Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆಂಧ್ರಪ್ರದೇಶದಲ್ಲಿ ಮನಕಲಕುವ ಘಟನೆ: ಪ್ರೀತಿಸಿ ಮದುವೆಯಾದ ಮಗಳನ್ನೇ ಬರ್ಬರವಾಗಿ ಕೊಲೆಗೈದ ಪಾಪಿ ತಂದೆ

05/04/2026 4:00 PM

BIG NEWS: ಇನ್ಮುಂದೆ ರಸಗೊಬ್ಬರ ಪಡೆಯಲು ‘ಪ್ರೂಟ್ಸ್ ಐಡಿ’ ಕಡ್ಡಾಯ: ರಾಜ್ಯ ಸರ್ಕಾರದಿಂದ ‘ಗೊಬ್ಬರ ಮಾಫಿಯಾ’ಗೆ ಬ್ರೇಕ್!

05/04/2026 3:52 PM

ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಬಂಪರ್ ಗಿಫ್ಟ್: ಇನ್ಮುಂದೆ 3 ವಿಶೇಷ ರೈಲುಗಳು ಖಾಯಂ, ಟಿಕೆಟ್ ದರದಲ್ಲೂ ಭಾರಿ ಇಳಿಕೆ!

05/04/2026 3:45 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಇನ್ಮುಂದೆ ರಸಗೊಬ್ಬರ ಪಡೆಯಲು ‘ಪ್ರೂಟ್ಸ್ ಐಡಿ’ ಕಡ್ಡಾಯ: ರಾಜ್ಯ ಸರ್ಕಾರದಿಂದ ‘ಗೊಬ್ಬರ ಮಾಫಿಯಾ’ಗೆ ಬ್ರೇಕ್!
KARNATAKA

BIG NEWS: ಇನ್ಮುಂದೆ ರಸಗೊಬ್ಬರ ಪಡೆಯಲು ‘ಪ್ರೂಟ್ಸ್ ಐಡಿ’ ಕಡ್ಡಾಯ: ರಾಜ್ಯ ಸರ್ಕಾರದಿಂದ ‘ಗೊಬ್ಬರ ಮಾಫಿಯಾ’ಗೆ ಬ್ರೇಕ್!

By kannadanewsnow0905/04/2026 3:52 PM

ಬೆಂಗಳೂರು: ರಾಜ್ಯದ ರೈತರಿಗೆ ಸಕಾಲದಲ್ಲಿ ರಸಗೊಬ್ಬರ ತಲುಪಿಸಲು ಮತ್ತು ಮಾರುಕಟ್ಟೆಯಲ್ಲಿ ಸೃಷ್ಟಿಯಾಗುತ್ತಿರುವ ಕೃತಕ ಅಭಾವಕ್ಕೆ ಕಡಿವಾಣ ಹಾಕಲು ಕೃಷಿ ಇಲಾಖೆ ಈಗ ‘ಮಾಸ್ಟರ್ ಪ್ಲಾನ್’ ರೂಪಿಸಿದೆ. ಇನ್ಮುಂದೆ ರೈತರು ರಸಗೊಬ್ಬರ ಪಡೆಯಲು ಕೇವಲ ಆಧಾರ್ ಕಾರ್ಡ್ ನೀಡಿದರೆ ಸಾಲದು, ಬದಲಿಗೆ ಕಡ್ಡಾಯವಾಗಿ ‘ಫ್ರೂಟ್ಸ್ ಐಡಿ’ (FID) ಹೊಂದಿರಲೇಬೇಕು.

ಮುಂಗಾರು ಹಂಗಾಮು ಆರಂಭವಾಗುತ್ತಿರುವ ಬೆನ್ನಲ್ಲೇ ಈ ಹೊಸ ನಿಯಮವನ್ನು ರಾಜ್ಯಾದ್ಯಂತ ಜಾರಿಗೆ ತರಲಾಗಿದ್ದು, ಗೊಬ್ಬರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದು ಇದರ ಮುಖ್ಯ ಉದ್ದೇಶವಾಗಿದೆ.

ರಸಗೊಬ್ಬರ ಮಾಫಿಯಾಗೆ ಬೀಳಲಿದೆ ಬ್ರೇಕ್!

