ಮಂಡ್ಯ : ಮಂಡ್ಯಾದ ಕೆರೆಗೂಡು ಗ್ರಾಮದಲ್ಲಿ ಹನುಮಾನ್ ಧ್ವಜ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಿಜೆಪಿ ಜೆಡಿಎಸ್ ಪ್ರತಿಭಟನೆ ಮಾಡುತ್ತಿದ್ದು ಅಲ್ಲದೆ ಗಂಗಾವತಿ ಕ್ಷೇತ್ರದ ಕೆಆರ್ಪಿಪಿ ಪಕ್ಷದ ಶಾಸಕರಾಗಿರುವ ಜನಾರ್ದನ್ ರೆಡ್ಡಿ ಕೂಡ ಮಂಡ್ಯಕೆ ಭೇಟಿ ನೀಡಿದ್ದು, ಸುಧೀಕಾರದೊಂದಿಗೆ ಮಾತನಾಡಿ ಹನುಮಂತನ ತಂಗಣ್ಣಿಗೆ ಗುರಿಯಾಗಿ ಕಾಂಗ್ರೆಸ್ ಪಕ್ಷ ಹಾಗೂ ಈಗಿರುವ ರಾಜ್ಯ ಸರ್ಕಾರ ದಹನವಾಗುವುದರಲ್ಲಿ ಎರಡು ಮಾತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾನು ಕಿಷ್ಕಿಂದೆ ನಗರದ ಅಂಜನಾದ್ರಿ, ಹನುಮ ಜನಿಸಿದ ಸ್ಥಳ ಗಂಗಾವತಿ ವಿಧಾನಸಭಾ ಕ್ಷೇತ್ರದ ಗಂಗಾವತಿ ಶಾಸಕನಾಗಿ ಹನುಮಾನ ಜನಿಸಿದ ಈ ಒಂದು ನಾಡಿನಲ್ಲಿ ಧ್ವಜಕ್ಕೆ ಅಪಮಾನವಾಗಿರುವುದಕ್ಕೆ ಘಟನೆಯನ್ನು ಖಂಡಿಸಿ ಇಲ್ಲಿರುವಂತಹ ಗ್ರಾಮಸ್ಥರಿಗೆ ಬೆಂಬಲವಾಗಿ ನಿಂತುಕೊಳ್ಳುವುದಕ್ಕೆ ನಾನು ಕೆರೆಗೆಡು ಗ್ರಾಮಕ್ಕೆ ಬಂದಿರುವಂತಹದ್ದು ಎಂದು ಶಾಸಕ ಜನಾರ್ಧನ್ ರೆಡ್ಡಿ ತಿಳಿಸಿದರು.
ನಮ್ಮ ದೇಶದಲ್ಲಿ ಹೆಜ್ಜೆ ಹೆಜ್ಜೆಗೂ ಕೂಡ ದೇವಸ್ಥಾನಗಳಿವೆ ಸಾರ್ವಜನಿಕ ಸ್ಥಳ ಏನೆಂದು ಪ್ರಶ್ನೆ ಬರುವುದಿಲ್ಲ. ನಿಜವಾಗಿಯೂ ಅದು ಸಾರ್ವಜನಿಕ ಸ್ಥಳ ಎನ್ನುವ ಭಾವನೆಯಾಗಿದ್ದರೆ ಕಳೆದ 40 ವರ್ಷಗಳಿಂದ ಕೆರೆಗೋಡು ಗ್ರಾಮಸ್ಥರು ಗ್ರಾಮ ಮಂದಿರದ ಭಾಗದಲ್ಲಿ ಹನುಮ ಧ್ವಜವನ್ನು ಹಾರಿಸುವುದರ ಮೂಲಕ ಅವರ ಭಕ್ತಿಯನ್ನು ಅವರು ತೋರಿಸಿಕೊಂಡಿದ್ದಾರೆ.ಶ್ರೀ ರಾಮನ ದೇವಸ್ಥಾನ ಉದ್ಘಾಟನೆ ಆಗುವಂತಹ ಸಂದರ್ಭ ದಲ್ಲಿ 100ಕ್ಕೂ ಹೆಚ್ಚು ಅಡಿ ಧ್ವಜ ಹಾರಿಸುವ ಮೂಲಕ ಭಕ್ತಿ ಮೆರೆದಿದ್ದಾರೆ. ಹಾಗಾಗಿ ಇದನ್ನ ರಾಜಕೀಯ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷ ನೇತೃತ್ವದ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಮಂಡ್ಯ ಭಾಗದಲ್ಲಿ ನನ್ನ ಪಕ್ಷ ಆಗಲಿ ಕಾರ್ಯಕರ್ತರ ಆಗಲಿ ಯಾರು ಇಲ್ಲ. ನಾನು ಬಂದಿರುವಂತಹದು ಹನುಮಂತನ ಭಕ್ತಿಯ ಮೇರೆಗೆ ಇವತ್ತು ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಾರೆ. ಕಾಂಗ್ರೆಸ್ ಪಕ್ಷದವರು ಅವರೇ ಈ ಘಟನೆಗೆ ಬೆಂಕಿ ಹಚ್ಚಿದ್ದಾರೆ. ವಿಷಯ ಏನೆಂದರೆ ಯಾವ ರೀತಿ ಲಂಕೆಯಲ್ಲಿ ಹನುಮಂತ ಸೀತ ಮಾತೆಗೋಸ್ಕರ ಹೋಗಿದ್ದಾಗ ಹನುಮಂತನ ಬಾಲಕ್ಕೆ ರಾವಣ ಬಗ್ಗೆ ಹಚ್ಚಿದಾಗ ಇಡೀ ಲಂಕಾಲ ಸುಟ್ಟಿದ್ದ, ಆ ರೀತಿ ಕಾಂಗ್ರೆಸ್ ಪಕ್ಷದವರು ಇವತ್ತು ಹನುಮನ ಧ್ವಜಕ್ಕೆ ಕೈ ಹಾಕುವುದರ ಮೂಲಕ ಇಡೀ ನಮ್ಮ ಕರ್ನಾಟಕ ರಾಜ್ಯದಲ್ಲಿ ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ದಹನ ಮಾಡಿಕೊಳ್ಳುವುದರಲ್ಲಿ ಮುಂದಾಗಿದೆ ಎಂದರು.
ಸನ್ಮಾನ್ಯ ಸಿದ್ದರಾಮಯ್ಯನವರು ರಾಮಮಂದಿರ ವಿಚಾರ ಬಂದಾಗ ಸಾರ್ವಜನಿಕ ಸಭೆಯಲ್ಲಿ ನಾನು ಜೈ ಶ್ರೀರಾಮ್ ಅಂತ ಕೂಗುತ್ತೇನೆ ಅಂತ ಹೇಳಿ ಘೋಷಣೆ ಹಾಕುವ ಮೂಲಕ ಇಡೀ ಕನ್ನಡ ನಾಡು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಇವತ್ತು ನಾನು ಸನ್ಮಾನ್ಯ ಮುಖ್ಯಮಂತ್ರಿಗಳೆ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡುವುದೇನೆಂದರೆ ಮುಖ್ಯಮಂತ್ರಿಗಳು ಗ್ರಾಮಕ್ಕೆ ಆಗಮಿಸಿ ಗ್ರಾಮಸ್ಥರಿಂದ ಸತ್ಯಾಂಶವನ್ನು ತೆಗೆದುಕೊಂಡು ಅವರ ಕೈಯಿಂದಾನೆ ಹನುಮ ಧ್ವಜವನ್ನು ಹಾರಿಸುವುದರ ಮೂಲಕ ಇಡಿ ಕನ್ನಡ ನಾಡಿಗೆ ಒಳ್ಳೆಯ ಸಂದೇಶ ಕೊಡುವಂತಹ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಇಲ್ಲವಾದಲ್ಲಿ ಹನುಮಂತನ ಕೆಂಗಣ್ಣಿಗೆ ಗುರಿಯಾಗಿ ಸರ್ಕಾರ ಕಾಂಗ್ರೆಸ್ ಪಕ್ಷ ಎರಡು ದಹನ ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಕಿಡಿ ಕಾರಿದ್ದಾರೆ.