Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ತಾಂತ್ರಿಕ ದೋಷದಿಂದಾಗಿ ಏರ್ ಇಂಡಿಯಾದ ಮತ್ತೊಂದು ವಿಮಾನ ಟೇಕ್ ಆಫ್ ರದ್ದು | Air India

23/08/2025 12:25 PM

BREAKING: 2,000 ಕೋಟಿ ರೂ.ಗಳ ಬ್ಯಾಂಕ್ ವಂಚನೆ ಪ್ರಕರಣ: ಅನಿಲ್ ಅಂಬಾನಿ RCOM ವಿರುದ್ಧ CBI ಪ್ರಕರಣ ದಾಖಲು

23/08/2025 12:02 PM

BREAKING : ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : ತಿಮರೋಡಿ, ಮಟ್ಟಣ್ಣನವರ್ ನಿಂದ 2 ಲಕ್ಷ ಹಣ ಪಡೆದಿದ್ದೇನೆ ಎಂದ ಚಿನ್ನಯ್ಯ!

23/08/2025 12:01 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅನುದಾನಿತ ಶಾಲೆಗಳ ಖಾಲಿ ಹುದ್ದೆ ಭರ್ತಿಗೆ ಚುರುಕು: ಸಚಿವ ಮಧು ಬಂಗಾರಪ್ಪ
KARNATAKA

ಅನುದಾನಿತ ಶಾಲೆಗಳ ಖಾಲಿ ಹುದ್ದೆ ಭರ್ತಿಗೆ ಚುರುಕು: ಸಚಿವ ಮಧು ಬಂಗಾರಪ್ಪ

By kannadanewsnow0931/01/2025 3:37 PM

ಬೆಂಗಳೂರು: ರಾಜ್ಯದ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವಂತ ಶಿಕ್ಷಕರ ಹುದ್ದೆ ಭರ್ತಿ ಪ್ರಕ್ರಿಯೆ ಚಾಲನೆಯಲ್ಲಿದೆ. ಈ ಪ್ರಕ್ರಿಯೆಯಲ್ಲಿ ಉಂಟಾಗಿರುವಂತ ತಾಂತ್ರಿಂಕ ಸಮಸ್ಯೆ ಬಗೆ ಹರಿಸಿ, ಚುರುಕುಗೊಳಿಸುವುದಾಗಿ ಶಿಕ್ಷಣ ಸಚಿವ ಮಧು ಎಸ್ ಬಂಗಾರಪ್ಪ ಭರವಸೆ ನೀಡಿದ್ದಾರೆ.

ಈ ಸಂಬಂಧ ಕರ್ನಾಟಕ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ, ಅನುದಾನ ರಹಿತ ಶಿಕ್ಷಕರ ಸಂಘಟನೆಯ ಅಧ್ಯಕ್ಷರು, ಸದಸ್ಯರು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿ ಮನವಿ ಮಾಡಿದರು. ಈ ಮನವಿಗೆ ಸಕಾರಾತ್ಮಕವಾಗಿಯೇ ಪ್ರತಿಕ್ರಿಯೆ ನೀಡಿರುವಂತ ಅವರು, ಅನುದಾನಿತ ಶಾಲೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಚುರುಕುಗೊಳಿಸುವಂತ ಭರವಸೆ ನೀಡಿದ್ದಾರೆ.

ಶಿಕ್ಷಣಕರ ಸಂಘಟನೆಯ ಮನವಿ ಏನು.?

