ಮೈಸೂರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮಾಡಿದ ತಪ್ಪಿನಿಂದ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳು ಬಂದವು.ಒಳ್ಳೆಯ ಆಡಳಿತ ಕೊಡುತ್ತೆ ಅಂತ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರು ಆದರೆ ಕಾಂಗ್ರೆಸ್ ಮಾಡುತ್ತಿರುವುದು ಏನು? ಎಂದು ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.
ಮೈಸೂರಿನಲ್ಲಿ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ದಾಖಲಾದ FIR ವಿಚಾರವಾಗಿ ಪ್ರತಿಕ್ರಿಯೆ ನೀಡಿದರು ಅವರು, ಸೈಟ್ ವಾಪಸ್ ಕೊಟ್ಟು ತನಿಖೆ ಮಾಡಿಸಿ ಎಂದು ಸಿಎಂ ಸಿದ್ದರಾಮಯ್ಯಗೆ ಹೇಳಿದ್ದೆ, 14 ಸೇಟು ಅಕ್ರಮವಾಗಿ ಪಡೆದು 62 ಕೋಟಿ ಕೊಡಲಿ ವಾಪಸ್ ಕೊಡುತ್ತೀನಿ ಅಂತ ಹೇಳಿದ್ದರು.
ಇಷ್ಟು ವರ್ಷ ಸಂಪಾದನೆ ಮಾಡಿದ ಹೆಸರಿಗೆ ಕಳಂಕ ಬಂದಿದೆ. ಅವರೇ ಕಳಂಕ ತಂದುಕೊಂಡಿದ್ದಾರೆ. ಒಳ್ಳೆಯ ಅಡ್ವೈಸರ್ ಇಟ್ಕೋಬೇಕು. ಬಿಜೆಪಿಯ ತಪ್ಪಿನಿಂದ ಕಾಂಗ್ರೆಸ್ ಗೆ 136 ಸೀಟ್ ಬಂದಿದೆ ಕಾಂಗ್ರೆಸ್ ಒಳ್ಳೆಯ ಆಡಳಿತ ಕೊಡುತ್ತೆ ಅಂತ ರಾಜ್ಯದ ಜನ ಗೆಲ್ಲಿಸಿದ್ದರು ಆದರೆ ಕಾಂಗ್ರೆಸ್ ಮಾಡುತ್ತಿರುವುದು ಏನು? ಎಂದು ಪ್ರಶ್ನಿಸಿದರು.
ನಾಳೆ ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಮೇಲೆ ನಂಬಿಕೆ ಇಟ್ಟು ಚಾಮುಂಡಿ ಚಲೋ ಕೈಬಿಟ್ಟಿದ್ದೇವೆ. ನಾಳೆ ಮಹಿಷಿ ಮೂರ್ತಿಗೆ ಪುಷ್ಪಾರ್ಚನೆ ನಡೆದರೆ ಸುಮ್ಮನೆ ಇರುವುದಿಲ್ಲ. ಇದನ್ನು ವಿರೋಧಿಸಿ ದಸರಾ ದಿನ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.