Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಮಾಲೀಕನ ಹೆಸರಿನಲ್ಲಿರುವ ಎಲ್ಲ ಖಾಸಗಿ ರಸ್ತೆಗಳನ್ನು ‘ಸರ್ಕಾರಿ ರಸ್ತೆಗಳು’ ಎಂದು ಘೋಷಣೆ : ಡಿಸಿಎಂ ಡಿಕೆಶಿ

23/08/2025 5:20 PM

ರಾಜ್ಯದ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : 7.5 ಲಕ್ಷ `ಬಿ-ಖಾತಾ’ಗಳಿಗೆ `ಎ’ ಖಾತಾ ವಿತರಣೆ.!

23/08/2025 5:15 PM

ವಿವಾಹಿತ ವ್ಯಕ್ತಿಯೊಂದಿಗೆ ವಯಸ್ಕ ಮಹಿಳೆ ವಾಸಿಸೋದನ್ನ ಯಾವುದೇ ಕಾನೂನು ತಡೆಯೋದಿಲ್ಲ : ಹೈಕೋರ್ಟ್

23/08/2025 5:03 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಏಪ್ರಿಲ್.1ರಿಂದ ಮೇ.31ರವರೆಗೆ ರಾಜ್ಯದಲ್ಲಿ ಮಳೆಯಿಂದ 71 ಮಂದಿ ಸಾವು, 15378.32 ಹೆಕ್ಟೇರ್ ಬೆಳೆಹಾನಿ
KARNATAKA

BREAKING: ಏಪ್ರಿಲ್.1ರಿಂದ ಮೇ.31ರವರೆಗೆ ರಾಜ್ಯದಲ್ಲಿ ಮಳೆಯಿಂದ 71 ಮಂದಿ ಸಾವು, 15378.32 ಹೆಕ್ಟೇರ್ ಬೆಳೆಹಾನಿ

By kannadanewsnow0931/05/2025 8:52 PM

ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್.1ರಿಂದ ಮೇ.31ರವರೆಗೆ ಸುರಿದಂತ ಪೂರ್ವ ಮುಂಗಾರು ಮಳೆಯಿಂದಾಗಿ 71 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 15378.32 ಹೆಕ್ಟೇರ್ ಬೆಳೆಹಾನಿಯಾಗಿದೆ.

ಈ ಬಗ್ಗೆ ಸಿಎಂ ಸಿದ್ಧರಾಮಯ್ಯ ಅವರು ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಪೂರ್ವ ಮುಂಗಾರು ಹಂಗಾಮು 1901 ರಿಂದ ಇಲ್ಲಿಯವರೆಗಿನ ಮಳೆ ಅಂಕಿಅಂಶಗಳನ್ನು ಗಮನಿಸಿದಾಗ 2025ರ ಪೂರ್ವ ಮುಂಗಾರು ಅವಧಿಯಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದ್ದು, ಕಳೆದ 125 ವರ್ಷಗಳಲ್ಲೇ ಪೂರ್ವ ಮುಂಗಾರು ಮತ್ತು ಮೇ ಮಾಹೆಯಲ್ಲಿ ಕಂಡುಬಂದ ಗರಿಷ್ಟ ಪ್ರಮಾಣದ ಮಳೆಯಾಗಿದೆ ಎಂದಿದ್ದಾರೆ.

