Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯದಲ್ಲಿ ಸಂಚಾರ ಪೊಲೀಸ್ ದಂಡಕ್ಕೆ ಮತ್ತೆ 50% ರಿಯಾಯಿತಿ ಪ್ರಕಟ : ಇಂದಿನಿಂದಲೇ ಡಿಸ್ಕೌಂಟ್ ಜಾರಿ.!

21/11/2025 5:48 AM

BIG NEWS : `ಬೆಂಗಳೂರು ಟೆಕ್ ಸಮ್ಮಿಟ್’ನಲ್ಲಿ 2,600 ಕೋಟಿ ರೂ. ಮೌಲ್ಯದ ಒಡಂಬಡಿಕೆ : 3,500 ಉದ್ಯೋಗ ಸೃಷ್ಟಿ

21/11/2025 5:47 AM

BIG NEWS: ‘BMTC ಬಸ್ ನಿರ್ವಾಹಕ’ರೇ ಎಚ್ಚರ: ಇನ್ಮುಂದೆ ‘ಶಕ್ತಿ ಯೋಜನೆ ಟಿಕೆಟ್’ ಅನಧಿಕೃತವಾಗಿ ಕೊಟ್ರೆ ಈ ಕ್ರಮ ಫಿಕ್ಸ್

21/11/2025 5:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಯಾರಿಗಾಗಿ ನೀವು ಸರಕಾರ ನಡೆಸುತ್ತಿದ್ದೀರಿ.? ಸಿದ್ಧರಾಮಯ್ಯನವರೇ ಉತ್ತರಿಸಿ: ಛಲವಾದಿ ನಾರಾಯಣಸ್ವಾಮಿ
KARNATAKA

ಯಾರಿಗಾಗಿ ನೀವು ಸರಕಾರ ನಡೆಸುತ್ತಿದ್ದೀರಿ.? ಸಿದ್ಧರಾಮಯ್ಯನವರೇ ಉತ್ತರಿಸಿ: ಛಲವಾದಿ ನಾರಾಯಣಸ್ವಾಮಿ

By kannadanewsnow0913/09/2024 8:45 PM

ನಾಗಮಂಗಲ: ಅಂಗಡಿಗಳಿಗೆ ಬೆಂಕಿ ಹಾಕಿದವರನ್ನು ಎಳೆದುಕೊಂಡು ಬಂದು ಅವರ ಮನೆ ಹರಾಜು ಹಾಕಿ ನಷ್ಟ ತುಂಬಿಸಿಕೊಡಿ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದರು.

ನಾಗಮಂಗಲದ ಶ್ರೀ ಗಣೇಶೋತ್ಸವದ ಮೆರವಣಿಗೆ ಸಂದರ್ಭದಲ್ಲಿ ಗಲಭೆ ನಡೆದ ಸ್ಥಳಕ್ಕೆ ಇಂದು ಭೇಟಿ ನೀಡಿದ ಅವರು, ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಯಾವನು ಬೆಂಕಿ ಹಾಕಿದ್ದಾನೋ ಅವನನ್ನು ಮೊದಲು ಎಳೆದುಕೊಂಡು ಬನ್ನಿ. ಅವನ ಮನೆಯನ್ನು ಹರಾಜಿಗೆ ಹಾಕಿ ಎಂದು ಅವರು ಮತ್ತೊಮ್ಮೆ ಒತ್ತಾಯಿಸಿದರು. ಜನರ ತೆರಿಗೆ ದುಡ್ಡಿನಲ್ಲಿ ನಾವು ಪುಂಡತನಕ್ಕೆ ಪರಿಹಾರ ಕೊಡಬೇಕಾಗಿಲ್ಲ. ಪುಂಡತನ ಮಾಡಿದವರನ್ನು ಎಳೆದು ತನ್ನಿ ಎಂದು ಸಲಹೆ ನೀಡಿದರು.
ಈ ಗಲಭೆ ಪೂರ್ವನಿಯೋಜಿತ ಎಂಬಂತೆ ಕಾಣುತ್ತಿದೆ. ಕೆಲವರ ಅಂಗಡಿಗಳನ್ನು ಗುರಿ ಮಾಡಿ ಬೆಂಕಿ ಹಾಕಿದ್ದಾರೆ ಎಂದು ಆಕ್ಷೇಪಿಸಿದರು. ಅಂಗಡಿ, ವಾಹನಗಳನ್ನು ಟಾರ್ಗೆಟ್ ಮಾಡುವ ಉದ್ದೇಶ ಏನು ಎಂದು ಪ್ರಶ್ನಿಸಿದರು.

