Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರಶಸ್ತಿ ಘೋಷಣೆಗೂ ಮುನ್ನವೇ ಲೀಕ್: ನೊಬೆಲ್ ಸಂಸ್ಥೆಗೆ ಬೇಹುಗಾರಿಕೆಯ ಆತಂಕ!

12/10/2025 10:21 AM

ಒಮ್ಮೆಯಾದರೂ ಈ ಎಳೆನೀರು ದೀಪವನ್ನು ಮನೆಯಲ್ಲಿ ಹಚ್ಚಿ ನೋಡಿ, ನಿಮ್ಮ ಸಾಲವೆಲ್ಲ ತೀರೋದು ಗ್ಯಾರಂಟಿ

12/10/2025 10:19 AM

BREAKING : ಡಿಕೆಶಿ `ಬೆಂಗಳೂರು ನಡಿಗೆ’ ಕಾರ್ಯಕ್ರಮದಲ್ಲಿ ಭಾರೀ ಹೈಡ್ರಾಮಾ : ಆಹ್ವಾನ ನೀಡದ್ದಕ್ಕೆ ವೇದಿಕೆಯಲ್ಲೇ ಮುನಿರತ್ನ ಆಕ್ರೋಶ.!

12/10/2025 10:19 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗುತ್ತಿಗೆ ನವೀಕರಣಕ್ಕೆ ಲಂಚಕ್ಕೆ ಬೇಡಿಕೆಯಿಟ್ಟ ಜವಗೊಂಡನಹಳ್ಳಿ ಆಸ್ಪತ್ರೆ ‘ವೈದ್ಯ ಡಾ.ಶ್ರೀಕೃಷ್ಣ’ ಅಮಾನತು
KARNATAKA

ಗುತ್ತಿಗೆ ನವೀಕರಣಕ್ಕೆ ಲಂಚಕ್ಕೆ ಬೇಡಿಕೆಯಿಟ್ಟ ಜವಗೊಂಡನಹಳ್ಳಿ ಆಸ್ಪತ್ರೆ ‘ವೈದ್ಯ ಡಾ.ಶ್ರೀಕೃಷ್ಣ’ ಅಮಾನತು

By kannadanewsnow0906/09/2025 8:29 PM

ಬೆಂಗಳೂರು: ಸ್ಟಾಫ್ ನರ್ಸ್ ಒಬ್ಬರ ಗುತ್ತಿಗೆ ನವೀಕರಣಕ್ಕೆ ಲಂಚಕ್ಕೆ ಬೇಡಿಕೆಯನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಎಂ.ಜೆ ಕೃಷ್ಣ ಇಟ್ಟಿದ್ದರು. ಈ ಲಂಚಕ್ಕೆ ಬೇಡಿಕೆಯಿಟ್ಟಿದ್ದಂತ ಆಡಿಯೋ ಕೂಡ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ವೈದ್ಯ ಡಾ.ಎಂ.ಜೆ ಕೃಷ್ಣ ಅವರನ್ನು ಅಮಾನತುಗೊಳಿಸಿ ಆರೋಗ್ಯ ಇಲಾಖೆ ಆದೇಶಿಸಿದೆ.

ಇಂದು ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ಶಿಸ್ತು ಪ್ರಾಧಿಕಾರ ಹಾಗೂ ಆಯುಕ್ತರಾದಂತ ಶಿವಕುಮಾರ್ ಕೆ.ಬಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ
ಡಾ|| ಎಂ.ಜೆ. ಶ್ರೀ ಕೃಷ್ಣ ಇವರು ಈ ಹಿಂದೆ ಪ್ರಾ.ಆ.ಕೇಂದ್ರ, ಜೂಲಪಾಳ್ಯ, ಬಾಗೇಪಲ್ಲಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಎಸಗಿದ ಕರ್ತವ್ಯ ಲೋಪ ಮತ್ತು ದುರ್ನಡತೆ ಆರೋಪಕ್ಕೆ ಸಂಬಂಧಿಸಿದ ದೂರಿನ ಮೇರೆಗೆ ಇಲಾಖಾ ವಿಚಾರಣೆ ಬಾಕಿ ಇರಿಸಿ ಪ್ರಾ.ಆ.ಕೇಂದ್ರ, ಜವನಗೊಂಡನಹಳ್ಳಿ, ಹಿರಿಯೂರು ತಾ|| ಚಿತ್ರದುರ್ಗ ಜಿಲ್ಲೆ ಇಲ್ಲಿಗೆ ಸ್ಥಳ ನಿಯುಕ್ತಿಗೊಳಿಸಿ ಆಯುಕ್ತಾಲಯದಿಂದ ಆದೇಶಿಸಲಾಗಿರುತ್ತದೆ. ವೈದ್ಯರು ದಿನಾಂಕ: 21-09-2022 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ, ಜವನಗೊಂಡನಹಳ್ಳಿ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇಲ್ಲಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತಾರೆ.

