ಮಂಡ್ಯ : ಅರಣ್ಯ ಸಿಬ್ಬಂದಿಗೆ ಕ್ಲಾಸ್ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಹಿನ್ನೆಲೆ ಮಂಡ್ಯದ ನಾಗಮಂಗಲದ ಶಾಸಕ ಸುರೇಶ್ಗೌಡ ಸೇರಿ 10 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಹಾಲ್ತಿ ಗ್ರಾಮದಲ್ಲಿ ಜಮೀನು ವಿಚಾರಕ್ಕೆ ರೈತರು , ಅರಣು ಸಿಬ್ಬಂದಿ ಗಲಾಟೆ ನಡೆಸಿದ್ದಾರೆ. ಈ ವೇಳೆ ಅರಣ್ಯ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಇದಕ್ಕೆ ಶಾಸಕ ಶಾಸಕ ಸುರೇಶ್ಗೌಡ ಅರಣ್ಯ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಅವಾಜ್ ಹಾಕಿದ್ದಾನೆ.
ಏನ್ ಆಟ ಆಡ್ತಿದ್ದೀಯಾ ನೀನು, ನಿಮ್ಮಪ್ಪನ ಆಸ್ತಿ ಅನ್ಕೊಬಿಟ್ಟಿದ್ದೀಯಾ ಇದೆಲ್ಲಾ? ಏನ್ ಅನ್ಕೊಂಡಿದ್ದಿಯಾ? ನಗೆ ಗನ್ ತಗೊಂಡು ,ಶೂಟ್ ಮಾಡೋದಕ್ಕೆ ಯಾರ್ ಹೇಳಿದ್ದು, ಏನ್ ಅನ್ಕೊಂಡಿದ್ದೀಯಾ ನಿನಗೆ ಯಾರ್ ಪರ್ಮಿಷನ್ ಕೊಟ್ಟಿದ್ದು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇಲೆ ಶಾಸಕ ಸುರೇಶ್ಗೌಡಸೇರಿ 10 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.