ಹಿಂದಿನ ಸರ್ಕಾರಗಳ ನಿರ್ಲಕ್ಷಕ್ಕೆ ಒಳಗಾಗಿ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿದ್ದ ಅನುಹಾನಿತ ಶಾಲೆಗಳು, ಮಾನ್ಯವರರಾದ ತಮ್ಮ ಅವಿರತ ಪ್ರಯತ್ನದ ಫಲವಾಗಿ ಮತ್ತೆ ಮರು ಜೀವ ಪಡೆಯುವ ಹಂತದಲ್ಲಿ ಇವೆ. ತಾವು ಐದು ವರ್ಷಗಳ ವರೆಗಿನ (2016-2020ರ ವರೆಗಿನ) ಅನುದಾನಿತ ಶಾಲೆಗಳ ಬೋಧಕ ಹುದ್ದೆಗಳನ್ನು ತುಂಬಿಕೊಳ್ಳಲು ಆರ್ಥಿಕ ಇಲಾಖೆಯಿಂದ ಅನುಮತಿ ಕೊಡಿಸಿ ನಮ್ಮೆಲ್ಲರ ಪಾಲಿಗೆ ಆಶಾಕಿರಣರಾಗಿದ್ದೀರಿ. ತಮಗಿದೋ ನಾವೆಲ್ಲ ನತಮಸ್ತಕರಾಗಿದ್ದೇವೆ. ಕಳೆದ 8-9 ವರ್ಷಗಳಿಂದ ನೇಮಕಾತಿ ನಿರೀಕ್ಷೆಯಲ್ಲಿ, ಸರ್ಕಾರದಿಂದ ಹಾಗೂ ಆಡಳಿತ ಮಂಡಳಿಯಿಂದ ಯಾವುದೇ ರೀತಿಯ ವೇತನವಿಲ್ಲದೆ, ಉಚಿತವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಾ ನೇಮಕಾತಿಗಾಗಿ ಕಾಯುತ್ತಿರುವ ನಾವು ತಮ್ಮಿಂದ ಮರು ಜೀವ ಸಿಕ್ಕಿತು ಅಂದುಕೊಳ್ಳುವಷ್ಟರಲ್ಲಿ ಸರ್ಕಾರ ನೇಮಕಾತಿಗೆ ತಡೆಯನ್ನು ನೀಡಿರುವುದು ವಿಷಾದನೀಯ.

ನಾವೆಲ್ಲ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಸರ್ಕಾರದ ಆರ್ಥಿಕ ಇಲಾಖೆಯು 2016 ರಿಂದ 2020 ರವರೆಗೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ತೆರವಾಗಿರುವ ಹುದ್ದೆಗಳನ್ನು ತುಂಬಿಕೊಳ್ಳಲು ದಿನಾಂಕ 07-08-2024ರಂದು ಅನುಮತಿ ನೀಡಿರುತ್ತದೆ. ಆದರೆ ಐದಾರು ತಿಂಗಳು ಗತಿಸಿದರೂ ಇದುವರಗೆ ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರು, ಹಾಗೂ ಮಾನ್ಯ ಆಯುಕ್ತರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರು ರವರು ಹುದ್ದೆ ತುಂಬಲು ಅನುಮತಿ ನೀಡಿರುವುದಿಲ್ಲ. ಕಾರಣ ಕೇಳಿದಾಗ 1) Online ತಂತ್ರಾಂಶ 2) ‘ಒಳ ಮಿಸಲಾತಿ ವರದಿ ಬರುವ ತನಕ ಯಾವುದೇ ನೇಮಕಾತಿ ಇಲ್ಲ’ ಎಂದು ತಿಳಿಸಿರುತ್ತಾರೆ.

ಇದರಿಂದ ನಾವು ಮತ್ತು ರಾಜ್ಯಾದ್ಯಂತ ನಮ್ಮಂತಹ ಸಾವಿರಾರು ಶಿಕ್ಷಕರು ಆತಂಕದಲ್ಲಿ ಇದ್ದೇವೆ. ನಮ್ಮಲ್ಲಿ ಕೆಲವು ಶಿಕ್ಷಕರ ನೇಮಕಾತಿ ವಯೋಮಿತಿ ಮೀರುತ್ತ ಬಂದಿರುತ್ತದೆ. ವೇತನವಿಲ್ಲದೆ ನಮ್ಮ ಜೀವನ ಕಷ್ಟಕರವಾಗಿದೆ, ದಿನದ ಒಂದು ಹೊತ್ತಿನ ಊಟ ಮಾಡುವಾಗಲೂ ಯೋಚಿಸಿ ತಿನ್ನುವ ಪರಿಸ್ಥಿತಿ ಬಂದಿದೆ. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಕ್ಷಕರು, ತಮ್ಮ ಹಾಗೂ ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಅಸಹಾಯಕರಾಗಿದ್ದೇವೆ.

