Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಪೋಷಕರೇ ಎಚ್ಚರ ; ಜೇಡ ಕಚ್ಚಿ ಬಾಲಕಿ ಸಾವು

07/08/2025 10:05 PM

BREAKING ; ಟ್ರಂಪ್ ಸುಂಕ ಹೆಚ್ಚಳದ ನಡುವೆ ಮಾಸ್ಕೋದಲ್ಲಿ ‘ಪುಟಿನ್’ ಭೇಟಿಯಾದ NSA ‘ಅಜಿತ್ ದೋವಲ್’

07/08/2025 9:48 PM

BREAKING ; ಟೀಂ ಇಂಡಿಯಾಗೆ ಬಿಗ್ ಶಾಕ್ ; 2025ರ ಏಷ್ಯಾ ಕಪ್ ಸೇರಿ 2 ಪ್ರಮುಖ ಸರಣಿಗಳಿಂದ ‘ರಿಷಭ್ ಪಂತ್’ ಔಟ್ : ವರದಿ

07/08/2025 9:35 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಈ ಟಿಪ್ಸ್ ಅನುಸರಿಸಿ, ‘ಹೃದಯಾಘಾತ’ದಿಂದ ಪಾರಾಗಿ | Heart Attack
LIFE STYLE

ಈ ಟಿಪ್ಸ್ ಅನುಸರಿಸಿ, ‘ಹೃದಯಾಘಾತ’ದಿಂದ ಪಾರಾಗಿ | Heart Attack

By kannadanewsnow0913/07/2025 3:48 PM

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದು ಜನರಲ್ಲಿ ಆತಂಕ ಮೂಡುವಂತೆ ಮಾಡಿದೆ.ವೇಗವಾಗಿ ಬೆಳೆಯುತ್ತಿರುವ ಆಧುನಿಕ ಬದುಕಿಗೆ ಹೊಂದಿಕೊಳ್ಳುತ್ತಾ, ಎಲ್ಲರ ಜೀವನಶೈಲಿ ಹಾಗೂ ಆಹಾರ ಪದ್ಧತಿ ಬದಲಾಗಿರುವ ಪರಿಣಾಮ ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಸದ್ದಿಲ್ಲದೆ ದುಷ್ಪರಿಣಾಮಿಸುತ್ತಿದೆ. ಹೆಚ್ಚುತ್ತಿರುವ ಹೃದಯಘಾತಕ್ಕೆ ಕಾರಣಗಳನ್ನು ಗಮನಿಸಿದಾಗ ಬಹು ಮುಖ್ಯವಾಗಿ ಮಾದಕ ವಸ್ತುಗಳ ಸೇವನೆಯು( ಸಿಗರೇಟ್,ಗುಟಕ ಇತ್ಯಾದಿ) ಎದ್ದು ತೋರುತ್ತಿದ್ದರು,ಆಧುನಿಕ ಜೀವನ ಶೈಲಿ ಮತ್ತು ಆಹಾರ ಪದ್ಧತಿ ತೆರೆಮರೆಯಲ್ಲಿ ಇರುವ ಕಾರಣಗಳು.

ಆಹಾರ ಪದ್ಧತಿ :

“ಆಹಾರ ಸಂಭವೋ ದೇಹಃ” ಅಂದರೆ ದೇಹವು ಆಹಾರದಿಂದ ರಚನೆಯಾಗಿದೆ. ಹೀಗಿದ್ದಲ್ಲಿ ಪಾಶ್ಚಿಮಾತ್ಯ ಜೀವನಶೈಲಿಯ ಅನುಕರಣೆಯಿಂದ ಅತಿಯಾದ ಜಂಕ್ ಫುಡ್ಗ / ಫಾಸ್ಟಪುಡ್ ಗಳ ಸೇವನೆಯಿಂದ, ಅಪರೂಪವಾಗಿದ್ದಂತಹ ಸಕ್ಕರೆ ಕಾಯಿಲೆ,ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ.

