Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇದು ರಾಜ್ಯದಲ್ಲಿ ಶಿಕ್ಷಣಕ್ಕಾಗಿ ಶಾಲಾ ಮಕ್ಕಳು ಕೆಸರಲ್ಲಿ ನಡೆಯುವ ಮನಕಲಕುವ ಕಥೆ!

15/06/2025 5:08 PM

DCET-2025ಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ

15/06/2025 4:49 PM

ಮಹಾರಾಷ್ಟ್ರದಲ್ಲಿ ಸೇತುವೆ ಕುಸಿದು ಭೀಕರ ದುರಂತ: 6 ಮಂದಿ ಸಾವು, ನೀರಲ್ಲಿ ಕೊಚ್ಚಿ ಹೋದ 25-30 ಪ್ರಯಾಣಿಕರು

15/06/2025 4:30 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ರಾಜ್ಯದ ‘3 ವಿಧಾನಸಭಾ ಕ್ಷೇತ್ರ’ಗಳ ‘ಉಪ ಚುನಾವಣೆ’ಗೆ ‘ಉಸ್ತುವಾರಿ ಸಮಿತಿ’ ರಚಿಸಿ ಡಿಕೆಶಿ ಆದೇಶ
KARNATAKA

BREAKING: ರಾಜ್ಯದ ‘3 ವಿಧಾನಸಭಾ ಕ್ಷೇತ್ರ’ಗಳ ‘ಉಪ ಚುನಾವಣೆ’ಗೆ ‘ಉಸ್ತುವಾರಿ ಸಮಿತಿ’ ರಚಿಸಿ ಡಿಕೆಶಿ ಆದೇಶ

By kannadanewsnow0919/06/2024 7:42 PM

ಬೆಂಗಳೂರು: ರಾಜ್ಯದ ಮುಂಬರುವಂತ 3 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ರಣತಂತ್ರ ರೂಪಿಸಿದೆ. ಇದಕ್ಕಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಉಪ ಸಮಿತಿಯನ್ನು ರಚಿಸಿ ಆದೇಶಿಸಿದ್ದಾರೆ.

ಇಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಮಿತಿಯನ್ನು ರಚಿಸಿ ಆದೇಶಿಸಿದ್ದಾರೆ. ಇದಲ್ಲದೇ ಮಂಗಳೂರು-ಉಡುಪಿ ಕ್ಷೇತ್ರದ ಎಂಎಲ್ಸಿ ಕ್ಷೇತ್ರದ ಉಪ ಚುನಾವಣೆಗೂ ಕೆಪಿಸಿಸಿ ಕಮಿಟಿಯನ್ನು ರಚಿಸಿ ಆದೇಶಿಸಿದ್ದಾರೆ.

ಅಂದಹಾಗೇ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಚಿವ ಜಮೀರ್ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಸದಸ್ಯರನ್ನಾಗಿ ನಾಸೀರ್ ಹುಸೇನ್, ಇ.ತುಕಾರಾಂ, ಬಿ.ನಾಗೇಂದ್ರ, ಡಾ.ಎನ್ ಟಿ ಶ್ರೀನಿವಾಸ್, ಪಿಟಿ ಪರಮೇಶ್ವರ ನಾಯಕ್ ಹಾಗೂ ಬಳ್ಳಾರಿಯ ಡಿಸಿಸಿ ಅಧ್ಯಕ್ಷ ಶಿವಯೋಗಿ ಅವರನ್ನು ನೇಮಿಸಿದ್ದಾರೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಚಿವ ಚಲುವರಾಯ ಸ್ವಾಮಿ ಅವರನ್ನು ಉಪ ಚುನಾವಣೆ ಉಸ್ತುವಾರಿ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇವರಡಿ ಸಚಿವ ರಾಮಲಿಂಗಾರೆಡ್ಡಿ, ಡಿ.ಕೆ ಸುರೇಶ್, ಬಾಲಕೃಷ್ಣ, ನರೇಂದ್ರಸ್ವಾಮಿ, ಇಕ್ಬಾಲ್ ಹುಸೇನ್, ಪುಟ್ಟಣ್ಣ, ಎಸ್.ರವಿ ಹಾಗೂ ರಾಮನಗರ ಡಿಸಿಸಿ ಅಧ್ಯಕ್ಷ ಗಂಗಾಧರ ಅವರಿಗೆ ಹೊಣೆಗಾರಿಕೆ ಹಂಚಿಕೆ ಮಾಡಲಾಗಿದೆ.

