Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : `ಮೊಬೈಲ್’ ಬಳಕೆದಾರರೇ ಎಚ್ಚರ : ಈ ಚಿಹ್ನೆಗಳು ಕಂಡುಬಂದರೆ `ವಾಟ್ಸಾಪ್ ಹ್ಯಾಕ್’ ಆಗಿದೆ ಎಂದರ್ಥ.!

11/12/2025 8:02 AM

‘ಹುಚ್ಚು’ ಮತ್ತು ‘ಫ್ಯಾಸಿಸ್ಟ್’: ಅಮೇರಿಕಾದ ‘ಪ್ರವಾಸಿಗರ ಸೋಷಿಯಲ್ ಮೀಡಿಯಾ ಇತಿಹಾಸದ ವೆರಿಫಿಕೇಷನ್’ ಯೋಜನೆಯ ಬಗ್ಗೆ ಆಕ್ರೋಶ

11/12/2025 7:58 AM

ALERT : ಮಹಿಳೆಯರೇ ಎಚ್ಚರ : ಅಪ್ಪಿತಪ್ಪಿಯೂ ಈ 5 ಆಹಾರಗಳನ್ನು `ಫ್ರಿಡ್ಜ್’ನಲ್ಲಿ ಇಡಬೇಡಿ.!

11/12/2025 7:49 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗ್ರಾಹಕನಿಗೆ ಮೋಸ ಮಾಡಿದ ಬೆಂಗಳೂರಿನ ‘ಲೈಫ್ ಸ್ಟೈಲ್ ಹಾಲಿಡೇಸ್’ಗೆ ಕೋರ್ಟ್ ದಂಡ, ಪರಿಹಾರ ನೀಡಲು ಆದೇಶ
KARNATAKA

ಗ್ರಾಹಕನಿಗೆ ಮೋಸ ಮಾಡಿದ ಬೆಂಗಳೂರಿನ ‘ಲೈಫ್ ಸ್ಟೈಲ್ ಹಾಲಿಡೇಸ್’ಗೆ ಕೋರ್ಟ್ ದಂಡ, ಪರಿಹಾರ ನೀಡಲು ಆದೇಶ

By kannadanewsnow0909/07/2025 9:29 PM

ಧಾರವಾಡ: ಗ್ರಾಹಕನಿಗೆ ಮೋಸ ಮಾಡಿದಂತ ಬೆಂಗಳೂರಿನ ಲೈಫ್ ಸ್ಟೈಲ್ ಹಾಲಿಡೆಸ್ ಪ್ರೈ.ಲಿ ಗೆ ದಂಡ ವಿಧಿಸಿ ಮತ್ತು ಪರಿಹಾರ ಕೊಡಲು ಗ್ರಾಹಕರ ಆಯೋಗ ಆದೇಶಿಸಿದೆ.

ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ಅನಸುಯಮ್ಮ ವೃತ್ತಿಯಲ್ಲಿ ಖಾಸಗಿ ವ್ಯವಹಾರವನ್ನು ಮಾಡಿಕೊಂಡಿದ್ದಾರೆ. ಎದುರುದಾರರು ಪ್ರವಾಸ ಮತ್ತು ಹೊಟೇಲ ವಾಸ್ತವ್ಯದ ಸೇವೆಗಳನ್ನು ದೇಶ ಮತ್ತು ವಿದೇಶಗಳಲ್ಲಿ ಹೊಂದಿರುತ್ತಾರೆ. ಎದುರುದಾರರು ನೀಡಿದಂತಹ ಜಾಹಿರಾತುಗಳು ಮತ್ತು ಅವರು ಕೊಟ್ಟಂತಹ ಭರವಸೆಗಳನ್ನು ನಂಬಿ ದೂರುದಾರರು ಎದುರುದಾರರ ಕಂಪನಿಯಲ್ಲಿ ರೂ.1,35,000 ಗಳ ಪೈಕಿ ಶೇ.50 ಪಾವತಿಸಿ ಸದಸ್ಯತ್ವವನ್ನು ಪಡೆದಿದ್ದರು. ಮೇ-2024 ರಲ್ಲಿ ದೂರುದಾರರು ತಮ್ಮ 6 ಜನ ಕುಟುಂಬದ ಸದಸ್ಯರೊಂದಿಗೆ ಕೇರಳದ ಅಲ್ಲಾಪುಝಾ ಹೋಗುವ ನಿಮಿತ್ಯ ಎದುರುದಾರರಿಗೆ ಪೋನ್ ಮುಖಾಂತರಕರೆ ಮಾಡಿ ಹೊಟೇಲ್ ಬುಕ್ ಮಾಡಲು ಹೇಳಿದ್ದರು. ಅದರಂತೆ ಎದುರುದಾರರು ರೂ.20,000 ಪಾವತಿಸುವಂತೆ ದೂರುದಾರರಿಗೆ ಕೇಳಿ ಪಡೆದಿರುತ್ತಾರೆ.