ಕೇವಲ ಆಕರ್ಷಣೆ ಮತ್ತು ರುಚಿಕರವಾದಂತಹ ಈ ಪದಾರ್ಥಗಳು ಕಡಿಮೆ ಪೌಷ್ಟಿಕತೆ, ಅತಿಯಾದ ಕ್ಯಾಲೋರಿಗಳಿಂದ ಕೂಡಿವೆ.ಹಲವಾರು ಸಂಶೋಧನೆಗಳ ಪ್ರಕಾರ ಇಂತಹ ಪದಾರ್ಥಗಳ ಸೇವನೆಯಿಂದ ಅತಿಯಾದ ಕೊಬ್ಬಿನಾಂಶ (hyper cholesterol),ರಕ್ತದೊತ್ತಡ(Hypertension), ಸಕ್ಕರೆ ಖಾಯಿಲೆ( Diabetes),ಅತಿಯಾದ ಬೊಜ್ಜು(obesity) ಹಾಗೂ ಹೃದಯದ ಖಾಯಿಲೆಗಳಿಗೆ(Cardiac Diseases) ಕಾರಣವಾಗಿವೆ. ಇದಲ್ಲದೆ ಆಹಾರ ಸೇವಿಸುವ ಕ್ರಮ, ಆಹಾರದ ಪ್ರಮಾಣ ಮತ್ತು ಸಮಯ ಕೂಡ ಬಹು ಮುಖ್ಯ. ಅತಿಯಾದ ಆಹಾರ ಸೇವಿಸುವುದು(over eating) ಅಥವಾ ಪದೇ ಪದೇ ಆಹಾರ ಸೇವಿಸುವುದರಿಂದ (frequent eating), ಹೃದಯದ ಮೇಲೆ ಒತ್ತಡ ಬೀರುತ್ತದೆ.ಆಹಾರ ಸೇವಿಸಿದ ತಕ್ಷಣವೇ ಅತಿಯಾದ ಕೆಲಸ ಹಾಗೂ ವ್ಯಾಯಾಮವನ್ನು ಮಾಡಕೂಡದು. ಮೊದಲು ಸೇವಿಸಿದ ಆಹಾರ ಜೀರ್ಣವಾದ ನಂತರವೇ ಆಹಾರವನ್ನು ಸೇವಿಸಬೇಕು.

ವ್ಯಾಯಾಮ :

ಅತಿಯಾದ ಬೊಜ್ಜನ್ನು ಕರಗಿಸಲು ಮಾಡುವ ಉಪವಾಸ,ಜಿಮ್ ನಲ್ಲಿ ಮಾಡುವ ಕಸರತ್ತು ಇವುಗಳನ್ನು ಸರಿಯಾದ ಕ್ರಮಗಳಲ್ಲಿ ಮಾಡದಿರುವುದು, ಅತಿಯಾದ ವ್ಯಾಯಾಮ, ಅಥವಾ ವ್ಯಾಯಾಮವನ್ನು ಮಾಡದಿರುವುದರಿಂದ ಹೃದಯ ರೋಗಗಳು ಸಂಭವಿಸಬಹುದು. ಹಾಗಾದರೆ ಎಷ್ಟು ವ್ಯಾಯಾಮ ಮಾಡಬೇಕು? ವ್ಯಕ್ತಿಯು ತನ್ನ ದೇಹಬಲದ ಅರ್ಥದಷ್ಟು (ಅರ್ಥ ಶಕ್ತಿ) ವ್ಯಾಯಾಮವನ್ನು ಮಾಡಬೇಕು.ಅಂದರೆ ಹಣೆಯ ಮೇಲೆ ,ಮೂಗಿನಲ್ಲಿ,ಕಂಕುಳದಲ್ಲಿ ಬೆವರು ಬರುವವರೆಗೆ ಮಾತ್ರ ಹಾಗೂ ದೇಹಕ್ಕೆ ಅತಿಯಾದ ಶ್ರಮವಾಗುವ ಮೊದಲೇ ವ್ಯಾಯಾಮವನ್ನು ನಿಲ್ಲಿಸಬೇಕು.

ನಿದ್ರೆ :

ಮೊಬೈಲ್,ಕಂಪ್ಯೂಟರ್ ಇತ್ಯಾದಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುತ್ತಾ ತಡರಾತ್ರಿಯಾಗಿ ಮಲಗುವುದು, ರಾತ್ರಿ ಜಾಗರಣೆ ಹಾಗೂ ಹಗಲು ನಿದ್ರೆ ಇವುಗಳು ಕೂಡ ಹೃದಯದ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನುಂಟು ಮಾಡುತ್ತವೆ.

