ನವದೆಹಲಿ: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸಂತಾಪ ಸೂಚಿಸಿದ ಎಲ್ಲಾ ವಿದೇಶಿ ನಾಯಕರು ಮತ್ತು ಸರ್ಕಾರಗಳಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಶುಕ್ರವಾರ ಧನ್ಯವಾದ ಅರ್ಪಿಸಿದ್ದಾರೆ.
“ಅಹ್ಮದಾಬಾದ್ ವಿಮಾನ ಅಪಘಾತದಲ್ಲಿ ಸಂಭವಿಸಿದ ದುರಂತ ಜೀವಹಾನಿಗೆ ಸಂತಾಪ ಸೂಚಿಸಿದ್ದಕ್ಕಾಗಿ ಎಲ್ಲಾ ವಿದೇಶಿ ನಾಯಕರು ಮತ್ತು ಸರ್ಕಾರಗಳಿಗೆ ಧನ್ಯವಾದಗಳು. ನಾವು ಇದನ್ನು ಆಳವಾಗಿ ಪ್ರಶಂಸಿಸುತ್ತೇವೆ.” ಎಂದಿದ್ದಾರೆ.
ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 12 ಸಿಬ್ಬಂದಿ ಸೇರಿದಂತೆ 242 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ವಿಮಾನ ಗುರುವಾರ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾದ ನಂತರ ವಿಶ್ವದಾದ್ಯಂತದ ನಾಯಕರಿಂದ ಸಂತಾಪಗಳು ಹರಿದು ಬರುತ್ತಿವೆ.
ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಥೈಲ್ಯಾಂಡ್ ಪ್ರಧಾನಿ ಪೆಟೊಂಗ್ಟಾರ್ನ್ ಶಿನವಾತ್ರಾ, ಜೆಕ್ ಗಣರಾಜ್ಯದ ಪ್ರಧಾನಿ ಪೀಟರ್ ಫಿಯಾಲಾ, ಫಿನ್ಲ್ಯಾಂಡ್ ಪ್ರಧಾನಿ ಪೆಟೆರಿ ಒರ್ಪೊ, ಯುಎಸ್ ಸ್ಟೇಟ್ ಸೆಕ್ರೆಟರಿ ಮಾರ್ಕೊ ರುಬಿಯೊ, ಜೆಕ್ ಗಣರಾಜ್ಯದ ವಿದೇಶಾಂಗ ವ್ಯವಹಾರಗಳ ಸಚಿವ ಜಾನ್ ಲಿಪಾವ್ಸ್ಕಿ, ಭಾರತದಲ್ಲಿನ ಆಸ್ಟ್ರಿಯಾದ ರಾಯಭಾರಿ ಕ್ಯಾಥರಿನಾ ವೈಸರ್, ತಾಲಿಬಾನ್ ನೇತೃತ್ವದ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಖಹರ್ ಬಾಲ್ಖಿ, ಮುಂಬೈನಲ್ಲಿರುವ ಅಫ್ಘಾನಿಸ್ತಾನದ ಕಾನ್ಸುಲೇಟ್ ಜನರಲ್. ಯುರೋಪಿಯನ್ ಒಕ್ಕೂಟದ ನಿಯೋಗದ ರಾಯಭಾರಿ ಸಂತಾಪ ಸೂಚಿಸಿದರು.