ಸದರಿ ವೈದ್ಯರು ಪ್ರಾ.ಆ.ಕೇಂದ್ರ, ಜವನಗೊಂಡನಹಳ್ಳಿ, ಇಲ್ಲಿಗೆ ದೈನಂದಿನ ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಹಾಜರಾಗದೇ ಗೈರು ಹಾಜರಾಗುತ್ತಿದ್ದು, ವೈದ್ಯರು ಸಾರ್ವಜನಿಕ ಸೇವೆಯಲ್ಲಿದ್ದು, ಜನ ಪ್ರತಿನಿಧಿಗಳ ಜೊತೆಯಲ್ಲಿ ಗೌರವಯುತವಾಗಿ ವರ್ತಿಸದೇ ಇರುವುದು, ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ಬಾರದೇ ಇರುವುದು, ಪದೇ ಪದೇ ಗೈರು ಹಾಜರಿಯಾಗುತ್ತಿರುವುದು ಹಾಗೂ ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಬೇಜವಾಬ್ದಾರಿತನ ತೋರುತ್ತಿರುವುದು ಕಂಡು ಬಂದಿರುತ್ತದೆ, ಅಲ್ಲದೆ ವೈದ್ಯರ ವಿರುದ್ಧ ದಿನಾಂಕ 30-06-2025 ರಂದು ವಿಜಯ ಕರ್ನಾಟಕ ಕನ್ನಡ ದಿನ ಪತ್ರಿಕೆಯಲ್ಲಿ ವೈದ್ಯರ ಲಂಚ ಬೇಡಿಕೆ ಆಡಿಯೋ ವೈರಲ್ ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟವಾಗಿದ್ದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಬೆಂಗಳೂರು ಇವರು ಮಾನವ ಹಕ್ಕುಗಳ ಸಂರಕ್ಷಣಾ ಅಧಿನಿಯಮ 1983 ಕಲಂ 12 ಅಡಿಯಲ್ಲಿ ಸ್ವಯಂ ಪ್ರೇರಿತವಾಗಿ ದೂರು ಅರ್ಜಿ ದಾಖಲಿಸಿಕೊಂಡಿರುವುದಾಗಿ ಇದರಿಂದ ಸಾರ್ವಜನಿಕರಲ್ಲಿ ಜಿಲ್ಲಾ ಆಡಳಿತದ ಹಾಗೂ ಆರೋಗ್ಯ ಇಲಾಖೆಯ ಕುರಿತು ಸಾರ್ವಜನಿಕರಲ್ಲಿ ಸದಾಭಿಪ್ರಾಯ ಇಲ್ಲದೇ ಇರುವುದು ಕಂಡು ಬಂದಿರುತ್ತದೆ ಎಂದು ಈ ಹಿನ್ನಲೆಯಲ್ಲಿ ವೈದ್ಯರ ಸೇವೆಯು ಈ ಜಿಲ್ಲೆಯಲ್ಲಿ ಅವಶ್ಯಕತೆ ಇಲ್ಲವೆಂದು ಭಾವಿಸಿ ಸದರಿ ವೈದ್ಯರನ್ನು ಪ್ರಾ.ಆ.ಕೇಂದ್ರ, ಜವನಗೊಂಡನಹಳ್ಳಿ, ಹಿರಿಯೂರು ತಾ|| ಚಿತ್ರದುರ್ಗ ಜಿಲ್ಲೆ ಇಲ್ಲಿಯ ಕರ್ತವ್ಯದಿಂದ ದಿನಾಂಕ: 15-07-2025 ರಂದು ಬಿಡುಗಡೆಗೊಳಿಸಲಾಗಿರುತ್ತದೆ ಎಂದು ಉಲ್ಲೇಖ(1)ರಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿದ್ದು, ಆದರೆ ವೈದ್ಯರು ಇದುವರೆವಿಗೂ ಆಯುಕ್ತಾಲಯದಲ್ಲಿ ವರದಿ ಮಾಡಿಕೊಂಡಿರುವುದಿಲ್ಲ.