  • ಪ್ರಮುಖವಾಗಿ ರಾಜ್ಯದಲ್ಲಿ 2025ರ ಮೇ ಮಾಹೆಗೆ ವಾಡಿಕೆಯಾಗಿ 74 ಮಿ.ಮೀ ಮಳೆಯಾಗಬೇಕಿದ್ದು, ವಾಸ್ತವಿಕ 219 ಮಿ.ಮೀ ಮಳೆಯಾಗಿದ್ದು ಸರಾಸರಿ ವಾಡಿಕೆ ಮಳೆಗೆ ಹೋಲಿಸಿದಾಗ ಶೇ.197ರಷ್ಟು ಅತ್ಯಧಿಕ ಮಳೆಯಾಗಿದೆ.
  • 2025ರ ಪೂರ್ವ ಮುಂಗಾರು (1ನೇ ಮಾರ್ಚ್‌ ರಿಂದ 31ನೇ ಮೇ) ಅವಧಿಯಲ್ಲಿ ವಾಡಿಕೆಯಾಗಿ 115ಮಿ.ಮೀ ಮಳೆಯಾಗಬೇಕಿದ್ದು, ವಾಸ್ತವಿಕ 286 ಮಿ.ಮೀ ಮಳೆಯಾಗಿದ್ದು, ಸರಾಸರಿ ವಾಡಿಕೆ ಮಳೆಗೆ ಹೋಲಿಸಿದಾಗ ಶೇ.149ರಷ್ಟು ಅತ್ಯಧಿಕ ಮಳೆಯಾಗಿದೆ.
  • ಒಟ್ಟಾರೆ, 2025ರ ಪೂರ್ವ ಮುಂಗಾರು (1ನೇ ಮಾರ್ಚ್‌ ರಿಂದ 31ನೇ ಮೇ) ಅವಧಿಯಲ್ಲಿ ರಾಜ್ಯದಾದ್ಯಂತ ಗುಡುಗು-ಸಿಡಿಲು ಮತ್ತು ಬಿರುಗಾಳಿ ಸಹಿತ, ಮಳೆಯಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಧಿಕ ಮತ್ತು ಅಧಿಕ ಮಳೆಯಾಗಿರುವುದು ಕಂಡುಬಂದಿದೆ.
  1. 2025ರ ಮುಂಗಾರು ಮಳೆ ಮುನ್ಸೂಚನೆ :
  • ಭಾರತ ಹವಾಮಾನ ಇಲಾಖೆಯು, ಮೇ 27 ರಂದು ಪ್ರಕಟಿಸಲಾದ ಪರಿಷ್ಕೃತ 2025ರ ನೈರುತ್ಯ ಮುಂಗಾರು ಮಳೆ ಮುನ್ಸೂಚನೆ ಅನ್ವಯ, ರಾಜ್ಯದಾದ್ಯಂತ 2025ರ ನೈರುತ್ಯ ಮುಂಗಾರು (ಜೂನ್-ಸೆಪ್ಟೆಂಬರ್) ಅವಧಿಗೆ ವಾಡಿಕೆಗಿಂತಾ ಅಧಿಕ ಮಳೆಯಾಗುವ ಸಾಧ್ಯತೆಗಳಿದ್ದು, 2025ರ ಜೂನ್ ಮಾಹೆಯಲ್ಲಿ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆ ಮತ್ತು ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿದೆ.
  1. ಜಲಾಶಯಗಳ ನೀರಿನ ಸಂಗ್ರಹಣೆ ಮಟ್ಟ
  • 2025ರ ಮೇ-31ರ ಅನ್ವಯ, ರಾಜ್ಯದ ಪ್ರಮುಖ 14 ಜಲಾಶಯಗಳ ಒಟ್ಟು ಒಟ್ಟು ಸಂಗ್ರಹಣೆ 316.01 ಟಿಎಂಸಿ ಗಳಷ್ಟಿದ್ದು, ಒಟ್ಟು ಒಟ್ಟು ಸಂಗ್ರಹಣೆ ಸಾಮರ್ಥ್ಯದ (895.62 ಟಿಎಂಸಿಯ) ಶೇ.35% ರಷ್ಟಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 95 ಟಿಎಂಸಿ (ಸಾಮರ್ಥ್ಯದ ಸರಿ ಸುಮಾರು 20%) ಸಂಗ್ರಹಣೆ ಇತ್ತು.
  • ಒಟ್ಟಾರೆ ರಾಜ್ಯದ ಪ್ರಮುಖ ಜಲಾಶಯಗಳಿಗೆ 2025ರ ಮೇ 19 ಮತ್ತು ಮೇ 29ರ ನಡುವೆ, ಸುಮಾರು 718,193 ಕ್ಯೂಸೆಕ್‌ಗಳ (05 ಟಿಎಂಸಿಗೆ) ಸಂಚಿತ ಒಳಹರಿವನ್ನು ಕಂಡುಬಂದಿದ್ದು, ಜಲಾನಯನ ಪ್ರದೇಶಗಳಲ್ಲಿನ ವ್ಯಾಪಕ ಮತ್ತು ಭಾರೀ ಮಳೆಯಿಂದಾಗಿ ಮೇ 25ರಿಂದ ಒಳಹರಿವು ಸಾಮಾನ್ಯವಾಗಿ ಹೆಚ್ಚಾಗಿರುವುದು ಕಂಡುಬಂದಿದೆ.
