ಬೆಂಗಳೂರು: ಅಮಾನ್ಯಗೊಂಡ 9.84 ಲಕ್ಷ ರೂ.ಗಳ ನೋಟುಗಳ ವಿನಿಮಯಕ್ಕಾಗಿ ಕಲಬುರಗಿಯ ಉದ್ಯಮಿಯೊಬ್ಬರು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸುವಂತೆ ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ
ನ್ಯಾಯಮೂರ್ತಿಗಳಾದ ಎಸ್.ಸುನಿಲ್ ದತ್ ಯಾದವ್ ಮತ್ತು ರಾಮಚಂದ್ರ ಡಿ.ಹುದ್ದಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಸಲ್ಲಿಸಿದ್ದ ರಿಟ್ ಮೇಲ್ಮನವಿಯನ್ನು ವಿಲೇವಾರಿ ಮಾಡುವಾಗ ಈ ಆದೇಶವನ್ನು ಹೊರಡಿಸಿದೆ.
ಅಮಾನ್ಯಗೊಂಡ ನೋಟುಗಳ ವಿನಿಮಯದ ಗಡುವು ಮುಗಿದಿದೆ ಎಂದು ಉಲ್ಲೇಖಿಸಿ ತನ್ನ ಮನವಿಯನ್ನು ತಿರಸ್ಕರಿಸಿದ ಆರ್ಬಿಐ ನಿರ್ಧಾರದ ವಿರುದ್ಧ ಉದ್ಯಮಿ ಸಂಜು ಕುಮಾರ್ ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.
ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 19, 2015 ರಂದು ತನ್ನಿಂದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ನಂತರ ನ್ಯಾಯಾಲಯದ ಆದೇಶದ ಮೂಲಕ ಹಿಂದಿರುಗಿಸಲಾಗಿದೆ ಎಂದು ಕುಮಾರ್ ಗಮನಸೆಳೆದರು. ಅಷ್ಟೊತ್ತಿಗಾಗಲೇ ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಿತ್ತು.
ಮಾರ್ಚ್ 22, 2024 ರಂದು, ಏಕ ಪೀಠವು ವಿವೇಕ್ ನಾರಾಯಣ್ ಶರ್ಮಾ ವರ್ಸಸ್ ಇತರರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಅವರ ಪ್ರಾತಿನಿಧ್ಯವನ್ನು ಪರಿಗಣಿಸಿ ಸೂಕ್ತ ಆದೇಶಗಳನ್ನು ಹೊರಡಿಸುವಂತೆ ಆರ್ಬಿಐಗೆ ನಿರ್ದೇಶನ ನೀಡಿತು.
ಆರ್ಬಿಐ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿತು, ಕೇಂದ್ರ ಸರ್ಕಾರ ಮಾತ್ರ ಎಕ್ಸ್ಚಾ ವಿನಂತಿಯನ್ನು ಪರಿಗಣಿಸಬಹುದು ಎಂದು ವಾದಿಸಿತು








