ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ಶವಗಳ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರೆಸ್ಟ್ ಆದ ಬೆನ್ನಲ್ಲೇ ಎಸ್ಐಟಿ ಆರೋಪಿ ಚಿನ್ನಯ್ಯನನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ. ವಿಚಾರಣೆಯ ವೇಳೆ ಎಸ್ಐಟಿ ಅಧಿಕಾರಿಗಳಿಗೆ ಸ್ಪೋಟಕವಾದ ಸಾಕ್ಷಿಗಳು ಲಭ್ಯವಾಗಿದ್ದು , ನಿನ್ನೆಯಿಂದ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದು, ಈ ವೇಳೆ ಚಿನ್ನಯ್ಯ ಬಳಸುತ್ತಿದ್ದ 1 ಆಂಡ್ರಾಡ್ ಮೊಬೈಲ್ ಹಾಗು 1 ಕೀಪ್ಯಾಡ್ ಮೊಬೈಲ್ ಪತ್ತೆಯಾಗಿದೆ.
ಹೌದು ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಚಿನ್ನಯ್ಯನ ಎರಡು ಮೊಬೈಲ್ ಪತ್ತೆಯಾಗಿವೆ.ಆರಂಭದಲ್ಲಿ ಚಿನ್ನಯ್ಯ ಕೀಪ್ಯಾಡ್ಒಬ್ಬ ಬಳಸುತ್ತಿದ್ದ. ನಂತರ ಆಂಡ್ರಾಡ್ ಮೊಬೈಲ್ ಬಳಸುತ್ತಿದ್ದ. ಲಗೇಜ್ ಬ್ಯಾಗ್, ಬಟ್ಟೆ ಸೇರಿದಂತೆ ಕೆಲವು ದಾಖಲೆಗಳನ್ನ SIT ವಶಕ್ಕೆ ಪಡೆದುಕೊಂಡಿದೆ. ವಶಪಡಿಸಿಕೊಂಡಿರುವ ವಸ್ತುಗಳನ್ನ FSL ಗೆ ಕಳುಹಿಸಲಾಗಿದೆ. ಇನ್ನು ಮಹೇಶ್ ಮನೆಯಲ್ಲಿ ಹಾರ್ಡ್ ಡಿಸ್ಕ್ ಪತ್ತೆಯಾಗಿದ್ದು, ಅದರಲ್ಲಿ ಚಿನ್ನಯ್ಯಗೆ ಸಂಬಂಧಸಿದಂತೆ ಹಲವು ಸಾಕ್ಷಿಗಳು ಲಭ್ಯವಾಗಿವೆ.
ಹೌದು 25 ವಿಡಿಯೋಗಳ ಮೂಲಕ ಈ ಒಂದು ಗ್ಯಾಂಗ್ ಮೆಗಾ ಪ್ಲಾನ್ ಮಾಡಿದ್ದು ಯಾವ ಸಂದರ್ಭದಲ್ಲಿ ಏನೇನು ಮಾಡಬೇಕು ಎಂದು ತಂತ್ರ ಹೂಡಿತ್ತು. ಇಂಟರ್ವ್ಯೂ ವಿಡಿಯೋ ಮೂಲಕ ಅಡ್ವಾನ್ಸ್ ಪ್ಲಾನ್ ಮಾಡಿತ್ತು ವಿವಿಧ ಮಾದರಿಯಲ್ಲಿ ವಿಡಿಯೋ ಮಾಡಿಟ್ಟುಕೊಂಡಿತ್ತು. ಇಂಟರ್ವ್ಯೂ ರೂಪದಲ್ಲಿ ವಿಡಿಯೋ ಮಾಡಿಸಿ ತಂತ್ರ ರೂಪಿಸಿತ್ತು. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳು ಬರುತ್ತದೆ. ವಿಡಿಯೋ ಬಗ್ಗೆ ಎಸ್ಐಟಿ ಮುಂದೆ ಚಿನ್ನಯ್ಯ ಬಾಯಿಬಿಟ್ಟಿದ್ದಾನೆ.
ಚಿನ್ನಯ ಅರೆಸ್ಟ್ ಆದಾಗ ಯಾವ ವಿಡಿಯೋ ಬಿಡಬೇಕು? ಚಿನ್ನಯ್ಯ ಓಡಿ ಹೋದರೆ ಯಾವ ವಿಡಿಯೋ ಹಾಕಬೇಕು? ಒಂದು ವೇಳೆ ಚಿನ್ನಯ್ಯ ಸತ್ತು ಹೋದರೆ ಯಾವ ವಿಡಿಯೋ ಹಾಕಬೇಕು? ಚಿನ್ನಯ್ಯ ಹಿಂದಿನವರು ಅರೆಸ್ಟ್ ಆದರೆ ಯಾವ ವಿಡಿಯೋ ಬಿಡಬೇಕು? ಅತ್ಯಾಚಾರ ವಿಚಾರ ಬಂದಾಗ ಯಾವ ರೀತಿ ವಿಡಿಯೋ ಬಿಡಬೇಕು? ಕೇಸ್ನಲ್ಲಿ ಉಳಿದವರ ಹೆಸರು ಬಂದಾಗ ಯಾವ ವಿಡಿಯೋ ಬಿಡಬೇಕು ಎಂದು ಗ್ಯಾಂಗ್ ಮೆಗಾ ಪ್ಲಾನ್ ಮಾಡಿಕೊಂಡಿತ್ತು.