ಶಿಗ್ಗಾಂವಿ ವಿಧಾನಸಭಾ ಉಪ ಚುನಾವಣೆಯ ಉಸ್ತುವಾರಿ ಸಮಿತಿಯ ಅಧ್ಯಕ್ಷರನ್ನಾಗಿ ಸಚಿವ ಈಶ್ವರ ಖಂಡ್ರೆ ನೇಮಕ ಮಾಡಲಾಗಿದೆ. ಇವರೊಂದಿಗೆ ಶಿವಾನಂದ ಪಾಚೀಲ್, ಸಂತೋಷ್ ಲಾಡ್, ಸಲೀಂ ಅಹ್ಮದ್, ಸಂಜೀವ್ ಕುಮಾರ್ ನೀರಲಗಿ ಹಾಗೂ ಆನಂದ್ ಗಡ್ಡದೇವರಮಠಗೆ ಉಸ್ತುವಾರಿ ಹೊಣೆಗಾರಿಕೆ ನೀಡಲಾಗಿದೆ.

ದಕ್ಷಿಣ ಕನ್ನಡ ಉಡುಪಿ ಸ್ಥಳೀಯ ಉಪ ಚುನಾವಣೆಯ ಉಸ್ತುವಾರಿ ಸಮಿತಿಯ ಅಧ್ಯಕ್ಷರನ್ನಾಗಿ ಸಚಿವ ದಿನೇಶ್ ಗುಂಡೂರಾವ್ ನೇಮಕ ಮಾಡಲಾಗಿದೆ. ವಿರೊಂದಿಗೆ ವಿನಯ್ ಕುಮಾರ್ ಸೊರಕೆ, ಲಕ್ಷ್ಮೀ ಹೆಬ್ಬಾಳ್ಕರ್, ರಮಾನಾಥ ರೈ, ಅಶೋಕ್ ರೈ, ಡಾ.ಜಯಪ್ರಕಾಶ್ ಹೆಗ್ಡೆ, ಪದ್ಮರಾಜ್, ಹರೀಶ್ ಕುಮಾರ್, ಉದಯ್ ಶೆಟ್ಟಿ ಹಾಗೂ ಕಿಶನ್ ಹೆಗ್ಡೆ ನೇಮಿಸಲಾಗಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

ರಾಜ್ಯಾಧ್ಯಂತ ‘ಕನ್ನಡ ನಾಮಫಲಕ’ ಅಳವಡಿಸುವುದು ಕಡ್ಡಾಯ: ಹಾಕಿಲ್ಲ ಅಂದ್ರೆ ‘ಈ ನಂಬರ್’ಗೆ ಕರೆ ಮಾಡಿ ದೂರು ನೀಡಿ

Fact Check: ಜಮೀನಿನಲ್ಲಿ ‘ಕರೆಂಟ್ ಕಂಬ, ಟ್ರಾನ್ಸ್ ಫಾರ್ಮರ್’ ಹಾಕಿದ್ರೆ ರೈತರಿಗೆ ‘ಪರಿಹಾರ’ ಸಿಗುತ್ತಾ? ಇಲ್ಲಿದೆ ಅಸಲಿ ಸತ್ಯ

Share. Facebook Twitter LinkedIn WhatsApp Email

Related Posts

ಇದು ರಾಜ್ಯದಲ್ಲಿ ಶಿಕ್ಷಣಕ್ಕಾಗಿ ಶಾಲಾ ಮಕ್ಕಳು ಕೆಸರಲ್ಲಿ ನಡೆಯುವ ಮನಕಲಕುವ ಕಥೆ!