ಕಳೆದ ವರ್ಷವೂ ಕೂಡ ಇಲ್ಲಿಯೇ ಇಂಥ ಸಣ್ಣ ಅಹಿತಕರ ಘಟನೆ ಸಂಭವಿಸಿದ್ದು ಎಲ್ಲರಿಗೂ ಗೊತ್ತಿದೆ. ಸರಕಾರ ಈ ಸಾರಿ ಇದರ ಕಡೆ ಹೆಚ್ಚಿನ ಗಮನ ಕೊಡಬೇಕಿತ್ತು. ಗಣಪತಿ ಮೆರವಣಿಗೆ ಸಂದರ್ಭದಲ್ಲಿ ಸರಿಯಾದ ರಕ್ಷಣೆ ಕೊಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಸರಕಾರ ಯಾಕೆ ಆ ಕ್ರಮ ಕೈಗೊಂಡಿಲ್ಲ ಎಂದು ಕೇಳಿದ ಅವರು, ಪೊಲೀಸರು ಸಾಕಷ್ಟಿದ್ದು, ಅವರನ್ನು ಬೆಳ್ಳೂರು ಕ್ರಾಸ್‍ಗೆ ಕಳುಹಿಸಿದ ಬಗ್ಗೆ ಇಲ್ಲಿ ಕೇಳಿ ತಿಳಿದಿದ್ದೇನೆ. ಇದಕ್ಕೆ ಕಾರಣ ಯಾರು? ಯಾಕೆ? ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಭಾರತದಲ್ಲಿ ಎಲ್ಲ ಧರ್ಮಗಳಿವೆ. ಯಾವ ಧರ್ಮವನ್ನೂ ಇನ್ನೊಂದು ಧರ್ಮ ವಿರೋಧಿಸಬೇಕೆಂದಿಲ್ಲ. ಇವತ್ತು ಹಿಂದೂಗಳು ಮಾಡುವ ಕಾರ್ಯ ಚಟುವಟಿಕೆಗಳಿಗೆ ಮತ್ತೊಬ್ಬರು ವಿರೋಧ ವ್ಯಕ್ತಪಡಿಸಿದರೆ ಅವರನ್ನೂ ವಿರೋಧಿಸುವ ಪರಿಸ್ಥಿತಿ ಮುಂದೆ ಉದ್ಭವವಾಗುತ್ತದೆ ಎಂದು ತಿಳಿಸಿದರು. ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರವನ್ನು ಯಾರು ಕೊಟ್ಟರು, ಈ ರೀತಿಯ ಟಾರ್ಗೆಟ್‍ಗೆ ಕಾರಣ ಯಾರು ಎಂದು ಕೇಳಿದರು. ಇದರ ಪರಿಶೀಲನೆ ಆಗಬೇಕು ಎಂದರು.
ಯಾರು ಗಣೇಶನ ವಿಗ್ರಹ ತಂದಿಟ್ಟರೋ ಅವರು ಎ 1 ಆಗುತ್ತಾರೆ. ಯಾಕೆ? ಯಾಕೆ ಅವರು ಬೆಂಕಿ ಇಟ್ಟರೇ? ಯಾರು ಗಣೇಶನ ಮೆರವಣಿಗೆ ತಗೊಂಡು ಹೋಗುತ್ತಾರೋ ಅವರೆಲ್ಲ ಎ 1, ಎ 2, ಎ 3, ಎ 4 ಆಗಿದ್ದಾರೆ. ಯಾರ್ಯಾರು ಬೆಂಕಿ ಹಾಕಿದ್ದಾರೋ ಅವರೆಲ್ಲ ಕೊನೇ ನಂಬರ್ ಆರೋಪಿ ಆಗುತ್ತಾರಾ ಎಂದು ಕೇಳಿದರು. ಸರಕಾರದ ಉದ್ದೇಶ ಏನಿದೆ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಯಾರಿಗಾಗಿ ನೀವು ಸರಕಾರ ನಡೆಸುತ್ತಿದ್ದೀರಿ? ಸರ್ವರಿಗಾಗಿ ಸರಕಾರವೇ? ಒಂದು ಕೋಮಿಗಾಗಿ ಸರಕಾರವೇ? ಮಾನ್ಯ ಮುಖ್ಯಮಂತ್ರಿಗಳು ಜನರಿಗೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು. ಗಣೇಶ ಮೂರ್ತಿ ಇಡುವುದು ತಪ್ಪೇ? ಅದು ಕಾನೂನುಬಾಹಿರವೇ? ಅಥವಾ ಪೊಲೀಸರಿಗೆ ತಿಳಿಯದೆ, ಯಾರಿಗೂ ಗಮನಕ್ಕೆ ತರದೆ ಮಾಡಿದ್ದಾರಾ? ಎಂದು ಪ್ರಶ್ನೆಗಳ ಸರಣಿಯನ್ನೇ ಅವರು ಮುಂದಿಟ್ಟರು.

