ಅಸ್ಸಾಂ: ಇಲ್ಲಿನ ದಿಬ್ರುಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಜೂನಿಯರ್ಗೆ ರ್ಯಾಗಿಂಗ್ ಮಾಡಲು ಮುಂದಾಗಿದ್ದು, ಇದ್ರಿಂದ ತಪ್ಪಿಸಿಕೊಳ್ಳಲು ಜೂನಿಯರ್ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ನ 2ನೇ ಮಹಡಿಯಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಹಾಸ್ಟೆಲ್ನ 2ನೇ ಮಹಡಿಯಿಂದ ವಾಣಿಜ್ಯ ವಿಭಾಗದ ಜೂನಿಯರ್ ವರ್ಷದ ವಿದ್ಯಾರ್ಥಿ ಆನಂದ್ ಶರ್ಮಾನನ್ನು ಸಮೀಪದ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ. ಆನಂದ್ ಕುಟುಂಬದವರ ದೂರಿನ ಮೇರೆಗೆ ದಿಬ್ರುಗಢ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಓರ್ವ ಮಾಜಿ ಹಾಗೂ ನಾಲ್ವರು ಹಾಲಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಆನಂದ್ ಶರ್ಮಾ ಶಿವಸಾಗರ್ ಜಿಲ್ಲೆಯ ಅಮ್ಗುರಿ ನಿವಾಸಿಯಾಗಿದ್ದಾರೆ. ಸೀನಿಯರ್ಗಳ ರ್ಯಾಗಿಂಗ್ನಿಂದ ತಪ್ಪಿಸಿಕೊಳ್ಳಲು ಹೋದಾಗ ಈ ಘಟನೆ ನಡೆದಿದೆ.
ಆನಂದ್ ಶರ್ಮಾ ತಾಯಿ ಸರಿತಾ ಶರ್ಮಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ʻಕಳೆದೊಂದು ವಾರದಿಂದ ತನ್ನ ಮಗ ಕ್ರೂರ ರ್ಯಾಗಿಂಗ್ಗೆ ಒಳಗಾಗಿದ್ದಾನೆ. ಶನಿವಾರ ರಾತ್ರಿಯೂ ಆತನ ಸೀನಿಯರ್ಗಳು ರಾಡ್ ಮತ್ತು ಬಾಟಲಿಗಳಿಂದ ಚಿತ್ರಹಿಂಸೆ ನೀಡಿದ್ದಲ್ಲದೆ 80 ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಈ ಕಿರುಕುಳದ ಬಗ್ಗೆ ತನ್ನ ಮಗ ಹಾಸ್ಟೆಲ್ ವಾರ್ಡನ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
“ನಾವು ಈ ಘಟನೆ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ವಿಶ್ವವಿದ್ಯಾನಿಲಯದ ಶಿಸ್ತು ಕ್ರಮ ಸಮಿತಿಯು ತನಿಖೆ ನಡೆಸುತ್ತದೆ” ಎಂದು ದಿಬ್ರುಗಢ ವಿಶ್ವವಿದ್ಯಾಲಯದ ಉಪಕುಲಪತಿ ಜಿತೇನ್ ಹಜಾರಿಕಾ ಹೇಳಿದ್ದಾರೆ.
BIG NEWS: ʻಭಾರತೀಯ ಒಲಿಂಪಿಕ್ ಸಂಸ್ಥೆʼಯ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಅಥ್ಲೀಟ್ ʻಪಿಟಿ ಉಷಾʼ ಆಯ್ಕೆ | PT Usha
ಸಚಿವ ಅಶ್ವಥ್ ನಾರಾಯಣ್ ವಿಚಾರಣೆ ಮಾಡುವ ಧಮ್ಮು, ತಾಕತ್ ಬೊಮ್ಮಾಯಿಗಿಲ್ಲವೇ..? : ಟ್ವೀಟ್ ನಲ್ಲಿ ಕಾಂಗ್ರೆಸ್ ವಾಗ್ಧಾಳಿ
BIG NEWS: ʻಭಾರತೀಯ ಒಲಿಂಪಿಕ್ ಸಂಸ್ಥೆʼಯ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಅಥ್ಲೀಟ್ ʻಪಿಟಿ ಉಷಾʼ ಆಯ್ಕೆ | PT Usha