ಥಾಣೆ (ಮಹಾರಾಷ್ಟ್ರ): ಸೈರಸ್ ಮಿಸ್ತ್ರಿ(Cyrus Mistry) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಾಗ ಅವರು ಪ್ರಯಾಣಿಸುತ್ತಿದ್ದ ಕಾರಿನ ತನಿಖೆ ಮತ್ತು ತಪಾಸಣೆಗಾಗಿ ಹಾಂಗ್ ಕಾಂಗ್ನ ಮರ್ಸಿಡಿಸ್ ಬೆಂಜ್ ಗೆ ತಜ್ಞರ ತಂಡವು ಥಾಣೆಯ ಮರ್ಸಿಡಿಸ್ ಶೋ ರೂಂಗೆ ತಲುಪಿದೆ. ಮರ್ಸಿಡಿಸ್ ತಂಡವು ತನ್ನ ವರದಿಯನ್ನು ನೇರವಾಗಿ Mercedes Benz ಕಂಪನಿಗೆ ಸಲ್ಲಿಸುತ್ತದೆ.
ಪ್ರಸಿದ್ಧ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಮಿಸ್ತ್ರಿ ಸೆಪ್ಟೆಂಬರ್ 4 ರಂದು ಮುಂಬೈ ಬಳಿ ರಸ್ತೆ ಅಪಘಾತದಲ್ಲಿ ನಿಧನರಾದರು. ಪಾಲ್ಘರ್ ಪೊಲೀಸರ ಪ್ರಕಾರ, ಮಿಸ್ತ್ರಿ ಅವರು ಅಹಮದಾಬಾದ್ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಅವರ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ನಾಲ್ಕು ಜನರಿದ್ದರು. ಮಿಸ್ತ್ರಿ ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ಸಮಯದಲ್ಲಿ ದುರದೃಷ್ಟಕರ ಎಸ್ಯುವಿಯಲ್ಲಿನ ಏರ್ಬ್ಯಾಗ್ಗಳು ಏಕೆ ತೆರೆದಿಲ್ಲ ಎಂದು ಕಾರು ತಯಾರಕ ಕಂಪನಿಯನ್ನು ಪಾಲ್ಘರ್ ಪೊಲೀಸರು ಪ್ರಶ್ನಿಸಿದ್ದಾರೆ. ಹೀಗಾಗಿ, ಹಾಂಗ್ ಕಾಂಗ್ನಿಂದ ಮರ್ಸಿಡಿಸ್ ತಜ್ಞರು ಮುಂಬೈಗೆ ಆಗಮಿಸಿದ್ದು, ಇದಕ್ಕೆ ಕಾರಣವೇನೆಂಬುದು ತನಿಖೆ ನಂತ್ರ ತಿಳಿದುಬರಲಿದೆ.