ಕೇರಳ : ಕಾಲು ನೋವು ಎಂದು ಔಷಧಿಗಾಗಿ ವೈದ್ಯರ ಬಳಿ ಬಂದ ದಂಪತಿಗಳಿಗೆ ಅಣಕಿಸುವಂತೆ ಚೀಟಿಯಲ್ಲಿ ಬರೆದಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಈ ಚೀಟಿ ಭಾರೀ ವೈರಲ್ ಆಗಿದೆ
ಮಮ್ಮಿಯಾರ್ ನಿವಾಸಿ (44) ಮತ್ತು ಅಕೆಯ ಪತಿ ಅನಿಲ್ಕುಮಾರ್ ಕಳೆದ ಗುರುವಾರ ತ್ರಿಸ್ಸೂರುನಲ್ಲಿರುವ ದಯಾ ಆಸ್ಪತ್ರೆಯಲ್ಲಿ ನಾಳೀಯ ಶಸ್ತ್ರಚಿಕಿತ್ಸೆ ವಿಭಾಗದ ಡಅ ರಾಯ್ ವಾರ್ಘೀಸ್ ಎಂಬುವರರನ್ನು ಭೇಟಿ ನೀಡಿದ್ದರು.ಪ್ರಿಯಾ ಅವರು ವದಕ್ಕೇಕದ್ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉದ್ಯೋಗಿಯಾಗಿದ್ದಾರೆ. ಕಳೆದ ಎರಡು ವರ್ಷದಿಂಂದ ಅವರು ಕಾಲು ನೋವಿನಿಂದ ಬಳಲುತ್ತಿದ್ದಾರೆ
ರಾಯ್ ವಾರ್ಘೀಸ್ ಎಂಬುವರನ್ನು ಭೇಟಿ ಮಾಡಿದರು. ಪ್ರಿಯಾ ಅವರು ವದಕ್ಕೆಕದ್ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉದ್ಯೋಗಿಯಾಗಿದ್ದಾರೆ. ಕಳೆದ ಎರಡು ವರ್ಷದಿಂದ ಅವರು ಕಾಲು ನೋವಿನಿಂದ ಬಳಲುತ್ತಿದ್ದಾರೆ.
ದಂಪತಿಗೆ ಎಕ್ಸ್ರೇ ವರದಿ ತರುವಂತೆ ಡಾ. ವಾರ್ಘೀಸ್ ಹೇಳಿದರು. ಎಕ್ಸ್ರೇ ವರದಿ ಪಡೆದು ಮರಳಿ ಡಾಕ್ಟರ್ ಬಳಿ ಬಂದಾಗ ಎಕ್ಷ್ರೇ ನೋಡಿ ನಿಮಗೆ ಏನಾದರೂ ಅರ್ಥವಾಯಿತಾ ಎಂದು ಕೇಳಿದ್ದಾರೆ. ಪ್ರಿಯಾ ಅವರು ಕಾಲು ಊದಿಕೊಂಡಿದ್ದರಿಂದ ಮತ್ತೊಬ್ಬ ವೈದ್ಯರನ್ನು ಸಂಪರ್ಕಿಸುವಂತೆ ದಂಪತಿಗೆ ಡಾಕ್ಟರ್ ಹೇಳಿದ್ದಾರೆ.
ಪತ್ನಿಗೆ ನಡೆಯಲು ಆಗುತ್ತಿಲ್ಲ. ತಾತ್ಕಲಿಕ ಪರಿಹಾರಕ್ಕಾಗಿ ಏನಾದರೂ ಔಷಧ ಬರೆದುಕೊಡಿ ಎಂದು ಅನಿಲ್ ಕುಮಾರ್, ಡಾ. ವಾರ್ಘೀಸ್ರನ್ನು ಕೇಳಿಕೊಂಡಿದ್ದಾರೆ. ಈ ವೇಳೆ ಔಷಧ ಬರೆದುಕೊಡುವ ಬದಲು ದಂಪತಿಯನ್ನು ವಾರ್ಘೀಸ್ ಅಣುಕಿಸಿದ್ದಾರೆ.
ಇಷ್ಟೇ ಅಲ್ಲದೆ, ವಾರ್ಘೀಸ್ ಬರೆದುಕೊಟ್ಟ ಔಷಧ ಚೀಟಿಯನ್ನು ತೆಗೆದುಕೊಂಡು ಹೋಗಿ ಮೆಡಿಕಲ್ಗೆ ನೀಡಿದಾಗ, ಅದನ್ನು ಓದಿದ ಮೆಡಿಕಲ್ ಸಿಬ್ಬಂದಿ ದಂಪತಿಯನ್ನು ನೋಡಿ ನಕ್ಕಿದ್ದಾರೆ. ಅಲ್ಲಿಯೂ ದಂಪತಿಗೆ ಅವಮಾನವಾಗಿದೆ. ಯಾವುದೇ ಬೆಡ್ ರೆಸ್ಟ್ ಇಲ್ಲ. (ಪತಿ) ಯಾವುದೇ ಸಮಸ್ಯೆಯಿದ್ದಲ್ಲಿ ಬಾರ್ಗೆ ಭೇಟಿ ನೀಡಿ ಎಂದು ಔಷಧ ಚೀಟಿಯಲ್ಲಿ ಬರೆಯಲಾಗಿದೆ.
ಔಷಧ ಚೀಟಿಯ ಕೊನೆಯಲ್ಲಿ ಸಾಮಾನ್ಯ ವೈದ್ಯರನ್ನು ಕಾಣುವಂತೆ ಬರೆಯಲಾಗಿದೆ. ಈ ಸಂಬಂಧ ಮುಕ್ಯಮಂತ್ರಿಗಳಿಗೆ ದೂರು ನೀಡಲಾಗುವುದು ಎಂದು ಅನಿಲ್ ಕುಮಾರ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ದಯಾ ಆಸ್ಪತ್ರೆ ಡಾ. ವರ್ಘೀಸ್ರನ್ನು ಕರ್ತವ್ಯದಿಂದಲೇ ವಜಾಗೊಳಿಸುವ ಮೂಲಕ ಡಾಕ್ಟರ್ಗೆ ಶಾಕ್ ನೀಡಿದ್ದಾರೆ.