ತಪ್ಪು ಯಾರ ಕಡೆಯಿಂದ ಆಗಿದೆ? ಶಿಕ್ಷೆ ಯಾರಿಗೆ? ಗಣೇಶ ಮೆರವಣಿಗೆ ಮಾಡುವವರು ಖುಷಿಯಿಂದ ಮಾಡುತ್ತಿದ್ದಾರೆ. ಬಟ್ಟೆ ಅಂಗಡಿಯವನು ನಿಮಗೆ ಕೊಟ್ಟ ತೊಂದರೆ ಏನು? ಈಗ ಅವರ ಜೀವನೋಪಾಯ ಏನಾಗಬೇಕು? ಸರಕಾರ ಇದನ್ನೆಲ್ಲ ತುಂಬಿಕೊಡಬೇಕು ಎಂದು ಒತ್ತಾಯಿಸಿದರು.

ಇದೇವೇಳೆ ಅವರು ಗಣೇಶೋತ್ಸವದ ಆಯೋಜಕರು ಮತ್ತು ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಭರವಸೆ ನೀಡಿದರು. ಅಮಾಯಕ ಹಿಂದೂಗಳ ಮೇಲೆ ಹೇರಲಾದ ಎಫ್.ಐ.ಆರ್. ಅನ್ನು ರದ್ದು ಮಾಡಬೇಕು; ಗಲಾಟೆ ಮಾಡಿದವರನ್ನು ತಕ್ಷಣ ಬಂಧಿಸಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್, ಮಾಜಿ ಶಾಸಕ ವೈ.ಸಂಪಂಗಿ, ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ ಹಾಗೂ ಬಿಜೆಪಿ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಶಿವಮೊಗ್ಗ: ಸೆ.18ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

ಕೆಲವು ದೇಶಗಳಲ್ಲಿ ಬಳಸಲು ‘ಎಂಪಾಕ್ಸ್’ ವಿರುದ್ಧ ವಿಶ್ವದ ಮೊದಲ ಲಸಿಕೆಗೆ ‘WHO’ ಅನುಮೋದನೆ | Mpox MVA-BN vaccine

BIG NEWS : ಕೇಜ್ರಿವಾಲ್ ಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದ್ದು ಕೇಂದ್ರ ಸರ್ಕಾರಕ್ಕೆ ಕೊಟ್ಟ ತಪರಾಕಿ : ಸಿಎಂ ಸಿದ್ದರಾಮಯ್ಯ

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದಲ್ಲಿ ಸಂಚಾರ ಪೊಲೀಸ್ ದಂಡಕ್ಕೆ ಮತ್ತೆ 50% ರಿಯಾಯಿತಿ ಪ್ರಕಟ : ಇಂದಿನಿಂದಲೇ ಡಿಸ್ಕೌಂಟ್ ಜಾರಿ.!

21/11/2025 5:48 AM2 Mins Read

BIG NEWS : `ಬೆಂಗಳೂರು ಟೆಕ್ ಸಮ್ಮಿಟ್’ನಲ್ಲಿ 2,600 ಕೋಟಿ ರೂ. ಮೌಲ್ಯದ ಒಡಂಬಡಿಕೆ : 3,500 ಉದ್ಯೋಗ ಸೃಷ್ಟಿ

21/11/2025 5:47 AM1 Min Read

BIG NEWS: ‘BMTC ಬಸ್ ನಿರ್ವಾಹಕ’ರೇ ಎಚ್ಚರ: ಇನ್ಮುಂದೆ ‘ಶಕ್ತಿ ಯೋಜನೆ ಟಿಕೆಟ್’ ಅನಧಿಕೃತವಾಗಿ ಕೊಟ್ರೆ ಈ ಕ್ರಮ ಫಿಕ್ಸ್

21/11/2025 5:45 AM2 Mins Read
Recent News

BIG NEWS : ರಾಜ್ಯದಲ್ಲಿ ಸಂಚಾರ ಪೊಲೀಸ್ ದಂಡಕ್ಕೆ ಮತ್ತೆ 50% ರಿಯಾಯಿತಿ ಪ್ರಕಟ : ಇಂದಿನಿಂದಲೇ ಡಿಸ್ಕೌಂಟ್ ಜಾರಿ.!

