ರಾಂಚಿ: ಚುನಾವಣಾ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್(Jharkhand CM Hemant Soren) ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಕೇಂದ್ರ ಚುನಾವಣಾ ಆಯೋಗ ಶಿಫಾರಸು ಮಾಡಿದೆ. ಈ ಸಂಬಂಧ ರಾಜ್ಯಪಾಲರಿಗೆ ಚುನಾವಣಾ ಆಯೋಗ ಪತ್ರ ಕಳುಹಿಸಿದೆ.

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಗಣಿಗಾರಿಕೆ ಮಾಡಿರುವ ಆರೋಪವಿದೆ. ಹೀಗಾಗಿ, ಗಣಿಗಾರಿಕೆ ಸೇರಿದಂತೆ ಹಲವು ಬೇರೆ ಬೇರೆ ಅಕ್ರಮ ನಡೆಸಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ನಾಯಕರು ರಾಜ್ಯಪಾಲರಿಗೆ ದೂರು ನೀಡಿದ್ದರು. ಅದರಲ್ಲಿ ಹೇಮಂತ್‌ರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಬಿಜೆಪಿ ಮನವಿ ಮಾಡಿದೆ. ಈ ಪ್ರಕರಣದಲ್ಲಿ ಅರ್ಜಿದಾರರಾಗಿರುವ ವಿರೋಧ ಪಕ್ಷವು, 1951 ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 9 ಎ ಅನ್ನು ಉಲ್ಲಂಘಿಸಿದ್ದಕ್ಕಾಗಿ ಹೇಮಂತ್ ಸೊರೆನ್ ಅವರನ್ನು ಅನರ್ಹಗೊಳಿಸುವಂತೆ ಕೋರಿದೆ.

ಈ ದೂರನ್ನಾಧರಿಸಿ ರಾಜ್ಯಪಾಲರು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಇದನ್ನು ಪರಿಶೀಲಿಸಿದ ಚುನಾವಣಾ ಆಯೋಗವು ಮುಖ್ಯಮಂತ್ರಿಯನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ.

BIGG NEWS : ಈದ್ಗಾ ಮೈದಾನದಲ್ಲಿ ʼಗಣೇಶೋತ್ಸವ ನಡೆಸಲು ಅನುಮತಿಗಾಗಿ ಮನವಿ ಪತ್ರ ಬಂದಿಲ್ಲʼ : ಸಚಿವ ಆರ್‌ ಆಶೋಕ್‌ ಸ್ಪಷ್ಟನೆ

BIGG BREAKING NEWS : ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣ : ಗುಜರಾತ್, ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್

BREAKING NEWS : ಐಸಿಯುನಲ್ಲಿ 15 ದಿನಗಳ ಬಳಿಕ, ಪ್ರಜ್ಞೆಗೆ ಮರಳಿದ ʼಹಾಸ್ಯನಟ ರಾಜು ಶ್ರೀವಾಸ್ತವ ʼ : ಅಧಿಕೃತ ಮಾಹಿತಿ

Share.
Exit mobile version