15/06/2025 5:08 PM2 Mins Read

DCET-2025ಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ

15/06/2025 4:49 PM1 Min Read

BREAKING: ರಾಜ್ಯದಲ್ಲಿ ನಿಲ್ಲದ ಮೈಕ್ರೋ ಫೈನಾನ್ಸ್ ಕಂಪನಿ ಕಿರುಕುಳ: ಕಂತು ಕಟ್ಟದ್ದಕ್ಕೆ ಕುಟುಂಬವನ್ನೇ ಬೀದಿಗೆ ತಳ್ಳಿ ಮನೆಗೆ ಬೀಗ

15/06/2025 3:27 PM1 Min Read
Recent News

ಇದು ರಾಜ್ಯದಲ್ಲಿ ಶಿಕ್ಷಣಕ್ಕಾಗಿ ಶಾಲಾ ಮಕ್ಕಳು ಕೆಸರಲ್ಲಿ ನಡೆಯುವ ಮನಕಲಕುವ ಕಥೆ!

15/06/2025 5:08 PM

DCET-2025ಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ

15/06/2025 4:49 PM

ಮಹಾರಾಷ್ಟ್ರದಲ್ಲಿ ಸೇತುವೆ ಕುಸಿದು ಭೀಕರ ದುರಂತ: 6 ಮಂದಿ ಸಾವು, ನೀರಲ್ಲಿ ಕೊಚ್ಚಿ ಹೋದ 25-30 ಪ್ರಯಾಣಿಕರು

15/06/2025 4:30 PM

BREAKING: ನಾಳೆ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಅಂತ್ಯಕ್ರಿಯೆ | Former Gujarat CM Vijay Rupani

15/06/2025 4:12 PM
State News
KARNATAKA

ಇದು ರಾಜ್ಯದಲ್ಲಿ ಶಿಕ್ಷಣಕ್ಕಾಗಿ ಶಾಲಾ ಮಕ್ಕಳು ಕೆಸರಲ್ಲಿ ನಡೆಯುವ ಮನಕಲಕುವ ಕಥೆ!

By kannadanewsnow0915/06/2025 5:08 PM KARNATAKA 2 Mins Read

ಉತ್ತರ ಕನ್ನಡ: ಜಿಲ್ಲೆಯಲ್ಲಿ ರಾಜ್ಯದಲ್ಲೇ ಶಿಕ್ಷಣಕ್ಕಾಗಿ ಕೆಸರಲ್ಲಿ ನಡಿಗೆಯ ಮನಕಲಕುವಂತ ಮಕ್ಕಳ ಕತೆಯೊಂದಿದೆ. ದಿನಂಪ್ರತಿ ಆ ಶಾಲಾ ಮಕ್ಕಳು ತೆರಳೋದಕನ್ನು…

DCET-2025ಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ

15/06/2025 4:49 PM

BREAKING: ರಾಜ್ಯದಲ್ಲಿ ನಿಲ್ಲದ ಮೈಕ್ರೋ ಫೈನಾನ್ಸ್ ಕಂಪನಿ ಕಿರುಕುಳ: ಕಂತು ಕಟ್ಟದ್ದಕ್ಕೆ ಕುಟುಂಬವನ್ನೇ ಬೀದಿಗೆ ತಳ್ಳಿ ಮನೆಗೆ ಬೀಗ

15/06/2025 3:27 PM

ವಿದೇಶಿ ಪ್ರಜೆಗಳ ಪರಿಶೀಲನೆ ಕುರಿತು ಸುತ್ತೋಲೆ ಹೊರಡಿಸಲು ಗೃಹ ಇಲಾಖೆಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ

15/06/2025 3:11 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.