Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯದಲ್ಲಿ ರೇಣುಕಾಸ್ವಾಮಿ ರೀತಿ ಮತ್ತೊಂದು ಅಮಾನುಷ ಕೃತ್ಯ : ಹುಡುಗಿ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ ಹಲ್ಲೆ!

07/07/2025 8:14 AM

ಹಮಾಸ್-ಇಸ್ರೇಲ್ ನಡುವಿನ ಮೊದಲ ಸುತ್ತಿನ ಪರೋಕ್ಷ ಕದನ ವಿರಾಮ ಮಾತುಕತೆ ವಿಫಲ | Israel-Hamas war

07/07/2025 8:04 AM

BREAKING : ಮೈಸೂರಲ್ಲಿ ಜಮೀನಿಗಾಗಿ ಸಂಬಂಧಿಕರ ಮಧ್ಯ ಲಾಂಗು, ಮಚ್ಚುಗಳಿಂದ ಹೊಡೆದಾಟ : ಹಲವರಿಗೆ ಗಾಯ

07/07/2025 7:53 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ `ಡೆಂಗ್ಯೂ’ ಪ್ರಕರಣಗಳು ಹೆಚ್ಚಳ : ಶಾಲೆಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಆದೇಶ
KARNATAKA

ರಾಜ್ಯದಲ್ಲಿ `ಡೆಂಗ್ಯೂ’ ಪ್ರಕರಣಗಳು ಹೆಚ್ಚಳ : ಶಾಲೆಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಆದೇಶ

By kannadanewsnow5716/08/2024 5:13 AM

ಬೆಂಗಳೂರು : ರಾಜ್ಯದಲ್ಲಿ ಡೆಂಗ್ಯೂ ಜ್ವರ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಶಾಲೆಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ವಿಷಯಾನ್ಮಯವಾಗಿ, ರಾಜ್ಯದಲ್ಲಿ ಡೆಂಗ್ಯೂ, ಚಿಕೂನ್ ಗುನ್ಯ ಹಾಗೂ ಜಿಕಾ ಮುಂತಾದ ರೋಗಗಳು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ನಿರ್ದೇಶನದಂತೆ ಶಾಲೆಗಳಲ್ಲಿ ವಹಿಸಬೇಕಾದ ಮುಂಜಾಗ್ರತ ಕ್ರಮಗಳ ಕುರಿತು ಇಲಾಖಾವತಿಯಿಂದ ಈಗಾಗಲೇ ಉಲ್ಲೇಖ-1 ರನ್ವಯ ಅಗತ್ಯ ನಿರ್ದೇಶನ ನೀಡಲಾಗಿರುತ್ತದೆ.

ಪ್ರಸ್ತುತ, 2024ನೇ ಸಾಲಿನಲ್ಲಿ ದಿನಾಂಕ: 28.7.2024ರ ವರೆಗೆ ರಾಜ್ಯದಲ್ಲಿ ವರದಿಯಾಗಿರುವ ಒಟ್ಟು 17,227 ಡೆಂಗೂ ಪ್ರಕರಣಗಳ ಪೈಕಿ 25% ಡೆಂಗ್ಯೂ ಪ್ರಕರಣಗಳು 6 ರಿಂದ 16 ವರ್ಷ ವಯಸ್ಸಿನ ಮಕ್ಕಳಲ್ಲಿ ಕಂಡುಬಂದಿರುತ್ತದೆ.

ಈ ಹಿನ್ನಲೆಯಲ್ಲಿ 6 ರಿಂದ 16 ವರ್ಷ ವಯಸ್ಸಿನ ಮಕ್ಕಳಲ್ಲಿ ಇಂತಹ ರೋಗಗಳನ್ನು ತಡೆಗಟ್ಟಲು ವಹಿಸಬೇಕಾದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಹಾಗೂ ಶಾಲಾ ಮಕ್ಕಳು ಈ ರೋಗಗಳಿಗೆ ಈಡಾದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಉಲ್ಲೇಖ-02ರಲ್ಲಿ ಕೆಳಕಂಡಂತೆ ವಿಸ್ತ್ರತವಾಗಿ ತಿಳಿಸಲಾಗಿದೆ.