ಈ ಬೇಡಿಕೆ ಈಡೇರಿಸಲು ಮನವಿ

1) 2016 ರಿಂದ 2020 ವರೆಗೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಬೋಧಕರ ಹುದ್ದೆಗಳನ್ನು ತುಂಬಿಕೊಳ್ಳಲು ಇರುವ ತೊಡಕುಗಳನ್ನು ನಿವಾರಿಸಿ, ಅತ್ಯಂತ ಶೀಘ್ರವಾಗಿ ನೇಮಕಾತಿಗೆ ಅವಕಾಶ ನಿಡಬೇಕು.

2) ಅನುದಾನಿತ ಶಾಲೆಗಳಲ್ಲಿ ನೇಮಕಾತಿ ನಡೆಯದೇ 9ಕ್ಕೂ ಹೆಚ್ಚು ವರ್ಷ ಗತಿಸಿರುವುದರಿಂದ, ಅನೇಕ ಅಭ್ಯರ್ಥಿಗಳು ನೇಮಕಾತಿ ವಯೋಮಿತಿ ಮೀರಿ ಹೋಗಿರುವುದರಿಂದ, ಕೊರೋನ ಸಮಯದಲ್ಲಿ ನೀಡಿರುವಂತೆ ಮತ್ತು ಸಿವಿಲ್ ಸೇವೆಗಳ ‘ಬಿ’ ಮತ್ತು ‘ಸಿ’ ವೃಂದದ ಹುದ್ದೆಗಳ ನೇಮಕಕ್ಕೆ ವಯೋಮಿತಿ ಸಡಿಲಿಕೆ ನೀಡಿದಂತೆ, ಅನುದಾನಿತ ಶಾಲೆಗಳಿಗೂ ಗರಿಷ್ಠ ವಯೋಮಿತಿಯಲ್ಲಿ 3 ವರ್ಷ ಸಡಿಲಿಕೆಯನ್ನು ನೀಡಬೇಕು.

3) ಅನುದಾನಿತ ಶಾಲೆಗಳಲ್ಲಿ ಇಷ್ಟು ವರ್ಷ ಸೇವೆ ಸಲ್ಲಿಸಿರುವ ತಾತ್ಕಾಲಿಕ ಶಿಕ್ಷಕರಿಗೆ ಪ್ರತಿ ವರ್ಷಕ್ಕೆ 2 ಮತ್ತು ಗರಿಷ್ಟ 10%ರಂತೆ ಅವರ ನೇಮಕಾತಿಯಲ್ಲಿ ಕೃಪಾಂಕ ನೀಡಬೇಕು.

4) Online ತಂತ್ರಾಂಶ ಪ್ರಕ್ರಿಯೆಯನ್ನು ಕೈ ಬಿಟ್ಟು ಈ ಒಂದು ಬಾರಿಗೆ ಅನ್ವಯವಾಗುವಂತೆ ಹಿಂದಿನ ನೇಮಕಾತಿ ಪ್ರಕ್ರಿಯೆಯಂತೆ ಮತ್ತು ರೋಸ್ಟರ್ ಬಿಂದುವಿನಂತೆ ನೇಮಕಾತಿಗೆ ಅವಕಾಶವನ್ನು ಕಲ್ಪಿಸಿ ಕೊಡಬೇಕು.

