ರಾಯಚೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್ಎಸ್ಎಸ್ನ ಕೈಗೊಂಬೆಯಾಗಿದ್ದಾರೆ ಎಂದು ರಾಯಚೂರಿನಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
BIGG NEWS : ಓಲಾ, ಉಬರ್ ಆಟೋಗಳು ಸೀಜ್ : RTO ಅಧಿಕಾರಿಗಳ ವಿರುದ್ಧ ಚಾಲಕರಿಂದ ಆಕ್ರೋಶ
ಬಿಜೆಪಿ ನಾಯಕರೆಲ್ಲರೂ ಮಾತೆತ್ತಿದರೆ ನನ್ನನ್ನೇ ಬೈಯುತ್ತಾರೆ. ಬಿಜೆಪಿ ನಾಯಕರಿಗೆ ನನ್ನನ್ನು ಕಂಡರೆ ಎಷ್ಟು ಭಯ ಇದೆ ನೋಡಿ. ಯಾಕೆಂದರೆ RSS, ಮೋದಿ ಬಗ್ಗೆ ಮಾತನಾಡೋದು ನಾನೊಬ್ಬನೆ ಎಂದು ಹೇಳಿದರು.
ಸಂಸದ ಅನಂತಕುಮಾರ್ ಹೆಗಡೆ ಗ್ರಾಮ ಪಂಚಾಯಿತಿ ಸದಸ್ಯನಾಗಲೂ ಲಾಯಕ್ಕಿಲ್ಲ. ಅಂಬೇಡ್ಕರ್ ಬರೆದ ಸಂವಿಧಾನ ಬದಲಾಯಿಸುತ್ತೇವೆ ಎಂದಿದ್ದಾನೆ. ಕೇಂದ್ರದಲ್ಲಿ ಮಂತ್ರಿಯಾಗಿದ್ದಾಗ ಈ ಹೇಳಿಕೆ ನೀಡಿದ್ದನು.
BIGG NEWS : ಓಲಾ, ಉಬರ್ ಆಟೋಗಳು ಸೀಜ್ : RTO ಅಧಿಕಾರಿಗಳ ವಿರುದ್ಧ ಚಾಲಕರಿಂದ ಆಕ್ರೋಶ
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಮಾತು ಕೇಳಿ ಈ ಹೇಳಿಕೆ ನೀಡಿದ್ದಾನೆ ಎಂದು ಏಕವಚನದಲ್ಲೇ ವಾಗ್ದಾಳಿ ಮಾಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ರಾಯಚೂರಿನಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಯುಪಿ ಮಾಜಿ ಸಿಎಂ ಮುಲಾಯಂ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದರು.