ಮೈಸೂರು : ಆತ ಮೂರು ಮದುವೆಯಾಗಿದ್ದ ಮೊದಲನೇ ಪತ್ನಿಗೆ ವಿಚ್ಛೇದನ ನೀಡಿದ ಬಳಿಕ ಎರಡನೇ ಮದುವೆಯಾದ ಆದರೆ ವಿಚ್ಛೇದನ ನೀಡಿದ ಪತ್ನಿಯ ಹಾಗೂ ಮಕ್ಕಳಿಗೆ ಆಸ್ತಿಯನ್ನು ನೀಡಿದ್ದ. ಬಳಿಕ ಮೂರನೇ ಮದುವೆಯಾದ ಆತ ಎರಡನೇ ಪತ್ನಿಗೆ ಏನನ್ನು ನೀಡದೆ ನಡು ಬೀದಿಯಲ್ಲಿ ಕೈಬಿಟ್ಟಿದ್ದಾನೆ. ನ್ಯಾಯ ಕೇಳಲು ಹೋದ 2ನೇ ಪತ್ನಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮೈಸೂರು ಜಿಲ್ಲೆಯ ಮೂರು ಮದುವೆಯಾದವನಿಂದ ಎರಡನೇ ಪತ್ನಿಗೆ ಕಿರುಕುಳ ಆರೋಪ ಕೇಳಲು ಹೋಗಿದ್ದ ಎರಡನೇ ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದಲ್ಲಾಳು ಗ್ರಾಮಲ್ಲಿ ನಡೆದಿದೆ.
ಗ್ರಾಮದ ಮಹದೇವಪ್ಪ 2ನೇ ಪತ್ನಿ ನೇತ್ರಾವತಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದಲ್ಲಾಳು ಗ್ರಾಮದಲ್ಲಿ ಮೊದಲ ಪತ್ನಿಗೆ ವಿಚ್ಛೇದನ ನೀಡಿ ಮಹದೇವಪ್ಪ ಆಕೆಯ ಮಕ್ಕಳಿಗೆ ಆಸ್ತಿ ನೀಡಿದ್ದಾನೆ. 2ನೇ ಪತ್ನಿಯನ್ನು ತೊರೆದು ಮೂರನೇ ಪತ್ನಿಯ ಜೊತೆಗೆ ಸದ್ಯ ಮಹಾದೇವಪ್ಪ ವಾಸಿಸುತ್ತಿದ್ದಾನೆ. 2ನೇ ಪತ್ನಿಗೆ ಮಾದೇವಪ್ಪ ಏನನ್ನು ನೀಡಿದೆ ಕೈ ಬಿಟ್ಟಿರುವ ಆರೋಪ ಕೇಳಿ ಬಂದಿದೆ.
ಹಾಗಾಗಿ ನ್ಯಾಯ ಕೇಳಲು ಹೋಗಿದ್ದ 2ನೇ ಪತ್ನಿಯ ಮೇಲೆ ಮರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಪತಿಯ ಜಮೀನಿನಲ್ಲಿ ಗುಡಿಸಲು ನಿರ್ಮಿಸಿ ಎರಡು ಹೆಣ್ಣು ಮಕ್ಕಳ ಜೊತೆಗೆ ವಾಸ ಮಾಡುತ್ತಿದ್ದು, ನಮ್ಮೂರಿನಲ್ಲಿ ಇರುವುದು ಬೇಡ ಎಲ್ಲಾದರೂ ತೊಲಗು ಎಂದು ಹಲ್ಲೆ ನಡೆಸಿದ್ದಾನೇ. ಎರಡನೇ ಪತ್ನಿ ನೇತ್ರಾವತಿ ಮೇಲೆ ಮಹಾದೇವಪ್ಪ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ನಂತರ ಮೈಸೂರು ಎಸ್ಪಿ ಕಚೇರಿಗೆ ಎರಡನೇ ಪತ್ನಿ ನೇತ್ರಾವತಿ ತೆರಳಿದ್ದಾರೆ. ಪತ್ನಿ ಮಹದೇವಪ್ಪ ವಿರುದ್ಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.a