ದೂರುದಾರರು ಕೇರಳದಲ್ಲಿ ಬೋಟ್ ಹೌಸ್ ಬುಕ್ ಮಾಡಲು ಎದುರುದಾರರಿಗೆ ಕೇಳಿಕೊಂಡಾಗ ಹೆಚ್ಚಿನ ಹಣ ರೂ.9,000 ಪಾವತಿಸುವಂತೆ ದೂರುದಾರರಿಗೆ ಕೇಳಿದಾಗ ದೂರುದಾರರು ಅದನ್ನು ಎದುರುದಾರರ ಏಜೆಂಟ್‍ಗೆ ಪಾವತಿಸಿರುತ್ತಾರೆ. ದೂರುದಾರರು ತಮ್ಮ ಕುಟುಂಬದೊಂದಿಗೆ ಬೋಟ್ ಹೌಸ್ ವಾಸ್ತವ್ಯಕ್ಕೆ ತೆರಳಿದಾಗ ಅಲ್ಲಿ ಬೋಟ್ ಹೌಸ್‍ಗೆ ಪಾವತಿ ಮಾಡಿದಂತಹ ಹಣ ಎದುರುದಾರರಿಗೆ ತಲುಪಿರದ ಕಾರಣ ಅವರು ಮತ್ತೆ ರೂ.9,000 ಪಾವಸಿಸುವಂತೆ ಕೇಳಿರುತ್ತಾರೆ. ಬೇರೆ ಹಾದಿ ಇಲ್ಲದೇ ದೂರುದಾರರು ಆ ಹಣವನ್ನು ಪಾವತಿಸಿ ಬೋಟ್ ಹೌಸ್‍ನಲ್ಲಿ ವಾಸ್ತವ್ಯವನ್ನು ಪಡೆದಿರುತ್ತಾರೆ. ನಂತರ ಅವರು ಎದುರುದಾರರ ಬಳಿ ಹಣ ಪಾವತಿಸಿದ ಬಗ್ಗೆ ವಿಚಾರಿಸಲು ಅವರು ಅದು ತಮಗೆ ತಲುಪದೇ ಇರುವುದನ್ನು ತಿಳಿಸಿರುತ್ತಾರೆ. ಇದರಿಂದ ಮನನೊಂದ ದೂರುದಾರರು ಪ್ರವಾಸದಿಂದ ಮರಳಿದ ನಂತರ ತಮ್ಮ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಹಾಗೂ ತಾವು ಪಾವತಿಸಿದಂತಹ ರೂ.80,000 ನ್ನು ಮರಳಿಸುವಂತೆ ಎದುರುದಾರರಿಗೆ ಕೇಳಿರುತ್ತಾರೆ. ಎದುರುದಾರರು ಅದನ್ನು ಒಪ್ಪಿ ಮುಂದಿನ 45-120 ದಿನಗಳಲ್ಲಿ ಮರಳಿಸುವಂತೆ ಹೇಳಿ ಇವತ್ತಿನವರೆಗೂ ಮರಳಿಸಿರುವುದಿಲ್ಲ. ಎದುರುದಾರರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯಿದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:14/03/2025 ಕ್ಕೆ ದೂರು ಸಲ್ಲಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರು ಎದುರುದಾರರ ಬಳಿ ರೂ.1,35,000 ಪೈಕಿ ರೂ.80,000 ಕೊಟ್ಟು ದೇಶ ಮತ್ತು ವಿದೇಶಗಳಲ್ಲಿ ಹೊಟೇಲ್‍ಗಳಲ್ಲಿ ವಾಸ್ತವ್ಯ ಪಡೆಯಲು ಸದಸ್ಯತ್ವವನ್ನು ಹೊಂದಿದ್ದರು. ಅಲ್ಲದೇ ಕೇರಳದ ಪ್ರವಾಸದಲ್ಲಿದ್ದಾಗ ದೂರುದಾರರು ಬೋಟ್ ಹೌಸಗೆ ರೂ.9,000 ಪಾವತಿಸಿ ಬುಕ್ ಮಾಡಲು ಕೇಳಿಕೊಂಡು ಹಣವನ್ನು ಪಾವತಿಸಿದಾಗ ಎದುರುದಾರರು ಬೋಟ್ ಹೌಸನ್ನು ಬುಕ್ ಮಾಡದೇ ಮತ್ತು ಹೆಚ್ಚಿನ ರೂ.9,000 ಹಣವನ್ನು ಅವರಿಂದ ಪಡೆದು ಸೇವಾ ನ್ಯೂನ್ಯತೆ ಎಸಗಿರುವುದು ಕಂಡು ಬಂದಿರುತ್ತದೆ. ಈ ವ್ಯವಸ್ತೆಯಿಂದ ತೊಂದರೆಯಾದ ದೂರುದಾರ ಪ್ರವಾಸದಿಂದ ಮರಳಿದ ನಂತರ ತಮ್ಮ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಎದುರುದಾರರಿಗೆ ಕೇಳಿರುತ್ತಾರೆ. ಅದರಂತೆ ಎದುರುದಾರರು ಅದನ್ನು ಒಪ್ಪಿರುವುದು ದಾಖಲೆಗಳ ಮುಖಾಂತರ ಕಂಡು ಬಂದಿರುತ್ತೆ. ಆದರೂ ಇವತ್ತಿವರೆಗೆ ಸದಸ್ಯತ್ವದ ಹಣವನ್ನು ಮರಳಿ ಕೊಡದೇ ಸೇವಾ ನ್ಯೂನ್ಯತೆ ಎದಸಗಿರುವುದು ಆಯೋಗದ ಗಮನಕ್ಕೆ ಕಂಡು ಬಂದಿರುತ್ತದೆ. ದೂರುದಾರರು ಪಾವತಿಸಿದ ಹಣ ರೂ.80,000 ಗಳನ್ನು ಬಡ್ಡಿ ಲೆಕ್ಕ ಹಾಕಿ ಮತ್ತು ಅವರಿಗೆ ಆದಂತಹ ಮಾನಸೀಕ ತೊಂದರೆ ಹಾಗೂ ಅನಾನುಕೂಲಕ್ಕೆ ರೂ.50,000 ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚ ರೂ.10,000 ಕೊಡುವಂತೆ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.

