*ಕಿರಣ್
ತುಮಕೂರು: ತುಮಕೂರು ತಾಲ್ಲೂಕು, ಹೆಬ್ಬೂರಿನ ಹೋಬಳಿ, ಗರಗದಕುಪ್ಪೆ ಗ್ರಾಮದ ಶ್ರೀ ಆಂಜನೇಯಸ್ವಾಮಿಯವರ ಬ್ರಹ್ಮರಥೋತ್ಸವ ಹಾಗೂ ಜಾತ್ರೆಯ ಇದೇ 16-02-2024ನೇ ಶುಕ್ರವಾರ ಅದ್ದೂರಿಯಾಗಿ ನೇರವೇರಲಿದೆ. ತುಮಕೂರು ತಾಲ್ಲೂಕು, ಹೆಬ್ಬೂರಿನ ಹೋಬಳಿ, ಗರಗದಕುಪ್ಪೆ ಗ್ರಾಮದ ಶ್ರೀ ಅಂಜನೇಯಸ್ವಾಮಿಯವರ ಬ್ರಹ್ಮರಥೋತ್ಸವದ ಕಾರ್ಯಕ್ರಮಗಳು ಶ್ರೀ ಶೋಭಕೃತುನಾಮ ಸಂವತ್ಸರದ ಮಾಘಮಾಸ ಶುದ್ಧ ಪಂಚಮಿ ದಿನಾಂಕ : 14-02-2024ನೇ ಬುಧವಾರದಿಂದ ದಿನಾಂಕ : 23-02-2024ನೇ ಶುಕ್ರವಾರದವರೆಗೆ ಶ್ರೀ ಪಾಂಚರಾತ್ರಾಗಮ ರೀತ್ಯ ಶ್ರೀ ಸ್ವಾಮಿಯವರ ಪ್ರೇರಣೆಯಂತೆ ನಡೆಯುತ್ತದೆ ಭಕ್ತ ಮಹಾಶಯರು ಈ ಕಾರ್ಯಕ್ರಮದಲ್ಲಿ ಸಕುಟುಂಬ ಸಮೇತರಾಗಿ ಭಾಗವಹಿಸಿ ಶ್ರೀ ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕಾಗಿ ಊರಿನ ಗ್ರಾಮಸ್ಥರು ಮನವಿ ಮಾಡಿದ್ದಾರೆ.