Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Pillows: ನಿಮ್ಮ ದಿಂಬುಗಳನ್ನು ನೀವು ಎಷ್ಟು ಬಾರಿ ಬದಲಾಯಿಸಬೇಕು?

20/10/2025 6:52 AM

BIG NEWS : ರಾಜ್ಯದಲ್ಲಿ ‘ದೀಪಾವಳಿ’ ಹಬ್ಬಕ್ಕೆ ಪಟಾಕಿ ಸಿಡಿಸಲು ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ

20/10/2025 6:51 AM

ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ’ಯಡಿ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು

20/10/2025 6:50 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯ ಸರ್ಕಾರದ ಆದೇಶಕ್ಕೂ ಕ್ಯಾರೆ ಎನ್ನದ ವೈದ್ಯರು: ಮಾತೃ ಇಲಾಖೆಗೆ ತೆರಳಲು ಮೀನಾಮೇಷ
KARNATAKA

BIG NEWS: ರಾಜ್ಯ ಸರ್ಕಾರದ ಆದೇಶಕ್ಕೂ ಕ್ಯಾರೆ ಎನ್ನದ ವೈದ್ಯರು: ಮಾತೃ ಇಲಾಖೆಗೆ ತೆರಳಲು ಮೀನಾಮೇಷ

By kannadanewsnow0919/02/2025 2:57 PM

ಬೆಂಗಳೂರು: ರಾಜ್ಯ ಸರ್ಕಾರ ಆದೇಶ ಹೊರಡಿಸಿ ತಿಂಗಳು ಸಮೀಪಿಸುತ್ತಿದ್ದರೂ ಮಾತೃ ಇಲಾಖೆಗೆ ತೆರಳದೆ ವೈದ್ಯರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಲ್ಲೇ ಇನ್ನೂ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಮೂಲಕ ರಾಜ್ಯ ಸರ್ಕಾರದ ಆದೇಶಕ್ಕೂ ಕ್ಯಾರೆ ಎನ್ನದೇ ಮಾತೃ ಇಲಾಖೆಗೆ ತೆರಳದೆ ಮೀನಾಮೇಷ ಮಾಡುತ್ತಿರೋ ಆರೋಪ ಕೇಳಿ ಬಂದಿದೆ.

ನಿಯೋಜನೆ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಜಿಲ್ಲಾ ಅಂಕಿತಾಧಿಕಾರಿಗಳ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರು, ಕೂಡಲೆ ಜಾರಿಗೆ ಬರುವಂತೆ ಮಾತೃ ಇಲಾಖೆಗೆ ತೆರಳಿ ಮುಂದಿನ ಸ್ಥಳ ನಿಯುಕ್ತಿಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಆಯುಕ್ತರ ಕಚೇರಿಯಲ್ಲಿ ವರದಿ ಮಾಡಿಕೊಳ್ಳಬೇಕು. ಇಲಾಖೆಗೆ ಸಂಬಂಧಿಸಿದ ಯಾವುದೇ ಕರ್ತವ್ಯವನ್ನು ಅಂಕಿತಾಧಿಕಾರಿಗಳು ನಿರ್ವಹಿಸಬಾರದು. ತಪ್ಪಿದ್ದಲ್ಲಿ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಜ.23ರಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆದೇಶ ಹೊರಡಿಸಿತ್ತು. ಆದರೆ, ಮಾತೃ ಇಲಾಖೆಗೆ ತೆರಳದೆ ಹುದ್ದೆಯಲ್ಲಿ ಮುಂದುವರಿದು ಆಡಳಿತಾತ್ಮಕ ಕಾರ್ಯವನ್ನು ಮಾಡುತ್ತಿದ್ದಾರೆ.

ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಹಾರ ಸುರಕ್ಷತೆ ಇಲಾಖೆ ಆಯುಕ್ತರು ವೈದ್ಯರ ನ್ನು ಬಿಡುಗಡೆಗೊಳಿಸಿ ಆದೇಶಿಸಿದ್ದರು. ಆದರೆ, ವೈದ್ಯ ರು ಮಾತೃ ಇಲಾಖೆಗೆ ತೆರಳದ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಮಂಡಳಿ ಕೆಲವರಿಗೆ ಮಾತೃ ಇಲಾಖೆಗೆ ತೆರಳದಂತೆ ಆದೇಶಿಸಿತ್ತು. ಇನ್ನೂ ಕೆಲವರಿಗೆ ನಾಟ್ ಟು ರಿಲೀವ್ ಎಂದು ಆದೇಶ ಹೊರಡಿಸಿದೆ. ಆದರೆ, ವೈದ್ಯರು 2 ಕಡೆಯಿಂದ ಬಿಡುಗಡೆ ನಂತರ ಈ ಇಲಾಖೆಯಲ್ಲಿ ಮುಂದುವರಿಯಲು ಸರ್ಕಾರದ ಪ್ರಧಾ‌ನ ಕಾರ್ಯದರ್ಶಿ ಅವರಿಂದ ಅನುಮತಿ ಪತ್ರ ಪಡೆಯಬೇಕಾಗುತ್ತದೆ. ಅನಮತಿ ಪಡೆದ ನಂತರ ಅಂಕಿತಾಧಿಕಾರಿಗಳ ಹುದ್ದೆಯಲ್ಲಿ ಕಾರ್ಯನಿರ್ವಹಿಸಬೇಕು. ಆದರೆ, ಅನುಮತಿ ಪಡೆಯದೆ ರಾಜ್ಯಾದ್ಯಂತ ಆಹಾರ ಉದ್ದಿಮೆದಾರರಿಗೆ ಪರವಾನಗಿ ನೀಡುತ್ತಾ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ನೀಡಿದ್ದ ಪರವಾನಗಿಗೆ ಎಷ್ಟರಮಟ್ಟಿಗೆ ಮಾನ್ಯತೆ ಇದೆ ಎಂಬ ಪ್ರಶ್ನೆ ಮೂಡುತ್ತಿದೆ.

ವೃತ್ತಿ ಬಾಂಧವರ ಉಳಿಸಿಕೊಳ್ಳಲು ಯತ್ನ:

ಬಿಬಿಎಂಪಿ ಉತ್ತರ ಅಂಕಿತಾಧಿಕಾರಿ ಡಾ. ಜರ್ನಾಧನ್ ಅವರು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಮಾತೃ ಇಲಾಖೆಗೆ ಬಿಡುಗಡೆಗೊಳಿಸಲು ಪತ್ರ ಬರೆದಿದ್ದರು. ಆದರೆ, ಮಾತೃ ಇಲಾಖೆಗೆ ಹಿಂದಿರುಗದೆ ಅಂಕಿತಾಧಿಕಾರಿ ಹುದ್ದೆ ಹಾಗೂ ಉಪ ಆಯುಕ್ತರು(ಆಡಳಿತ) ಪ್ರಭಾರದಲ್ಲಿ ಮುಂದುವರಿದಿದ್ದಾರೆ. ಇವರು ವೃತ್ತಿ ( ವೈದ್ಯರು) ಬಾಂಧವರನ್ನು ಇಲಾಖೆಯಲ್ಲಿಯೇ ಉಳಿಸಿಕೊಳ್ಳುವ ಸಲುವಾಗಿ ನ್ಯಾಯಾಲಯಕ್ಕೆ ಪ್ರಕರಣಗಳ ಕುರಿತು ಕೋರ್ಟ್ ಮತ್ತು ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡದ ಕಾಲಹರಣ ಮಾಡುತ್ತಿದ್ದಾರೆ. ಬೇರೆ ವೃಂದದ ನೌಕರರಿಗೆ ತೊಂದರೆ ಕೊಡಲು ವೈದ್ಯರು ಇಲ್ಲಿಯೇ ಮುಂದುವರಿಯಲು ಹುನ್ನಾರ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು, ಜರ್ನಾಧನ್ ಸೇರಿ ಎಲ್ಲಾ ಅಂಕಿತಧಿಕಾರಿ ಗಳಿಗೆ (ವೈದ್ಯರಿಗೆ )ಪಾಸ್‌‌ವರ್ಡ್ ನೀಡದಂತೆ ಕ್ರಮಕೈಗೊಳ್ಳಬೇಕು. ಡಾ ಜನಾರ್ಧನ್‌‌ನನ್ನು ಉಪ ಆಯುಕ್ತರು(ಆಡಳಿತ )ಪ್ರಭಾರ ರಿಂದ ಕೂಡಲೇ ಬಿಡುಗಡೆಗೊಳಿಸಬೇಕು. ಬಿಬಿಎಂಪಿ ದಕ್ಷಿಣದಲ್ಲಿ ಡಾ.ಸುರೇಶ ಕರ್ತವ್ಯ ನಿರ್ಲಕ್ಷತೆ ಮೇರಗೆ ಅಮಾನತ್ತುಗೊಂಡಿದ್ದು, ಸದರಿ ಪ್ರಕರಣದಲ್ಲಿ ಕೆಎಟಿ ಯಲ್ಲಿ ಇವರ ವಿರುದ್ಧ ತೀರ್ಪು ಬಂದಿದೆ. ಆದರೆ, ಡಾ. ಜನಾರ್ಧನ್ ಕೃಪೆಯಿಂದ ವಾರದ ನಂತರ ಮಾನ್ಯ ನ್ಯಾಯಾಲಯದ ತಡೆಯಜ್ಞೆ ಸಿಗುವವರೆಗೂ ಸರ್ಕಾರಕ್ಕೆ ಮಾಹಿತಿ ಸಲ್ಲಿಸದೆ ಮೀನಾಮೇಷ ಎಣಿಸುತ್ತಿದ್ದಾರೆ. ಇವರನ್ನು ಉಪ ಆಯುಕ್ತರು ಉದ್ದೆಯಿಂದ ಕೂಡಲೇ ಬಿಡುಗಡೆಗೊಳಿಸಿ ಎಲ್ಲ ಪ್ರಕರಣಗಳ ಮಾಹಿತಿಯನ್ನು ಪಡೆದು ಮುಂದಿನ ಕ್ರಮ ತೆಗೆದುಕೊಳ್ಳುವ ಅವಶ್ಯತೆ ಇದೆ.