ಕಳೆದ ಕೆಲವು ವರ್ಷಗಳಿಂದ ರಸಗೊಬ್ಬರ ವಿತರಣೆಯಲ್ಲಿ ವ್ಯಾಪಕ ಅವ್ಯವಹಾರಗಳು ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಕೆಲವು ಮಧ್ಯವರ್ತಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ನಕಲಿ ಆಧಾರ್ ಸಂಖ್ಯೆಗಳನ್ನು ಬಳಸಿ ಅಥವಾ ರೈತರ ಹೆಸರಿನಲ್ಲಿ ದೊಡ್ಡ ಪ್ರಮಾಣದ ಗೊಬ್ಬರವನ್ನು ದಾಸ್ತಾನು ಮಾಡಿ, ಅದನ್ನು ಕೈಗಾರಿಕೆಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇದರಿಂದಾಗಿ ನೈಜ ರೈತರಿಗೆ ಸಕಾಲದಲ್ಲಿ ಗೊಬ್ಬರ ಸಿಗದೆ ಸಂಕಷ್ಟ ಅನುಭವಿಸುವಂತಾಗಿತ್ತು. ಈ ‘ರಸಗೊಬ್ಬರ ಮಾಫಿಯಾ’ಗೆ ಈಗ ಎಫ್‌ಐಡಿ (FID) ಮೂಲಕ ಕೃಷಿ ಇಲಾಖೆ ಬಲವಾದ ಕಡಿವಾಣ ಹಾಕಿದೆ.

ಹೊಸ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?

ಈ ಹೊಸ ವ್ಯವಸ್ಥೆಯಡಿ, ರೈತರು ಗೊಬ್ಬರ ಖರೀದಿಸುವಾಗ ನೀಡುವ ಫ್ರೂಟ್ಸ್ ಐಡಿಯನ್ನು ತಂತ್ರಾಂಶದಲ್ಲಿ ಪರಿಶೀಲಿಸಲಾಗುತ್ತದೆ.

  • ಜಮೀನು ಆಧಾರಿತ ವಿತರಣೆ: ರೈತನ ಹೆಸರಿನಲ್ಲಿ ಎಷ್ಟು ಜಮೀನಿದೆ ಮತ್ತು ಆ ಬೆಳೆಗೆ ಎಷ್ಟು ಗೊಬ್ಬರದ ಅವಶ್ಯಕತೆ ಇದೆ ಎಂಬುದನ್ನು ಆಧರಿಸಿ ನಿಗದಿತ ಪ್ರಮಾಣದ ಗೊಬ್ಬರವನ್ನು ಮಾತ್ರ ವಿತರಿಸಲಾಗುತ್ತದೆ.

  • ದುರುಪಯೋಗಕ್ಕೆ ತಡೆ: ಒಬ್ಬರೇ ವ್ಯಕ್ತಿ ಬೇರೆ ಬೇರೆ ಹೆಸರಿನಲ್ಲಿ ಗೊಬ್ಬರ ಖರೀದಿಸಿ ಕಾಳಸಂತೆಯಲ್ಲಿ ಮಾರುವುದನ್ನು ಇದು ಸಂಪೂರ್ಣವಾಗಿ ತಡೆಯುತ್ತದೆ.

  • ಕಟ್ಟುನಿಟ್ಟಿನ ನಿಗಾ: ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಮಿತಿಗಳ ಮೂಲಕ ವಿತರಣಾ ಪ್ರಕ್ರಿಯೆಯ ಮೇಲೆ ನಿರಂತರ ನಿಗಾ ವಹಿಸಲು ಸಾಧ್ಯವಾಗುತ್ತದೆ.

ಏನಿದು ಫ್ರೂಟ್ಸ್ ಐಡಿ (FID)?

FRUITS ಎಂದರೆ Farmer Registration and Unified Beneficiary Information System. ಇದು ಕರ್ನಾಟಕ ಸರ್ಕಾರದ ಒಂದು ಮಹತ್ವಾಕಾಂಕ್ಷೆಯ ಡಿಜಿಟಲ್ ಪೋರ್ಟಲ್ ಆಗಿದ್ದು, ರಾಜ್ಯದ ಪ್ರತಿಯೊಬ್ಬ ರೈತನ ಜಮೀನಿನ ವಿವರ, ವೈಯಕ್ತಿಕ ಮತ್ತು ಬ್ಯಾಂಕಿಂಗ್ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಸಂಗ್ರಹಿಸುತ್ತದೆ. ಇದು ರೈತರಿಗೆ ವಿಶಿಷ್ಟವಾದ FID (Farmer ID) ಸಂಖ್ಯೆಯನ್ನು ನೀಡುತ್ತದೆ. ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಈ ಐಡಿ ಈಗ ಅತ್ಯಗತ್ಯ.

