Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಹನಿ ಸಿಂಗ್, ಬಾದ್‌ಶಾ ಹಾಡಿಗೆ ದೆಹಲಿ ಹೈಕೋರ್ಟ್ ಶಾಕ್: ‘ವಾಲ್ಯೂಮ್ 1’ ಹಾಡನ್ನು ತಕ್ಷಣವೇ ಡಿಲೀಟ್ ಮಾಡಲು ಆದೇಶ!

03/04/2026 6:56 PM

ರೈತರು ನೀರಾವರಿ ಕಛೇರಿ ಮುಂದೆ ಹೋರಾಟ ಮಾಡಲ್ಲ: ಮದ್ದೂರು ಶಾಸಕ ಕೆ.ಎಂ.ಉದಯ್

03/04/2026 6:50 PM

ನೌಕಾಸೇನೆಗೆ ಸೇರ್ಪಡೆಯಾಯ್ತು ‘INS ಅರಿದಮನ್’! ಶತ್ರುಗಳ ನಿದ್ದೆಗೆಡಿಸಿದ ದೇಶದ 3ನೇ ಪರಮಾಣು ಜಲಾಂತರ್ಗಾಮಿ!

03/04/2026 6:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರೈತರು ನೀರಾವರಿ ಕಛೇರಿ ಮುಂದೆ ಹೋರಾಟ ಮಾಡಲ್ಲ: ಮದ್ದೂರು ಶಾಸಕ ಕೆ.ಎಂ.ಉದಯ್
KARNATAKA

ರೈತರು ನೀರಾವರಿ ಕಛೇರಿ ಮುಂದೆ ಹೋರಾಟ ಮಾಡಲ್ಲ: ಮದ್ದೂರು ಶಾಸಕ ಕೆ.ಎಂ.ಉದಯ್

By kannadanewsnow0903/04/2026 6:50 PM

ಮಂಡ್ಯ : ವ್ಯವಸಾಯದ ಉದ್ದೇಶಕ್ಕಾಗಿ ಆಗಾಗ್ಗೆ ನೀರಾವರಿ ಕಛೇರಿಗಳ ಮುಂದೆ ರೈತರು ನಡೆಸುತ್ತಿದ್ದ ಪ್ರತಿಭಟನೆಗಳು ಇನ್ನು ಮುಂದೆ ನಡೆಯುವುದಿಲ್ಲ ಎಂದು ಶಾಸಕ ಕೆ.ಎಂ.ಉದಯ್ ಶುಕ್ರವಾರ ಹೇಳಿದರು.

ಮದ್ದೂರು ತಾಲೂಕಿನ ವೈದ್ಯನಾಥಪುರ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಅಂದಾಜು 50 ಕೋಟಿ ರೂ ವೆಚ್ಚದಲ್ಲಿ ಮದ್ದೂರು ಕೆರೆಯಡಿ ಬರುವ ವೈದ್ಯನಾಥ, ಬೈರನ್ ಹಾಗೂ ಚಾಮನಹಳ್ಳಿ ನಾಲೆಗಳ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ತಲೆದೋರಿರುವ ಪ್ರಮುಖವಾದ ಸಮಸ್ಯೆ ಎಂದರೇ ರೈತರು ನೀರಿಗಾಗಿ ಪ್ರತಿಭಟನೆ ಮಾಡುತ್ತಿರುವುದು. ಹಿಂದಿನ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ನಾಲೆಗಳ ಆಧುನೀಕರಣ ಕಾಮಗಾರಿ ಮಾಡದಿರುವುದೇ ಇಷ್ಟೆಲ್ಲಾ ಸಮಸ್ಯೆಗಳು ಕಾಡುತ್ತಿವೆ. ಹೀಗಾಗಿ ಇನ್ನು ಮುಂದೆ ರೈತರು ಯಾವುದೇ ನೀರಾವರಿ ಕಛೇರಿ, ರಸ್ತೆ ತಡೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡುವ ಸನ್ನಿವೇಶ ಉಂಟಾಗುವುದಿಲ್ಲ. ಇನ್ನೊಂದು ವರ್ಷದಲ್ಲಿ ನಾಲೆಗಳ ಆಧುನೀಕರಣ ಕಾಮಗಾರಿ ಪೂರ್ಣಗೊಂಡು ರೈತರಿಗೆ ಅನುಕೂಲವಾಗಲಿದೆ ಎಂದರು.

