ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಗಳಿಗೆ ಈವರೆಗೆ ಯಾವುದಕ್ಕೆ ಎಷ್ಟು ಖರ್ಚು ಆಗಿದೆ ಎನ್ನುವ ಮಾಹಿತಿಯನ್ನು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೆಚ್.ಎಂ ರೇವಣ್ಣ ನೀಡಿದ್ದಾರೆ. ಹಾಗಾದ್ರೆ ಯಾವ ಗ್ಯಾರಂಟಿ ಯೋಜನೆಗೆ ಎಷ್ಟು ಖರ್ಚು ಆಗಿದೆ ಎಂಬ ಮಾಹಿತಿ ಮುಂದಿದೆ ಓದಿ.
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಸಿಎಜಿ ರಿಪೋರ್ಟ್ ವಿಚಾರವಾಗಿ ಮಾತನಾಡಿದಂತ ಹೆಚ್.ಎಂ ರೇವಣ್ಣ ಅವರು, ಖರ್ಚು ಮಾಡಿದ ಲೆಕ್ಕ ಕೊಡಬೇಕು ಅಷ್ಟೇ. ಅದರೆ ಯೋಜನೆ ಟೀಕಿಸಬಾರದು. ಈ ರೀತಿಯ ಕಮೆಂಟ್ ಮಾಡಿರಲಿಲ್ಲ. ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ಕೊಡ್ತಾರೆ. ಗ್ಯಾರಂಟಿಯಿಂದ ಆರ್ಥಿಕವಾಗಿ ಹೊಡೆತ ಬೀಳುತ್ತೆ ಅನ್ನೋದು ಸತ್ಯಕ್ಕೆ ದೂರವಾಗಿದ್ದು. ಅವ್ರು ಯಾವ ಆಧಾರದ ಮೇಲೆ ಸರ್ವೇ ಮಾಡಿದ್ದಾರೆ ಗೊತ್ತಿಲ್ಲ. ಆಮೇಲೆ ನಾವು ಅದಕ್ಕೆ ಉತ್ತರ ಕೊಡ್ತೇವೆ ಎಂದರು.
ಗ್ಯಾರಂಟಿ ಯೋಜನೆಗಳು 98% ಜಾರಿಗೆ ಬಂದಿದೆ. ಅತ್ಯುತ್ತಮ ಪ್ರತಿಕ್ರಿಯೆ ಜನರಿಂದ ಸಿಗುತ್ತಿದೆ. ಶಕ್ತಿಯೋಜನೆಯಿಂದ ರಾಜ್ಯದ ಹಿರಿಮೆಗೆ ಸಾಕ್ಷಿಯಾಗಿದೆ. ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಲಭಿಸಿದೆ. 500 ಕೋಟಿ ಹೆಚ್ಚು ಉಚಿತ ಪ್ರಯಾಣವನ್ನು ಮಾಹಿಳೆಯರು ಮಾಡಿದ್ದಾರೆ. ದೇಶ, ವಿದೇಶದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. 94,177 ರೂ ಗ್ಯಾರಂಟಿಗಳಿಂದ ಖರ್ಚಾಗಿದೆ. ಯುವನಿಧಿಗೆ 2.55 ಲಕ್ಷ ಯುವಕರು ಫಲಾನುಭವಿಗಳಾಗಿದ್ದಾರೆ. ಯುವನಿಧಿಗೆ 623 ಕೋಟಿ ರೂ ಖರ್ಚಾಗಿದೆ ಎಂದರು
ಈವರೆಗೆ ಯಾವ ಗ್ಯಾರಂಟಿ ಯೋಜನೆಗೆ ಎಷ್ಟು ಹಣ ಖರ್ಚು? ಇಲ್ಲಿದೆ ಮಾಹಿತಿ
ಗೃಹ ಲಕ್ಷ್ಮಿ:
ಜೂನ್ 2025 ರವರೆಗೆ 1.24 ಕೋಟಿ ಫಲಾನುಭವಿಗಳು
50,005 ಕೋಟಿ ರೂ.ಗಳನ್ನು ನೇರ ವರ್ಗಾಯಿಸಲಾಗಿದೆ
ಜೂನ್ ತಿಂಗಳ ಡಿಬಿಟಿ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ ಮತ್ತು ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ
ಗೃಹ ಜ್ಯೋತಿ:
ಜುಲೈ 2025 ರವರೆಗೆ: 1.64 ಕೋಟಿ ಫಲಾನುಭವಿಗಳು
18,139 ಕೋಟಿ ರೂ.ಗಳನ್ನು ವೆಚ್ಚ
ಯುವ ನಿಧಿ:
ಡಿಸೆಂಬರ್ 2023 ರಿಂದ ಜುಲೈ 2025 ರವರೆಗೆ: 2.55 ಲಕ್ಷ ಫಲಾನುಭವಿಗಳಿಗೆ 623 ಕೋಟಿ ರೂ.ಗಳ ಅನುದಾನ ಬಿಡುಗಡೆ
ಜುಲೈ ತಿಂಗಳ ಡಿಬಿಟಿ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ ಮತ್ತು ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ.
ಶಕ್ತಿ ಯೋಜನೆ
ಆಗಸ್ಟ್ 22, 2025 ರವರೆಗೆ: 533.05 ಕೋಟಿ ಫಲಾನುಭವಿಗಳಿಗೆ 13,589 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ.
ಅನ್ನ ಭಾಗ್ಯ
ಡಿಸೆಂಬರ್ 2024 ರವರೆಗೆ: 72.02 ಕೋಟಿ ಫಲಾನುಭವಿಗಳಿಗೆ ಡಿಬಿಟಿ ಮೂಲಕ 11,821.17 ಕೋಟಿ ರೂ.ಗಳ ವೆಚ್ಚವಾಗಿದೆ.
ಆಹಾರ ಧಾನ್ಯಗಳ ವಿತರಣೆ (ಫೆಬ್ರವರಿ 2025 ರಿಂದ ಆಗಸ್ಟ್ 2025):
14.68 ಲಕ್ಷ ಮೆಟ್ರಿಕ್ ಟನ್ಗಳಷ್ಟು ಆಹಾರ ಧಾನ್ಯಗಳನ್ನು ವಿತರಿಸಲಾಗಿದ್ದು, 3,322 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.