Job Alert: ಜುಲೈ.11ರಂದು ವಿವಿಧ ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನ

ಈಗ ಆಧಾರ್ ಕಾರ್ಡ್ ನವೀಕರಣಕ್ಕೆ ಈ ದಾಖಲೆಗಳು ಕಡ್ಡಾಯ: ಹೀಗಿವೆ UIDAI ಹೊಸ ನಿಯಮಗಳು | Aadhaar Update

Share. Facebook Twitter LinkedIn WhatsApp Email

Related Posts

ALERT : `ಮೊಬೈಲ್’ ಬಳಕೆದಾರರೇ ಎಚ್ಚರ : ಈ ಚಿಹ್ನೆಗಳು ಕಂಡುಬಂದರೆ `ವಾಟ್ಸಾಪ್ ಹ್ಯಾಕ್’ ಆಗಿದೆ ಎಂದರ್ಥ.!

11/12/2025 8:02 AM2 Mins Read

ALERT : ಮಹಿಳೆಯರೇ ಎಚ್ಚರ : ಅಪ್ಪಿತಪ್ಪಿಯೂ ಈ 5 ಆಹಾರಗಳನ್ನು `ಫ್ರಿಡ್ಜ್’ನಲ್ಲಿ ಇಡಬೇಡಿ.!