ಮದ್ದೂರು ಕೆರೆ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಬರುವ ಕೆಮ್ಮಣ್ಣು ನಾಲಾ, ವೈದ್ಯನಾಥ, ಬೈರನ್ ಹಾಗೂ ಚಾಮನಹಳ್ಳಿ ನಾಲೆಗಳ ಆಧುನೀಕರಣ ಕಾಮಗಾರಿಗೆ ಈಗಾಗಲೇ ಸರ್ಕಾರದಿಂದ 150 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು, ಕೆಮ್ಮಣ್ಣು ನಾಲೆಯನ್ನು 100 ಕೋಟಿ ವೆಚ್ಚದಲ್ಲಿ ಆಧುನೀಕರಣ ಮಾಡುತ್ತಿದ್ದು, ಇನ್ನೆರಡು ತಿಂಗಳಲ್ಲಿ ಪೂರ್ಣಗೊಂಡು ಮುಂಗಾರು ಬೆಳೆ ವೇಳೆಗೆ ರೈತರ ಬೇಸಾಯಕ್ಕೆ ನೀರನ್ನು ಒದಗಿಸಲಾಗುವುದು ಎಂದರು.

ಅದೇ ರೀತಿ ಮದ್ದೂರು ನಗರದಲ್ಲಿ ಹಾದು ಹೋಗುವ ವೈದ್ಯನಾಥ, ಬೈರನ್ ನಾಲೆಗಳು ಕೂಡ ದೊಡ್ಡ ಮೋರಿಗಳಾಗಿ ಮಾರ್ಪಾಡಾಗಿದ್ದು, ಹೀಗಾಗಿ ಅವುಗಳನ್ನು ಸ್ವಚ್ಚ, ಸೌಂದರ್ಯಕರಣವಾಗಿ ಅಭಿವೃದ್ಧಿ ಮಾಡಬೇಕೆಂಬ ಉದ್ದೇಶದಿಂದ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಹೋರಾಟ ಮಾಡಿ 50 ಕೋಟಿ ರೂ ವೆಚ್ಚದಲ್ಲಿ ಚಾಲನೆ ನೀಡಲಾಗಿದೆ. ನಾಲೆಗಳ ಆಧುನಿಕರಣ ಕಾಮಗಾರಿ ನಾಳೆಯಿಂದಲೇ ಪ್ರಾರಂಭವಾಗಲಿದ್ದು, ಈ ಎರಡು ನಾಲೆಗಳು 6 ಕಿ.ಮೀ ವ್ಯಾಪ್ತಿಯ 800 ಎಕರೆಗೂ ಹೆಚ್ಚು ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲಿದೆ. ನಗರದ ವ್ಯಾಪ್ತಿಯಲ್ಲಿ 2 ಕಿ.ಮೀ ಕಾಂಕ್ರೀಟ್ ರಸ್ತೆ, ಕವರ್ ಡೆಕ್ ಮಾಡಲಾಗುವುದು. ಮುಂದಿನ 15 ತಿಂಗಳಲ್ಲಿ ಈ ಮೂರು ನಾಲೆಗಳು ಅಭಿವೃದ್ಧಿ ಹೊಂದಿ ಮುಂದಿನ 50 ವರ್ಷಗಳ ಕಾಲ ರೈತರ ಬೇಸಾಯಕ್ಕೆ ಯಾವುದೇ ತೊಂದರೆಯಾಗದಂತೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ನಾಲೆಗಳ ಆಧುನೀಕರಣ ಮಾಡಿದರೇ ರೈತರಿಗೆ ಯಾವುದೇ ಅನುಕೂಲವಾಗುವುದಿಲ್ಲ. ಹೀಗಾಗಿ ಹತ್ತು ಜನರಿಗೆ ಅನಾನುಕೂಲವಾದರೂ ಸಾವಿರಾರು ಜನರಿಗೆ ಒಳ್ಳೆಯದಾಗಬೇಕೆಂಬ ಉದ್ದೇಶದಿಂದ ಹಾಗೂ ವ್ಯವಸಾಯಕ್ಕೆ ನಿರಂತರವಾಗಿ ನೀರು ಹರಿಸಲು ಒತ್ತುವರಿಯಾಗಿದ್ದ 150 ಎಕರೆ ಮದ್ದೂರು ಕೆರೆಯನ್ನು ತೆರವು ಮಾಡಿ ಈಗಾಗಲೇ ಹೂಳು ತೆಗೆಯುವ ಕೆಲಸವನ್ನು ಮಾಡಲಾಗುತ್ತಿದೆ. ನಾಲೆಗಳ ಆಧುನೀಕರಣದಿಂದ ಕೆಲವೇ ಗಂಟೆಗಳಲ್ಲಿ ನೀರು ರೈತರ ಜಮೀನುಗಳಿಗೆ ಸರಾಗವಾಗಿ ಹರಿದು ಬೇಸಾಯಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಈಗಾಗಲೇ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳಿಗೆ ಸರ್ಕಾರ 800 ಕೋಟಿಗೂ ಹೆಚ್ಚಿನ ಅನುದಾನ ನೀಡಿದ್ದು, ಹಿಂದೆಂದೂ ಕಂಡರಿಯದ ರೀತಿಯಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಮನ್ ಮುಲ್ ನಿರ್ದೇಶಕ ಹರೀಶ್ ಬಾಬು, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಮಮತಾ ಶಂಕರೇಗೌಡ, ನಗರಸಭೆ ಮಾಜಿ ಉಪಾಧ್ಯಕ್ಷ
ಪ್ರಸನ್ನಕುಮಾರ್, ಮಾಜಿ ಸದಸ್ಯೆ ಸರ್ವಮಂಗಳ, ನಾರಾಯಣ್, ಗೋವಿಂದ್, ಮುರಳಿ, ಶಿವರಾಜ್, ಕೆ.ಎಂ.ರವಿ, ಶಿವಚರಣ್, ಗಿರೀಶ್, ಪುನೀತ್, ಕಾವೇರಿ ನೀರಾವರಿ ನಿಗಮದ ಇಇ ನಂಜುಂಡೇಗೌಡ, ಎಇಇ ನಾಗರಾಜ್ ಗುತ್ತಿಗೆದಾರ ಶ್ರೀನಿವಾಸ್, ಸದಾನಂದ್ ಮತ್ತಿತರರು ಇದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

ಅಮೆರಿಕದ ಎಫ್-15ಇ ಯುದ್ಧ ವಿಮಾನ ಪತನ: ಪೈಲಟ್ ಇರಾನ್ ವಶದಲ್ಲಿ?

CBSE ಹೊಸ ಪಠ್ಯಕ್ರಮ 2026-27: 9 ರಿಂದ 12ನೇ ತರಗತಿ ಪದ್ಧತಿಯಲ್ಲಿ ಭಾರಿ ಬದಲಾವಣೆ!

Share. Facebook Twitter LinkedIn WhatsApp Email

Related Posts

SSLC ಪರೀಕ್ಷೆಯಲ್ಲಿ ತೃತೀಯ ಭಾಷೆ ಅಂಕ ಕಡಿತ: ಸರ್ಕಾರದ ನಿರ್ಧಾರ ಮರುಪರಿಶೀಲಿಸುವಂತೆ ರಾಜ್ಯಪಾಲರ ಪತ್ರ

03/04/2026 6:38 PM1 Min Read

ಈ ಬೇರನ್ನು ಹಣದ ಪೆಟ್ಟಿಗೆಯಲ್ಲಿಟ್ಟುಕೊಂಡರೆ ಉಳಿತಾಯ ಹೆಚ್ಚುತ್ತದೆ!