ಮಾ.1ರಿಂದ ದ್ವಿತೀಯ PUC ಪರೀಕ್ಷೆ ಆರಂಭ: ಪರೀಕ್ಷಾ ಕೇಂದ್ರದ ಸುತ್ತಮುತ್ತ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿ

BREAKING:ಪರ್ವೇಶ್ ವರ್ಮಾ ದೆಹಲಿ ಸಿಎಂ ಆಗ್ತಾರಾ? ಬಿಜೆಪಿ ಅಭ್ಯರ್ಥಿ ಯಾರು | Delhi CM Announcement

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದಲ್ಲಿ ‘ದೀಪಾವಳಿ’ ಹಬ್ಬಕ್ಕೆ ಪಟಾಕಿ ಸಿಡಿಸಲು ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ

20/10/2025 6:51 AM2 Mins Read

ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ’ಯಡಿ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು

20/10/2025 6:50 AM1 Min Read

GOOD NEWS : ಕರ್ನಾಟಕದಲ್ಲಿ `18 ಸಾವಿರ ಶಿಕ್ಷಕರ ನೇಮಕಾತಿ’ : ‘TET ಪರೀಕ್ಷೆ’ಗೆ ಅರ್ಜಿ ಆಹ್ವಾನ | TET Exam 2025

20/10/2025 6:49 AM1 Min Read
Recent News

Pillows: ನಿಮ್ಮ ದಿಂಬುಗಳನ್ನು ನೀವು ಎಷ್ಟು ಬಾರಿ ಬದಲಾಯಿಸಬೇಕು?

20/10/2025 6:52 AM

BIG NEWS : ರಾಜ್ಯದಲ್ಲಿ ‘ದೀಪಾವಳಿ’ ಹಬ್ಬಕ್ಕೆ ಪಟಾಕಿ ಸಿಡಿಸಲು ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ

20/10/2025 6:51 AM

ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ’ಯಡಿ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು

20/10/2025 6:50 AM

ಭಾರತದಲ್ಲಿ ದೀಪಾವಳಿ ಆಚರಣೆಯ ಇತಿಹಾಸವನ್ನು ತಿಳಿಯಿರಿ | Deepavali 2025

20/10/2025 6:49 AM
State News
KARNATAKA

BIG NEWS : ರಾಜ್ಯದಲ್ಲಿ ‘ದೀಪಾವಳಿ’ ಹಬ್ಬಕ್ಕೆ ಪಟಾಕಿ ಸಿಡಿಸಲು ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ

By kannadanewsnow5720/10/2025 6:51 AM KARNATAKA 2 Mins Read

ಬೆಂಗಳೂರು : ಇಂದು ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದ್ದು, ಹಬ್ಬದ ಸಂದರ್ಭದಲ್ಲಿ ಸಿಡಿಸುವ ಪಟಾಕಿಗಳು ಶಬ್ದ ಮಾಲಿನ್ಯ ಮತ್ತು ವಾಯು…

ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ’ಯಡಿ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು

20/10/2025 6:50 AM

GOOD NEWS : ಕರ್ನಾಟಕದಲ್ಲಿ `18 ಸಾವಿರ ಶಿಕ್ಷಕರ ನೇಮಕಾತಿ’ : ‘TET ಪರೀಕ್ಷೆ’ಗೆ ಅರ್ಜಿ ಆಹ್ವಾನ | TET Exam 2025

20/10/2025 6:49 AM

BIG NEWS : ಕೃಷಿ ಹೊಂಡದಲ್ಲಿ ಬಿದ್ದು ಮಕ್ಕಳು ಸಾವು ತಡೆಗೆ ಮಹತ್ವದ ಕ್ರಮ : `ರಕ್ಷಣಾ ಬೇಲಿ’ ನಿರ್ಮಿಸುವಂತೆ ರಾಜ್ಯ ಸರ್ಕಾರ ಆದೇಶ

20/10/2025 6:43 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.