Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
vidhana soudha

ಇನ್ಮುಂದೆ ಪೊಲೀಸ್ ಅಧಿಕಾರಿಗಳು MLA, MLC, MP ನಂಬರ್ ಹೊಂದಿರೋದು ಕಡ್ಡಾಯ: ರಾಜ್ಯ ಸರ್ಕಾರ ಆದೇಶ

09/03/2026 8:29 PM

BIG NEWS: ಇನ್ಮುಂದೆ ಶೇ.33ರಷ್ಟು ಅಂಕ ಪಡೆದ್ರೆ ಪ್ರಥಮ ಪಿಯುಸಿ ಪಾಸ್: ಶಾಲಾ ಶಿಕ್ಷಣ ಇಲಾಖೆ ಆದೇಶ

09/03/2026 8:24 PM

ರಾಜ್ಯ ಸರ್ಕಾರಕ್ಕೂ ಶುರುವಾಯ್ತು ಪ್ರಶಸ್ತಿ ವಾಪ್ಸಿ ತಲೆ ನೋವು

09/03/2026 8:19 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಇನ್ಮುಂದೆ ಶೇ.33ರಷ್ಟು ಅಂಕ ಪಡೆದ್ರೆ ಪ್ರಥಮ ಪಿಯುಸಿ ಪಾಸ್: ಶಾಲಾ ಶಿಕ್ಷಣ ಇಲಾಖೆ ಆದೇಶ
KARNATAKA

BIG NEWS: ಇನ್ಮುಂದೆ ಶೇ.33ರಷ್ಟು ಅಂಕ ಪಡೆದ್ರೆ ಪ್ರಥಮ ಪಿಯುಸಿ ಪಾಸ್: ಶಾಲಾ ಶಿಕ್ಷಣ ಇಲಾಖೆ ಆದೇಶ

By kannadanewsnow0909/03/2026 8:24 PM

ಬೆಂಗಳೂರು: ರಾಜ್ಯ ಸರ್ಕಾರದಿಂದ ಈಗಾಗಲೇ ದ್ವಿತೀಯ ಪಿಯುಸಿ ಉತ್ತೀರ್ಣಕ್ಕೆ ಶೇಕಡಾ ಪ್ರಮಾಣವನ್ನು ನಿಗದಿ ಪಡಿಸಲಾಗಿದೆ. ಇದೀಗ ಮುಂದುವರೆದು ಪ್ರಥಮ ಪಿಯುಸಿಗೂ ಉತ್ತೀರ್ಣತಾ ಪ್ರಮಾಣವನ್ನು ನಿಗದಿ ಪಡಿಸಿದೆ. ಇನ್ಮುಂದೆ ಶೇ.33ರಷ್ಟು ಅಂಕ ಬಂದ್ರು ಪ್ರಥಮ ಪಿಯುಸಿಯಲ್ಲಿ ಪಾಸ್ ಎಂಬುದಾಗಿ ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.

ಈ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ನಿರ್ದೇಶಕರು (ಪದವಿಪೂರ್ವ), ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು, ಇವರು ಓದಲಾದ (1)ರ ಅಧಿಸೂಚನೆಯನ್ವಯ ಕರ್ನಾಟಕ ಪದವಿ ಪೂರ್ವ ಪರೀಕ್ಷೆ (ಮೌಲ್ಯಮಾಪನ ವಿಧಾನ) ನಿಯಮಗಳು, 2025ನ್ನು ಜಾರಿಗೆ ತರುವುದರ ಮೂಲಕ ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತೀರ್ಣತಾ ಮಟ್ಟವನ್ನು ಪರಿಮಾಣಾತ್ಮಕವಾಗಿ ಹೆಚ್ಚಿಸುವ ದೃಷ್ಟಿಯಿಂದ ಹಾಲಿ ಇರುವ ನಿಯಮಕ್ಕೆ ತಿದ್ದುಪಡಿ ತಂದು ಉತ್ತೀರ್ಣತಾ ಪುಮಾಣವನ್ನು ಪ್ರತಿಶತ 33 ನಿಗದಿಪಡಿಸಿ ಅಧಿಸೂಚನೆ ಹೊರಡಿಸಿರುವುದು ಗಮನಾರ್ಹವಾಗಿದ್ದು, ಪದವಿ ಪೂರ್ವ ಶಿಕ್ಷಣವು ಎರಡು ವರ್ಷಗಳ ಸಂಯುಕ್ತ ಕೋರ್ಸ್ ಆಗಿರುವುದರಿಂದ, ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಎರಡೂ ತರಗತಿಗಳು ಪರಸ್ಪರ ಸಂಬಂಧಿತವಾಗಿವೆ ಎಂದಿದ್ದಾರೆ.

