ಬೆಂಗಳೂರು: ಪ್ರತಿಷ್ಠಿತ ಪಬ್ ಒಂದರಲ್ಲಿ ಕಿರುತೆರೆ ನಟ ಸುನಾಮಿ ಕಿಟ್ಟಿ ಹಾಗೂ ಆತನ ಗೆಳೆಯರು ಕುಡಿದು ಗಲಾಟೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಕಿರುತೆರೆ ನಟ ಸುನಾಮಿ ಕಿಟ್ಟಿ ಹಾಗೂ ಆತನ ಗೆಳೆಯನ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕಿರುತೆರೆಯ ಮೂಲಕ ನಟನಾಗಿ ಗುರ್ತಿಸಿಕೊಂಡಿರುವಂತ ಸುನಾಮಿ ಕಿಟ್ಟೆ ಹಾಗೂ ಆತನ ಗೆಳೆಯ ಚೇತನ್ ಗೌಡ ಎಂಬುವರು, ಜು.24ರಂದು ಪ್ರತಿಷ್ಠಿತ ಪಬ್ ಒಂದರಲ್ಲಿ ಕುಡಿದು ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಕೃಷ್ಣ ಮತ್ತು ಪ್ರಶಾಂತ್ ಎಂಬುವರ ಜೊತೆಗೆ ಜಗಳ ಮಾಡಿಕೊಂಡಿರುವಂತ ಅವರು, ಪ್ರಶಾಂತ್ ಎಂಬುವರ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ.

BREAKING NEWS : ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ : ಸರ್ಕಾರಿ ಬಸ್ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು

ಇದೀಗ ಈ ಗಲಾಟೆ ಸಂಬಂಧ ಪ್ರಶಾಂತ್ ಎಂಬುವರು ಕಿರುತೆರೆ ನಟ ಸುನಾಮಿ ಕಿಟ್ಟಿ ಹಾಗೂ ಆತನ ಸ್ನೇಹಿತನ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದಾರೆ. ಪ್ರಶಾಂತ್ ದೂರಿಗೆ ಪ್ರತಿಯಾಗಿ ಸುನಾಮಿ ಕಿಟ್ಟಿ ಕೂಡ ದೂರು ನೀಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವಂತ ಕಿರುತೆರೆ ನಟ ಸುನಾಮಿ ಕಿಟ್ಟಿ, ಪಬ್ ನಲ್ಲಿ ಆಗಿರೋ ಗಲಾಟೆಗೂ, ನನಗೂ ಯಾವುದೇ ಸಂಬಂಧವಿಲ್ಲ. ಚೇತನ್ ಹಾಗೂ ಪ್ರಶಾಂತ್ ಗಲಾಟೆ ಮಾಡಿ, ನನ್ನ ಹೆಸರು ಉಲ್ಲೇಖಿಸಿದ್ದಾರೆ ಎಂದು ಹೇಳಿದ್ದಾರೆ.

ತನ್ನ ಮಕ್ಕಳಿಗೆ ಆಟವಾಡಲು ʻಫ್ಲೇಮ್‌ಥ್ರೋವರ್ʼ ಆವಿಷ್ಕರಿಸಿದ ತಂದೆ!… Video

ಇನ್ನೂ ಜುಲೈ.24ರಂದು ಗಲಾಟೆ ನಡೆದ ವೇಳೆಯಲ್ಲಿ ನಾನು ಪಬ್ ನಲ್ಲಿ ಇದ್ದೆ. ಅದೇ ಕಾರಣಕ್ಕಾಗಿ ನನ್ನ ವಿರುದ್ಧವೂ ದೂರು ನೀಡಲಾಗಿತ್ತು. ಆಗ ಠಾಣೆಗೆ ತೆರಳಿ, ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಸ್ಟೇಷನ್ ಬೇಲ್ ಪಡೆದುಕೊಂಡಿರೋದಾಗಿ ಸ್ಪಷ್ಟ ಪಡಿಸಿದ್ದಾರೆ.

Share.
Exit mobile version