“ವೈದ್ಯರ ಲಂಚ ಬೇಡಿಕೆ ಆಡಿಯೋ ವೈರಲ್” ಎಂಬ ಶೀರ್ಷಿಕೆಯಡಿಯಲ್ಲಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿರುವ ಪ್ರಕರಣಕ್ಕೆ ಪೂರಕವಾಗಿ, ಲೋಕಾಯುಕ್ತದಿಂದ ಉಲ್ಲೇಖ(2)ರಲ್ಲಿ ಸಲ್ಲಿಸಿರುವ ವರದಿಯಲ್ಲಿ, ವೈದ್ಯರು ಶ್ರೀಮತಿ ಲತಾ ಎಂ ಬಿನ್ ಮೋಹನ್ ಕೃಷ್ಣ, ಸ್ಯಾಫ್ ನರ್ಸ್ (ಗುತ್ತಿಗೆ ನೌಕರರು) ಇವರಿಗೆ Performance Apparaisal Form ಭರ್ತಿ ಮಾಡಿ, ಸಹಿ ಮಾಡಲು ಹಣಕ್ಕಾಗಿ ಬೇಡಿಕೆ ಇಟ್ಟಿರುವ ಆಡಿಯೋ ಸಂಭಾಷಣೆಯಲ್ಲಿನ ಧ್ವನಿಯು ಸದರಿ ವೈದ್ಯರದೇ ಎಂದು ಮೇಲಧಿಕಾರಿಗಳು ದೃಢಪಡಿಸಿರುತ್ತಾರೆ ಎಂದು, ಸದರಿಯವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತಿನಲ್ಲಿಡಲು ಹಾಗೂ ಅವರ ಲೀನ್ ಬದಲಾಯಿಸುವಂತೆ ಕೋರಿರುತ್ತಾರೆ.

ಜಿಲ್ಲಾಧಿಕಾರಿಗಳು, ಚಿತ್ರದುರ್ಗ ಜಿಲ್ಲೆ ಮತ್ತು ಪೊಲೀಸ್ ಮಹಾನಿರೀಕ್ಷಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರಿಂದ ಸಲ್ಲಿಕೆಯಾದ ಪ್ರಸ್ತಾವನೆಯನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 10 (3)ರಡಿ ಕೂಲಂಕುಷವಾಗಿ ಪರಿಶೀಲಿಸಲಾಗಿದೆ.

ವೈದ್ಯರ ವಿರುದ್ಧ ಈಗಾಗಲೇ ಪ್ರಾ.ಆ.ಕೇಂದ್ರ, ಜೂಲಪಾಳ್ಯ, ಬಾಗೇಪಲ್ಲಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಸಗಿದ ಕರ್ತವ್ಯ ಲೋಪ ಮತ್ತು ದುರ್ನಡತೆ ಆರೋಪವು ಮೇಲ್ನೋಟಕ್ಕೆ ಸಾಬೀತಾದುದರಿಂದ ವೈದ್ಯರ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರಿಸಿ ಚಿತ್ರದುರ್ಗ ಜಿಲ್ಲೆಗೆ ವರ್ಗಾಯಿಸಲಾಗಿದ್ದು, ಆದರೆ ವೈದ್ಯರು ಸದರಿ ಜಿಲ್ಲೆಯಲ್ಲಿಯೂ ಸಹ ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳದೆ ಪದೇ-ಪದೇ ಕರ್ತವ್ಯ ಲೋಪಗಳನ್ನು ಎಸಗುತ್ತಿರುವುದಲ್ಲದೆ, ಹಣಕ್ಕಾಗಿ ಬೇಡಿಕೆ ಇಡುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಸದರಿ ಈ ಆರೋಪಗಳ ಕುರಿತಾದ ಪಕರಣಗಳಿಗೆ ಸಂಬಂಧಿಸಿದ ಇಲಾಖಾ ವಿಚಾರಣೆ ಹಾಗೂ ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಗೆ ಅಡ್ಡಿ ಉಂಟುಮಾಡುವ ಅಥವಾ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಹಾಗೂ ಸಾಕ್ಷಿ ಪುರಾವೆಗಳನ್ನು ನಾಶಗೊಳಿಸುವ ಸಾಧ್ಯತೆಗಳಿರುವುದರಿಂದ ಪ್ರಕರಣದ ನಿಷ್ಪಕ್ಷಪಾತವಾದ ತನಿಖೆಗೆ ಸದರಿಯವರನ್ನು ಸೇವೆಯಿಂದ ಅಮಾನತ್ತುಗೊಳಿಸುವುದು ಸೂಕ್ತವಾಗಿರುತ್ತದೆ ಎಂದು ನಿರ್ಣಯಿಸಲಾಗಿದೆ. ಆದುದರಿಂದ ಈ ಕೆಳಕಂಡಂತೆ ಆದೇಶಿಸಿದ್ದಾರೆ.