ದ್ವಿತೀಯ ಪಿಯುಸಿಗೆ ಕನಿಷ ಉತ್ತೀರ್ಣತಾ ಪ್ರಮಾಣವನ್ನು ಅನ್ವಯಿಸುವಂತೆಯೇ, 2025-26ನೇ ಶೈಕ್ಷಣಿಕ ಸಾಲಿನಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೂ ಅದೇ ಪ್ರಮಾಣವನ್ನು ಅನ್ವಯಿಸುವುದು ಶೈಕ್ಷಣಿಕ ಶಿಸ್ತಿನ ದೃಷ್ಟಿಯಿಂದ ಹಾಗೂ ಸಮಾನ ಮೌಲ್ಯಮಾಪನ ವ್ಯವಸ್ಥೆಯ ದೃಷ್ಟಿಯಿಂದ ಸಮಂಜಸವಾಗಿರುವುದರಿಂದ, ಪ್ರಥಮ ಪಿಯು ವಿಭಾಗಕ್ಕೂ ಸಹ ಕನಿಷ್ಠ ಉತ್ತೀರ್ಣತಾ ಶೇಕಡವನ್ನು 33 ಕ್ಕೆ ನಿಗದಿಪಡಿಸಿ ಸರ್ಕಾರದಿಂದ ಆದೇಶ ಹೊರಡಿಸುವಂತೆ ಕೋರಿರುತ್ತಾರೆ ಎಂದು ಹೇಳಿದ್ದಾರೆ.

ಸರ್ಕಾರವು ಪ್ರಸ್ತಾಪಿತ ವಿಷಯವನ್ನು ನಿಯಮಾನುಸಾರ ಪರಿಶೀಲಿಸಿ, ಮೌಲ್ಯಮಾಪನ ವಿಧಾನದಲ್ಲಿ ಏಕರೂಪತೆ ಕಾಪಾಡುವುದು ಮತ್ತು ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಹಾಯಕವಾಗುವುದನ್ನು ಮನಗಂಡು, ದ್ವಿತೀಯ ಪಿಯುಸಿಗೆ ಮಾತ್ರ ಅನ್ವಯಿಸಿರುವ ಕನಿಷ್ಠ ಉತ್ತೀರ್ಣತಾ ಪ್ರಮಾಣವನ್ನು ಪ್ರಥಮ ಪಿಯುಸಿಗೂ ವಿಸ್ತರಿಸುವ ಬಗ್ಗೆ ಸ್ಪಷ್ಟ ಆದೇಶ ಹೊರಡಿಸುವುದು ಸೂಕ್ತವೆಂದು ಭಾವಿಸಿ, ಸರ್ಕಾರದ ಅಧಿಸೂಚನೆ ಸಂಖ್ಯೆ: ಇಪಿ 244 ಎಸ್‌ಎಲ್‌ಬಿ 2025, ದಿನಾಂಕ: 15.10.2025ರಲ್ಲಿನ ಕರ್ನಾಟಕ ಪದವಿ ಪೂರ್ವ ಪರೀಕ್ಷೆ (ಮೌಲ್ಯಮಾಪನ ವಿಧಾನ) ನಿಯಮಗಳು, 2025ರಲ್ಲಿನ ನಿಯಮ 2(ಎ) ಅನ್ನು ಪ್ರಥಮ ಪಿಯುಸಿ ವಿಭಾಗಕ್ಕೂ ವಿಸ್ತರಿಸಲು ತೀರ್ಮಾನಿಸಿ, ಈ ಕೆಳಕಂಡಂತೆ ಆದೇಶಿದ್ದಾರೆ.

ಸರ್ಕಾರದ ಅಧಿಸೂಚನೆ ಸಂಖ್ಯೆ:ಇಪಿ 244 ಎಸ್‌ಎಲ್‌ಬಿ 2025, ದಿನಾಂಕ:15.10.2025ರಲ್ಲಿನ ಕರ್ನಾಟಕ ಪದವಿ ಪೂರ್ವ ಪರೀಕ್ಷೆ (ಮೌಲ್ಯಮಾಪನ ವಿಧಾನ) ನಿಯಮಗಳು, 2025ರಲ್ಲಿನ ನಿಯಮ 2(ಎ) ಯ ವಿಧಾನವನ್ನು ಪ್ರಥಮ ಪಿಯುಸಿ ವಿಭಾಗಕ್ಕೂ ವಿಸ್ತರಿಸಿ, ಉತ್ತೀರ್ಣತಾ ಪ್ರಮಾಣವನ್ನು ಪ್ರತಿಶತ ಶೇ.33ಕ್ಕೆ ನಿಗದಿಪಡಿಸಿ ಆದೇಶಿಸಿದ್ದಾರೆ.

ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್ 11 ರಿಂದ `OPD’ ಸೇವೆ ಬಂದ್: ರೋಗಿಗಳಿಗೆ ಸಂಕಷ್ಟದ ಭೀತಿ

GOOD NEWS: ಬೆಂಗಳೂರಿನ ಈ ಮಾರ್ಗದ ಮೆಟ್ರೋ ನಿಲ್ದಾಣಗಳಿಗೆ ‘BMTC ಫೀಡರ್ ಬಸ್’ ಸಂಚಾರ ಆರಂಭ

Share. Facebook Twitter LinkedIn WhatsApp Email

Related Posts

vidhana soudha

ಇನ್ಮುಂದೆ ಪೊಲೀಸ್ ಅಧಿಕಾರಿಗಳು MLA, MLC, MP ನಂಬರ್ ಹೊಂದಿರೋದು ಕಡ್ಡಾಯ: ರಾಜ್ಯ ಸರ್ಕಾರ ಆದೇಶ

09/03/2026 8:29 PM1 Min Read

ರಾಜ್ಯ ಸರ್ಕಾರಕ್ಕೂ ಶುರುವಾಯ್ತು ಪ್ರಶಸ್ತಿ ವಾಪ್ಸಿ ತಲೆ ನೋವು

09/03/2026 8:19 PM1 Min Read

BIG NEWS: ರಾಜ್ಯದಲ್ಲಿ ಟ್ರಾಕ್ಟರ್‌ ಗಳಲ್ಲಿ ಅಬ್ಬರಿಸುವ ‘ಡಿಜೆ ಸೌಂಡ್’ಗೆ ಬ್ರೇಕ್: ‘ಸಿಸ್ಟಂ ತೆರವಿ’ಗೆ ಸರ್ಕಾರ ಆದೇಶ

09/03/2026 8:14 PM1 Min Read
Recent News
vidhana soudha

ಇನ್ಮುಂದೆ ಪೊಲೀಸ್ ಅಧಿಕಾರಿಗಳು MLA, MLC, MP ನಂಬರ್ ಹೊಂದಿರೋದು ಕಡ್ಡಾಯ: ರಾಜ್ಯ ಸರ್ಕಾರ ಆದೇಶ

09/03/2026 8:29 PM

BIG NEWS: ಇನ್ಮುಂದೆ ಶೇ.33ರಷ್ಟು ಅಂಕ ಪಡೆದ್ರೆ ಪ್ರಥಮ ಪಿಯುಸಿ ಪಾಸ್: ಶಾಲಾ ಶಿಕ್ಷಣ ಇಲಾಖೆ ಆದೇಶ

09/03/2026 8:24 PM

ರಾಜ್ಯ ಸರ್ಕಾರಕ್ಕೂ ಶುರುವಾಯ್ತು ಪ್ರಶಸ್ತಿ ವಾಪ್ಸಿ ತಲೆ ನೋವು

09/03/2026 8:19 PM

BIG NEWS: ರಾಜ್ಯದಲ್ಲಿ ಟ್ರಾಕ್ಟರ್‌ ಗಳಲ್ಲಿ ಅಬ್ಬರಿಸುವ ‘ಡಿಜೆ ಸೌಂಡ್’ಗೆ ಬ್ರೇಕ್: ‘ಸಿಸ್ಟಂ ತೆರವಿ’ಗೆ ಸರ್ಕಾರ ಆದೇಶ

09/03/2026 8:14 PM
State News
vidhana soudha KARNATAKA

ಇನ್ಮುಂದೆ ಪೊಲೀಸ್ ಅಧಿಕಾರಿಗಳು MLA, MLC, MP ನಂಬರ್ ಹೊಂದಿರೋದು ಕಡ್ಡಾಯ: ರಾಜ್ಯ ಸರ್ಕಾರ ಆದೇಶ

By kannadanewsnow0909/03/2026 8:29 PM KARNATAKA 1 Min Read

ಬೆಂಗಳೂರು: ರಾಜ್ಯದ ಎಲ್ಲಾ ಹಂತದ ಪೊಲೀಸ್ ಅಧಿಕಾರಿಗಳು ಇನ್ಮುಂದೆ ಜನಪ್ರತಿನಿಧಿಗಳ ಕರೆಗಳನ್ನು ಕಡ್ಡಾಯವಾಗಿ ಸ್ವೀಕರಿಸಬೇಕು ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು…

BIG NEWS: ಇನ್ಮುಂದೆ ಶೇ.33ರಷ್ಟು ಅಂಕ ಪಡೆದ್ರೆ ಪ್ರಥಮ ಪಿಯುಸಿ ಪಾಸ್: ಶಾಲಾ ಶಿಕ್ಷಣ ಇಲಾಖೆ ಆದೇಶ

09/03/2026 8:24 PM

ರಾಜ್ಯ ಸರ್ಕಾರಕ್ಕೂ ಶುರುವಾಯ್ತು ಪ್ರಶಸ್ತಿ ವಾಪ್ಸಿ ತಲೆ ನೋವು

09/03/2026 8:19 PM

BIG NEWS: ರಾಜ್ಯದಲ್ಲಿ ಟ್ರಾಕ್ಟರ್‌ ಗಳಲ್ಲಿ ಅಬ್ಬರಿಸುವ ‘ಡಿಜೆ ಸೌಂಡ್’ಗೆ ಬ್ರೇಕ್: ‘ಸಿಸ್ಟಂ ತೆರವಿ’ಗೆ ಸರ್ಕಾರ ಆದೇಶ

09/03/2026 8:14 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.