ಪ್ರಸ್ತುತ ರಸಗೊಬ್ಬರ ದಾಸ್ತಾನು ವಿವರ:

ರಾಜ್ಯದಲ್ಲಿ ಈ ಬಾರಿಯ ಮುಂಗಾರು ಹಂಗಾಮಿಗೆ ಸುಮಾರು 30.05 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರದ ಅವಶ್ಯಕತೆಯಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಇಲಾಖೆಯ ಬಳಿ 11.42 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿದ್ದು, ರೈತರಿಗೆ ಯಾವುದೇ ತೊಂದರೆಯಾಗದಂತೆ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.

ಫ್ರೂಟ್ಸ್ ಐಡಿ ಪಡೆಯುವುದು ಹೇಗೆ?

ರೈತರು ಎರಡು ಸುಲಭ ವಿಧಾನಗಳ ಮೂಲಕ ಫ್ರೂಟ್ಸ್ ಐಡಿ ಪಡೆಯಬಹುದು:

  1. ನೇರ ಅರ್ಜಿ: ಅಗತ್ಯ ದಾಖಲೆಗಳ ಸಮೇತ ನಿಮ್ಮ ವ್ಯಾಪ್ತಿಯ ಕೃಷಿ ಇಲಾಖೆಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

  2. ಆನ್‌ಲೈನ್ ಮೂಲಕ: ಅಧಿಕೃತ ವೆಬ್‌ಸೈಟ್ fruits.karnataka.gov.in ಗೆ ಭೇಟಿ ನೀಡಿ ಮೊಬೈಲ್ ಮೂಲಕವೇ ನೋಂದಾಯಿಸಿಕೊಳ್ಳಬಹುದು.

ನೋಂದಣಿಗೆ ಬೇಕಾಗುವ ದಾಖಲೆಗಳು:

  • ಆಧಾರ್ ಕಾರ್ಡ್ ಸಂಖ್ಯೆ.

  • ಜಮೀನಿನ ಪಹಣಿ (RTC) ವಿವರಗಳು.

  • ಬ್ಯಾಂಕ್ ಪಾಸ್ ಬುಕ್ ಪ್ರತಿ.

  • ಜಾತಿ ಪ್ರಮಾಣ ಪತ್ರ (ಅನ್ವಯವಾಗುವಲ್ಲಿ).

  • ಇತ್ತೀಚಿನ ಭಾವಚಿತ್ರ.

ಮುಂಬರುವ ಮುಂಗಾರು ಹಂಗಾಮಿನಲ್ಲಿ ಯಾವುದೇ ತೊಂದರೆಯಿಲ್ಲದೆ ಸಕಾಲಕ್ಕೆ ಗೊಬ್ಬರ ಪಡೆಯಲು, ರೈತರು ಕೂಡಲೇ ತಮ್ಮ ಹೆಸರನ್ನು ಫ್ರೂಟ್ಸ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದು ಒಳ್ಳೇಯದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪಡೆಯಬಹುದಾಗಿದೆ.

RTE ಅಡಿಯಲ್ಲಿ ಶಾಲೆ ಆರಿಸುವ ಹಕ್ಕಿಲ್ಲ, ಪ್ರವೇಶಾತಿ ಪಡೆಯುವ ಹಕ್ಕಷ್ಟೇ ಇದೆ: ಹೈಕೋರ್ಟ್ ಮಹತ್ವದ ತೀರ್ಪು

ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಬಂಪರ್ ಗಿಫ್ಟ್: ಇನ್ಮುಂದೆ 3 ವಿಶೇಷ ರೈಲುಗಳು ಖಾಯಂ, ಟಿಕೆಟ್ ದರದಲ್ಲೂ ಭಾರಿ ಇಳಿಕೆ!

Share. Facebook Twitter LinkedIn WhatsApp Email

Related Posts

ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಬಂಪರ್ ಗಿಫ್ಟ್: ಇನ್ಮುಂದೆ 3 ವಿಶೇಷ ರೈಲುಗಳು ಖಾಯಂ, ಟಿಕೆಟ್ ದರದಲ್ಲೂ ಭಾರಿ ಇಳಿಕೆ!