  1. 2025ರ ಮುಂಗಾರು ಹಂಗಾಮು ತುರ್ತು ಪ್ರತಿಕ್ರಿಯೆಗಾಗಿ NDRF ತಂಡದ ಪೂರ್ವ ನಿಯೋಜನೆ:
  • ರಾಜ್ಯದಲ್ಲಿ ಒಟ್ಟು 5 NDRF ತಂಡಗಳಿದ್ದು, ಈ ಪೈಕಿ ಕೊಡಗು, ದಕ್ಷಿಣ ಕನ್ನಡ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ತಲಾ ಒಂದರಂತೆ 4 NDRF ತಂಡಗಳನ್ನು ಈಗಾಗಲೇ ನಿಯೋಜಿಸಲಾಗಿದೆ. ಮತ್ತೊಂದು ತಂಡವು ಬೆಂಗಳೂರಿನಲ್ಲಿದ್ದು, ಇದನ್ನು ಹೊರತು ಪಡಿಸಿ, ಅಗ್ನಿಶಾಮಕ, SDRF ಮತ್ತು ಇನ್ನಿತರ ತುರ್ತು ಸೇವಾ ತಂಡಗಳು ಅಗತ್ಯವಿರುವ ತುರ್ತು ಪ್ರತಿಕ್ರಿಯೆ ಮತ್ತು ರಕ್ಷಣಾ ಕಾರ್ಯಗಳಿಗೆ ಲಭ್ಯವಿರುತ್ತದೆ.
  1. 2025ರ ಏಪ್ರಿಲ್‌ 1 ರಿಂದ 31ನೇ ಮೇ ವರೆಗಿನ ಮಳೆಯಿಂದಾದ ಹಾನಿ ಮತ್ತು ನಷ್ಟದ ವಿವರಗಳು
  • 2025ರ ಏಪ್ರಿಲ್‌ 1 ರಿಂದ 31ನೇ ಮೇ ವರೆಗಿನ ಅವಧಿಯಲ್ಲಿ ರಾಜ್ಯದಲ್ಲಿ ಕಂಡುಬಂದ ಸಿಡಿಲಿನಿಂದ-48, ಮರ ಉರುಳಿ- 9, ಮನೆ ಕುಸಿತ-5, ನೀರಿನಲ್ಲಿ ಮುಳುಗಿ – 4, ಭೂಕುಸಿತ-4,  ವಿದ್ಯುತ್ಪ್ರವಾಹ-1 ಸೇರಿ .ಒಟ್ಟು 71 ಮಾನವ ಜೀವಹಾನಿಯಾಗಿದ್ದು, ಮೃತರ ವಾರಸುದಾರರಿಗೆ ತುರ್ತು ಪರಿಹಾರವಾಗಿ ರೂ.5.00 ಲಕ್ಷದಂತೆ ಪರಿಹಾರ ವಿತರಿಸಲಾಗಿದೆ.
  • 702 ಪ್ರಾಣಿಹಾನಿಗಳು ಸಂಭವಿಸಿದ್ದು, ಈ ಪೈಕಿ 698 ಪ್ರಾಣಿಹಾನಿ ಪ್ರಕರಣಗಳಲ್ಲಿ ಸಂಬಂಧಪಟ್ಟವರಿಗೆ ಈಗಾಗಲೇ ಪರಿಹಾರ ವಿತರಿಸಲಾಗಿದೆ. (ದೊಡ್ಡ ಪ್ರಾಣಿಗಳು-225 ಮತ್ತು ಸಣ್ಣ ಪ್ರಾಣಿಗಳು-477)
  • 2068-ಮನೆ ಹಾನಿಯಾಗಿದ್ದು, ಈ ಪೈಕಿ 1926 ಮನೆಗಳಿಗೆ ಈಗಾಗಲೇ ಪರಿಹಾರ ವಿತರಿಸಲಾಗಿದೆ. (ಸಂಪೂರ್ಣ ಹಾನಿ-75 ಮತ್ತು ಭಾಗಶಃ ಹಾನಿ-1993).
  • ಒಟ್ಟು 15378.32 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, (ಕೃಷಿ ಬೆಳೆ 11915.66 ಹೆಕ್ಟೇರ್ ಮತ್ತು ತೋಟಗಾರಿಕೆ 3462.66 ಹೆಕ್ಟೇರ್) ಬೆಳೆಹಾನಿ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ನಮೂದಿಸಲು ಅವಕಾಶ ಕಲ್ಪಿಸಲಾಗಿದ್ದು, ಪರಿಹಾರ ಪಾವತಿ ಪ್ರಕ್ರಿಯೆ ಪ್ರಗತಿಯಲ್ಲಿದೆ.