ಸಂಶೋಧನೆ ಪ್ರಕಾರ ಕಡಿಮೆ ನಿದ್ರೆಸುವುದರಿಂದ(<7 hours/day),ರಕ್ತದೊತ್ತಡ, ಹೃದಯನಾಳಗಳಲ್ಲಿ ಶೋಥ (inflammation) ಮತ್ತು ಪಾಶ್ವವಾಯು ಸಂಭವಿಸಬಹುದು. ಸತತವಾಗಿ ರಾತ್ರಿ ಸಮಯದಲ್ಲಿ 4 ಗಂಟೆಯಷ್ಟೇ ನಿದ್ರಿಸುವುದು ಅಥವಾ ಸತತವಾಗಿ ಐದು ವರ್ಷಗಳ ಕಾಲದವರೆಗೆ ಆನಿಮಯತವಾದ(irregular) ಮಲಗುವ ಸಮಯ ಮತ್ತು ಏಳುವ ಸಮಯದಿಂದ,ಹೃದಯದ ರೋಗಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚು. ಇದಲ್ಲದೆ ಒಂದು ಗಂಟೆಗಳ ಕಾಲ ಅಥವಾ ಅದಕ್ಕಿಂತ ಹೆಚ್ಚು ಸಮಯ ಹಗಲು ನಿದ್ರೆಯಿಂದಲೂ ಕೂಡ ಇಂತಹ ತೊಂದರೆಗಳು ಉಂಟಾಗಬಹುದು.

ಧೂಮಪಾನ ಮತ್ತು ತಂಬಾಕು (ಬೀಡಿ, ಸಿಗರೇಟ್, ಗುಟ್ಕಾ)

ದಿನ ಕಳೆದಂತೆ ಮಾದಕ ದ್ರವ್ಯಗಳ ಸೇವನೆ ವೈಪರಿತ್ಯವಾಗಿದೆ.ಅದರಲ್ಲೂ ಯುವಕರು ಇವುಗಳಿಗೆ ಹೆಚ್ಚು ಆಕರ್ಷಿತಗೊಂಡಿದ್ದಾರೆ. ಈ ಪದಾರ್ಥಗಳಲ್ಲಿ ಇರುವ ರಾಸಾಯನಿಕಗಳು ರಕ್ತನಾಳದಲ್ಲಿರುವ ಒಳಪದರವನ್ನು ಹಾನಿಮಾಡುತ್ತವೆ. ಹಾನಿಯಾದ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ರಕ್ತನಾಳಗಳು ಕ್ರಮೇಣ ಬ್ಲಾಕ್ ಆಗುತ್ತವೆ.

ಮಾನಸಿಕ ಆರೋಗ್ಯ:

ಕೇವಲ ಆಹಾರ ,ಜೀವನ ಶೈಲಿಯಲ್ಲದೆೇ ಮಾನಸಿಕ ಸ್ಥಿತಿಯು ಕೂಡ ಹೃದಯದ ಆರೋಗ್ಯದ ಮೇಲೆ ಪರಿಣಮಿಸುತ್ತದೆ. ಅತಿಯಾದ ಚಿಂತೆ, ಭಯ ಹಾಗೂ ಮಾನಸಿಕ ಒತ್ತಡ ಹೊಂದಿರುವ ಮನುಷ್ಯರಲ್ಲಿ ಶೇಕಡ 50 % ರಿಂದ 70 % ಹೃದಯ ಖಾಯಿಲೆಗಳು ಸಂಭವಿಸುವ ಸಾಧ್ಯತೆ ಹೆಚ್ಚು.

ಇವುಗಳಲ್ಲದೇ ಈಗಾಗಲೇ ಸಕ್ಕರೆಖಾಯಿಲೆ, ರಕ್ತದೊತ್ತಡ, ಅತಿಯಾದ ಬೊಜ್ಜು ಮುಂತಾದವುಗಳಿಂದ ಬಳಲುತ್ತಿರವವರಲ್ಲಿಯು ಕೂಡ ಹೃದಯದ ಸಮಸ್ಯೆಗಳು ಬರುವ ಸಾದ್ಯತೆ ಹೆಚ್ಚಾಗಿರುವುದರಿಂದ ನಿಯಮಿತ ಕಾಲಕ್ಕೆ ವೈದ್ಯರ ಸಲಹೆ ಹಾಗೂ ಸೂಚನೆಯಂತೆ ಔಷಧಿಗಳನ್ನು ತೆಗೆದುಕೊಳ್ಳಿ.

ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಂಡರೆ, ನಿಮ್ಮ ಹೃದಯದ ಆರೋಗ್ಯ ನಿಮ್ಮ ಕೈಯಲ್ಲಿ.