11/12/2025 7:49 AM1 Min Read

BIG NEWS : `ಆಸ್ತಿ’ ಮಾಲೀಕರೇ ಗಮನಿಸಿ : ಇ-ಸ್ವತ್ತು’ ಸಮಸ್ಯೆ ಪರಿಹಾರಕ್ಕೆ ರಾಜ್ಯಾದ್ಯಂತ ಸಹಾಯವಾಣಿ ಆರಂಭ.!

11/12/2025 7:46 AM1 Min Read
Recent News

ALERT : `ಮೊಬೈಲ್’ ಬಳಕೆದಾರರೇ ಎಚ್ಚರ : ಈ ಚಿಹ್ನೆಗಳು ಕಂಡುಬಂದರೆ `ವಾಟ್ಸಾಪ್ ಹ್ಯಾಕ್’ ಆಗಿದೆ ಎಂದರ್ಥ.!

11/12/2025 8:02 AM

‘ಹುಚ್ಚು’ ಮತ್ತು ‘ಫ್ಯಾಸಿಸ್ಟ್’: ಅಮೇರಿಕಾದ ‘ಪ್ರವಾಸಿಗರ ಸೋಷಿಯಲ್ ಮೀಡಿಯಾ ಇತಿಹಾಸದ ವೆರಿಫಿಕೇಷನ್’ ಯೋಜನೆಯ ಬಗ್ಗೆ ಆಕ್ರೋಶ

11/12/2025 7:58 AM

ALERT : ಮಹಿಳೆಯರೇ ಎಚ್ಚರ : ಅಪ್ಪಿತಪ್ಪಿಯೂ ಈ 5 ಆಹಾರಗಳನ್ನು `ಫ್ರಿಡ್ಜ್’ನಲ್ಲಿ ಇಡಬೇಡಿ.!

11/12/2025 7:49 AM

BIG NEWS : `ಆಸ್ತಿ’ ಮಾಲೀಕರೇ ಗಮನಿಸಿ : ಇ-ಸ್ವತ್ತು’ ಸಮಸ್ಯೆ ಪರಿಹಾರಕ್ಕೆ ರಾಜ್ಯಾದ್ಯಂತ ಸಹಾಯವಾಣಿ ಆರಂಭ.!

11/12/2025 7:46 AM
State News
KARNATAKA

ALERT : `ಮೊಬೈಲ್’ ಬಳಕೆದಾರರೇ ಎಚ್ಚರ : ಈ ಚಿಹ್ನೆಗಳು ಕಂಡುಬಂದರೆ `ವಾಟ್ಸಾಪ್ ಹ್ಯಾಕ್’ ಆಗಿದೆ ಎಂದರ್ಥ.!

By kannadanewsnow5711/12/2025 8:02 AM KARNATAKA 2 Mins Read

ಇತ್ತೀಚೆಗೆ ಫೋನ್ ಹ್ಯಾಕ್ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹ್ಯಾಕ್ ಮಾಡುವ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ.ಫೋನ್ ಹ್ಯಾಕ್ ಮಾಡುತ್ತಿರುವ ಸೈಬರ್…

ALERT : ಮಹಿಳೆಯರೇ ಎಚ್ಚರ : ಅಪ್ಪಿತಪ್ಪಿಯೂ ಈ 5 ಆಹಾರಗಳನ್ನು `ಫ್ರಿಡ್ಜ್’ನಲ್ಲಿ ಇಡಬೇಡಿ.!

11/12/2025 7:49 AM

BIG NEWS : `ಆಸ್ತಿ’ ಮಾಲೀಕರೇ ಗಮನಿಸಿ : ಇ-ಸ್ವತ್ತು’ ಸಮಸ್ಯೆ ಪರಿಹಾರಕ್ಕೆ ರಾಜ್ಯಾದ್ಯಂತ ಸಹಾಯವಾಣಿ ಆರಂಭ.!

11/12/2025 7:46 AM

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ `ಗುಡ್ ಟಚ್- ಬ್ಯಾಡ್ ಟಚ್’ ಬಗ್ಗೆ ಜಸ್ಟ್ ಹೀಗೆ ತಿಳಿಸಿ | WATCH VIDEO

11/12/2025 7:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.