ರಾಯಚೂರು: ಸಾಮನ್ಯವಾಗಿ ಎಲ್ಲರು ಮಂತ್ರಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ಇದೀಗ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ದಂಪತಿ ಸಮೇತ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ.
ದುಡಿದ ಹಣ ಕೂಡಿಡಲು ಸಾಧ್ಯವಾಗುತ್ತಿಲ್ಲವೇ? ಮನೆಯಲ್ಲಿ ವಾಸ್ತುದೋಷವಿರಬಹುದು?ಇಲ್ಲಿದೆ ನೋಡಿ ಪರಿಹಾರ|vasthu dosha
ರಾಯಚೂರು ಜಿಲ್ಲಾ ಪ್ರವಾಸ ಹಿನ್ನೆಲೆ ಆಗಮಿಸಿರುವ ಬಿ.ಸಿ.ನಾಗೇಶ್ ಅವರು ಮಂತ್ರಾಲಯದಲ್ಲಿ ಮಂಚಾಲಮ್ಮ ದೇವಿ ದರ್ಶನ ಪಡೆದ ಬಳಿಕ ಗುರು ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ತೆರಳಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೇ ರಾಯಚೂರಿನಲ್ಲಿ ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.ದೇವದುರ್ಗ ಅರಕೇರಾದಲ್ಲಿ ಆಯೋಜಿಸಿರುವ ಮಳೆ ನೀರು ಕೋಯ್ಲು ಯೋಜನೆ ಉದ್ಘಾಟನೆ ಬಳಿಕ ರಾಯಚೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಿದ್ದಾರೆ.