ಪ್ರಸ್ತಾವನೆಯಲ್ಲಿ ವಿವರಿಸಲಾದ ಕಾರಣಗಳಿಗಾಗಿ ಶಿವಕುಮಾರ್ ಕೆ.ಬಿ., ಭಾ.ಆ.ಸೇ., ಆಯುಕ್ತರು, ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು ಆದ ನಾನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) 1957 ರ ನಿಯಮಗಳ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಡಾ|| ಎಂ.ಜೆ. ಶ್ರೀ ಕೃಷ್ಣ, ಪ್ರಾ.ಆ.ಕೇಂದ್ರ, ಜವನಗೊಂಡನಹಳ್ಳಿ, ಹಿರಿಯೂರು ತಾ|| ಚಿತ್ರದುರ್ಗ ಜಿಲ್ಲೆ ಇವರನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 10 (1) (ಡಿ)ರಡಿ ಈ ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿರುತ್ತೇನೆ. ಸದರಿ ವೈದ್ಯರು ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದ ಕೇಂದ್ರ ಸ್ಥಾನವನ್ನು ಬಿಡತಕ್ಕದಲ್ಲ ಎಂದು ತಿಳಿಸಿದೆ ಹಾಗೂ ಜೀವನಾಂಶ ಭತ್ಯೆಯನ್ನು ಸೆಳೆಯುವ ಸಲುವಾಗಿ ಸದರಿಯವರ ಲೀನ್‌ ಅನ್ನು ಪ್ರಾಥಮಿಕ ಆರೋಗ್ಯ ಕೇಂದ್ರ, ಇಂಗಳಗಿ, ಕುಂದಗೋಳ, ಧಾರವಾಡ ಜಿಲ್ಲೆ ಇಲ್ಲಿಗೆ ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

ಸೆ.22ರಿಂದ ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭ: ಈ ದಾಖಲೆ ರೆಡಿ ಇಟ್ಟುಕೊಟ್ಟಿ

ಸಾಗರ ತಾಲ್ಲೂಕನ್ನು ನೂತನ ಜಿಲ್ಲೆಯಾಗಿ ಮಾಡಿ: ಸಿಎಂ ಸಿದ್ಧರಾಮಯ್ಯಗೆ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ರ

Share. Facebook Twitter LinkedIn WhatsApp Email

Related Posts

ಒಮ್ಮೆಯಾದರೂ ಈ ಎಳೆನೀರು ದೀಪವನ್ನು ಮನೆಯಲ್ಲಿ ಹಚ್ಚಿ ನೋಡಿ, ನಿಮ್ಮ ಸಾಲವೆಲ್ಲ ತೀರೋದು ಗ್ಯಾರಂಟಿ

12/10/2025 10:19 AM3 Mins Read

BREAKING : ಡಿಕೆಶಿ `ಬೆಂಗಳೂರು ನಡಿಗೆ’ ಕಾರ್ಯಕ್ರಮದಲ್ಲಿ ಭಾರೀ ಹೈಡ್ರಾಮಾ : ಆಹ್ವಾನ ನೀಡದ್ದಕ್ಕೆ ವೇದಿಕೆಯಲ್ಲೇ ಮುನಿರತ್ನ ಆಕ್ರೋಶ.!

12/10/2025 10:19 AM1 Min Read

Job Fair: ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ನಾಳೆ ಮದ್ದೂರಲ್ಲಿ ‘ಬೃಹತ್ ಉದ್ಯೋಗ ಮೇಳ’ ಆಯೋಜನೆ

12/10/2025 10:04 AM2 Mins Read
Recent News

ಪ್ರಶಸ್ತಿ ಘೋಷಣೆಗೂ ಮುನ್ನವೇ ಲೀಕ್: ನೊಬೆಲ್ ಸಂಸ್ಥೆಗೆ ಬೇಹುಗಾರಿಕೆಯ ಆತಂಕ!

12/10/2025 10:21 AM

ಒಮ್ಮೆಯಾದರೂ ಈ ಎಳೆನೀರು ದೀಪವನ್ನು ಮನೆಯಲ್ಲಿ ಹಚ್ಚಿ ನೋಡಿ, ನಿಮ್ಮ ಸಾಲವೆಲ್ಲ ತೀರೋದು ಗ್ಯಾರಂಟಿ

12/10/2025 10:19 AM

BREAKING : ಡಿಕೆಶಿ `ಬೆಂಗಳೂರು ನಡಿಗೆ’ ಕಾರ್ಯಕ್ರಮದಲ್ಲಿ ಭಾರೀ ಹೈಡ್ರಾಮಾ : ಆಹ್ವಾನ ನೀಡದ್ದಕ್ಕೆ ವೇದಿಕೆಯಲ್ಲೇ ಮುನಿರತ್ನ ಆಕ್ರೋಶ.!

12/10/2025 10:19 AM

Job Fair: ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ನಾಳೆ ಮದ್ದೂರಲ್ಲಿ ‘ಬೃಹತ್ ಉದ್ಯೋಗ ಮೇಳ’ ಆಯೋಜನೆ

12/10/2025 10:04 AM
State News
KARNATAKA

ಒಮ್ಮೆಯಾದರೂ ಈ ಎಳೆನೀರು ದೀಪವನ್ನು ಮನೆಯಲ್ಲಿ ಹಚ್ಚಿ ನೋಡಿ, ನಿಮ್ಮ ಸಾಲವೆಲ್ಲ ತೀರೋದು ಗ್ಯಾರಂಟಿ

By kannadanewsnow0912/10/2025 10:19 AM KARNATAKA 3 Mins Read

ಪಾದಚಾರಿ ಮಾರ್ಗದಲ್ಲಿ ವಾಸಿಸುವ ವ್ಯಕ್ತಿಯಿಂದ ಹಿಡಿದು ಬಂಗಲೆಯಲ್ಲಿ ವಾಸಿಸುವ ಶ್ರೀಮಂತ ಉದ್ಯಮಿಯವರೆಗೆ ಎಲ್ಲರಿಗೂ ಸಾಲದ ಸಮಸ್ಯೆ ಇದೆ. ಆ ಸಾಲದ…

BREAKING : ಡಿಕೆಶಿ `ಬೆಂಗಳೂರು ನಡಿಗೆ’ ಕಾರ್ಯಕ್ರಮದಲ್ಲಿ ಭಾರೀ ಹೈಡ್ರಾಮಾ : ಆಹ್ವಾನ ನೀಡದ್ದಕ್ಕೆ ವೇದಿಕೆಯಲ್ಲೇ ಮುನಿರತ್ನ ಆಕ್ರೋಶ.!

12/10/2025 10:19 AM

Job Fair: ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ನಾಳೆ ಮದ್ದೂರಲ್ಲಿ ‘ಬೃಹತ್ ಉದ್ಯೋಗ ಮೇಳ’ ಆಯೋಜನೆ

12/10/2025 10:04 AM

SHOCKING : ಶಿರಡಿ-ಅಯೋಧ್ಯೆ ಪ್ರವಾಸ ಮುಗಿಸಿ ಬರುತ್ತಿದ್ದ ಕುಮಟಾದ ವಾಹನದ ಮೇಲೆ ಸಿನಿಮೀಯ ರೀತಿ ದರೋಡೆ ಯತ್ನ!

12/10/2025 9:24 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.