5) ಒಟ್ಟಿನಲ್ಲಿ ಇದುವರೆಗೆ ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ತ್ಯಾಗಮಾಡಿ ದುಡಿದ ಅನುದಾನಿತ ಶಾಲಾ ತಾತ್ಕಾಲಿಕ ಶಿಕ್ಷಕರಿಗೆ ಅನ್ಯಾಯವಾಗದಂತೆ, ನೇಮಕಾತಿಯಲ್ಲಿ ಅವರನ್ನೇ ಪ್ರಥಮ ಆಧ್ಯತೆಯ ಮೇರೆಗೆ ಪರಿಗಣಿಸುವಂತೆ ನಿಯಮಾವಳಿಗಳನ್ನು ರೂಪಿಸಬೇಕು ಎಂದು ಬೇಡಿಕೊಳ್ಳುತ್ತೇವೆ.

ಆದ್ದರಿಂದ ಸನ್ಮಾನ್ಯ ಶಿಕ್ಷಣ ಸಚಿವರಾದ ತಾವು, ದಯಾಮಾಡಿ ಒಳಮೀಸಲಾತಿ ವರದಿ ಬರುವ ತನಕ ವಿಳಂಬ ಮಾಡದೇ ಶಿಕ್ಷಣದ ಮೇಲಿನ ಕಾಳಜಿಯಿಂದ ಮತ್ತು ಆಪತ್ತಿನಲ್ಲಿರುವ ಅನುದಾನ ರಹಿತ ಶಿಕ್ಷಕರಾದ ನಮ್ಮಗಳ ಹಿತದೃಷ್ಠಿಯಿಂದ ಈ ಮೇಲಿನ ನಮ್ಮ ಬೇಡಿಕೆಗಳನ್ನು ಪರಿಗಣಿಸಿ ನೇಮಕಾತಿಯಲ್ಲಿ ಅವಕಾಶ ನೀಡಬೇಕು ಎಂದು ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ. ಈ ಕುರಿತು ಶಿಕ್ಷಣ ಇಲಾಖೆಗೆ ಮತ್ತು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಜಿ ಬಳ್ಳಾರಿ, ನಗರ ಸಭೆಯ ಸದಸ್ಯರಾದ ಪ್ರಸನ್ನ, ಸಂಘದ ಪದಾಧಿಕಾರಿಗಳಾದಂತ ರಾಜೇಶ್, ನೆಲ್ಸನ್, ಶಿವರಾಜ್, ರಜಿನಿ, ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

7 ಸೈಬರ್ ವಂಚಕರು ಅರೆಸ್ಟ್: 9 ಪೋನ್, 11 ಬ್ಯಾಂಕ್ ಪಾಸ್ ಬುಕ್, 6 ಚೆಕ್ ಬುಕ್, 31 ಎಟಿಎಂ ಕಾರ್ಡ್ ಸೀಜ್

BREAKING : ನಟ ದರ್ಶನ್ ಗೆ ರಿಲೀಫ್ : ಫೆ.10 ರವರೆಗೆ ಮೈಸೂರಿನಲ್ಲಿರಲು ಅನುಮತಿ ನೀಡಿ ಕೋರ್ಟ್ ಆದೇಶ.!

Share. Facebook Twitter LinkedIn WhatsApp Email

Related Posts

BREAKING : ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : ತಿಮರೋಡಿ, ಮಟ್ಟಣ್ಣನವರ್ ನಿಂದ 2 ಲಕ್ಷ ಹಣ ಪಡೆದಿದ್ದೇನೆ ಎಂದ ಚಿನ್ನಯ್ಯ!

23/08/2025 12:01 PM1 Min Read

ಗೌರಿ-ಗಣೇಶ ಹಬ್ಬದ ಹಿನ್ನಲೆ: 1,500 ಹೆಚ್ಚುವರಿ ‘KSRTC ಬಸ್’ ಸಂಚಾರದ ವ್ಯವಸ್ಥೆ

23/08/2025 11:55 AM2 Mins Read

ಈ ಒಂದು ದೀಪವನ್ನು ಮನೆಯಲ್ಲಿ ಹಚ್ಚಿ ಪೂಜಿಸುವವರಿಗೆ ಲಕ್ಷ್ಮಿ ದೇವಿಯ ಪರಿಪೂರ್ಣ ಅನುಗ್ರಹದಿಂದ ಸಕಲ ಸಂಪತ್ತು ದೊರೆಯುತ್ತದೆ.

