ದೆಹಲಿ: ಬಿಸಿಸಿಐ ಮಾಜಿ ಕಾರ್ಯದರ್ಶಿ ಮತ್ತು ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ (ಜೆಎಸ್ಸಿಎ) ಮಾಜಿ ಅಧ್ಯಕ್ಷ ಅಮಿತಾಭ್ ಚೌಧರಿ(Amitabh Choudhary) ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಇಂದು ಬೆಳಗ್ಗೆ ಚೌಧರಿ ಅವರಿಗೆ ತೀವ್ರ ಹೃದಯ ಸ್ತಂಭನವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ರಾಂಚಿಯ ಅಶೋಕ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಚೌಧರಿ ಹಠಾತ್ ಕುಸಿದು ಬಿದ್ದರು. ಈ ವೇಳೆ ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
Shri Romen Dutta, President, ACA and Shri Devajit Saikia, Secretary, ACA condole the sudden demise of the former acting Secretary of BCCI, Shri Amitabh Choudhary, who passed away in the early hours of Tuesday morning of a cardiac arrest in Ranchi. pic.twitter.com/9lqJXR9No3
— Assam Cricket Association (@assamcric) August 16, 2022
ನಿವೃತ್ತ ಐಪಿಎಸ್ ಅಧಿಕಾರಿಯಾಗಿದ್ದ ಚೌಧರಿ ಅವರು 2019 ರವರೆಗೆ BCCI ಯ ಹಂಗಾಮಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಅವರು ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗದ ಅಧ್ಯಕ್ಷ ಸ್ಥಾನವನ್ನು ಸಹ ಹೊಂದಿದ್ದರು.
ರಾಂಚಿಯಲ್ಲಿ ಅತ್ಯುತ್ತಮವಾದ ಕ್ರಿಕೆಟ್ ಸ್ಟೇಡಿಯಂಗಳನ್ನು ನಿರ್ಮಿಸುವಲ್ಲಿ ಚೌಧರಿ ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಕೈಗಾರಿಕಾ ಪಟ್ಟಣಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್ ಅನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
BREAKING NEWS : ವಿಮಾನದೊಳಗೆ ಸಿಗರೇಟ್ ಸೇದಿದ ʻಬಾಬಿ ಕಟಾರಿಯಾ ʼ: FIR ದಾಖಲಿಸಿದ ‘ದೆಹಲಿ ಪೊಲೀಸರು’
Breaking news: ಶ್ರೀನಗರದಲ್ಲಿ ಭಯೋತ್ಪಾದಕರ ಗುಂಡಿಗೆ ಮತ್ತೊಬ್ಬ ಹಿಂದೂ ಬಲಿ