ಚಿಕ್ಕಬಳ್ಳಾಪುರ : ತಂದೆಯ ಆಸೆಗಾಗಿ ಸಹೋದರರ ಮಧ್ಯ ಪಡೆದಾಟ ನಡೆದಿದ್ದು ಈ ವೇಳೆ ಅಣ್ಣನನ್ನೇ ತಮ್ಮ ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಡುವಳಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಣ್ಣ ತಮ್ಮನ ಗಲಾಟೆಯಲ್ಲಿ ಅಣ್ಣ ನಂಜುಂಡಯ್ಯ (55) ಸಾವನ್ನಪ್ಪಿರುವ ವ್ಯಕ್ತಿ ಎಂದು ಹೇಳಲಾಗುತ್ತಿದೆ.ಆಸ್ತಿಗಾಗಿ ಅಣ್ಣ ನಂಜುಂಡಯ್ಯ ಹಾಗೂ ತಮ್ಮ ರಾಮಾಂಜಿನಪ್ಪ ನಡುವೆ ಗಲಾಟೆ ಶುರುವಾಗಿದೆ. ಮಾತಿಗೆ ಮಾತು ಬೆಳೆದು ತಮ್ಮ ರಾಮಾಂಜಿನಪ್ಪ ಹಾಗೂ ಮಕ್ಕಳು ಅಣ್ಣ ನಂಜುಂಡಯ್ಯನವರ ಮೇಲೆ ಕೋಲು, ದೊಣ್ಣೆಗಳಿಂದ ಹೊಡೆದು ಗಾಯಗೊಳಿಸಿದ್ದಾರೆ.
ತೀವ್ರ ಗಾಯಗೊಂಡ ನಂಜುಂಡಯ್ಯ ಅವರನ್ನು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಂಜುಂಡಯ್ಯ ಮೃತಪಟ್ಟಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.