ಡೆಂಗ್ಯೂ ಜ್ವರವು ಈಡಿಸ್ ಜಾತಿಯ ಸೊಳ್ಳೆಯು ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡಲಿದ್ದು, ಇದು ಮುಂಗಾರು ಹಾಗೂ ನಂತರದ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ, ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಹಾಗೂ ಮುಂಜಾಗ್ರತಾ ಲಸಿಕೆ ಇಲ್ಲದಿರುವ ಹಿನ್ನೆಲೆಯಲ್ಲಿ ಡೆಂಗ್ಯೂ ಜ್ವರದ ಲಕ್ಷಣಗಳು ಕಂಡು ಬಂದ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಅಗತ್ಯ ಚಿಕಿತ್ಸೆಯನ್ನು ಪಡೆಯುವುದು ಅಗತ್ಯವಾಗಿರುತ್ತದೆ.

ಸಾಮಾನ್ಯ ಡೆಂಗ್ಯೂ ಜ್ವರ ಪ್ರಕರಣಗಳು ಅಗತ್ಯ ಚಿಕಿತ್ಸೆ, ಹೆಚ್ಚು ದ್ರವಾಹಾರ ಸೇವನೆ ಮತ್ತು ಹೆಚ್ಚು. ವಿಶ್ರಾಂತಿ ಪಡೆಯುವುದರಿಂದ ಗುಣಮುಖವಾಗುತ್ತದೆ. ಆದರೆ, ಜ್ವರ ಗುಣಮುಖವಾಗಿ 3-4 ದಿನಗಳ ನಂತರ ತೀವು ಹೊಟ್ಟೆ ನೋವು ವಾಂತಿ, ಅತಿಯಾದ ಸುಸ್ತು ತಲೆ ಸುತ್ತುವುದು, ಕಣ್ಣು ಕತ್ತಲೆ ಬರುವುದು, ಚರ್ಮ ಬಿಳುಚಿಕೊಳ್ಳುವುದು . ಈ ಲಕ್ಷಣಗಳು ಕಂಡುಬಂದಲ್ಲಿ ಇವು ‘ತೀವು ಡೆಂಗ್ಯೂ ಜ್ವರದ’ ( Severe Dengue Forms) ಲಕ್ಷಣಗಳಾಗಿದ್ದು, ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕಿರುತ್ತದೆ. ಈಡಿಸ್ ಜಾತಿಯ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಹೆಚ್ಚಾಗಿ ಕಚ್ಚುತ್ತವೆ. ಹಗಲು ಹೊತ್ತಿನಲ್ಲಿ ಶಾಲೆಯಲ್ಲಿರುವ ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಈಡಿಸ್ ಸೊಳ್ಳೆ ಕಚ್ಚುವಿಕೆಯಿಂದ ರಕ್ಷಿಸಿಕೊಳ್ಳುವುದು ಅವಶ್ಯವಾಗಿದ್ದು ಇದರಿಂದ ಡೆಂಗ್ಯೂ ಜ್ವರ ಹರಡುವ ಅಪಾಯವನ್ನು ತಪ್ಪಿಸಬಹುದಾಗಿದೆ.