BREAKING: ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿಗೆ ಬಿಗ್ ಶಾಕ್: ರಾಜ್ಯ ಸರ್ಕಾರದಿಂದ ರಾಜ್ಯ ಸಚಿವ ಸ್ಥಾನಮಾನ ವಾಪಸ್

BREAKING: ರಾಜ್ಯದಲ್ಲಿಂದು 58 ಜನರಿಗೆ ಕೊರೋನಾ, ಸೋಂಕಿಗೆ ಓರ್ವ ವ್ಯಕ್ತಿ ಬಲಿ | Karnataka Covid19 Update

Share. Facebook Twitter LinkedIn WhatsApp Email

Related Posts

BIG NEWS : ಮಾಲೀಕನ ಹೆಸರಿನಲ್ಲಿರುವ ಎಲ್ಲ ಖಾಸಗಿ ರಸ್ತೆಗಳನ್ನು ‘ಸರ್ಕಾರಿ ರಸ್ತೆಗಳು’ ಎಂದು ಘೋಷಣೆ : ಡಿಸಿಎಂ ಡಿಕೆಶಿ

23/08/2025 5:20 PM1 Min Read

ರಾಜ್ಯದ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : 7.5 ಲಕ್ಷ `ಬಿ-ಖಾತಾ’ಗಳಿಗೆ `ಎ’ ಖಾತಾ ವಿತರಣೆ.!

23/08/2025 5:15 PM1 Min Read

ಎಲ್ಲಾ ಆರೋಪಗಳು ತೊಳೆದು ಹೋದಂತಾಗಿದೆ : ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ!

23/08/2025 4:21 PM1 Min Read
Recent News

BIG NEWS : ಮಾಲೀಕನ ಹೆಸರಿನಲ್ಲಿರುವ ಎಲ್ಲ ಖಾಸಗಿ ರಸ್ತೆಗಳನ್ನು ‘ಸರ್ಕಾರಿ ರಸ್ತೆಗಳು’ ಎಂದು ಘೋಷಣೆ : ಡಿಸಿಎಂ ಡಿಕೆಶಿ

23/08/2025 5:20 PM

ರಾಜ್ಯದ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : 7.5 ಲಕ್ಷ `ಬಿ-ಖಾತಾ’ಗಳಿಗೆ `ಎ’ ಖಾತಾ ವಿತರಣೆ.!

23/08/2025 5:15 PM

ವಿವಾಹಿತ ವ್ಯಕ್ತಿಯೊಂದಿಗೆ ವಯಸ್ಕ ಮಹಿಳೆ ವಾಸಿಸೋದನ್ನ ಯಾವುದೇ ಕಾನೂನು ತಡೆಯೋದಿಲ್ಲ : ಹೈಕೋರ್ಟ್

23/08/2025 5:03 PM

VIDEO : ವೈದ್ಯರ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಬಲಿ ; ಮೃತ ಕಂದನನ್ನ ಬ್ಯಾಗಿನಲ್ಲಿಡಿದು ಜಿಲ್ಲಾಧಿಕಾರಿ ಕಚೇರಿಗೆ ಬಂದ ತಂದೆ

23/08/2025 4:47 PM
State News
KARNATAKA

BIG NEWS : ಮಾಲೀಕನ ಹೆಸರಿನಲ್ಲಿರುವ ಎಲ್ಲ ಖಾಸಗಿ ರಸ್ತೆಗಳನ್ನು ‘ಸರ್ಕಾರಿ ರಸ್ತೆಗಳು’ ಎಂದು ಘೋಷಣೆ : ಡಿಸಿಎಂ ಡಿಕೆಶಿ

By kannadanewsnow5723/08/2025 5:20 PM KARNATAKA 1 Min Read

ಬೆಂಗಳೂರು : ಎಲ್ಲ ಖಾಸಗಿ ರಸ್ತೆಗಳನ್ನು ‘ಸರ್ಕಾರಿ ರಸ್ತೆಗಳು’ ಎಂದು ಘೋಷಣೆ ಮಾಡಲಾಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಧಾನ…

ರಾಜ್ಯದ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : 7.5 ಲಕ್ಷ `ಬಿ-ಖಾತಾ’ಗಳಿಗೆ `ಎ’ ಖಾತಾ ವಿತರಣೆ.!

23/08/2025 5:15 PM

ಎಲ್ಲಾ ಆರೋಪಗಳು ತೊಳೆದು ಹೋದಂತಾಗಿದೆ : ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ!

23/08/2025 4:21 PM

ಮಾಸ್ಕ್ ಮ್ಯಾನ್ ಚಿನ್ನಯ್ಯ ಅರೆಸ್ಟ್ ಆದ ಬೆನ್ನಲ್ಲೆ, ಧರ್ಮಸ್ಥಳ ದೇಗುಲದಿಂದ ಶಿವ ರುದ್ರತಾಂಡವದ ಫೋಟೋ ಅಪ್ಲೋಡ್‌!

23/08/2025 3:55 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.