05/04/2026 3:45 PM2 Mins Read

ನನಗೆ ಯಾವುದೇ ರೀತಿಯ ಮುನಿಸಿಲ್ಲ, ನಾನು ಯಾವುದೇ ರೀತಿಯ ಕಂಡೀಶನ್ ಹಾಕಿಲ್ಲ : ಸಚಿವ ಜಮೀರ್ ಅಹ್ಮದ್ ಖಾನ್

05/04/2026 3:38 PM1 Min Read

Watch Video: ಬೆಂಗಳೂರಲ್ಲಿ LPG ಗ್ಯಾಸಿಗಾಗಿ ‘ಬಂಕ್’ ಬಳಿಯಲ್ಲಿ ಕಿಲೋಮೀಟರ್ ಉದ್ದ ಸಾಲುಗಟ್ಟಿ ನಿಂತ ಆಟೋಗಳು

05/04/2026 3:31 PM1 Min Read
Recent News

ಆಂಧ್ರಪ್ರದೇಶದಲ್ಲಿ ಮನಕಲಕುವ ಘಟನೆ: ಪ್ರೀತಿಸಿ ಮದುವೆಯಾದ ಮಗಳನ್ನೇ ಬರ್ಬರವಾಗಿ ಕೊಲೆಗೈದ ಪಾಪಿ ತಂದೆ

05/04/2026 4:00 PM

BIG NEWS: ಇನ್ಮುಂದೆ ರಸಗೊಬ್ಬರ ಪಡೆಯಲು ‘ಪ್ರೂಟ್ಸ್ ಐಡಿ’ ಕಡ್ಡಾಯ: ರಾಜ್ಯ ಸರ್ಕಾರದಿಂದ ‘ಗೊಬ್ಬರ ಮಾಫಿಯಾ’ಗೆ ಬ್ರೇಕ್!

05/04/2026 3:52 PM

ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಬಂಪರ್ ಗಿಫ್ಟ್: ಇನ್ಮುಂದೆ 3 ವಿಶೇಷ ರೈಲುಗಳು ಖಾಯಂ, ಟಿಕೆಟ್ ದರದಲ್ಲೂ ಭಾರಿ ಇಳಿಕೆ!

05/04/2026 3:45 PM

RTE ಅಡಿಯಲ್ಲಿ ಶಾಲೆ ಆರಿಸುವ ಹಕ್ಕಿಲ್ಲ, ಪ್ರವೇಶಾತಿ ಪಡೆಯುವ ಹಕ್ಕಷ್ಟೇ ಇದೆ: ಹೈಕೋರ್ಟ್ ಮಹತ್ವದ ತೀರ್ಪು

05/04/2026 3:41 PM
State News
KARNATAKA

BIG NEWS: ಇನ್ಮುಂದೆ ರಸಗೊಬ್ಬರ ಪಡೆಯಲು ‘ಪ್ರೂಟ್ಸ್ ಐಡಿ’ ಕಡ್ಡಾಯ: ರಾಜ್ಯ ಸರ್ಕಾರದಿಂದ ‘ಗೊಬ್ಬರ ಮಾಫಿಯಾ’ಗೆ ಬ್ರೇಕ್!

By kannadanewsnow0905/04/2026 3:52 PM KARNATAKA 2 Mins Read

ಬೆಂಗಳೂರು: ರಾಜ್ಯದ ರೈತರಿಗೆ ಸಕಾಲದಲ್ಲಿ ರಸಗೊಬ್ಬರ ತಲುಪಿಸಲು ಮತ್ತು ಮಾರುಕಟ್ಟೆಯಲ್ಲಿ ಸೃಷ್ಟಿಯಾಗುತ್ತಿರುವ ಕೃತಕ ಅಭಾವಕ್ಕೆ ಕಡಿವಾಣ ಹಾಕಲು ಕೃಷಿ ಇಲಾಖೆ…

ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಬಂಪರ್ ಗಿಫ್ಟ್: ಇನ್ಮುಂದೆ 3 ವಿಶೇಷ ರೈಲುಗಳು ಖಾಯಂ, ಟಿಕೆಟ್ ದರದಲ್ಲೂ ಭಾರಿ ಇಳಿಕೆ!

05/04/2026 3:45 PM

ನನಗೆ ಯಾವುದೇ ರೀತಿಯ ಮುನಿಸಿಲ್ಲ, ನಾನು ಯಾವುದೇ ರೀತಿಯ ಕಂಡೀಶನ್ ಹಾಕಿಲ್ಲ : ಸಚಿವ ಜಮೀರ್ ಅಹ್ಮದ್ ಖಾನ್

05/04/2026 3:38 PM

Watch Video: ಬೆಂಗಳೂರಲ್ಲಿ LPG ಗ್ಯಾಸಿಗಾಗಿ ‘ಬಂಕ್’ ಬಳಿಯಲ್ಲಿ ಕಿಲೋಮೀಟರ್ ಉದ್ದ ಸಾಲುಗಟ್ಟಿ ನಿಂತ ಆಟೋಗಳು

05/04/2026 3:31 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.