ಡೆಂಗ್ಯೂ ಜ್ವರ ಹರಡುವ ಈಡಿಸ್ ಜಾತಿಯ ಸೊಳ್ಳೆಗಳು, ಶಾಲೆಯಲ್ಲಿ ವಿವಿಧ ಉದ್ದೇಶಗಳಿಗೆ (ಕುಡಿಯುವ ನೀರು/ ಅಡುಗೆ ಮನೆ / ಊಟದ ತಟ್ಟೆಗಳನ್ನು ತೊಳೆಯಲು / ಶೌಚಾಲಯ/ ಶಾಲಾ ಉದ್ಯಾನವನಕ್ಕೆ ನೀರು ಹಾಯಿಸಲು, ಇತ್ಯಾದಿ) ಸಂಗ್ರಹಿಸುವ ಶುದ್ಧ ನೀರಿನ ಪರಿಕರಗಳಲ್ಲಿ ಅಂದರೆ, ಸಿಮೆಂಟ್ ತೊಟ್ಟಿ, ಮುಚ್ಚಳವಿಲ್ಲದ ಸಿಂಟಿಕ್ಸ್ ಟ್ಯಾಂಕ್, ಪ್ಲಾಸ್ಟಿಕ್ ಡ್ರಂ / ಬ್ಯಾರಲ್ ಗಳು, ಬಕೆಟ್/ ಕೊಡಪಾನ, ಅಲಂಕಾರಿಕ ಕಾರಂಜಿಗಳು, ಇತ್ಯಾದಿಗಳಲ್ಲಿ ಬೆಳೆಯುತ್ತದೆ. ಹಾಗೂ ಶಾಲಾ ಆವರಣದಲ್ಲಿನ ಹೂಕುಂಡಗಳ ಕೆಳಗಿರುವ ತಟ್ಟೆ (Pot saucers) ಗಳು, ಮನಿಪ್ಲಾಂಟ್ ಹಾಗೂ ಇತರ ಅಲಂಕಾರಿಕ ಗಿಡಗಳನ್ನಿಡುವ ನೀರು, ಶಾಲೆಯ ಆವರಣದಲ್ಲಿ ತೂಗು ಹಾಕಿರುವ Bird bath ಗಳು, ಶಾಲಾ ವಾಹನಗಳ ಬಳಸದೆ ಇರುವ ಟೈರ್ ಗಳು, ಶಾಲಾ ಆವರಣದಲ್ಲಿ ಬಿಸುಟಿರುವ ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ಮಳೆ ನೀರಿನಲ್ಲಿ ಹಾಗೂ ಶಾಲಾ ಕಟ್ಟಡ ಮತ್ತು ಶಾಲಾ ಆವರಣದಲ್ಲಿರುವ ಇತರ ಕಟ್ಟಡಗಳ ಟೆರೆಸ್ ನಲ್ಲಿ ಸಂಗ್ರಹವಾಗುವ ಮಳೆ ನೀರಿನಲ್ಲಿ ಈಡಿಸ್ ಸೊಳ್ಳೆಗಳು ಯಥೇಚ್ಛವಾಗಿ ಬೆಳೆಯುತ್ತವೆ.

ಈಡಿಸ್‌ ಸೊಳ್ಳೆಯ ಕಡಿತದಿಂದ ರಕ್ಷಿಸಿಕೊಳ್ಳಲು ಶಾಲೆಯಲ್ಲಿರುವ ಶಿಕ್ಷಕರು,ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ, ಈ ಕೆಳಕಂಡ ಸ್ವಯಂ ರಕ್ಷಣಾ ವಿಧಾನಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವುದರೊಂದಿಗೆ ಶಾಲೆಯ ಆವರಣವನ್ನು “ಈಡಿಸ್ ಸೊಳ್ಳೆ ರಹಿತ ಆವರಣ” ವೆಂದು ಖಚಿತಪಡಿಸಿಕೊಳ್ಳಲು ಸೂಚಿಸಿದೆ.

ಶಾಲೆಗೆ ಬರುವ ಮುನ್ನ Mosquito repellent ಗಳನ್ನು ಕೈ-ಕಾಲುಗಳಿಗೆ ಹಚ್ಚಿಕೊಳ್ಳುವುದು.

ಡಂಗೂ ನಿಯಂತ್ರಣ ಕ್ರಮಗಳ ಕುರಿತ Do’s & Don’t’s ಶಾಲೆಯ / ಶಾಲಾ ಕೊಠಡಿಯ ನೋಟಿಸ್‌ ಬೋರ್ಡ್ ಗಳಲ್ಲಿ ಪ್ರದರ್ಶಿಸುವುದು 4. ಶುದ್ಧ ನೀರಿನ ಸಂಗ್ರಹಣಾ ಪರಿಕರಗಳನ್ನು ಭದ್ರವಾಗಿ ಮುಚ್ಚುವುದು ಹಾಗೂ ಕಡ್ಡಾಯವಾಗಿ ವಾರಕ್ಕೊಮ್ಮೆ ಉಜ್ಜಿ ತೊಳೆದು ಸ್ವಚ್ಛಗೊಳಿಸಿ. ನಂತರ ನೀರನ್ನು ತುಂಬಿಸುವುದು.

ಘನತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಕಡ್ಡಾಯವಾಗಿ ಶೀಘ್ರ ವಿಲೇವಾರಿ ಮಾಡುವುದು.

ಶಾಲಾ ಆವರಣದ ಕಟ್ಟಡಗಳ ಟೆರಸ್‌ನ ಮೇಲೆ ಬೀಳುವ ಮಳೆನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮವಹಿಸುವುದು.

