ಬೆಂಗಳೂರು: ಆರ್ ಸಿ ಬಿ ವಿಜಯೋತ್ಸವ ಕಾರ್ಯಕ್ರಮದ ದಿನದಂದು ಆಟಗಾರರನ್ನು ಸ್ವಾಗತಿಸಲು ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಹೀಗಿದ್ದರೂ ಪ್ರೋಟೋಕಾಲ್ ಮೀರಿ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿ ಆರ್ ಸಿ ಬಿ ಆಟಗಾರರನ್ನು ಸ್ವಾಗತಿಸಿದಂತ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ತರಾಟೆಗೆ ತೆಗೆದುಕೊಂಡ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಘಟನೆಯ ನಂತ್ರ ಮೊನ್ನೆ ರಾಜ್ಯ ಸಚಿವ ಸಂಪುಟ ಸಭೆಯನ್ನು ನಡೆಸಿದಂತ ಸಿಎಂ ಸಿದ್ಧರಾಮಯ್ಯ, ಈ ವೇಳೆಯಲ್ಲಿ ಡಿಕೆ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾಗಿ ತಿಳಿದು ಬಂದಿದೆ.
ನೀವ್ಯಾಕ್ರೀ ಹೆಚ್ ಎಎಲ್ ಗೆ ಹೋಗಿದ್ರಿ? ಆರ್ ಸಿಬಿ ಆಟಗಾರರನ್ನ ಯಾಕೆ ಸ್ವಾಗತಮಾಡಿಕೊಂಡ್ರಿ? ಪ್ರೋಟೋಕಾಲ್ ಏನು ಇತ್ತಾ? ಅಧಿಕಾರಿಗಳನ್ನ ನಿಯೋಜಿಸಿಸಲಾಗಿತ್ತು. ನೀವ್ಯಾಕೆ ಅಲ್ಲಿಗೆ ಹೋಗಬೇಕಿತ್ತೆಂದು ಸಿಎಂ ಸಿದ್ಧರಾಮಯ್ಯ ಅವರು ಸಂಪುಟ ಸದಸ್ಯದ ಮುಂದೆಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಆ ವೇಳೆಯಲ್ಲಿ ಏನೂ ಉತ್ತರಿಸದೇ ಡಿಕೆ ಶಿವಕುಮಾರ್ ಸುಮ್ಮನಿದ್ದಾಗಿ ಹೇಳಲಾಗುತ್ತಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಹೆಲ್ಮೆಟ್ ಬಳಕೆ ಕಡ್ಡಾಯ, ವಿನಾಯಿತಿ ಇಲ್ಲ: ಎಸ್ಪಿ ಡಾ.ಶೋಭಾರಾಣಿ