21/11/2025 5:48 AM

BIG NEWS : `ಬೆಂಗಳೂರು ಟೆಕ್ ಸಮ್ಮಿಟ್’ನಲ್ಲಿ 2,600 ಕೋಟಿ ರೂ. ಮೌಲ್ಯದ ಒಡಂಬಡಿಕೆ : 3,500 ಉದ್ಯೋಗ ಸೃಷ್ಟಿ

21/11/2025 5:47 AM

BIG NEWS: ‘BMTC ಬಸ್ ನಿರ್ವಾಹಕ’ರೇ ಎಚ್ಚರ: ಇನ್ಮುಂದೆ ‘ಶಕ್ತಿ ಯೋಜನೆ ಟಿಕೆಟ್’ ಅನಧಿಕೃತವಾಗಿ ಕೊಟ್ರೆ ಈ ಕ್ರಮ ಫಿಕ್ಸ್

21/11/2025 5:45 AM

GOOD NEWS: ರಾಜ್ಯದ ವಾಹನ ಸವಾರರಿಗೆ ಗುಡ್ ನ್ಯೂಸ್: ಮತ್ತೆ ಶೇ.50ರಷ್ಟು ರಿಯಾಯಿತಿ ದರದಲ್ಲಿ ‘ಟ್ರಾಫಿಕ್ ದಂಡ’ ಪಾವತಿಗೆ ಅವಕಾಶ!

21/11/2025 5:40 AM
State News
KARNATAKA

BIG NEWS : ರಾಜ್ಯದಲ್ಲಿ ಸಂಚಾರ ಪೊಲೀಸ್ ದಂಡಕ್ಕೆ ಮತ್ತೆ 50% ರಿಯಾಯಿತಿ ಪ್ರಕಟ : ಇಂದಿನಿಂದಲೇ ಡಿಸ್ಕೌಂಟ್ ಜಾರಿ.!

By kannadanewsnow5721/11/2025 5:48 AM KARNATAKA 2 Mins Read

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಪೋಲಿಸ್ ಇಲಾಖೆಯವರು ಸಂಚಾರಿ ಇ-ಚಲನ್ ಮೂಲಕ ವಿಧಿಸಿದ ದಂಡದ ಮೊತ್ತದಲ್ಲಿ ರಿಯಾಯಿತಿಯನ್ನು ಮತ್ತೆ ನೀಡಿ ಸರ್ಕಾರ…

BIG NEWS : `ಬೆಂಗಳೂರು ಟೆಕ್ ಸಮ್ಮಿಟ್’ನಲ್ಲಿ 2,600 ಕೋಟಿ ರೂ. ಮೌಲ್ಯದ ಒಡಂಬಡಿಕೆ : 3,500 ಉದ್ಯೋಗ ಸೃಷ್ಟಿ

21/11/2025 5:47 AM

BIG NEWS: ‘BMTC ಬಸ್ ನಿರ್ವಾಹಕ’ರೇ ಎಚ್ಚರ: ಇನ್ಮುಂದೆ ‘ಶಕ್ತಿ ಯೋಜನೆ ಟಿಕೆಟ್’ ಅನಧಿಕೃತವಾಗಿ ಕೊಟ್ರೆ ಈ ಕ್ರಮ ಫಿಕ್ಸ್

21/11/2025 5:45 AM

GOOD NEWS: ರಾಜ್ಯದ ವಾಹನ ಸವಾರರಿಗೆ ಗುಡ್ ನ್ಯೂಸ್: ಮತ್ತೆ ಶೇ.50ರಷ್ಟು ರಿಯಾಯಿತಿ ದರದಲ್ಲಿ ‘ಟ್ರಾಫಿಕ್ ದಂಡ’ ಪಾವತಿಗೆ ಅವಕಾಶ!

21/11/2025 5:40 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.