 ಡೆಂಗ್ಯೂ ಜ್ವರ ನಿಯಂತ್ರಣ ಕುರಿತು ಮಾಹಿತಿಯನ್ನು ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಪ್ರಚುರಪಡಿಸುವುದು.

ಪೋಷಕರ ಸಭೆಗಳಲ್ಲಿ ಡೆಂಗ್ಯೂ ಜ್ವರ ನಿಯಂತ್ರಣ ಕುರಿತು ಅರಿವು ಮೂಡಿಸುವುದರೊಂದಿಗೆ ಪೋಷಕರ WhatsApp Group ಗಳಲ್ಲಿ ಮಾಹಿತಿ ಹಂಚಿಕೊಳ್ಳುವುದು.

 ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಎಸ್.ಡಿ.ಎಂ.ಸಿ ಸಹಕಾರದೊಂದಿಗೆ ಸೊಳ್ಳ ನಿರೋಧಕ (mosquito repellent) ಗಳನ್ನು ವಿದ್ಯಾರ್ಥಿಗಳಿಗೆ ಆದ್ಯತೆಯ ಮೇಲೆ ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು.

ಶಾಲೆಯ ಅಕ್ಕ-ಪಕ್ಕದಲ್ಲಿರುವ ಖಾಲಿ ನಿವೇಶನಗಳಲ್ಲಿ ಘನತ್ಯಾಜ್ಯ ವಸ್ತುಗಳು ಸಂಗ್ರಹವಾಗದಂತೆ ಕ್ರಮವಹಿಸುವುದು. ಅಗತ್ಯವಿದ್ದಲ್ಲಿ ಪಂಚಾಯಿತಿ ವತಿಯಿಂದ ಅಗತ್ಯ ಸಹಕಾರ ಪಡೆಯುವುದು.

ಮೇಲ್ಕಂಡ ಎಲ್ಲಾ ಅಂಶಗಳನ್ನು ಕಟ್ಟಿನಿಟ್ಟಾಗಿ ಪಾಲಿಸುವುದರೊಂದಿಗೆ ಇಂತಹ ರೋಗಗಳಿಂದ ಯಾವುದೇ ವಿದ್ಯಾರ್ಥಿ ಅಥವಾ ವಿದ್ಯಾರ್ಥಿಗಳಿಗೆ ಇಂತಹ ಯಾವುದೇ ತೊಂದರೆ ಆಗದಂತೆ ಅಗತ್ಯ ಮುನ್ನಚ್ಚರಿಕಾ ಹಾಗೂ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಶಾಲೆಗಳನ್ನು ನಡೆಸಿಕೊಂಡು ಹೋಗುವಂತೆ ಈ ಮೂಲಕ ಮತ್ತೊಮ್ಮೆ ಸೂಚಿಸಿದೆ.

ಈ ಸಂಬಂಧ ಉಲ್ಲೇಖ-01 & 02 ರಲ್ಲಿನ ಅಂಶಗಳನ್ನು ಅನುಪಾಲಿಸಿ, ಸಮರ್ಪಕವಾಗಿ ಅನುಷ್ಠಾನಗೊಳಿಸಲು ನಿಯಮಾನುಸಾರ ಅಗತ್ಯ ಕ್ರಮಗಳನ್ನು ವಹಿಸತಕ್ಕದ್ದು. ಈ ಕುರಿತು ಸಮುದಾಯದ, ಸ್ಥಳೀಯ ಆರೋಗ್ಯ ಇಲಾಖೆ, ಸ್ಥಳೀಯ ಸಂಸ್ಥೆಗಳ ಮತ್ತು ತಾಲ್ಲೂಕು ಮತ್ತು ಜಿಲ್ಲಾಡಳಿತಗಳ ಸಹಕಾರ ಹಾಗೂ ಮಾರ್ಗದರ್ಶನದೊಂದಿಗೆ ಅಗತ್ಯ ಕ್ರಮಗಳನ್ನು ಸಕಾಲದಲ್ಲಿ ಕೈಗೊಳ್ಳುವುದು.

Dengue cases on the rise in the state: Education department orders schools to take necessary precautions ರಾಜ್ಯದಲ್ಲಿ `ಡೆಂಗ್ಯೂ’ ಪ್ರಕರಣಗಳು ಹೆಚ್ಚಳ : ಶಾಲೆಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಆದೇಶ
Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ ರೇಣುಕಾಸ್ವಾಮಿ ರೀತಿ ಮತ್ತೊಂದು ಅಮಾನುಷ ಕೃತ್ಯ : ಹುಡುಗಿ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ ಹಲ್ಲೆ!

07/07/2025 8:14 AM2 Mins Read

BREAKING : ಮೈಸೂರಲ್ಲಿ ಜಮೀನಿಗಾಗಿ ಸಂಬಂಧಿಕರ ಮಧ್ಯ ಲಾಂಗು, ಮಚ್ಚುಗಳಿಂದ ಹೊಡೆದಾಟ : ಹಲವರಿಗೆ ಗಾಯ

07/07/2025 7:53 AM1 Min Read

BIG NEWS : ಮೈಸೂರಲ್ಲಿ ಮನೆಯ ಮೇಲ್ಚಾವಣಿ ಕುಸಿದು ಘೋರ ದುರಂತ : ಮೂವರು ಪ್ರಾಣಾಪಾಯದಿಂದ ಬಚಾವ್!

07/07/2025 7:48 AM1 Min Read
Recent News

BREAKING : ರಾಜ್ಯದಲ್ಲಿ ರೇಣುಕಾಸ್ವಾಮಿ ರೀತಿ ಮತ್ತೊಂದು ಅಮಾನುಷ ಕೃತ್ಯ : ಹುಡುಗಿ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ ಹಲ್ಲೆ!

07/07/2025 8:14 AM

ಹಮಾಸ್-ಇಸ್ರೇಲ್ ನಡುವಿನ ಮೊದಲ ಸುತ್ತಿನ ಪರೋಕ್ಷ ಕದನ ವಿರಾಮ ಮಾತುಕತೆ ವಿಫಲ | Israel-Hamas war

07/07/2025 8:04 AM

BREAKING : ಮೈಸೂರಲ್ಲಿ ಜಮೀನಿಗಾಗಿ ಸಂಬಂಧಿಕರ ಮಧ್ಯ ಲಾಂಗು, ಮಚ್ಚುಗಳಿಂದ ಹೊಡೆದಾಟ : ಹಲವರಿಗೆ ಗಾಯ

07/07/2025 7:53 AM

Texas Floods: ಟೆಕ್ಸಾಸ್ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 78ಕ್ಕೆ ಏರಿಕೆ l ಟ್ರಂಪ್ ಭೇಟಿಗೆ ಚಿಂತನೆ

07/07/2025 7:52 AM
State News
KARNATAKA

BREAKING : ರಾಜ್ಯದಲ್ಲಿ ರೇಣುಕಾಸ್ವಾಮಿ ರೀತಿ ಮತ್ತೊಂದು ಅಮಾನುಷ ಕೃತ್ಯ : ಹುಡುಗಿ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ ಹಲ್ಲೆ!

By kannadanewsnow0507/07/2025 8:14 AM KARNATAKA 2 Mins Read

ಬೆಂಗಳೂರು : ಕಳೆದ ವರ್ಷ ಚಿತ್ರದುರ್ಗದ ರೇಣುಕಾ ಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಜೈಲು ಸೇರಿದ್ದರು.…

BREAKING : ಮೈಸೂರಲ್ಲಿ ಜಮೀನಿಗಾಗಿ ಸಂಬಂಧಿಕರ ಮಧ್ಯ ಲಾಂಗು, ಮಚ್ಚುಗಳಿಂದ ಹೊಡೆದಾಟ : ಹಲವರಿಗೆ ಗಾಯ

07/07/2025 7:53 AM

BIG NEWS : ಮೈಸೂರಲ್ಲಿ ಮನೆಯ ಮೇಲ್ಚಾವಣಿ ಕುಸಿದು ಘೋರ ದುರಂತ : ಮೂವರು ಪ್ರಾಣಾಪಾಯದಿಂದ ಬಚಾವ್!

07/07/2025 7:48 AM

BREAKING : ಚಿಕ್ಕಮಗಳೂರು ಪ್ರವೇಶಿಸದಂತೆ 30 ದಿನಗಳ ಕಾಲ ‘VHP’ ಮುಖಂಡ ಶರಣ್ ಪಂಪ್ ವೆಲ್ ಗೆ ನಿರ್ಬಂಧ!

07/07/2025 7:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.