ದೈನಂದಿನ ಆರೋಗ್ಯದ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಲು 8660885793 ಗೆ ಮೇಸೆಜ್ ಮಾಡಿ.

ಲೇಖಕರು: ಡಾ. ಪ್ರವೀಣ್ ಕುಮಾರ್ BAMS, MD, ಆಯುರ್ವೇದ ವೈದ್ಯರು.

ನೀವು SSLC ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಪಡೆದಿದ್ದೀರಾ? ಈಗಲೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ

Share. Facebook Twitter LinkedIn WhatsApp Email

Related Posts

SHOCKING : ಪೋಷಕರೇ ಎಚ್ಚರ ; ಜೇಡ ಕಚ್ಚಿ ಬಾಲಕಿ ಸಾವು

07/08/2025 10:05 PM1 Min Read
Are children not reading attentively and actively? Here are some tips to follow

ನಿಮ್ಮ ಮಕ್ಕಳು ಗಮನವಿಟ್ಟು ಮತ್ತು ಸಕ್ರಿಯವಾಗಿ ಓದುತ್ತಿಲ್ಲವೇ? ಅನುಸರಿಸಲು ಕೆಲವು ಸಲಹೆಗಳು ಇಲ್ಲಿವೆ..!

07/08/2025 12:00 PM1 Min Read
Which is better for dinner, chapati or rice

ರಾತ್ರಿ ಊಟಕ್ಕೆ ಚಪಾತಿ, ಅನ್ನ ಇದರಲ್ಲಿ ಯಾವುದು ಉತ್ತಮ? ಇಲ್ಲಿದೆ ಉತ್ತಮ ಮಾಹಿತಿ..!

07/08/2025 11:00 AM1 Min Read
Recent News

SHOCKING : ಪೋಷಕರೇ ಎಚ್ಚರ ; ಜೇಡ ಕಚ್ಚಿ ಬಾಲಕಿ ಸಾವು

07/08/2025 10:05 PM

BREAKING ; ಟ್ರಂಪ್ ಸುಂಕ ಹೆಚ್ಚಳದ ನಡುವೆ ಮಾಸ್ಕೋದಲ್ಲಿ ‘ಪುಟಿನ್’ ಭೇಟಿಯಾದ NSA ‘ಅಜಿತ್ ದೋವಲ್’

07/08/2025 9:48 PM

BREAKING ; ಟೀಂ ಇಂಡಿಯಾಗೆ ಬಿಗ್ ಶಾಕ್ ; 2025ರ ಏಷ್ಯಾ ಕಪ್ ಸೇರಿ 2 ಪ್ರಮುಖ ಸರಣಿಗಳಿಂದ ‘ರಿಷಭ್ ಪಂತ್’ ಔಟ್ : ವರದಿ

07/08/2025 9:35 PM

BREAKING: ಎಂಬಿಎ/ಎಂಸಿಎ ಕೋರ್ಸ್ ಪ್ರವೇಶಕ್ಕೆ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ KEA

07/08/2025 9:21 PM
State News
KARNATAKA

BREAKING: ಎಂಬಿಎ/ಎಂಸಿಎ ಕೋರ್ಸ್ ಪ್ರವೇಶಕ್ಕೆ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ KEA

By kannadanewsnow0907/08/2025 9:21 PM KARNATAKA 2 Mins Read

ಬೆಂಗಳೂರು: ಎಂಬಿಎ/ಎಂಸಿಎ ಕೋರ್ಸ್ ಗಳ ಪ್ರವೇಶ ಸಲುವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪಿಜಿಸಿಇಟಿ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಗುರುವಾರ ಪ್ರಕಟಿಸಲಾಗಿದೆ.…

ವರ ಮಹಾಲಕ್ಷ್ಮಿ ಹಬ್ಬದ ದಿನ ಎಚ್ಚರ ವಹಿಸಿ: ಮದ್ದೂರು ಪೋಲೀಸರ ಮನವಿ

07/08/2025 8:19 PM

‘ಮದ್ದೂರಿನ ಜನತೆ’ಗೆ ವರ ಮಹಾಲಕ್ಷ್ಮಿ ಹಬ್ಬದ ಗಿಫ್ಟ್ ಕೊಟ್ಟ ‘ರಾಜ್ಯ ಸರ್ಕಾರ’

07/08/2025 8:16 PM

ಚಾಲಕ ಆತ್ಮಹತ್ಯೆ ಪ್ರಕರಣ: ಸಂಸದ ಸುಧಾಕರ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು

07/08/2025 7:45 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.