ಬೆಂಗಳೂರು : ರಾಜ್ಯದಲ್ಲಿ ಮುಂದಿನ ತಿಂಗಳು ನವೆಂಬರ್ 13 ರಂದು ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ಉಪಚುನಾವಣೆ ಹಿನ್ನೆಲೆಯಲ್ಲಿ ನಾಳೆ ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಘೋಷಿಸಲಾಗುತ್ತೆ ಎಂದು ಹೇಳಲಾಗುತ್ತಿದೆ. ಈ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಮನೆ ಎದುರು ಶಿಗ್ಗಾಂವಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಗಲಾಟೆ ಮಾಡುತ್ತಿದ್ದಾಗ ಯಾರೇ ಗಲಾಟೆ ಮಾಡಿದ್ರು ಅವರ ಅರ್ಜಿ ಕಿತ್ತಾಕ್ತೇನೆ ಎಂದು ಗದರಿದ್ದಾರೆ.
ಹೌದು ರಾಜ್ಯದಲ್ಲಿ ಚನ್ನಪಟ್ಟಣ ಉಪಚುನಾವಣೆಯ ಕಾವು ಹೆಚ್ಚಾಗಿದ್ದು, ಅದರ ಬೆನ್ನಲ್ಲೇ ಶಿಗ್ಗಾಂವಿ ಕ್ಷೇತ್ರದ ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆದಿದೆ. ಇಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿವಾಸದ ಮುಂದೆಯೇ ಟಿಕೆಟ್ಗಾಗಿ ಜಟಾಪಟಿ ನಡೆದಿದೆ. ಆರ್. ಶಂಕರ್, ಖಾದ್ರಿ, ಶಿವಲೀಲಾ ಕುಲಕರ್ಣಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರು ಡಿಸಿಎಂ ಡಿಕೆ ಶಿವಕುಮಾರ್ ನಿವಾಸದ ಮುಂದೆ ವಾದ ಮಾಡಿದ್ದರು. ಇದರಿಂದ ಕುಪಿತಗೊಂಡ ಡಿಕೆ ಶಿವಕುಮಾರ್ ಜಗಳ ಆಡೋಕೆ ನಮ್ಮ ಮನೆಗೆ ಬಂದಿದ್ದೀರಾ ನಡೀರಿ ಮನೆಗೆ. ಯಾರೇ ಮಾತಾಡಿದ್ರು ಅವರ ಅರ್ಜಿ ಕಿತ್ತಾಕ್ತೀನಿ ಎಂದು ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರ ಮೇಲೆ ಡಿಸಿಎಂ ಗರಂ ಆಗಿರುವ ಪ್ರಸಂಗ ನಡೆಯಿತು.