03/04/2026 6:32 PM3 Mins Read

Watch Video: ಈ ಹಂತಗಳನ್ನು ಅನುಸರಿಸಿ, ಕುಳಿತಲ್ಲಿಯೇ ನಿಮ್ಮ ‘ಸ್ವಯಂ ಜನಗಣತಿ’ಯನ್ನು ಮಾಡಿ ಮುಗಿಸಿ | Census of India 2027

03/04/2026 6:12 PM2 Mins Read
Recent News

BREAKING: ಹನಿ ಸಿಂಗ್, ಬಾದ್‌ಶಾ ಹಾಡಿಗೆ ದೆಹಲಿ ಹೈಕೋರ್ಟ್ ಶಾಕ್: ‘ವಾಲ್ಯೂಮ್ 1’ ಹಾಡನ್ನು ತಕ್ಷಣವೇ ಡಿಲೀಟ್ ಮಾಡಲು ಆದೇಶ!

03/04/2026 6:56 PM

ರೈತರು ನೀರಾವರಿ ಕಛೇರಿ ಮುಂದೆ ಹೋರಾಟ ಮಾಡಲ್ಲ: ಮದ್ದೂರು ಶಾಸಕ ಕೆ.ಎಂ.ಉದಯ್

03/04/2026 6:50 PM

ನೌಕಾಸೇನೆಗೆ ಸೇರ್ಪಡೆಯಾಯ್ತು ‘INS ಅರಿದಮನ್’! ಶತ್ರುಗಳ ನಿದ್ದೆಗೆಡಿಸಿದ ದೇಶದ 3ನೇ ಪರಮಾಣು ಜಲಾಂತರ್ಗಾಮಿ!

03/04/2026 6:49 PM

ಅಮೆರಿಕದ ಎಫ್-15ಇ ಯುದ್ಧ ವಿಮಾನ ಪತನ: ಪೈಲಟ್ ಇರಾನ್ ವಶದಲ್ಲಿ?

03/04/2026 6:48 PM
State News
KARNATAKA

ರೈತರು ನೀರಾವರಿ ಕಛೇರಿ ಮುಂದೆ ಹೋರಾಟ ಮಾಡಲ್ಲ: ಮದ್ದೂರು ಶಾಸಕ ಕೆ.ಎಂ.ಉದಯ್

By kannadanewsnow0903/04/2026 6:50 PM KARNATAKA 2 Mins Read

ಮಂಡ್ಯ : ವ್ಯವಸಾಯದ ಉದ್ದೇಶಕ್ಕಾಗಿ ಆಗಾಗ್ಗೆ ನೀರಾವರಿ ಕಛೇರಿಗಳ ಮುಂದೆ ರೈತರು ನಡೆಸುತ್ತಿದ್ದ ಪ್ರತಿಭಟನೆಗಳು ಇನ್ನು ಮುಂದೆ ನಡೆಯುವುದಿಲ್ಲ ಎಂದು…

SSLC ಪರೀಕ್ಷೆಯಲ್ಲಿ ತೃತೀಯ ಭಾಷೆ ಅಂಕ ಕಡಿತ: ಸರ್ಕಾರದ ನಿರ್ಧಾರ ಮರುಪರಿಶೀಲಿಸುವಂತೆ ರಾಜ್ಯಪಾಲರ ಪತ್ರ

03/04/2026 6:38 PM

ಈ ಬೇರನ್ನು ಹಣದ ಪೆಟ್ಟಿಗೆಯಲ್ಲಿಟ್ಟುಕೊಂಡರೆ ಉಳಿತಾಯ ಹೆಚ್ಚುತ್ತದೆ!

03/04/2026 6:32 PM

Watch Video: ಈ ಹಂತಗಳನ್ನು ಅನುಸರಿಸಿ, ಕುಳಿತಲ್ಲಿಯೇ ನಿಮ್ಮ ‘ಸ್ವಯಂ ಜನಗಣತಿ’ಯನ್ನು ಮಾಡಿ ಮುಗಿಸಿ | Census of India 2027

03/04/2026 6:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.