಿಕ್’ ಮಾಡಿದ್ರೆ ಖಾತೆಯೇ ಖಾಲಿ : ಸರ್ಕಾರದಿಂದ ಮಹತ್ವದ ಎಚ್ಚರಿಕೆ.!

By kannadanewsnow5701/04/2026 10:00 AM KARNATAKA 2 Mins Read

ಕಳೆದ ಕೆಲವು ದಿನಗಳಿಂದ ಎಲ್ಪಿಜಿ (LPG) ಸಿಲಿಂಡರ್ ಕೊರತೆಯ ಸುದ್ಧಿ ಹಬ್ಬುತ್ತಿರುವ ಬೆನ್ನಲ್ಲೇ, ಸೈಬರ್ ವಂಚಕರು ಸಕ್ರಿಯರಾಗಿದ್ದಾರೆ. ಸಿಲಿಂಡರ್ ಬುಕಿಂಗ್…

ಇನ್ಮುಂದೆ ಪೊಲೀಸರು ವಾಟ್ಸಪ್, ಸೋಷಿಯಲ್ ಮೀಡಿಯಾ ಮೂಲಕ ನೋಟಿಸ್, FIR ನೀಡುವಂತಿಲ್ಲ : ಹೈಕೋರ್ಟ್ ಸ್ಪಷ್ಟನೆ

01/04/2026 9:54 AM

ಮಧುಮೇಹಿಗಳೇ ಗಮನಿಸಿ: ನಿಮ್ಮ ಮನೆಯ ಮುಂದಿನ ಮಾವಿನ ಎಲೆಯೇ ನಿಮ್ಮ ಶುಗರ್ ಕಂಟ್ರೋಲ್ ಮಾಡಬಲ್ಲದು!

01/04/2026 9:45 AM

ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭ : ರಾಜ್ಯದಲ್ಲಿ ಕರೆಂಟ್, ಟೋಲ್, ನೀರಿನ ದರ ಏರಿಕೆ.!

01/04/2026 9:27 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.