23/08/2025 11:40 AM3 Mins Read
Recent News

ತಾಂತ್ರಿಕ ದೋಷದಿಂದಾಗಿ ಏರ್ ಇಂಡಿಯಾದ ಮತ್ತೊಂದು ವಿಮಾನ ಟೇಕ್ ಆಫ್ ರದ್ದು | Air India

23/08/2025 12:25 PM

BREAKING: 2,000 ಕೋಟಿ ರೂ.ಗಳ ಬ್ಯಾಂಕ್ ವಂಚನೆ ಪ್ರಕರಣ: ಅನಿಲ್ ಅಂಬಾನಿ RCOM ವಿರುದ್ಧ CBI ಪ್ರಕರಣ ದಾಖಲು

23/08/2025 12:02 PM

BREAKING : ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : ತಿಮರೋಡಿ, ಮಟ್ಟಣ್ಣನವರ್ ನಿಂದ 2 ಲಕ್ಷ ಹಣ ಪಡೆದಿದ್ದೇನೆ ಎಂದ ಚಿನ್ನಯ್ಯ!

23/08/2025 12:01 PM

ಗೌರಿ-ಗಣೇಶ ಹಬ್ಬದ ಹಿನ್ನಲೆ: 1,500 ಹೆಚ್ಚುವರಿ ‘KSRTC ಬಸ್’ ಸಂಚಾರದ ವ್ಯವಸ್ಥೆ

23/08/2025 11:55 AM
State News
KARNATAKA

BREAKING : ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : ತಿಮರೋಡಿ, ಮಟ್ಟಣ್ಣನವರ್ ನಿಂದ 2 ಲಕ್ಷ ಹಣ ಪಡೆದಿದ್ದೇನೆ ಎಂದ ಚಿನ್ನಯ್ಯ!

By kannadanewsnow0523/08/2025 12:01 PM KARNATAKA 1 Min Read

ದಕ್ಷಿಣಕನ್ನಡ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಇಂದು ಎಸ್ ಐ ಟಿ ಅಧಿಕಾರಿಗಳು ಬೆಳಿಗ್ಗೆ ಮಾಸ್ಕ್ ಮ್ಯಾನ್ ಚೆನ್ನಯ್ಯನನ್ನು…

ಗೌರಿ-ಗಣೇಶ ಹಬ್ಬದ ಹಿನ್ನಲೆ: 1,500 ಹೆಚ್ಚುವರಿ ‘KSRTC ಬಸ್’ ಸಂಚಾರದ ವ್ಯವಸ್ಥೆ

23/08/2025 11:55 AM

ಈ ಒಂದು ದೀಪವನ್ನು ಮನೆಯಲ್ಲಿ ಹಚ್ಚಿ ಪೂಜಿಸುವವರಿಗೆ ಲಕ್ಷ್ಮಿ ದೇವಿಯ ಪರಿಪೂರ್ಣ ಅನುಗ್ರಹದಿಂದ ಸಕಲ ಸಂಪತ್ತು ದೊರೆಯುತ್ತದೆ.

23/08/2025 11:40 AM

ಆ.24ರಂದು ‘ಪರಮ್ ವಿಹಾರ’ ಕಾರ್ಯಕ್ರಮ: ಲೈವ್ ಸೌಂಡ್ ಪ್ರೊಡಕ್ಷನ್, ಆಡಿಯೊ ಮಿಕ್ಸಿಂಗ್ ಕಲಿಕೆಗಿಲ್ಲಿ ಅವಕಾಶ

23/08/2025 11:35 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.